Skip to main content

ಭಾಗ - 47 ಆನಂದಪುರಂ ಇತಿಹಾಸ, ಇನಾಂದಾರ್ ಅಯ್ಯಂಗಾರ್ ಕುಟುಂಬದ ಜೊತೆ ಸೌಹಾರ್ದ ಸಂಬಂದ ಹೊಂದಿದ್ದ ತ್ಯಾಗರ್ತಿ ಇನಾಂದಾರ್ ಕುಟುಂಬ, ಕೊಡುಗೈ ದಾನಿ ಆಗಿದ್ದ ಗುರುಮೂರ್ತಿ ರಾಯರು

#ಭಾಗ_47.
#ಆನಂದಪುರಂ_ಇತಿಹಾಸ

#ಆನಂದಪುರಂ_ಅಯ್ಯಂಗಾರರೊಡನೆ_ತ್ಯಾಗತಿ೯_ಇನಾಂದಾರರ_ಸೌಹಾದ೯_ಸಂಬಂದ 

#ಅಯ್ಯಂಗಾರರು_ನಾಲ್ಕುಸಾವಿರ_ಎಕರೆ_ಇನಾಂದಾರರು

#ತ್ಯಾಗತಿ೯_ಗುರುಮೂರ್ತಿರಾಯರದ್ದು_ಎರೆಡು_ಸಾವಿರ_ಎಕರೆ.

#ತ್ಯಾಗರ್ತಿ_ಪ್ರೌಡಶಾಲೆ_ಕಟ್ಟಿ_ಇಪ್ಪತ್ತು_ಎಕರೆ_ದಾನನೀಡಿದವರು.

#ಮೈಸೂರು_ರಾಜ್ಯದ_ವಿಶೇಷ_ಪ್ರತಿನಿದಿ,

  ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶದ ಶೇಕಡಾ 80ರಷ್ಟು ಭೂಮಿ ಜಮೀನ್ದಾರರ, ಇನಾಮು ದಾರರ ಮತ್ತು ಜೋಡಿದಾರರ ವಶದಲ್ಲಿತ್ತು ಇದರಿಂದ ಶೇಕಡಾ 75% ರಷ್ಟು ಜನ ಭೂ ಮಾಲಿಕ ಕೆಳಗೆ ಗೇಣಿದಾರರಾಗಿದ್ದರು.
  1954 ರಲ್ಲಿ ಇನಾಂ ಭೂ ರದ್ದತಿ ಶಾಸನ ರಚನೆ ಆಗಿ 1961 ರಿಂದ ಅನೂಷ್ಟಾನಗೊಂಡ ನಂತರ ಇನಾಂದಾರರು ಈ ಎಲ್ಲಾ ಮಾಲಿಕತ್ವ ಕಳೆದುಕೊಂಡರು.
  ಆನಂದಪುರಂನ ಭೂ ಮಾಲಿಕರಾಗಿದ್ದ ಬದರಿನಾರಾಯಣ ಆಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ನಾಲ್ಕು ಸಾವಿರ ಎಕರೆ ಇನಾಂ ಭೂಮಿ, ಶೃಂಗೇರಿ ಮಠಕ್ಕೆ ವಾರ್ಷಿಕ 2 ಟನ್ ಶ್ರೀಗಂಧ ಪೂಜೆಗಾಗಿ ಸಂಗ್ರಹಿಸಿ ಕೊಡಲಿಕ್ಕಾಗಿ ಎರೆಡು ಸಾವಿರ ಎಕರೆ ಅರಣ್ಯ ಭೂಮಿ ಅಲ್ಲದೆ ಅವರ ಸ್ವಂತ ಖಾತೆಯಲ್ಲಿ ನೂರಾರು ಎಕರೆ ತೋಟ ಭೂಮಿ ಮತ್ತು ಇಡೀ ಆನಂದಪುರಂ ಊರು ಅವರದ್ದೇ ಆಗಿತ್ತು.
  ಇದೇ ರೀತಿ ಇವರ ಪಕ್ಕದಲ್ಲಿ ತ್ಯಾಗರ್ತಿ ಗುರುಮೂರ್ತಿ ರಾಯರ ಕುಟುಂಬ ಕೂಡ ಎರೆಡು ಸಾವಿರ ಎಕರೆ ಇನಾಂ ಭೂಮಿ ಹೊಂದಿತ್ತು ಮತ್ತು ನೂರಾರು ಎಕರೆ ಸ್ವಂತ ಖಾತೆಯ ಜಮೀನು ಹೊಂದಿತ್ತು.
  ತ್ಯಾಗರ್ತಿ ಊರೇ ಗುರುಮೂರ್ತಿ ರಾಯರು ಮತ್ತು ಅವರ ಸಹೋದರ ಹೇರಂಭ ರಾಯರ ಸುಪರ್ದಿಯಲ್ಲಿತ್ತು.
  ಇವರ ಅಜ್ಜ ದ್ಯಾವಪ್ಪನವರು ಶಿಕಾರಿಪುರ ಮೂಲದವರು ಮೈಸೂರಿನ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿರುತ್ತಾರೆ ಇವರ ಪತ್ನಿ ಲಕ್ಷ್ಮೀ ದೇವಮ್ಮ ಇವರ ಪುತ್ರ ರಂಗಪ್ಪ.
  ಇವರು ನಿವೃತ್ತರಾದ ನಂತರ ತ್ಯಾಗರ್ತಿಗೆ ಬಂದು ನೆಲೆಸುತ್ತಾರೆ ಇವರ ಪುತ್ರ ರಂಗಪ್ಪ ಮತ್ತು ಸೊಸೆ ಸರಸ್ವತಿ ದಂಪತಿಗಳಿಗೆ ಇಬ್ಬರು ಪುತ್ರರು ಮತ್ತು ನಾಲ್ಕು ಪುತ್ರಿಯರು.
  ಹಿರಿಯರಾದ ಹೇರಂಭ ರಾಯರು, ಗುರುಮೂರ್ತಿ ರಾಯರು, ಪುತ್ರಿಯರಾದ ಸುಂದರಮ್ಮ, ಭಾಗ್ಯಲಕ್ಷ್ಮಿ, ಪದ್ಮಾವತಿ ಮತ್ತು ಕುಶಲಾವತಿ.
  ಹೇರಂಭ ರಾಯರಿಗೆ ಒಬ್ಬ ಪುತ್ರಿ ವತ್ಸಲಾ ಅಳಿಯ ನಾಗಭೂಷಣ ರಾವ್ ಇವರಿಗೆ ಒಬ್ಬ ಪುತ್ರ ಶ್ರೀದರ್ ತ್ಯಾಗರ್ತಿ ಯಲ್ಲಿ ಪಟೇಲ್ ಶ್ರೀಧರ್ ಅಂತಲೇ ಹೆಸರುವಾಸಿ ಈಗ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
  ಗುರುಮೂರ್ತಿ ರಾಯರಿಗೆ ಮೂವರು ಪುತ್ರಿಯರು ಸರಸ್ವತಿ, ಶ್ಯಾಮಲಾ ಮತ್ತು ಸುಧಾ ಮಣಿ ಎಲ್ಲರೂ ಬೆಂಗಳೂರಲ್ಲಿ ನೆಲೆಸಿದ್ದಾರೆ.
  ಗುರುಮೂರ್ತಿರಾಯರ ಕೊನೆಯ ಸಹೋದರಿ ಕುಶಲಾವತಮ್ಮರ ಪತಿ ಗಣೇಶ ಭಟ್ಟರು ಇವರು ಆನಂದಪುರದ ಅಯ್ಯಂಗಾರರ ಸಮಸ್ತ ಕೃಷಿ ಭೂಮಿಯ ಉಸ್ತುವಾರಿ ನೋಡಿಕೊಂಡಿದ್ದರು ಇವರಾರು ಆನಂದಪುರಂ ನಲ್ಲಿಲ್ಲ ಬೆಂಗಳೂರಲ್ಲಿ ಇವರ ಮಗ ನೆಲೆಸಿದ್ದಾರೆ.
  ಇವರ ಕುಟುಂಬ ತ್ಯಾಗರ್ತಿಯ ಅಗ್ರಹಾರದಲ್ಲಿ ನಿರ್ಮಿಸಿದ್ದ ಮೂರು ಅಂತಸ್ತಿನ ಬೃಹತ್ ಮನೆ ತಾಲ್ಲೂಕಿನಲ್ಲೇ ಅತ್ಯಂತ ದೊಡ್ಡ ಮನೆ ಆಗಿತ್ತಂತೆ ಈ ಮನೆಯಲ್ಲಿ ಮೈಸೂರಿನ ದರ್ಬಾರ್ ಹಾಲಿನ೦ತೆ ಸಣ್ಣ ಸಭೆ ಸಮಾರಂಭಗಳು ನಡೆಯುತ್ತಿತ್ತಂತೆ.
  ತಪಸ್ವಿ ಶ್ರೀದರ ಸ್ವಾಮಿಗಳು ಅನೇಕಬಾರಿ ಈ ಮನೆಗೆ ಬೇಟಿ ನೀಡಿದ್ದರು,ತ್ಯಾಗರ್ತಿ ಪ್ರೌಡ ಶಾಲೆ ಪ್ರಾರಂಭದ ಒಂದೆರೆಡು ವರ್ಷ ಈ ಮನೆಯ ಮಹಡಿಯಲ್ಲೇ ನಡೆದಿತ್ತು.
  ಗುರುಮೂರ್ತಿ ರಾಯರು ತ್ಯಾಗರ್ತಿಯಲ್ಲಿ ಪ್ರೌಡ ಶಾಲೆ ನಿಮಿ೯ಸಿ 20 ಎಕರೆ ಭೂಮಿ ಈ ಶಾಲೆಗೆ ದಾನ ನೀಡಿದ ದಾನಿ, ತ್ಯಾಗರ್ತಿಯಲ್ಲಿ ಶ್ರೀಧರ ಸ್ವಾಮಿಗಳ ಹೆಸರಲ್ಲಿ ಮೊದಲ ರೈಸ್ ಮಿಲ್ ಸ್ಥಾಪಿಸಿ 35 ವಷ೯ ನಡೆಸಿ ನಂತರ ಸಾಗರದ ಪ್ರಸಿದ್ಧ ಉದ್ಯಮಿ ರುದ್ರಾರಾಧ್ಯರಿಗೆ ಮಾರಾಟ ಮಾಡಿದರು.
  ಒಮ್ಮೆ ಮಲೆನಾಡು ಭಾಗದಲಿ ಕೆಲವರ್ಷ ಬೀಕರ ಬರಗಾಲ ಬಂದಾಗ ಜನತೆ ತತ್ತರಿಸಿದಾಗ ತಮ್ಮ ಪಣತಗಳಲ್ಲಿ ಸಂಗ್ರಹದಲ್ಲಿದ್ದ ಸಾವಿರಾರು ಚೀಲ ಬತ್ತ ತೆಗೆದು ತಮ್ಮ ಗೇಣಿದಾರ ರೈತರಿಗೆ ಹಂಚಿದ್ದು ಆ ಕಾಲದಲ್ಲಿ ದೊಡ್ಡ ಸುದ್ದಿ ಇದು ಮೈಸೂರು ರಾಜರಿಗೆ ತಿಳಿದು ಇವರಿಗೆ ವಿಶೇಷ ಗೌರವ ನೀಡುತ್ತಾರೆ ಮತ್ತು ಮೈಸೂರು ರಾಜರ ವಿಶೇಷ ಪ್ರತಿನಿದಿ ಸ್ಥಾನ ಕಲ್ಪಿಸುತ್ತಾರೆ ಅದೇ ವರ್ಷ ಆಕಾಶ ಭೂಮಿಯ ಮೇಲೆ ಕೃಪೆ ತೋರಿ ಒಳ್ಳೆಯ ಮಳೆ ಆಗಿ ಬರಗಾಲ ಮುಕ್ತಾಯ ಆಗುತ್ತದೆ.
  ಮೈಸೂರು ಅರಸರ ಆಸ್ಥಾನದ ಜೋತಿಷಿಗಳು ಗುರುಮೂರ್ತಿರಾಯರ ಕಿರಿಯ ಪುತ್ರಿ ಸುದಾಮಣಿಯವರನ್ನು ತಮ್ಮ ಪುತ್ರ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳಿಗೆ ವಿವಾಹ ಮಾಡಿ ಸೊಸೆಯಾಗಿ ಮಾಡಿಕೊಳ್ಳುತ್ತಾರೆ.
  ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳು ದೇವೇಗೌಡರಿಗೆ ಪ್ರದಾನ ಮಂತ್ರಿ ಆಗುವುದಾಗಿ ಜೋತಿಷ್ಯ ಹೇಳಿದ್ದ ಪ್ರಸಿದ್ದರು.
  ತ್ಯಾಗರ್ತಿ ಇನಾಂದಾರರು ಮತ್ತು ಆನಂದಪುರಂ ಇನಾಂದಾರರು ಉತ್ತಮ ಸಂಬಂದ ಹೊಂದಿದ್ದರು ಇಬ್ಬರೂ ದಾನ ದಮ೯ದಲ್ಲಿ ಎತ್ತಿದ ಕೈನವರಾಗಿದ್ದರೆಂದು ಜನ ಇವರನ್ನು ಆಧರಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು.

(ನಾಳೆ ಭಾಗ-48)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ