Skip to main content

Posts

Showing posts from July, 2021

ಹೊಸ ಪೀಳಿಗೆಯ ಹೊಸ ಹೊರಾಟದ ಬೇಡಿಕೆ "ಸುಲಭ ನೆಟ್ವರ್ಕ್ - ಕೊಡಿ" ಇಲ್ಲದಿದ್ದರೆ No Network-No Vote ಅಭಿಯಾನ ಎದುರಿಸಿ ಎಂದು ಆಡಳಿತರೂಢರಿಗೆ ಸವಾಲು ಹಾಕಿರುವ ಸಿಗಂದೂರು ದೇವರ ನಾಡು ಮುಳುಗಡೆಯ ತುಮರಿ ಭಾಗದ ಕುಗ್ರಾಮದಿಂದ ಪ್ರಾರಂಭ ಆಗಿದೆ

#ನೆಟ್ವರ್ಕ_ಸಂಪರ್ಕಕ್ಕಾಗಿ_ಹೊಸರೀತಿ_ಅಭಿಯಾನ_ಇದು_ಎಲ್ಲಡೆ_ಪಸರಿಸುವ_ಸಾಧ್ಯತೆ. #ತುಮರಿ_ಭಾಗದ_ಜನರ_ಮೊದಲ_ಹೋರಾಟ_ಸೇತುವೆ_ಸಂಪರ್ಕಕ್ಕಾಗಿ #ತುಮರಿ_ಸೇತುವೆ_ಮತ್ತು_ಸಾಗರ_ತಾಲ್ಲೂಕ್_ಅಭಿವೃದ್ಧಿಗಾಗಿ_ಒತ್ತಾಯಿಸಿ_ಸಾಗರ_ತಾಲ್ಲೂಕಿನಲ್ಲಿ_ಪಾದಯಾತ್ರೆ_ನೆನಪು   Pp   ನನ್ನ ಒಂದು ಸಣ್ಣ ಪ್ರಯತ್ನ ತಾಲ್ಲೂಕು ಅಭಿವೃದ್ದಿಗೆ ಒತ್ತಾಯಿಸಿ 13 ದಿನದ ಪಾದಯಾತ್ರೆಯಲ್ಲಿ ನಾಲ್ಕು ಹಗಲು ಮತ್ತು ಮೂರು ರಾತ್ರಿ ಈ ಭಾಗದಲ್ಲಿತ್ತು ಮುಖ್ಯ ಬೇಡಿಕೆ ತುಮರಿ ಸೇತುವೆ ಸೇರಿ ಆದರೆ ಆ ದಿನದಲ್ಲಿ ಈ ಭಾಗದ ಜನ ಪಾದಯಾತ್ರಿಗಳಿಗೆ ಭವ್ಯ ಸ್ವಾಗತ, ಅತಿಥ್ಯ ಮತ್ತು ಆಶ್ರಯ ನೀಡುತ್ತಿದ್ದ ಕರುಣಾಮಯಿಗಳು ಆದರೆ ತುಮರಿ ಸೇತುವೆ ಶರಾವತಿ ನದಿಗೆ ಕಟ್ಟುವುದು ಸಾಧ್ಯವೇ ಇಲ್ಲ ಎಂದು ವಾದ ಮಾಡುವ ಕಾಲ ಆಗಿತ್ತು.   ನಂತರ ಈ ಭಾಗದ ವಿದ್ಯಾವಂತ ಯುವಕರು ಎಚ್ಚೆತ್ತು ಕೊಳ್ಳಲು ಪ್ರಾರಂಬಿಸಿದರು, ಮತದಾರರು ತಮ್ಮ ಭಾಗದ ಹಕ್ಕಿನ ಪಾಲಿಗಾಗಿ ಹೋರಾಡುವ ಇಂತಹ ಯುವಕರನ್ನು ಹಿಂಬಾಲಿಸಿದ ಫಲವಾಗಿ ತುಮರಿ ಸೇತುವೆ ಹಕ್ಕೊತ್ತಾಯದ ಹೋರಾಟ ಜಿಲ್ಲೆ, ರಾಜ್ಯ ದಾಟಿ ದೆಹಲಿಯಿಂದ ಮಂಜೂರಾಗಿದ್ದು ಇತಿಹಾಸ ಮತ್ತು ಈ ಭಾಗದ ಸ್ವಾತಂತ್ರ ನಂತರದ ದೀರ್ಘ ಕಾಲದ ಬಹು ಬೇಡಿಕೆ  ಈಡೇರಿದ ಸಂತಸ ಮತ್ತು ಈ ಹೋರಾಟದ ರೂಪುರೇಷೆ, ಸ್ಥಳಿಯರ ಭಾಗವಹಿಸುವಿಕೆ, ಜನಪ್ರತಿನಿದಿಗಳ ಕಾಳಜಿ ಪಕ್ಷಾತೀತವಾಗಿ ಸಕಾರತ್ಮಕ ಸನ್ನಿವೇಶಕ್ಕೆ ಕೊಂಡೊಯ್ದ ಈ ಭಾಗದ ಯುವಕರ

ಕೋವಿಡ್- 19 ನಮಗೆಲ್ಲ ಸ್ವಂತ ಕೇಶಾಲಂಕಾರ ಕಲಿಸಿತು

*#ಉತ್ತರ_ಕೊರಿಯಾದ_ಸವಾ೯ದಿಕಾರಿ_ಕಿಮ್_ಜಾಂಗ್_ವುನ್_ಕ್ಷಮೆಕೇಳಿ.* *#ಈರೀತಿ_ಉತ್ತರ_ಕೊರಿಯಾದಲ್ಲಿ_ಕಟಿಂಗ್_ಮಾಡಿಸಿದರೆ_ಶಿಕ್ಷೆ_ಇದೆ.* *#ಇವತ್ತು_ಅಕಸ್ಮಿಕವಾಗಿ_ಕೇಶವಿನ್ಯಾಸ.*  *ಕೋವಿಡ್- 19 ನಿಂದ  ಸ್ವಕೇಶಾಲಂಕಾರ ಪ್ರಾರಂಬಿಸಿ ಒಂದೂವರೆ ವರ್ಷ ಆಯಿತು, ಇನ್ನೂ ಸರಿಯಾದ ಹಿಡಿತ ಸಿಕ್ಕಿಲ್ಲ, ಅಂತೂ ಇಂತೂ ಹ್ಯಾಗೋ ಮ್ಯಾನೇಜ್ ಮಾಡುತ್ತಾ ಇದ್ದೆ ಆದರೆ ಇವತ್ತು ಕೈ ತಪ್ಪಿತು ಆದರೆ ಅದನ್ನೂ ಲಾಭವಾಗಿ ಪರಿವರ್ತಿಸುವ ನನ್ನ ವ್ಯಾಪಾರಿ ಬುದ್ಧಿಯಿಂದ ಕಿಮ್ ಜಾಂಗ್ ವುನ್ ಕೇಶಲಂಕಾರ ಮಾಡಿದೆ ಆಮೇಲೆ ಮಗ ಹೇಳಿದ ಉತ್ತರ ಕೋರಿಯಾದಲ್ಲಿ ಈ ಕೇಶ ವಿನ್ಯಾಸ ನಿಷಿದ್ದ ಏಕೆಂದರೆ ಆ ದೇಶದ ಸರ್ವಾದಿಕಾರಿಗೆ ಮಾತ್ರ ಈ ರೀತಿ ಕಟಿಂಗ್ ಮಾಡಿಸ ಬಹುದಂತೆ!*  *ನಾನು ತರಿಸಿಕೊಂಡಿರುವ 1500 ರೂ ನ ಪಿಲಿಪ್ಸ್ ಟ್ರಿಮ್ಮರ್, ನೋಸ್ ಹೇರ್ ಟ್ರಿಮ್ಮರ್ ಗಳು ಒ0ದೂವರೆ ವರ್ಷದಿಂದ ನನ್ನ ಡೊಮೆಸ್ಟಿಕ್ ಸಲೂನ್ ಯಂತ್ರಗಳಾಗಿದೆ.*

MALLIK VEG ANANDAPURAM (Inbetween Shimoga and Jogfalls NH 206), ಮಲ್ಲಿಕಾ ವೆಜ್ ಆನಂದಪುರಂ (ಶಿವಮೊಗ್ಗ ಮತ್ತು ಜೋಗ್ ಫಾಲ್ಸ್ ಮಧ್ಯ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ) ಪಶ್ಚಿಮ ಘಟ್ಟದ ವಿಶೇಷ ತಿನಿಸು ಹಲಸಿನ ಎಲೆ ಕೊಟ್ಟೆಕಡಬು,

#ಆನಂದಪುರಂನಲ್ಲಿ_ಮಲ್ಲಿಕಾ_ವೆಜ್_ರೆಸ್ಟೋರಾಂಟ್ #ನನಗೆ_ಹೋಟೆಲ್_ಉದ್ಯಮ_ಬೋದಿಸಿದವರು_ಛಾಯ_ಹೋಟೆಲ್_ಬೀಮಣ್ಣ. #ಹೊಸರುಚಿ #ಹಲಸಿನ_ಎಲೆ_ಕಡಬು #ಅಕ್ಕಿ_ರೊಟ್ಟಿ #ರಾಗಿ_ರೊಟ್ಟಿ_ಇಲ್ಲಿ_ನಿತ್ಯ_ಲಭ್ಯವಿದೆ.   ಶಿವಮೊಗ್ಗ ಮತ್ತು ಸಾಗರ ಮಧ್ಯದ ಆನಂದಪುರಂ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಯಡೇಹಳ್ಳಿ ವೃತ್ತದಲ್ಲಿ ದಿನಾಂಕ 28- ಸೆಪ್ಟೆಂಬರ್ -2012ರಲ್ಲಿ ನಾವು ಪ್ರಾರಂಭಿಸಿದ #ಮಲ್ಲಿಕಾ_ವೆಜ್ ಯಾವುದೇ ಪೂವ೯ಯೋಚಿತ ಪ್ರಾಜೆಕ್ಟ್ ಆಗಿರಲಿಲ್ಲ, ಅನಿರಿಕ್ಷಿತ ಮತ್ತು ಅನಿವಾಯ೯ದಿಂದ ಪ್ರಾರಂಬಿಸಿದ್ದು.  ತಂದೆ ತಾಯಿ ಹೆಸರಲ್ಲಿ #ಕೃಷ್ಣ_ಸರಸ_ಕಲ್ಯಾಣ_ಮಂಟಪ (ಬಾಲ್ಯದ ಕನಸು) ನಿರ್ಮಿಸಿದ ಮೇಲೆ ಅದನ್ನು ನಿರ್ವಹಣೆ ಮಾಡಲು ನಿತ್ಯ ಕೆಲಸಗಾರರು ಬೇಕಾಯಿತು ಅದಕ್ಕಾಗಿ ಹತ್ತು ರೂಮಿನ ಲಾಡ್ಜ್ #ಹೊ೦ಬುಜ_ರೆಸಿಡೆನ್ಸಿ ಪ್ರಾರಂಬಿಸಿದೆ, ಲಾಡ್ಜನಲ್ಲಿ ತಂಗುವವರಿಗಾಗಿ ಊಟ ಉಪಹಾರಕ್ಕೆ ರೆಸ್ಟೋರೆಂಟ್ ಅನಿವಾಯ೯ ಆಯಿತು.   ಅನೇಕರಿಗೆ ಆಹ್ವಾನಿಸಿದೆ ಆದರೆ ಅವರೆಲ್ಲರ ಅಭಿಪ್ರಾಯ ಯಡೇಹಳ್ಳಿ ಸರ್ಕಲ್ ನಲ್ಲಿ ಹೋಟೆಲ್ ನಡೆಯೊಲ್ಲ ಇತ್ಯಾದಿ. ಕುಂದಾಪುರದ ಗೆಳೆಯರೊಬ್ಬರ ಪರಿಚಯದಲ್ಲಿ ಹೈದ್ರಾಬಾದಿನಲ್ಲಿ ಹೋಟೆಲ್ ನಡೆಸುವವರೊಬ್ಬರು ಬಂದು ನೋಡಿ ಹೋಟೆಲ್ ಪ್ರಾರಂಬಿಸುವ ತೀರ್ಮಾನ ಮಾಡಿದರು ಅವರ ಕಂಡಿಷನ್ ರೆಸ್ಟೋರಂಟ್ ಪೀಠೋಪಕರಣ, ಕಿಚನ್ ಪೂರ್ಣ ಸೆಟ್ ಮಾಡಿ ಕೊಡಿ ದಿನಕ್ಕೆ ಇಷ್ಟು ಬಾಡಿಗೆ ಅಂತ.   ಎಲ್ಲಾ ತಯಾರು ಮಾಡಿಸಿದೆ ಮುಂಗಡ ಕೊಡಲು ಬಂದವರ

ಭಾಗ -52, ಆನಂದಪುರಂ ಇತಿಹಾಸ, ಉತ್ತರ ಕರ್ನಾಟಕದ ಸುಪ್ರಸಿದ್ಧ ಜಮಖಂಡಿ ನಾಟಕ ಕಂಪನಿ ಆನಂದಪುರಂ ನಲ್ಲಿ ಮರು ಹುಟ್ಟು ಪಡೆದಿದ್ದು.

#ಭಾಗ_52. #ಆನಂದಪುರಂ_ಇತಿಹಾಸ. #ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ_ನಾಟಕ_ಸಂಸ್ಥೆ. #ಪ್ರಖ್ಯಾತ_ನಾಟಕ_ಕಂಪನಿ_ಅಂತಿಮ_ದಿನಗಳು_ಆನಂದಪುರಂನಲ್ಲಿ. #ಆನಂದಪುರಂಗೆ_ಬಂದಾಗ_ಹಣ_ಸಹಾಯ_ಮಾಡಿ_ಆಶ್ರೀವದಿಸಿ_ಪ್ರೋತ್ಸಾಹಿಸಿದ_ವೆಂಕಟಾಚಲಯ್ಯಂಗಾರರು. #ಕನ್ನಡ_ಚಲನಚಿತ್ರ_ನಟರಾದ_ಲೋಕೇಶ್_ದಿರೇಂದ್ರಗೋಪಾಲ್_ಆನಂದಪುರಂನಲ್ಲಿ_ತಿಂಗಳುಗಟ್ಟಲೆ_ಕ್ಯಾಂಪ್  #ಆನಂದಪುರಂ_ವಾಸಿಗಳೇ_ಆದ_ಜಮಖಂಡಿ_ರಾಮರಾವ್_ಒಡೆಯರ್_ರಾಜ್ಯೋತ್ಸವ  _ಪ್ರಶಸ್ತಿ_ಪಡೆದರು.   ಜಮಖಂಡಿ ರಾಮಕೃಷ್ಣರನ್ನು ಕಲಾವಿದರು ರಾಮರಾವ್ ಒಡೆಯರ್ ಎಂದೇ ಕರೆಯುತ್ತಿದ್ದರು, ಇವರ ಊರು ಜಮಖಂಡಿ, ಅದೇ ಹೆಸರಿನಲ್ಲಿ ಇವರು ಪ್ರಾರಂಬಿಸಿದ ಶ್ರೀ ಗಜಾನನ ನಾಟಕ ಮಂಡಳಿ ಕಂಪನಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿತ್ತು.   ಜಮಖಂಡಿ ನಾಟಕ ಕಂಪನಿ ಟಿಪ್ಪು ಸುಲ್ತಾನ್ ಎಂಬ ಐತಿಹಾಸಿಕ ನಾಟಕದಿಂದ ಅತ್ಯಂತ ಜನಪ್ರಿಯತೆ ಹೊಂದಿತ್ತು ಈ ನಾಟಕದಲ್ಲಿ ರಾಮರಾವ್ ರ ಬ್ರಿಟಿಷ್ ಕರ್ನಲ್ ಪಾತ್ರ ಕೂಡ ಮನೆ ಮಾತಾಗಿದ್ದ ಕಾಲವದು, ಶಾಂತಕುಮಾರ್ ಮೀರ್ ಸಾದಿಕ್ ಪಾತ್ರದಿಂದ ಪ್ರಸಿದ್ಧರಾಗಿದ್ದರು.   ಈ ನಾಟಕ ಕಂಪನಿ ಪ್ರಾರಂಬಿಸಿದ ಸತ್ಯನಾರಾಯಣ ವೃತ ನಾಟಕ ಮತ್ತು ಈ ನಾಟಕದ ಸೀನರಿಗಳು ಸಿನಿಮಾವನ್ನು ಮೀರಿಸುವಂತ ಅದ್ದೂರಿ ಆಗಿತ್ತು, ಆಸ್ತಿಕರೆಲ್ಲ ಈ ನಾಟಕ ಎಷ್ಟು ಸಾರಿ ನೋಡಿದರೂ ಕಡಿಮೆ ಎಂಬಂತೆ ಪದೇ ಪದೇ ವೀಕ್ಷಿಸುತ್ತಿದ್ದರು.   ಸತ್ಯನಾರಾಯಣ ವೃತ ನಾಟಕದಲ

ನಾನು ಬರೆದಿರುವ 29 ಸಣ್ಣ ಕಥೆಗಳ ಸಂಕಲನ ಅಚ್ಚಿನಲ್ಲಿದೆ ಇದಕ್ಕೆ ಮುನ್ನುಡಿ ಬರೆದವರು ಬರಹಗಾರ, ಅಂಕಣಕಾರ ಮತ್ತು ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ

ನನ್ನ ಮೊದಲ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ನಿರೀಕ್ಷೆ ಮೀರಿದ ಸದ್ದು ಈಗಲೂ ಅಡಗಿಲ್ಲ.    ನನ್ನ ಇನ್ನೊಂದು ಕಥಾ ಸಂಕಲನ (29 ಕಥೆಗಳಿದೆ)  ಅಚ್ಚಿನಲ್ಲಿದೆ ಈ ಪುಸ್ತಕಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ವಾಟ್ಸಪ್ ನಿಂದ ಪ್ರಿಂಟ್ ತೆಗೆಸಿ, ಸಮಯ ಹೊಂದಿಸಿಕೊಂಡು ಖ್ಯಾತ ಬರಹಗಾರ, ಅಂಕಣಕಾರ ಮತ್ತು ಶಿಕ್ಷಣ ತಜ್ಞರಾದ #ಅರವಿಂದ_ಚೊಕ್ಕಾಡಿಯವರು ಪೂರ್ತಿ ಓದಿ ( ಪೂರ್ಣ ಓದದೆ ಸುಮ್ಮನೆ ಅಭಿಪ್ರಾಯ ಹೇಳುವವರಲ್ಲ) ಮುನ್ನುಡಿ ಬರೆದಿದ್ದಾರೆ.       ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಪುರಸ್ಕಾರ ಬೇರೆ ಇಲ್ಲ,  ಪುಸ್ತಕ ಅಚ್ಚಾಗುವ ಮೊದಲೇ ಮುನ್ನುಡಿ ಓದಿ. #ಅರವಿಂದ_ಚೊಕ್ಕಾಡಿಯವರಿಗೆ_ಕೃತಜ್ಞತೆಗಳೊಂದಿಗೆ ಮುನ್ನುಡಿ ---------------  * ಅರವಿಂದ ಚೊಕ್ಕಾಡಿ ಮಿತ್ರರಾದ ಅರುಣ್ ಪ್ರಸಾದ್ ಅವರು ತಮ್ಮ ಕಥೆಗಳನ್ನು ವಾಟ್ಸಪ್‌ನಲ್ಲಿ ಕಳಿಸಿ "ಎರಡೇ ದಿನಗಳಲ್ಲಿ ಆಗಬೇಕು. ಇದಕ್ಕೆ ಮುನ್ನುಡಿ ಬರೆಯಲು ಸಾಧ್ಯವಾಗಲಾರದು. ಶುಭಾಶಯಗಳ ಎರಡು ಮಾತುಗಳನ್ನಾದರೂ ಬರೆದು ಕಳಿಸಿ" ಎಂದು ಕೇಳಿದ್ದಾರೆ. ಶುಭಾಶಯ, ಹಾರೈಕೆ, ಸಂದೇಶ ಎಲ್ಲ ಕೊಡಲು ನಾನು ಸೂಕ್ತ ವ್ಯಕ್ತಿಯಲ್ಲ. ಆದ್ದರಿಂದ ಕೂಡಲೇ ಕಥೆಗಳನ್ನು ಪ್ರಿಂಟ್ ತೆಗೆಸಿ ಓದಿ ಮುನ್ನುಡಿಯನ್ನೆ ಬರೆಯಲು ಪ್ರಯತ್ನಿಸಿದ್ದೇನೆ. *************** ಇಲ್ಲಿನ ಕಥೆಗಳ ಕೇಂದ್ರ ಗ್ರಾಮ ಭಾರತವೇ. ಈ ' ಗ್ರಾಮ ಭಾರತ' ಎನ್ನುವುದು ಅನೇಕರಿಗೆ ಶಾಂತಿಯ ತೌರೂರು, ನೆಮ್ಮದಿಯ ನೆಲೆ, ಶಾಂತಿಯೇ ಮೈ

ಅರಣ್ಯದಲ್ಲಿ ನಿಮಿ೯ಸಿರುವ ಇರುವಕ್ಕಿ ಕೃಷಿ ವಿದ್ಯಾಲಯ ಅನೇಕ ಪ್ರಥಮಗಳ ದಾಖಲೆಯೊಂದಿಗೆ ದಿನಾಂಕ 24- ಜುಲೈ-2021 ಶನಿವಾರ ಮುಖ್ಯಮಂತ್ರಿ ಯಡೂರಪ್ಪರಿಂದ ಉದ್ಘಾಟನೆ

#ನಮ್ಮ_ಊರಿನ_ಇರುವಕ್ಕಿ_ಕೃಷಿ_ವಿದ್ಯಾಲಯ_ಉದ್ಘಾಟನೆ_ಆಗುತ್ತಿರುವ_ಸಿಹಿ_ಸುದ್ದಿ. #ಶಂಕುಸ್ಥಾಪನೆ_ಆಗುವಾಗ_ಯಡೂರಪ್ಪ_ಸಂಸದರು. #ಉದ್ಘಾಟಿಸುವಾಗ_ಮುಖ್ಯಮಂತ್ರಿಯಾಗಿ_ಕೊನೆದಿನಗಳು.   #ಇರುವಕ್ಕಿ  ಇರುವಕ್ಕಿ ನಮ್ಮದೇ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಇದು ಒಂದು ಕಾಲದಲ್ಲಿ ಮಡಿಕೆ ತಯಾರಿಸುತ್ತಿದ್ದ ಕುಂಬಾರ ಜನಾಂಗದವರು ವಲಸೆ ಬಂದು ನೆಲೆ ನಿಂತ ದಟ್ಟ ಅರಣ್ಯ ಪ್ರದೇಶ.     #ವಿನೋಬಾ_ಬಾವೆ_ಭೂದಾನ_ಚಳವಳಿಯಲ್ಲಿ_ಭಾಗವಹಿಸಿ_ಭೂದಾನ_ಮಾಡಿದ_ಇರುವಕ್ಕಿ_ಪುಟ್ಟಶೆಟ್ಟರು  ಇಲ್ಲಿನ ಪುಟ್ಟ ಶೆಟ್ಟರೊಬ್ಬರೆ ಆ ಕಾಲದ ಕುಂಬಾರ ಸಮೂದಾಯದ ಖಾತೆ ಜಮೀನುದಾರರು ಇವರು ಆಗಿನ ವಿದ್ಯಾ ಮಂತ್ರಿ ಆಗಿದ್ದ  ಬದರಿನಾರಾಯಣ ಆಯ್ಯಂಗಾರ ತಂದೆ ಜಮೀನ್ದಾರ್, ಇನಾಂದಾರ್ ಮತ್ತು ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲ ಆಯ್ಯಂಗಾರರ ಆಪ್ತರು ಅವರೆಲ್ಲರ ಸಲಹೆ ಮತ್ತು ಸಹಕಾರದಿಂದ ಅಡಿಕೆ ಕೃಷಿ ಮಾಡುತ್ತಾರೆ.   ವಿನೋಬಾ ಭಾವೆಯವರು ಭೂದಾನ ಚಳವಳಿಗೆ ಆನಂದಪುರಂಗೆ ಬಂದಾಗ ತಮ್ಮ ಭತ್ತ ಬೆಳೆಯುವ 5 ಎಕರೆ ತರಿ ಜಮೀನು ದಾನ ಮಾಡಿದ ಮಹಾನುಭವರು ಅವರು ಆ ಕಾಲದಲ್ಲಿ ಅತ್ಯಂತ ಹಿಂದುಳಿದ ಕುಂಬಾರ ಜನಾಂಗದ ಪುಟ್ಟ ಶೆಟ್ಟರ ಭೂದಾನವನ್ನು ಅವತ್ತಿನ ಸಭೆಯಲ್ಲಿ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು ವಿನೋಬಾ ಭಾವೆ ಎದರು ಹೊಗಳಿದ್ದರಂತೆ, ಇವರ ಮಗ ಕುಂಬಾರ್ ಬಸಪ್ಪ