Skip to main content

ಭಾಗ - 48, ಆನಂದಪುರಂ ಇತಿಹಾಸ, 1960 ರಲ್ಲಿ ಮಾಸಿಕ 40 ರೂಪಾಯಿ ವೇತನಕ್ಕೆ ಆನಂದಪುರಂ ವಿಲೇಜ್ ಪಂಚಾಯತ್ ಗೆ ಆಗಿನ ಅಧ್ಯಕ್ಷರಾದ ವೆಂಕಟಾಚಲ ಅಯ್ಯಂಗಾರರಿಂದ ನೇಮಕ ಆಗಿದ್ದ ಸುಣಗಾರ್ ಸತ್ಯಪ್ಪ ನಿವೃತ್ತಿ ಆಗಬೇಕಾದಾಗ 1200 ರೂಪಾಯಿ ವೇತನ ಪಡೆಯುತ್ತಿದ್ದರು.

#ಭಾಗ_48.
#ಆನಂದಪುರಂ_ಇತಿಹಾಸ

#ಆನಂದಪುರಂನ_ಮೊದಲ_ವಾಟರ್_ಮನ್,

#ಸುಣಗಾರ್_ಸತ್ಯಪ್ಪ_ಬದರಿನಾರಾಯಣ_ಅಯ್ಯ೦ಗಾರ್_ಸಹೋದರ_ವೆಂಕಟಾಚಲ_ಅಯ್ಯ೦ಗಾರರಿಗೆ_ಆಪ್ತ

#ಆನಂದಪುರಂಗೆ_1965ರಲ್ಲಿ_ಸಾರ್ವಜನಿಕ_ನಲ್ಲಿ_ನೀರುಸರಭರಾಜು_ಪ್ರಾರಂಭ.

#ಆಗ_ಇದ್ದದ್ದು_30_ಪಬ್ಲಿಕ್_ಟ್ಯಾಪ್ 

  1960ರಲ್ಲಿ ಆನಂದಪುರಂ ವಿಲೇಜ್ ಪ೦ಚಾಯತ್ ಅಧ್ಯಕ್ಷರು ಭೂ ಮಾಲಿಕರು, ಇನಾಂದಾರರು ಕೊಡುಗೈ ದಾನಿಗಳಾಗಿದ್ದ ರಾಮಕೃಷ್ಣ ಅಯ್ಯಂಗಾರರ ಸುಪುತ್ರ ವೆಂಕಟಾಚಲ ಅಯ್ಯಂಗಾರರು, ಆಗ ಸಾಗರ - ಹೊಸನಗರ-ತೀರ್ಥಹಳ್ಳಿ ಜಂಟಿ ವಿಧಾನಸಭಾ ಕ್ಷೇತ್ರದ ಶಾಸಕರು ಇವರ ಸಹೋದರ ಬದರಿನಾರಾಯಣ ಅಯ್ಯಂಗಾರ್ ಆಗ ವಿಲೇಜ್ ಪಂಚಾಯತ್ ಗೆ 7ನೇ ತರಗತಿ ತನಕ ಓದಿದ್ದ ಸುಣಗಾರ್ ಸತ್ಯಪ್ಪರಿಗೆ ಆನಂದಪುರಂ ವಿಲೇಜ್ ಪಂಚಾಯತಿಯಲ್ಲಿ ಮಾಸಿಕ 40 ರೂಪಾಯಿ ವೇತನದಲ್ಲಿ ಸಹಾಯಕನಾಗಿ ನೇಮಿಸುತ್ತಾರೆ.
  ಆನಂದಪುರಂ, ದಾಸಕೊಪ್ಪ, ಮಲಂದೂರು, ತಾವರೆಗಳ್ಳಿ, ಯಡೇಹಳ್ಳಿ, ಆಚಾಪುರ, ಅಂದಾಸುರ ಮತ್ತು ಮುರುಘಾಮಠ ವ್ಯಾಪ್ತಿಯ ಮನೆ ಕಂದಾಯ ವಸೂಲಿ, ಆನಂದಪುರಂ ದೊಡ್ಡಿ ನಿವ೯ಹಣೆ, ಸಾಗರ ಟ್ರಿಜರಿಗೆ ಹಣ ಸಂದಾಯ, ಸದಸ್ಯರಿಗೆ ಮೀಟಿಂಗ್ ನೋಟೀಸ್ ಕೊಡುವುದು ಇತ್ಯಾದಿ ಕೆಲಸ, ಇಷ್ಟು ದೊಡ್ಡ ವ್ಯಾಪ್ತಿಯ ಕೆಲಸ ಕಾರ್ಯಕ್ಕೆ ಒಡಾಡಲು ವಿಲೇಜ್ ಪಂಚಾಯತ್ ವಾಹನ ಸೈಕಲ್ ಈ ಸೈಕಲ್ ಟ್ಯೂಬ್ ಪ್ಯಾಚ್ ಆದರೆ ವಿಲೇಜ್ ಪಂಚಾಯತ್ ನ ಹಣದಿಂದ ದುರಸ್ತಿ ಮಾಡಿಸಬೇಕಿತ್ತು. 1962 ರಲ್ಲಿ ಆನಂದಪುರಂನ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು 30 ಸಾರ್ವಜನಿಕ ಬೀದಿ ನಲ್ಲಿ ನೀರಿಗಾಗಿ ಬೋರ್ ವೆಲ್ ಮತ್ತು ಪಂಪ್ ಯಡೇಹಳ್ಳಿ ಕೆರೆ ಕೆಳಗೆ ಬೋರ್ ವೆಲ್ ಕೊರೆಯಲು ತಿಂಗಳುಗಟ್ಟಲೆ ಬೋರ್ ವೆಲ್ ಮೆಷಿನ್ ಕೆಲಸ ಮಾಡುವುದು ನೋಡಲು ಸುತ್ತಮುತ್ತಲಿಂದ ನೂರಾರು ಜನ ಬರುತ್ತಿದ್ದರಂತೆ (ಈಗ 5-6 ಗಂಟೆ ಸಾಕು) ಅಲ್ಲಿಂದ ನೀರು ಆನಂದಪುರಂ ಹಳೇ ಪೋಲಿಸ್ ಸ್ಟೇಷನ್ ಪಕ್ಕದಲ್ಲಿ ನಿರ್ಮಿಸಿದ್ದ ನೀರಿನ ಟ್ಯಾಂಕ್ ಗೆ ಬಂದು ಸಂಗ್ರಹ ಮಾಡುವ ಕಾಮಗಾರಿ ಪ್ರಾರಂಭ ಆಗಿ 1965 ರಲ್ಲಿ ಕಾರ್ಯಾರಂಭ ಆದಾಗ ಪ್ರತಿನಿತ್ಯ ನೀರಿನ ಟ್ಯಾಂಕ್ ತುಂಬಿಸಿ ಆನಂದಪುರಂನ ಬೀದಿಗಳಲ್ಲಿನ ನಲ್ಲಿಗಳಿಗೆ ನೀರು ಬಿಡುವ ಕೆಲಸ ಕೂಡ ಸತ್ಯಪ್ಪನವರದ್ದೇ ಆಗಿತ್ತು.
  ಈಗಿನ ರೀತಿ ಆಟೋ ಸ್ವಿಚ್ ಗಳಿಲ್ಲದ ಕಾಲ, ನಿರಂತರ ವಿದ್ಯುತ್ ಕೂಡ ಇರುತ್ತಿರಲಿಲ್ಲ ಆದರೆ ಸತ್ಯಪ್ಪ ರಾತ್ರಿ ಹಗಲು ಎನ್ನದೆ ಮಳೆ ಚಳಿ ಅನ್ನದೆ ಸೈಕಲ್ ಮೇಲೆ ಹೋಗಿ ಬೋರ್ ವೆಲ್ ಚಾಲು ಮಾಡಬೇಕಾಗಿತ್ತು.
  ಸತ್ಯಪ್ಪ ಮತ್ತು ಇವರ ಅಣ್ಣ ಭರ್ಮಣ್ಣ ಅವರ ಕುಟುಂಬದ ತಲತಲಾಂತರದಿಂದ ಬಂದ ಆನಂದಪುರಂ ಮಾರಿಗುಡಿ ಮತ್ತು ಗುತ್ಯಮ್ಮ ದೇವಿ ದೇವಸ್ಥಾನದ ಪೂಜಾರಿಕೆ ವೃತ್ತಿ ಕೂಡ ಮಾಡಿಕೊಂಡಿದ್ದರು ಸತ್ಯಪ್ಪ ವಿಲೇಜ್ ಪಂಚಾಯಿತಿ ಸೇರಿದ ಮೇಲೆ ಇವರ ಸಹೋದರ ಪೂಜೆ ಮುಂದುವರಿಸಿದ್ದರು.
  ಆಧ್ಯಕ್ಷರಾಗಿದ್ದ ವೆಂಕಟಚಲಾಯ್ಯಂಗಾರರಿಗೆ ನಿಷ್ಟಾವಂತರಾಗಿದ್ದ ಸತ್ಯಪ್ಪ ಆನಂದಪುರಂನ ಸುತ್ತಮುತ್ತಲಿನ ಮಾಹಿತಿ ನೀಡುವವರೂ ಆಗಿದ್ದರೆಂದು ಜನ ಸತ್ಯಪ್ಪರಿಗೆ ಹೆದರುವಂತಾಗಿತ್ತಂತೆ.
  ಆನಂದಪುರಂ ವಿಲೇಜ್ ಪಂಚಾಯತ್ ಬದಲಾಗಿ ಮಂಡಲ್ ಪಂಚಾಯತ್ ಆಗಿ ವಿಭಜನೆ ಆಗಿ ನಂತರ ಆನಂದಪುರಂ ಪ್ರತ್ಯೇಕ ಗ್ರಾಮ ಪಂಚಾಯತ್ ಆಯಿತು, (ಯಡೇಹಳ್ಳಿ ಮತ್ತು ಆಚಾಪುರ ಬೇರೆ ಗ್ರಾಮ ಪಂಚಾಯತ್ ) ಅಲ್ಲೇ ನಿವೃತ್ತರಾದಾಗ ಇವರ ವೇತನ ಮಾಸಿಕ ಸಾವಿರ ಇನ್ನೂರರ ಮೇಲೆ ಹೋಗಲಿಲ್ಲ.
  ಸತ್ಯಪ್ಪ ಮತ್ತು ಲಕ್ಷ್ಮಪ್ಪ ದಂಪತಿಗಳಿಗೆ ಮೂವರು ಪುತ್ರರು  ಮತ್ತು ಒಂದು ಪುತ್ರಿ.
  ಹಿರಿಯ ಪುತ್ರ ಮಹೇಶ್ವರ ತನ್ನ ತಂದೆ ದೀರ್ಘ ಕಾಲ ಸೇವೆ ಮಾಡಿದ್ದ ಆನಂದಪುರಂ ಗ್ರಾಮ ಪಂಚಾಯತ್ ನಲ್ಲೇ ಬಿಲ್ ಕಲೆಕ್ಟರ್ ಆಗಿದ್ದಾರೆ, ಎರಡನೆ ಪುತ್ರ ವೇಣಾಕ್ಷ ಆನಂದಪುರಂನ ಸಾವ೯ಜನಿಕ ಗ್ರಂಥಾಲಯದಲ್ಲಿ ಲೈಬ್ರೇರಿಯನ್ ಆಗಿದ್ದಾರೆ, ಮೂರನೇ ಪುತ್ರ ಇಂದೂದರ ಬೆಂಗಳೂರಲ್ಲಿ ಖಾಸಾಗಿ ಉದ್ಯೋಗ ಮಾಡುತ್ತಿದ್ದಾರೆ ಮತ್ತು ಪುತ್ರಿ ಭಾಗ್ಯ ವಿವಾಹವಾಗಿ ಸಾಗರದಲ್ಲಿ ನೆಲೆಸಿದ್ದಾರೆ.
  ಊರು ಕಟ್ಟುವ ಕೆಲಸದಲ್ಲಿ ಎಲೆ ಮರೆಯ ಕಾಯಿಯಂತೆ ಅತ್ಯಂತ ಕನಿಷ್ಟ ವೇತನದಲ್ಲಿ ದೀರ್ಘ ಕಾಲ ಸೇವೆ ಮಾಡಿದ ಇ೦ತವರು ಸದಾ ಸ್ಮರಣೀಯರು, ನಿವೃತ್ತಿ ವೇತನವೂ ಇಲ್ಲದೆ 2006ರಲ್ಲಿ ಗ್ರಾಮ ಪಂಚಾಯತ್ ನವರು ನೀಡಿದ ಇಪ್ಪತ್ತೈದು ಸಾವಿರ ಇವರಿಗೆ ದೊರಕಿದ ದೊಡ್ಡ ಮೊತ್ತ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...