ಕರಾವಳಿ ಮೀನುಗಾರರು ತಮ್ಮ ಜಾತಿ ಮತ್ತು ಹೆಸರಿನ ನಂತರ ಮೊಗೇರ ಅಂತ ಬರೆಯುತ್ತಿದ್ದರು ಮತ್ತು ಹೆಚ್ಚು ದಂಡಿಗೆ ಹೊರುತ್ತಿದ್ದರು (ಪಲ್ಲಕ್ಕಿ ಜನ ಸಾಗಾಣಿಕೆಗಾಗಿ) ಇದನ್ನ ಬದಲಿಸಲು 1940ರಲ್ಲಿ ಮುಂಬೈಯ ಮೊಗವೀರ ಮಹಜನ ಸಂಘ ಕರ ಪತ್ರ ಮತ್ತು ಸಭೆಗಳ ಮುಖಾಂತರ ಜನ ಜಾಗೃತಿ ಮಾಡಿದರೂ ಜನ ಬದಲಾಗಲಿಲ್ಲವಂತೆ ಆಗ ಮುಂಬೈನಿ೦ದ ಲಾರಿ ತಂದು ದಂಡಿಗೆಗಳನ್ನ ವಶ ಪಡಿಸಿ ದೂರ ಪ್ರದೇಶಕ್ಕೆ ಒಯ್ದು ಸುಟ್ಟರಂತೆ ಇದರಿಂದ ದಂಡಿಗೆ ಹೊರುವ ಕಾಯಕ ಬದಲಾದರು (ವಾಹನಗಳು ಬಂದಿದ್ದು ಒಂದು ಕಾರಣ) ಮೊಗೇರ ಎಂಬ ಹೆಸರು ಬಿಡಲಿಲ್ಲ ಜನ ಆಗ ಪ್ರತಿ ವಷ೯ ಮಳೆಗಾಲದಲ್ಲಿ ಮುಂಬೈ ಪ್ರವಾಸಕ್ಕೆ ಹೋಗುವ ಯಕ್ಷಗಾನದವರಲ್ಲಿ ವಿನಂತಿಸಿದ ಕಾರಣ ಮುಂದಿನ ವಷ೯ದ ಎಲ್ಲಾ ಯಕ್ಷಗಾನ ಪ್ರದಶ೯ನದಲ್ಲಿ ಒಂದು ಪ್ರಸಂಗ ಸೇರಿದಂತೆ ಒಂದು ಪಾತ್ರ ಇನ್ನೊಂದು ಪಾತ್ರಕ್ಕೆ ''ನಿನ್ನ ಹೆಸರೇನು?" ಅಂದಾಗ ಆ ಪಾತ್ರ " ನಾನು ಪಂಜು ಮೊಗೇರ " ಅ೦ದಾಗ ಹೆಸರು ಕೇಳಿದ ಪಾತ್ರ "ಚೀ ನಾಚಿಗೆ ಆಗುವುದಿಲ್ಲವಾ ನಿನಗೆ? ನಾವು ಮೊಗ ವೀರರು, ಸಮುದ್ರದ ಅಲೆ ಏರಿ ಹೋರಾಡುವ ದೀರರು, ಮೊಗೇರ ಅನ್ನಲು ನಾಚಿಕೆ ಆಗಬೇಕು " ಅನ್ನುವುದರಿಂದ ಬದಲಾಯಿತು ಅಂತ 1994ರಲ್ಲಿ ಮುಂಬೈನ ದಾದರನಲ್ಲಿ ತುಳಸಿ ಪೈಪ್ ರೋಡಿನ ಸುಲ್ತಾನ್ ಬಿಲ್ಡಿOಗ್ನಲ್ಲಿ ಬೇಟಿ ಆದ ದತ್ತು ಮೊಗವೀರ ಎಂಬುವವರು ಹೇಳಿದ ವಿಚಾರ ಇದು.
ಕಲೆ ಮತ್ತು ಸಾಹಿತ್ಯದಿಂದ ಸಮಾಜದ ಮೂಡನಂಬಿಕೆ ಬದಲಿಸಬಹುದು ಅಥವ ಮೂಡರನ್ನಾಗಿಸ ಬಹುದು ಅನ್ನುವುದಕ್ಕೆ ಇದೊಂದು ಉದಾಹರಣೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment