Skip to main content

ಭಾಗ -49, ಆನಂದಪುರಂ ಇತಿಹಾಸ, ಭಾಂಗ್ಲಾ ವಿಮೋಚನಕ್ಕಾಗಿ ಭಾ೦ಗ್ಲಾ ಪಾಕಿಸ್ಥಾನ ಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ಸೈನಿಕರಾಗಿ ಗುಂಡೇಟು ತಿಂದು ನಿವೃತ್ತರಾಗಿ ಆನಂದಪುರಂನಲ್ಲಿ ನೆಲೆಸಿ ಆನಂದಪುರಂನ ಮೊದಲ ಪತ್ರಿಕಾ ವಿತರಕರಾಗಿದ್ದ ಹುಚ್ಚಾಚಾರ್.

#ಭಾಗ_49.
#ಆನಂದಪುರಂ_ಇತಿಹಾಸ.

#ಆನಂದಪುರಂನ_ಮೊದಲ_ಪತ್ರಿಕಾ_ವಿತರಕರು_ನಿವೃತ್ತ_ಸೈನಿಕರು.

#ಬಾಂಗ್ಲಾ_ಪಾಕಿಸ್ತಾನ_ಯುದ್ಧದಲ್ಲಿ_ಕಾಲಿಗೆ_ಗುಂಡೇಟು_ತಿಂದವರು.

#ಆನಂದಪುರಂನಲ್ಲಿ_ನೆಲೆಸಿ_ಮಕ್ಕಳನ್ನು_ವಿದ್ಯಾವಂತರಾಗಿಸಿ_ಆನಂದಪುರಂನಲ್ಲೇ_ಜೀವಾಂತ್ಯ_ಆದವರು.

   1950ರ ದಶಕದಲ್ಲಿ ಆನಂದಪುರಂಗೆ ಬಂದವರು ನಿವೃತ್ತ ಯೋದ ಹುಚ್ಚಾಚಾರರು, ಬಂದವರಿಗೆ ನೆಲೆ ಕಾಣಲು ಸಹಕರಿಸಿದವರು ವೆಂಕಟಾಚಲಯ್ಯಂಗಾರರು ಅಗ್ರಹಾರದ ಅವರದ್ದೇ ಮನೆ ಬಾಡಿಗೆ ಪಡೆದು ಆನಂದಪುರಂನಲ್ಲಿ ಕುಟುಂಬದೊಂದಿಗೆ ನೆಲೆಸುತ್ತಾರೆ.
  ಇವರಿಗೆ ಸಹಕರಿಸಿದವರು ಶಿಕ್ಷಕರಾಗಿದ್ದ ಶೇಷಾಚಾರ್ ಕುಟುಂಬ ( ಪ್ರಾಣೇಶ್ ಆಚಾರ್ ತಂದೆ).
   ಬಾಂಗ್ಲಾ ವಿಮೋಚನ ಯುದ್ದ ಬಾಂಗ್ಲಾ ಮತ್ತು ಪಾಕಿಸ್ತಾನದ ಜೊತೆ ನಡೆದಾಗ ಭಾರತೀಯ ಸೈನ್ಯ ಬಾಂಗ್ಲಾ ಪರವಹಿಸಿತ್ತು ಆಗ ಯುದ್ಧದಲ್ಲಿ ಕಾಲಿಗೆ ಗುಂಡು ಬಿದ್ದು ನಿವೃತ್ತರಾಗಿ ಬಂದವರು ಹುಚ್ಚಾಚಾರ್.
  ಚಳಿ ಇರಲಿ ಮಳೆ ಇರಲಿ ಎಡ ಮುಂಗೈಯಲ್ಲಿ ಪತ್ರಿಕೆಗಳನ್ನು ಹಿಡಿದು ಕೊಂಡು ಗುಂಡು ಬಿದ್ದು ಊನ ಆಗಿದ್ದ ಕಾಲು ಎಳೆದುಕೊಂಡು ಶುಭ್ರ ಪಂಚೆ ಶರ್ಟ ಧರಿಸಿ ಯಾವತ್ತೂ ಶೇವ್ ಆಗಿರುವ ಮುಖದಲ್ಲಿ ಇಡೀ ಆನಂದಪುರಂಗೆ ಪತ್ರಿಕೆಯನ್ನು ನಡೆದುಕೊಂಡೇ ಹೋಗಿ ವಿತರಿಸುತ್ತಿದ್ದರು.
 ಆಗ ಪತ್ರಿಕೆ ಓದುವವರೂ ಕಡಿಮೆ, ಹುಚ್ಚಾಚಾರರು ತಮ್ಮ ನಿವೃತ್ತಿ ವೇತನದಿಂದ ಜೀವನ ಮಾಡುತ್ತಿದ್ದರು, ಪತ್ರಿಕಾ ವಿತರಣೆಯ ಈ ಅತ್ಯಂತ ಕಡಿಮೆ ಆದಾಯದ ಕೆಲಸ ಸೈನಿಕ ಜೀವನ ಶೈಲಿ ಅಭ್ಯಾಸ ಆಗಿದ್ದ ಅವರಿಗೆ ನಿತ್ಯ ಒಂದು ರೀತಿಯ ತಾಲೀಮಿಗಾಗಿ ಆಯ್ಕೆ ಮಾಡಿಕೊಂಡಿರಬೇಕು ಮತ್ತು ವಹಿಸಿದ ಕೆಲಸ ಪೂರ್ಣ ಮಾಡಲೇ ಬೇಕೆಂಬ ಶಿಸ್ತಿನ ಜೀವನ ಅವರದ್ದಾಗಿತ್ತು.
  ಪ್ರಜಾವಾಣಿ, ಸುದಾ ಪ್ರಜಾಮತ ಮತ್ತು ಮಯೂರ ಪತ್ರಿಕೆಗಳು 1965 ರಿಂದ ಕೆ.ಎನ್. ಗುರುಸ್ವಾಮಿ ಅವರು ಮೈಸೂರು ಪಬ್ಲಿಕೇಶನ್ ನಿಂದ ಪ್ರಾರಂಬಿಸುತ್ತಾರೆ, 1948 ರಿಂದ ಇವರೇ ಪ್ರಾರಂಬಿಸಿದ ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ಪತ್ರಿಕೆ ಯಶಸ್ಸು ಅವರಿಗೆ ಪ್ರಜಾವಾಣಿ ಪ್ರಾರಂಬಿಸುವ ಹುಮ್ಮಸ್ಸು ತರುತ್ತದೆ.
  ಶೇಕಡಾ 75% ಬಂಡವಾಳ ಅಬಕಾರಿ ಗುತ್ತಿಗೆದಾರ ಕೆ.ಎನ್.ಗುರುಸ್ವಾಮಿಯವರದ್ದು ಉಳಿದದ್ದು ಶಿವಮೊಗ್ಗದ ಮೂಲ ರಂಗಪ್ಪ, ಕೆ.ವೆಂಕಟಸ್ವಾಮಿ, ಎಂ.ಕೆ.ಸ್ವಾಮಿ ಮತ್ತು ದೊಂಡುಸಾ ಅವರದ್ದು.
  ಶಿವಮೊಗ್ಗದ ಅಬಕಾರಿ ಗುತ್ತಿಗೆದಾರ ಮೂಲ ರಂಗಪ್ಪ (ಮೊನ್ನೆ ಇದೇ 2021ರಜೂನ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ಮೃತರಾದರು) ಶಿವಮೊಗ್ಗಜಿಲ್ಲೆಯಾದ್ಯಂತ ಪ್ರಜಾವಾಣಿ ಪತ್ರಿಕೆ ಪ್ರಸಾರಕ್ಕೆ ಹೆಚ್ಚಿನ ಗಮನ ಹರಿಸಿರುತ್ತಾರೆ ಅವರಿಗೆ ಹುಚ್ಚಾಚಾರ್ ರ ಕಾರ್ಯಕ್ಷಮತೆ ಅರಿತು ಪ್ರಜಾವಾಣಿ ವಿತರಕರಾಗಿ ಮಾಡುತ್ತಾರೆ.
  ಹುಚ್ಚಾಚಾರ್ ಮತ್ತು ಸುಲೋಚನಮ್ಮ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ದೊಡ್ಡವರು ನಾಗರಾಜ್ ಆಚಾರ್ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದರು ಈಗ ನಿವೃತ್ತರಾಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ.
  ಇನ್ನೊಬ್ಬ ಮಗ ಪಣಿ ಕೂಡ ಮೈಸೂರಿನ ಹಾಲಿನ ಡೈರಿಯಲ್ಲಿ ಉದ್ಯೋಗಿ ಆಗಿದ್ದಾರೆ.
  ಒಂದು ಊರಿನ ಅಭಿವೃದ್ದಿಯಲ್ಲಿ ಮತ್ತು ಊರವರ ಜ್ಞಾನಾರ್ಜನೆಗೆ ಆ ಕಾಲದಲ್ಲಿ ಪತ್ರಿಕೆ ತುಂಬಾ ಮುಖ್ಯ ಸಾದನವಾಗಿತ್ತು ಅದನ್ನು ಆನಂದಪುರಂ ಜನರಿಗೆ ಸಕಾಲಕ್ಕೆ ಮುಟ್ಟಿಸುವ ಕೆಲಸ ಮಾಡಿದವರು ದೇಶದ ಗೌರವಾನ್ವಿತ ನಿವೃತ ಯೋದರಾದ ಹಾಗೂ ಬಾಂಗ್ಲಾ ಯುದ್ದದಲ್ಲಿ ಭಾಗವಹಿಸಿದ್ದ ದೀರರಾದ ಗೌರವಾನ್ವಿತ #ಹುಚ್ಚಾಚಾರ್.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...