Skip to main content

ಭಾಗ - 46, ಆನಂದಪುರಂ ಇತಿಹಾಸ, ಹುಲಿ ಮಾಂಸ ತಿಂದ, ಆನಂದಪುರಂಗೆ ಅತಿ ದೊಡ್ಡ ಕಟ್ಟಡ ಕಟ್ಟಿದ ಆ ಕಾಲದ ಆನಂದಪುರಂನ ಆಂಗ್ರಿ ಯಂಗ್‌ ಮ್ಯಾನ್ ನಲ್ಲಪ್ಪ.

#ಭಾಗ_46.
#ಆನಂದಪುರಂ_ಇತಿಹಾಸ

#ನಲ್ಲಪ್ಪ_ಒಂದು_ಕಾಲದ_ಆನಂದಪುರಂ_ಆಂಗ್ರಿ_ಯಂಗ್_ಮ್ಯಾನ್.

#ಆನಂದಪುರಂ_ಹೆದ್ದಾರಿಯಲ್ಲಿನ_ಆಕಾಲದ_ಬೃಹತ್_ಕಟ್ಟಡದ_ನಿರ್ಮಾತೃ.

#ಹುಲಿ_ಮಾ೦ಸ_ತಿಂದು_ತೇಗಿದ_ಸಾಹಸಿ.

#ಕೋಪಿಷ್ಟ_ಅಷ್ಟೇ_ಹೃದಯವಂತ_ವ್ಯಕ್ತಿ

  ನಲ್ಲಪ್ಪ ದೂರದ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೋಗನಹಳ್ಳಿಯಿಂದ ಆನಂದಪುರಂಗೆ ಕ್ಷೌರಿಕ ವೃತ್ತಿಗೆ ಬಂದ ತೆಲುಗು ಮಾತೃ ಭಾಷೆಯ ಕುಟುಂಬದವರು.
  ಹುಟ್ಟು ಸಾಹಸಿ, ಯಾವುದಕ್ಕೂ ಯಾರಿಗೂ ಹೆದರದ ಆದರೆ ಮಾನವೀಯ ಗುಣಗಳುಳ್ಳ ಹೃದಯವಂತರು.
   ಇವರಿಗಿಂತ ಮೊದಲು ಆನಂದಪುರಂನ ಮೂಲ ಕ್ಷೌರಿಕರು ಕನ್ನಡ ಮಾತೃ ಭಾಷೆಯ ಮಲಂದೂರಿನ ಮಂಜಣ್ಣ ಮತ್ತು ಪಕೀರಣ್ಣ ಸಹೋದರರು ಇದ್ದರು.
   ನಲ್ಲಪ್ಪನವರ ಜೊತೆ ಅವರ ತಮ್ಮ ಕೊಂಡಪ್ಪರ ಕುಟುಂಬವನ್ನು ಕರೆತರುತ್ತಾರೆ ನಂತರ ನಾರಾಯಣಪ್ಪರ ಕುಟುಂಬ ಕೂಡ ನಲ್ಲಪ್ಪನವರೆ ಕರೆ ತರುತ್ತಾರೆ.
   ಆ ಕಾಲದಲ್ಲಿ ಚೆನ್ನಪ್ಪ ಶೆಟ್ಟರ (ಮಲ್ಲೇಶಿ ತಂದೆ) ಮನೆಯೇ ಅತ್ಯಂತ ದೊಡ್ಡ ಮನೆ ಮತ್ತು ಅವರು ತಲ ತಲಾಂತರದಿಂದ ಆನಂದಪುರಂನ ಹಳೆಯ ಲೇವಾದೇವಿದಾರರು.
   ಆದರೆ ದೂರದ ಚಿಕ್ಕಬಳ್ಳಾಪುರದಿಂದ ಬಂದು ಆನಂದಪುರಂನಲ್ಲಿ ನೆಲೆಸಿ ಆನಂದಪುರಂನ ಬೆಂಗಳೂರು ಹೊನ್ನಾವರ ರಸ್ತೆಯ ಮುಖ್ಯ ರಸ್ತೆಯಲ್ಲಿ ಚೆನ್ನಪ್ಪ ಶೆಟ್ಟರ ಮನೆಗಿಂತ ಎರೆಡು ಪಟ್ಟು ದೊಡ್ಡದಾದ ಮನೆ, ಸಲೂನ್ ಮತ್ತು ಬಾಡಿಗೆ ರೂಂಗಳ ದೊಡ್ಡ ಕಟ್ಟಡ ಕಟ್ಟಿದ್ದರು.
  1995 ರ ತನಕ ನಲ್ಲಪ್ಪನವರ ಕಟ್ಟಡವೇ ಆನಂದಪುರಂಗೆ ದೊಡ್ಡ ಕಟ್ಟಡ ಎಂಬ ದಾಖಲೆ ಆಗಿತ್ತು.
   ಆ ಕಾಲದಲ್ಲಿ ದೇಶಿ ಮದ್ಯ ಮಾರಾಟ ನಿಷೇದ ಇದ್ದರೂ ನಲ್ಲಪ್ಪ ಸ್ವತಃ ಮಧ್ಯ ತಯಾರಿಸುತ್ತಿದ್ದದ್ದು ಇದಕ್ಕಾಗಿ ಪೋಲಿಸರು ಹಿಡಿದು ಒಯ್ಯುವುದು, ಸಂಜೆ ಬಿಡುಗಡೆ ಆಗಿ ಬರುವುದು ಪುನಃ ಇದೇ ವ್ಯಾಪಾರ ಪುನಾರಾವರ್ತನೆ ಮಾಡುವುದರಿಂದ ನಲ್ಲಪ್ಪ ಕಾನೂನು ಪಾಲನೆ ಮಾಡುವವರಿಗೆ ತಲೆ ನೋವಾಗಿದ್ದರೂ ಸ್ಥಳಿಯ ಮಧ್ಯ ಪ್ರಿಯರಿಗೆ ನಲ್ಲಪ್ಪ ಪ್ರಿಯ ವ್ಯಕ್ತಿಯೇ ಆಗಿದ್ದರು.
   ಆ ಕಾಲದಲ್ಲಿ ಆನಂದಪುರಂನ ಹಳೇ ಪೋಲಿಸ್ ಠಾಣೆ ಪಕ್ಕದಲ್ಲಿದ್ದ ಪಾರೆಸ್ಟ್ ಕಚೇರಿಯಲ್ಲಿ ರೇಂಜರ್ ಟೈಲಿ ಎಂಬುವವರ ಮೇಲೆಯೇ ಹಲ್ಲೆ ಮಾಡಿ ಜಯಿಸಿಕೊಂಡಿದ್ದು ಆ ಕಾಲದಲ್ಲಿ ದೊಡ್ಡ ಇತಿಹಾಸ.
   ಆ ಕಾಲದಲ್ಲಿನ ಜನಮನದಲ್ಲಿ ಇದ್ದ ನಂಬಿಕೆ ಹುಲಿ ಮಾಂಸ ಯಾರು ತಿನ್ನುವುದಿಲ್ಲ, ತಿನ್ನಬಾರದು ಮತ್ತು ಹುಲಿ ಮಾಂಸ ಕಹಿ ಎಂಬ ನಂಬಿಕೆ ಇದನ್ನು ಸುಳ್ಳು ಮಾಡಲು ನಲ್ಲಪ್ಪ ಶಿಕಾರಿ ಮಾಡಿದ ಹುಲಿ ಮಾಂಸ ತಂದು ಸಾವ೯ಜನಿಕರ ಎದುರೇ ಬೇಯಿಸಿ ತಿಂದದ್ದು ಈ ಭಾಗದಲ್ಲೇ ದೊಡ್ಡ ಸುದ್ದಿ.
  ಜಮೀನ್ದಾರ್ ಅಯ್ಯಂಗಾರ್ ಕುಟುಂಬದವರೂ ನಲ್ಲಪ್ಪರನ್ನು ಕಂಡರೆ ಅಂಜುವಂತಿದ್ದ ನಲ್ಲಪ್ಪ ಮತ್ತು ಪಾಪಮ್ಮ ದಂಪತಿಗಳಿಗೆ ಮೂರು ಹೆಣ್ಣು ಮತ್ತು ಮೂರು ಗಂಡು ಮಕ್ಕಳು.
  ದೊಡ್ಡ ಮಗಳು ರಾಮಕ್ಕ, ಆನಂದ, ಗೋವಿಂದ, ನಾಗರತ್ನ, ಧರ್ಮರಾಜ ಮತ್ತು ಪದ್ಮ.
   ಹಿರಿಯ ಪುತ್ರಿ ರಾಮಕ್ಕನಿಗೆ ನಾರಾಯಣಪ್ಪರ ಮಗ ಮುನಿಯಪ್ಪರೊಂದಿಗೆ ವಿವಾಹ ಮಾಡಿಕೊಂಡು ಆನಂದಪುರಂನಲ್ಲಿ ನೆಲೆಸಿದ್ದಾರೆ ಇವರ ಪುತ್ರ ಕೃಷ್ಣ ಯಡೇಹಳ್ಳಿಯಲ್ಲಿ ಸಲೂನ್ ಇಟ್ಟುಕೊಂಡಿದ್ದಾರೆ ಇನ್ನೊಬ್ಬ ಪುತ್ರ ಟ್ಯಾಕ್ಸಿ ರಿಕ್ಷಾ ಇಟ್ಟುಕೊಂಡು ಟ್ರಾವೆಲ್ಲರ್ ಸ೦ಸ್ಥೆ ನಡೆಸಿಕೊಂಡಿದ್ದು ಜನಾನುರಾಗಿ ಆಗಿದ್ದ ಕುಮಾರ ಇತ್ತೀಚೆಗೆ ಅನಾರೋಗ್ಯದಿಂದ ಮೃತರಾಗಿದ್ದಾರೆ.
  ಹಿರಿಯ ಪುತ್ರ ಆನಂದ್ ಕ್ರೀಡಾಪಟು ಅವರು ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಮಾಡಿ ನಿವೃತ್ತರಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
  ದ್ವಿತಿಯ ಪುತ್ರ ಗೋವಿಂದ ಮೂಲ ಆಸ್ತಿಯಲ್ಲಿ ಆನಂದಪುರಂನಲ್ಲಿ ನೆಲೆಸಿದ್ದರು ಅವರೂ ಈಗ ಇಲ್ಲ.
  ತೃತಿಯ ಪುತ್ರ ದಮ೯ರಾಜು ಶಿವಮೊಗ್ಗದಲ್ಲಿ ನೆಲೆಸಿದ್ದು ಶಿವಮೊಗ್ಗ ತಾಲ್ಲೂಕ್ ಸವಿತಾ ಸಮಾಜದ ಅಧ್ಯಕ್ಷರಾಗಿದ್ದಾರೆ ಮತ್ತು ಇವರನ್ನು ರಾಜ್ಯ ಸರ್ಕಾರದ ಸವಿತಾ ಸಮಾಜ ಅಭಿವೃದ್ದಿ ನಿಗಮದಲ್ಲಿ ರಾಜ್ಯ ಮಟ್ಟದ ನಿರ್ದೇಶಕರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
  ನಲ್ಲಪ್ಪರ ತಮ್ಮ ಕೊಂಡಪ್ಪರಿಗೆ ಇಬ್ಬರು ಮಕ್ಕಳು ದೊಡ್ಡ ಮಗ ಮುನಿಯಪ್ಪ ಸಂತೆ ಮಾರ್ಕೆಟಲ್ಲಿ ಮನೆ ಮಾಡಿಕೊಂಡು ವಾಸ ಇದ್ದರು ಈಗ ಇಲ್ಲ ಇನ್ನೋಬ್ಬ ಮಗ ಕೃಷ್ಣಣ್ಣ ಕೌರಿಕ ವೃತ್ತಿ ಮುಂದುವರಿಸಿಕೊಂಡು ಆನಂದಪುರಂನ ಅಶೋಕ ರಸ್ತೆಯಲ್ಲಿ ನೆಲೆಸಿದ್ದಾರೆ.
  ಆ ಕಾಲದ ಆಂಗ್ರಿ ಯಂಗ್ ಮ್ಯಾನ್ ನಲ್ಲಪ್ಪರ ಬಗ್ಗೆ ಜನರಲ್ಲಿ ಅನೇಕ ದಂತ ಕಥೆಗಳೇ ಇದೆ, ನಲ್ಲಪ್ಪರ ದೈಯ೯ ಸಾಹಸಗಳು ಅವರನ್ನು ಆರ್ಥಿಕವಾಗಿ ಸದೃಡರಾಗಿಸಿತು ಆಸ್ತಿವಂತರನ್ನಾಗಿಸಿತು, ಸಮಾಜದಲ್ಲಿ ಗೌರವ ಸಮಬಾಳ್ವೆಗೆ ಕಾರಣ ಆಯಿತು ಅವರ ವೃತ್ತಿ ಆ ಕಾಲದಲ್ಲಿ ಅವರಿಗೆ ಕೀಳರಿಮೆಗೆ ಕಾರಣವಾಗದೇ ಸಮಾನ ವೃತ್ತಿ ಗೌರವ ಸಮಾಜ ನೀಡುವಂತಾಗಿದ್ದು ವಿಶೇಷವೇ ಆಗಿದೆ.
(ನಾಳೆ ಭಾಗ-47)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...