Skip to main content

ಭಾಗ - 50, ಆನಂದಪುರಂ ಇತಿಹಾಸ, ಸುಭಾಷ್ ಯುವಕ ಸಂಘದ ಸುಭಾಷ್ ಕಬ್ಬಡಿ ತಂಡ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಆನಂದಪುರಂನ ಸ್ಟಾರ್ ಕಬ್ಬಡಿ ಆಟಗಾರರು.

#ಭಾಗ_50
#ಆನಂದಪುರಂ_ಇತಿಹಾಸ.

#ಆನಂದಪುರಂ_ಸುಭಾಷ್_ಯುವಕ_ಸಂಘ.

#ರಾಜ್ಯಮಟ್ಟದಲ್ಲಿ_ಹೆಸರು_ಮಾಡಿದ_ಕಬ್ಬಡಿ_ತಂಡ

#ಯುವಜನೋತ್ಸವದಲ್ಲಿ_ಸತತ_ಗೆಲುವಿನ_ದಾಖಲೆ.

#ನಾಮಕರಣ_ಮಾಡಿದವರು_SRK.

#ಆಗ_ಸಾಗರದ_ಗಣಪತಿಶೆಟ್ಟರು_ಜಾಲಿ_ರುದ್ರಪ್ಪಗೌಡ_ಸಾಗರದ_ಪ್ರಖ್ಯಾತ_ಕಬ್ಬಡಿ_ಆಟಗಾರರು

  ಆನಂದಪುರಂನ ಪ್ರೌಡ ಶಾಲೆಯಲಿ ಆಗಿನ ಪ್ರಖ್ಯಾತ ದೈಹಿಕ ಶಿಕ್ಷಕರು, ಶಿಸ್ತಿನ ಸಿಪಾಯಿ ಮತ್ತು ಆನಂದಪುರಂನ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದ SRK ಮಾಸ್ತರು ಶಾಲೆಯಲ್ಲಿ ಕಬ್ಬಡಿ ಮತ್ತು ವಾಲೀ ಬಾಲ್ ತಂಡಗಳನ್ನು ಕಟ್ಟಿ ತರಬೇತಿ ನೀಡಿ ತಯಾರು ಮಾಡುತ್ತಾರೆ.
  ಅದರಲ್ಲಿ ಕಬ್ಬಡಿ ತಂಡ ಯಶಸ್ವಿ ಆಗುತ್ತದೆ ಆದರೆ 10 ನೇ ತರಗತಿ ನಂತರವೂ ಈ ಕಬ್ಬಡಿ ತಂಡ ಕೈ ತಪ್ಪದಂತೆ ಮುಂದುವರಿಯ ಬೇಕೆಂಬ ಇಚ್ಚೆ SRK ಅವರದ್ದು ಆದ್ದರಿಂದ ಅವರು ಆಗಿನ ಗ್ರಾಮ ಸೇವಕರಾಗಿದ್ದ (ಕಲಾವಿದರೂ ಕೂಡ) ರುದ್ರಪ್ಪ ಸೇರಿ ಯುವಕ ಸಂಘ ಸ್ಥಾಪಿಸುತ್ತಾರೆ ಆ ಯುವಕ ಸಂಘಕ್ಕೆ ಸುಭಾಷ್ ಚಂದ್ರ ಬೋಸ್ ರ ಸ್ಮರಣೆಗಾಗಿ #ಸುಬಾಷ್_ಯುವಕ_ಸಂಘ ಎಂದು ನಾಮಕರಣ ಮಾಡಿ ನೊಂದಾಯಿಸುತ್ತಾರೆ.
  ಆಗಿನ ಯುವ ಮುಂದಾಳುಗಳಾಗಿದ್ದ ಆನಂದರಾಜ್, ನರಸಿಂಹಮೂರ್ತಿ, ಕೃಷ್ಣಪ್ರಸಾದ್ ಮುಂತಾದವರು ಮುಂದಾಳತ್ವ ವಹಿಸುತ್ತಾರೆ.
 ಕೆಲ ಕಾಲ ನಲ್ಲಪ್ಪನವರ ಕಟ್ಟಡದಲ್ಲಿನ ಮಹಡಿ ಮೇಲಿನ ಕೋಣೆ ಒಂದು ಸುಭಾಷ್ ಯುವಕ ಸಂಘದ ಕಾರ್ಯಾಲಯ ಆಗಿತ್ತು ಆಗ ಯಡೇಹಳ್ಳಿಯ ಎಂ.ಎಸ್. ದೇವರಾಜ್ ಅಧ್ಯಕ್ಷರು, ಕೆ.ವಿ.ಸುರೇಶ್ (ರಂಗನಾಥ ಭಟ್ಟರ ಸಹೋದರ) ಕಾರ್ಯದರ್ಶಿ ಆಗಿರುತ್ತಾರೆ ನಂತರದಲ್ಲಿ ಕೆ.ವಿ.ಸುರೇಶ್ ಅಧ್ಯಕ್ಷರು, ಕಾಯ೯ದರ್ಶಿ ಆಗಿ ಕೆ.ನಾಗರಾಜ್ ಯಡೇಹಳ್ಳಿ, ಖಜಾಂಚಿ ಆಗಿ ಕೆ.ಟಿ.ತಿಮ್ಮೇಶ್ ಕಣ್ಣೂರು ಕಾಯ೯ನಿರ್ವಹಿಸುತ್ತಾರೆ.
  ಕಾಲಾಂತರದಲ್ಲಿ ಸುಭಾಷ್ ಯುವಕವೇ ಡಾ.ರಾಜ್‌ ಕನ್ನಡ ಯುವಕ ಸಂಘವಾಗಿ ನಂತರ ಕನ್ನಡ ಸಂಘವಾಗಿ ಪ್ರಸಿದ್ದಿಯಾಯಿತು.
  ಆಗಿನ ಮುಖ್ಯಮಂತ್ರಿ ದೇವರಾಜ್ ಅರಸರು ಆನಂದಪುರಂನ ಬದರಿನಾರಾಯಣ ಅಯ್ಯಂಗಾರರ ಬೇಟಿಗೆ ಬಂದಾಗ  ಈ ಯುವಕ ಸಂಘದ ಗಣಪತಿ ಇಟ್ಟಿದ್ದ ಪೆಂಡಾಲ್ ಸಂದರ್ಶಿಸಿ ಆ ಕಾಲದಲ್ಲಿ ರೂ 25 ಸಾವಿರ ಹಣ ಸರ್ಕಾರದಿಂದ ಯುವಕ ಸಂಘದ  ಕಟ್ಟಡಕ್ಕೆ ಮoಜೂರು ಮಾಡುತ್ತಾರೆ.
  ಸುಭಾಷ್ ಯುವಕ ಸಂಘದ ಕಬ್ಬಡಿ ಟೀಂ ನ ಸರ್ವಕಾಲಿಕ ಕ್ಯಾಪ್ಟನ್ ಆಗಿ ಕ್ಲೈಮೆಂಟ್ ರೆಬೆಲೋ(ಈಗ ಯಡೇಹಳ್ಳಿಯಲ್ಲಿ ನೆಲೆಸಿದ್ದಾರೆ) ಮುನ್ನಡೆಸುತ್ತಾರೆ ಈ ಕಬ್ಬಡಿ ಟೀಂ ನಲ್ಲಿ ಕುಸ್ತಿ ಪೈಲ್ವಾನರಾಗಿದ್ದ ಗೊಲ್ಲರ ಕೃಷ್ಣಮೂರ್ತಿ, ಸೀತಾರಾಂ (ಭದ್ರಾವತಿ VSIL),ಪ್ರಹ್ಲಾದ್ (ಈಗಿನ ಶುಂಠಿ ವ್ಯಾಪಾರಿಗಳು), ಆನಂದ್‌ (ನಲ್ಲಪ್ಪರ ಪುತ್ರ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ),ನಾಗರಾಜ್ (ಷಣ್ಮುಖ ಶೆಟ್ಟರ ಸಹೋದರ, ಈಗ ನಿವೃತ್ತ ಹೆಲ್ತ್ ಇನ್ಸ್ಪೆಕ್ಟರ್), ಸುಬ್ರಮಣ್ಯ (ಸಾಗರದ ವಿಠಲ ಶೆಟ್ಟರ ಬಸ್ಸಿನ ಡ್ರೈವರ್ ಆಗಿದ್ದರು), ಗೊಲ್ಲರ ರಮೇಶ್ (KPC ಚಕ್ರಾ ನಗರ), ಸುಬ್ರಾಯ (ಶಿವಮೊಗ್ಗದಲ್ಲಿ ನೆಲೆಸಿದ್ದಾರೆ), ಸುರೇಶ್ (ಬಸ್ ಏಜೆಂಟರಾಗಿದ್ದರು ಈಗ ಹಳೇ ಪೋಲಿಸ್ ಠಾಣೆ ಎದರು ಮನೆ) ಆಗ ಈ ಟೀಂ ನ ಸ್ಟಾರ್ ಆಟಗಾರರು.
  ದೋಭಿ ಸೋಮಣ್ಣ (ಆನಂದಪುರಂನ ವಕೀಲರಾದ ಕಿರಣ್ ತಂದೆ) ಈ ಯುವಕರಿಗೆ ಮಾರ್ಗದರ್ಶಕರು ಮತ್ತು ತರಬೇತಿದಾರರಾಗಿ ಪ್ರೋತ್ಸಾಹ ನೀಡುತ್ತಿದ್ದರು.
  ಆಗ ಕಬಡ್ಡಿ ಪಂದ್ಯಾವಳಿಗಳಿಗೆ ವೀಕ್ಷಿಸಲು ಸಾವಿರಾರು ಜನ ಸೇರುತ್ತಿದ್ದರು, ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಪಂದ್ಯಾವಳಿಗಳು ನಿರಂತರವಾಗಿ ನಡೆಯುತ್ತಿತ್ತು.
  ಆನಂದಪುರಂನ ಸುಬಾಷ್ ಯುವಕ ಸಂಘದ ಸುಭಾಷ್ ಕಬ್ಬಡಿ ತಂಡ ಹೊಸನಗರದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿತ್ತು, ಸಾಗರ, ಹೆಗ್ಗೋಡು, ಯಡ ಜಿಗಳೆ ಮನೆ, ಶಿವಮೊಗ್ಗ ಭದ್ರಾವತಿ ಹೀಗೆ ಎಲ್ಲೆಡೆ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಳ್ಳುತ್ತಿದ್ದರಿಂದ ಇದು ಜಿಲ್ಲೆಯ ಪ್ರತಿಷ್ಟಿತ ತಂಡವಾಗಿತ್ತು.
 ಆಗ ನಡೆಯುತ್ತಿದ್ದ ಯುವಜನೋತ್ಸವದಲ್ಲಿ ತಾಲ್ಲೂಕ ಮತ್ತು ಜಿಲ್ಲಾ ಮಟ್ಟದಲ್ಲೂ ಸುಭಾಷ್ ಕಬ್ಬಡಿ ತಂಡ ಸೋಲಿಸುವವರಿಲ್ಲ ಎಂಬ ಪ್ರತೀತಿ ಇತ್ತು.
  ಆಗ ಸಾಗರದಲ್ಲಿ ಗಣಪತಿ ಶೆಟ್ಟರು ಮತ್ತು ಅವರ ಸಹೋದರರು, ಜಾಲಿ ಮತ್ತಿತರದ್ದು ಅಂತದ್ದೇ ಸುಪ್ರಸಿದ್ಧ ಕಬ್ಬಡಿ ತಂಡ ಇತ್ತು ಈ ತಂಡ ಮತ್ತು ಆನಂದಪುರಂನ ಸುಭಾಷ್ ಕಬ್ಬಡಿ ತಂಡದ ಆಟ ನೋಡಲು ಹೆಚ್ಚು ಜನ ಸೇರುತ್ತಿದ್ದರು.
  ಸಾಗರದಲ್ಲಿ ಕಬ್ಬಡಿ ಪಂದ್ಯಾವಳಿಯಲ್ಲಿ ನಡೆದ ಜಗಳ ಕೊಲೆಯೊಂದಿಗೆ ಮುಕ್ತಾಯವಾದದ್ದು ದುರಾದೃಷ್ಟ ಈ ಘಟನೆ ನಂತರ ಕಬ್ಬಡಿ ಪಂದ್ಯಾವಳಿ ಆಯೋಜಿಸಲು ಅನೇಕ ಪೋಲಿಸ್ ನಿರ್ಬಂದ ಕಾನೂನು ಸುವ್ಯವಸ್ಥೆಗಾಗಿ ಜಾರಿ ಆಯಿತು ಪ್ರಾಯೋಜಕರೂ ಹಿಂದೆ ಸರಿದರು ಮತ್ತು ಕಬ್ಬಡಿ ಆಟಗಾರರು ಹಿಂದೆ ಸರಿದರು ಇದರಿಂದ ಆನಂದಪುರಂನ ಪ್ರಖ್ಯಾತ ಸುಬಾಷ್ ಕಬ್ಬಡಿ ತಂಡವೂ ಹಿಂದೆ ಸರಿಯಿತು.
  ಸುಭಾಷ್ ಯುವಕ ಸಂಘದ ಸಾಧನೆ ಆನಂದಪುರಂನ ಹೆಸರನ್ನು ಎತ್ತರಕ್ಕೆ ಒಯ್ದ ಬಂಗಾರದ ದಿನಗಳು ಅದು.
  ಈಗ ಹೊಸ ತಲೆಮಾರಿನ Pro-Kabbadi ಪ್ರಸಿದ್ಧಿಗೆ ಬರುತ್ತಿದೆ.

ನಾಳೆ ಭಾಗ-51

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ