Skip to main content

ಹೊಸ ಪೀಳಿಗೆಯ ಹೊಸ ಹೊರಾಟದ ಬೇಡಿಕೆ "ಸುಲಭ ನೆಟ್ವರ್ಕ್ - ಕೊಡಿ" ಇಲ್ಲದಿದ್ದರೆ No Network-No Vote ಅಭಿಯಾನ ಎದುರಿಸಿ ಎಂದು ಆಡಳಿತರೂಢರಿಗೆ ಸವಾಲು ಹಾಕಿರುವ ಸಿಗಂದೂರು ದೇವರ ನಾಡು ಮುಳುಗಡೆಯ ತುಮರಿ ಭಾಗದ ಕುಗ್ರಾಮದಿಂದ ಪ್ರಾರಂಭ ಆಗಿದೆ

#ನೆಟ್ವರ್ಕ_ಸಂಪರ್ಕಕ್ಕಾಗಿ_ಹೊಸರೀತಿ_ಅಭಿಯಾನ_ಇದು_ಎಲ್ಲಡೆ_ಪಸರಿಸುವ_ಸಾಧ್ಯತೆ.

#ತುಮರಿ_ಭಾಗದ_ಜನರ_ಮೊದಲ_ಹೋರಾಟ_ಸೇತುವೆ_ಸಂಪರ್ಕಕ್ಕಾಗಿ
#ತುಮರಿ_ಸೇತುವೆ_ಮತ್ತು_ಸಾಗರ_ತಾಲ್ಲೂಕ್_ಅಭಿವೃದ್ಧಿಗಾಗಿ_ಒತ್ತಾಯಿಸಿ_ಸಾಗರ_ತಾಲ್ಲೂಕಿನಲ್ಲಿ_ಪಾದಯಾತ್ರೆ_ನೆನಪು
 
Pp
  ನನ್ನ ಒಂದು ಸಣ್ಣ ಪ್ರಯತ್ನ ತಾಲ್ಲೂಕು ಅಭಿವೃದ್ದಿಗೆ ಒತ್ತಾಯಿಸಿ 13 ದಿನದ ಪಾದಯಾತ್ರೆಯಲ್ಲಿ ನಾಲ್ಕು ಹಗಲು ಮತ್ತು ಮೂರು ರಾತ್ರಿ ಈ ಭಾಗದಲ್ಲಿತ್ತು ಮುಖ್ಯ ಬೇಡಿಕೆ ತುಮರಿ ಸೇತುವೆ ಸೇರಿ ಆದರೆ ಆ ದಿನದಲ್ಲಿ ಈ ಭಾಗದ ಜನ ಪಾದಯಾತ್ರಿಗಳಿಗೆ ಭವ್ಯ ಸ್ವಾಗತ, ಅತಿಥ್ಯ ಮತ್ತು ಆಶ್ರಯ ನೀಡುತ್ತಿದ್ದ ಕರುಣಾಮಯಿಗಳು ಆದರೆ ತುಮರಿ ಸೇತುವೆ ಶರಾವತಿ ನದಿಗೆ ಕಟ್ಟುವುದು ಸಾಧ್ಯವೇ ಇಲ್ಲ ಎಂದು ವಾದ ಮಾಡುವ ಕಾಲ ಆಗಿತ್ತು.
  ನಂತರ ಈ ಭಾಗದ ವಿದ್ಯಾವಂತ ಯುವಕರು ಎಚ್ಚೆತ್ತು ಕೊಳ್ಳಲು ಪ್ರಾರಂಬಿಸಿದರು, ಮತದಾರರು ತಮ್ಮ ಭಾಗದ ಹಕ್ಕಿನ ಪಾಲಿಗಾಗಿ ಹೋರಾಡುವ ಇಂತಹ ಯುವಕರನ್ನು ಹಿಂಬಾಲಿಸಿದ ಫಲವಾಗಿ ತುಮರಿ ಸೇತುವೆ ಹಕ್ಕೊತ್ತಾಯದ ಹೋರಾಟ ಜಿಲ್ಲೆ, ರಾಜ್ಯ ದಾಟಿ ದೆಹಲಿಯಿಂದ ಮಂಜೂರಾಗಿದ್ದು ಇತಿಹಾಸ ಮತ್ತು ಈ ಭಾಗದ ಸ್ವಾತಂತ್ರ ನಂತರದ ದೀರ್ಘ ಕಾಲದ ಬಹು ಬೇಡಿಕೆ  ಈಡೇರಿದ ಸಂತಸ ಮತ್ತು ಈ ಹೋರಾಟದ ರೂಪುರೇಷೆ, ಸ್ಥಳಿಯರ ಭಾಗವಹಿಸುವಿಕೆ, ಜನಪ್ರತಿನಿದಿಗಳ ಕಾಳಜಿ ಪಕ್ಷಾತೀತವಾಗಿ ಸಕಾರತ್ಮಕ ಸನ್ನಿವೇಶಕ್ಕೆ ಕೊಂಡೊಯ್ದ ಈ ಭಾಗದ ಯುವಕರ ಬುದ್ದಿವಂತಿಕೆ ನನಗೆ ತುಂಬಾ ಮೆಚುಗೆ ಆಗಿತ್ತು ಈಗ ತುಮರಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ವರದಿಗಳಿದೆ.
 ಕಳೆದ ವರ್ಷ ಕೋವಿಡ್ ಮೊದಲ ಅಲೆಯಿಂದ ಪ್ರಾರಂಭ ಆದ ಟೆಕ್ಕಿಗಳ ಮನೆಯಿಂದಲೇ ಕೆಲಸ (Work from Home) ನಂತರ ಶಾಲೆಗಳ ಆನ್ ಲೈನ್ ಕ್ಲಾಸುಗಳಿಂದ ಈ ಭಾಗದ ಜನರಿಗೆ ಇನ್ನೊಂದು ದೊಡ್ಡ ಕೊರತೆ ಆಗಿರುವ ಪೋನ್ ನೆಟ್ ವರ್ಕ ಸಮಸ್ಯೆ ಪರಿಹಾರ ಕಾಣುವ ಎರಡನೆ ಹೋರಾಟ " ನೊ ನೆಟ್ ವರ್ಕ - ನೋ ವೋಟ್" ಸಣ್ಣ ಧ್ವನಿಯಾಗಿ ಪ್ರಾರಂಭ ಆಗಿದ್ದು ಮಲೆನಾಡಿನ ಹೊಸನಗರ- ತೀರ್ಥಹಳ್ಳಿ ತಾಲ್ಲೂಕು ದಾಟಿ ಚಿಕ್ಕ ಮಗಳೂರು ಜಿಲ್ಲೆಯಲ್ಲೂ ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಮುಂದಿನ ದಿನದಲ್ಲಿ ಮುಂದುವರಿಯುವ ಲಕ್ಷಣ ಇದೆ.
 ಈ ಹೋರಾಟಗಳು ಹಿಂದಿನ ಹೋರಾಟದಂತೆ ಸಾವಿರಾರು ಜನ ಸೇರಿಸಿ, ರಾಜಕೀಯ ನೇತಾರರ ಭಾಷಣ ಕುಟ್ಟಿಸುವ ಶ್ರಮದ್ದಲ್ಲ ನಮ್ಮ ನಮ್ಮ ಅಂಗೈಯಲ್ಲಿನ ಮೊಬೈಲ್ ಗಳ ಸಂದೇಶಗಳ ಮೂಲಕ ಪರಿಣಾಮಕಾರಿ ಆಗಿ ಪಸರುತ್ತಿದೆ, ಅಭಿವೃದ್ದಿ - ಸಂಪರ್ಕ ಅಂದರೆ ಪೇಟೆ ಮಾತ್ರ ಆದ್ಯತ ಪ್ರದೇಶ ಅಲ್ಲ ಗುಡ್ಡಗಾಡು ಹಳ್ಳಿಗಾಡಿಗೂ ಮುಟ್ಟಿದರೆ ಮಾತ್ರ ಎಂಬ ತರ್ಕ ಎಲ್ಲರ ಮೆಚ್ಚುಗೆಗೆ ಕಾರಣ ಆಗಿದೆ.
  ಈಗ ಬರಲಿರುವ ಸ್ಥಳಿಯ ಚುನಾವಣೆ, ನಂತರ ಶಾಸಕರ ಅದರ ನಂತರದ ಪಾರ್ಲಿಮೆಂಟ್ ಚುನಾವಣೆಯ ಪಲಿತಾಂಶದಲ್ಲಿ ಈ ಹೋರಾಟದಿಂದ ಕೆಲ ಅಂಶ ಮತಗಳ ಏರುಪೇರು ಅನಿರಿಕ್ಷಿತ ಪಲಿತಾಂಶದ ಏಟು ರಾಜಕೀಯ ಪಕ್ಷಗಳಿಗೆ ಬೀಳುವ ಭಯ ಉಂಟಾಗಿದ್ದರಿಂದ ಹೋರಾಟಕ್ಕೆ ಅವರುಗಳಿಂದ ಸಕಾರಣ ಬೆಂಬಲ ಸಿಗಲು ಪ್ರಾರಂಭ ಆಗಿದೆ ಯಥಾ ಪ್ರಕಾರ ಈ ಹೋರಾಟವನ್ನು ತಮ್ಮ ರಾಜಕೀಯ ಲಾಭಕ್ಕೆ ಪರಿವರ್ತಿಸುವ ರಾಜಕೀಯ ಪಕ್ಷಗಳ ಮೇಲಾಟವೂ ಪ್ರಾರಂಭ ಆಗಿದೆ.
  2016ರಲ್ಲಿ ಪ್ರತಿ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಉಚಿತ ವೈ-ಫೈ ಸೇವೆಗಾಗಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 16 ಸಾವಿರ ಕೋಟಿ ಹಣದಲ್ಲಿ ಎಲ್ಲಾ ಗ್ರಾ.ಪಂ. ಕೇಂದ್ರದಲ್ಲಿ ಚಿಕ್ಕ ಸೋಲಾರ್ ಶಕ್ತಿ ಆದಾರಿತ ಅದ೯೦ಬರ್ದ ಕೆಲಸ ಮಾಡಿದ ಹಾಗೆ ಮಾಡಿ ಪೂರ್ತಿ ಹಣ ವಿನಿಯೋಗಿಸಿ ಯಾವುದೇ ವೈ-ಫೈ ಸಂಪರ್ಕ ನೀಡದ (ಕರ್ನಾಟಕದಲ್ಲಿ 16 ಸಾವಿರ ಇಡೀ ದೇಶದಲ್ಲಿ ಸೇರಿದರೆ ಕೆಲ ಲಕ್ಷ ಕೋಟಿ) ದೊಡ್ಡ ಹಗರಣ ತನಿಖೆಯೂ ಆಗದೆ ಜನರಿಂದ ವಿರೋದವೂ ವ್ಯಕ್ತವಾಗದೆ ಮುಚ್ಚಿ ಹೋಯಿತು.
  ಈ ಅಭಿಯಾನ ಹೊಸ ತಲೆಮಾರಿನ ಯುವಕರಿಂದ ಹೊಸ ರೀತಿ - ನೀತಿಯಿಂದ ಪ್ರಾರಂಭ ಆಗಿದೆ ನಾವೆಲ್ಲರೂ ಇದರಲ್ಲಿ ಪಕ್ಷ - ಪಾರ್ಟಿ-ಜಾತಿ- ಪ್ರದೇಶ ನೋಡದೆ ನಮ್ಮ ನಿಮ್ಮ ಮನೆಯ ಮಕ್ಕಳ ವಿದ್ಯಾಬ್ಯಾಸ ಮತ್ತು ಉದ್ಯೋಗದ ಅನಿವಾಯ೯ತೆಗಾಗಿ ಬೆಂಬಲಿಸೋಣ.
  👍   👍#No_Network-#No_Vote 🙏 🙏

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ