Skip to main content

ಭಾಗ - 51, ಆನಂದಪುರಂ ಇತಿಹಾಸ, ನಾನೂರು ವರ್ಷದ ಹಿಂದೆ ಕೆಳದಿ ರಾಜರ ಸು೦ಕ ಸಂಗ್ರಹಕರಾಗಿದ್ದ ಸುಂಕದವರ ಮನೆತನದವರು ಆನಂದಪುರಂನಲ್ಲಿದ್ದಾರೆ.

#ಭಾಗ_51.
#ಆನಂದಪುರಂ_ಇತಿಹಾಸ.

#ಆನಂದಪುರಂನಲ್ಲಿ_ನೆಲೆಸಿರುವ_ಷಣ್ಮುಖಶೆಟ್ಟರು_ಹಿರಿಯ_ಆರೋಗ್ಯ_ಸಹಾಯಕರಾಗಿದ್ದ_ನಾಗರಾಜ್_ಕುಟುಂಬದ_ಹಿನ್ನೆಲೆ.

#ಕೆಳದಿ_ಅರಸರ_ಕಾಲದಲ್ಲಿ_ಸು೦ಕ_ಸಂಗ್ರಹಕಾರರ_ವಂಶದವರು.

#ಸ್ವಾತಂತ್ರ್ಯ_ಪೂರ್ವದಲ್ಲಿ_ಆನಂದಪುರಂನ_ಮೊದಲ_ವಕೀಲರು.

#ಆನಂದಪುರಂನ_ಮೊದಲ_ಆಭರಣದ_ಅಂಗಡಿಯವರು.

#ಆನಂದಪುರಂನಲ್ಲಿ_ಬಂಗಾರಪೇಟೆ_ಎಂಬ_ಬೀದಿ_ಇತ್ತು_ಬಂಗಾರ_ಬೆಳ್ಳಿ_ವಜ್ರ_ವೈಡೂರ್ಯ_ಮಾರಾಟ.

#ಚಂಪಕ_ಸರಸ್ಸು_ಸಮೀಪ_ಬೃಹತ್_ಸಂತೆ_ಆಗುತ್ತಿತ್ತು

  ಕೆಳದಿ ರಾಜ ವೆಂಕಟಪ್ಪ ನಾಯಕರ ಕಾಲದಲ್ಲಿ ಅಂದರೆ ಸುಮಾರು ನಾನೂರು ವರ್ಷದ ಹಿಂದೆ ರಾಣಿ ಚಂಪಕಳ ಸ್ಮರಣಾರ್ಥ ನಿಮಿ೯ಸಿರುವ #ಚಂಪಕ_ಸರಸ್ಸು ಇದನ್ನು ನಿರ್ವಹಣೆ ಮಾಡಲು ಸಮೀಪದ ಮಹತ್ತಿನ ಮಠಕ್ಕೆ ವಹಿಸಿ ಮಠಕ್ಕೆ ಜಮೀನು ಉಂಬಳಿ ನೀಡಿದ್ದರಲ್ಲದೆ ಸದರಿ ಮಠಕ್ಕೆ ಅಡಿಕೆ, ಅಕ್ಕಿ ಮತ್ತು ಮೆಣಸು ಸಾಗಾಣಿಕೆಗೆ ಸುಂಕದ ರಿಯಾಯಿತಿಯೂ ನೀಡಿದ್ದರು.
  ಈಗಲೂ ಚಂಪಕ ಸರಸ್ಸು ಇದೆ ಬನ್ನಿ ಮಂಟಪ ಸಮೀಪದಲ್ಲಿದ್ದ ಮಹತ್ತಿನ ಮಠ ಇಲ್ಲ ಅದರ ಪಳಯುಳಿಕೆಗಳಿದೆ ಸ್ಥಳಿಯರು ರಾಣಿ ಚಂಪಕಳಾ ಸ್ಮರಣಾರ್ಥ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿರುವ ಚಂಪಕ ಸರಸ್ಸು (ಕೊಳ) ವನ್ನೆ ಮಹಂತಿನ ಮಠ ಎಂತಲೂ ಕರೆಯುತ್ತಾರೆ.
  ಇದರ ಸಮೀಪದಲ್ಲೇ ಬೃಹತ್ ಸಂತೆ ನಡೆಯುತ್ತಿತ್ತು, ಆನೆ ಕುದುರೆ ಮೇಲೆ ವರ್ತಕರು ಬರುತ್ತಿದ್ದರಂತೆ,ಅಲ್ಲಿ ವಿದೇಶಿಯರು ಅವರ ದೇಶಕ್ಕೆ ವ್ಯಾಪಾರಕ್ಕಾಗಿ ಅಕ್ಕಿ ಖರೀದಿಸುತ್ತಿದ್ದರಂತೆ.
  ಇಲ್ಲಿಯೇ ಸುಂಕದ ಕಟ್ಟೆಯೂ ಇತ್ತು ಇಲ್ಲಿಯೇ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಿ ರಾಜರ ಆಸ್ಥಾನಕ್ಕೆ ತಲುಪಿಸುವ ಸುಂಕದವರು ರಾಜರಿಂದ ನೇಮಕ ಆಗಿರುತ್ತಿದ್ದರು.
  ಈ ಸುಂಕದ ಮನೆತನದವರು ಈಗಲೂ ಆನಂದಪುರಂನಲ್ಲಿದ್ದಾರೆ ಲಕ್ಷ್ಮಿಕಾಂತಪ್ಪನವರು, ಷಣ್ಮುಖ ಶೆಟ್ಟರು, ನಾಗರಾಜ್ ಮತ್ತು ಕೃಷ್ಣಮೂರ್ತಿ ಸಹೋದರರು.
  ಇವರ ಮನೆತನದ ಮೂಲ ಹೆಸರು ಕೆಸರೆ ಮನೆತನವಾದರೂ ಇವರ ಮನೆತನದ ವೃತ್ತಿಯಿಂದ ಸುಂಕದ ಮನೆತನದವರೆಂದೇ ಮುಂದುವರಿಯಿತು.
  ಇವರ ಅಜ್ಜ ಚಿರುಡ ಶೆಟ್ಟರು ಸ್ವಾತಂತ್ರ್ಯ ಪೂರ್ವದಲ್ಲಿ 1916 ರಿಂದ 1932ರವರೆಗೆ ವಕೀಲರಾಗಿದ್ದರು ಆಗ ಸಾಗರ ತಾಲ್ಲೂಕಿನ ನ್ಯಾಯಾಲಯ ಆನಂದಪುರಂನಲ್ಲಿತ್ತು (ಈಗಿನ ಯಡೇಹಳ್ಳಿ ಪ್ರವಾಸಿ ಮಂದಿರ) ಚಿರುಡ ಶೆಟ್ಟರು ಕುದುರೇ ಮೇಲೆ ಸಂಚರಿಸುತ್ತಿದ್ದರು.
  ಕೆಳದಿ ರಾಜರ ಕಾಲದಲ್ಲಿ ಈಗಿನ ಆಸ್ಪತ್ರೆ ಹಿಂಬಾಗದಿಂದ ಅಡೂರು ರಸ್ತೆಗೆ ಸೇರುವ ಮಾರ್ಗ ಆನಂದಪುರಂನ ಪ್ರಮುಖ ವಾಣಿಜ್ಯ ಬೀದಿ ಆಗಿತ್ತು ಇಲ್ಲಿ ಅನೇಕ ಬೆಳ್ಳಿ, ಬಂಗಾರ, ವಜ್ರ ಮತ್ತು ವೈಡೂಯ೯ ಮಾರಾಟದ ಅಂಗಡಿಗಳಿದ್ದರಿಂದ ಈ ಬೀದಿಗೆ ಬಂಗಾರ ಪೇಟೆ ಮಾರ್ಗ ಎಂಬ ಹೆಸರಿತ್ತು ಈ ಬೀದಿಯಲ್ಲೇ ವಕೀಲ್ ಚಿರುಡ ಶೆಟ್ಟರ ಆಸ್ತಿ ಮನೆ ಇತ್ತು.
   80ಕ್ಕೂ ಹೆಚ್ಚು ಜನರಿದ್ದ ಈ ಕುಟುಂಬದಲ್ಲಿ ಆಗ ಬಂದ ಪ್ಲೇಗ್ ಕಾಯಿಲೆ ಅನೇಕರನ್ನು ಬಲಿ ಪಡಿಯಿತಂತೆ ಆಗ ಒಂದೊಂದು ಗುದ್ದಿನಲ್ಲಿ ನಾಕಾರು ಜನರನ್ನು ಶವ ಸಂಸ್ಕಾರ ಮಾಡಿದ್ದರಂತೆ.
  ಈಗ ಈ ಜಾಗದಲ್ಲಿ ಇವರ ಮನೆತನದವರೇ ಆದ ಧರ್ಮಯ್ಯ ಶೆಟ್ಟರು ಅವರ ಮಗ ಪಾರೆಸ್ಟರ್‌ ರುಕ್ಮಯ್ಯ ಶೆಟ್ಟರು ಈಗ ಅವರ ಮಕ್ಕಳಾದ ಪತ್ರಕರ್ತರಾದ ಮಾಜಿ ಗ್ರಾ.ಪಂ.ಸದಸ್ಯ ಜಗನ್ನಾಥರ ಸಹೋದರರು ಇದ್ದಾರೆ.
  ವಕೀಲ್ ಚಿರುಡ ಶೆಟ್ಟರು ಮತ್ತು ಭಾಗಿರಥಮ್ಮ ದಂಪತಿಗಳ ಪುತ್ರ ಬಂಗಾರದ ಆಭರಣ ತಯಾರಿಕೆ ವೃತ್ತಿಯವರಾಗಿ ಆನಂದಪುರಂನಲ್ಲಿ ಪ್ರಥಮ ಆಭರಣದ ಅಂಗಡಿ ಮಾಡಿದ್ದ ನಾರಾಯಣ ಶೆಟ್ಟರು ಮತ್ತು ಇವರ ಪತ್ನಿ ಪಾವ೯ತಮ್ಮನವರಿಗೆ ನಾಲ್ಕು ಪುತ್ರರು ಮತ್ತು ಮೂವರು ಪುತ್ರಿಯರು.
 ಮೊದಲನೆಯವರು ಪುತ್ರಿ ರಾದಮ್ಮ, ಎರಡನೇ ಲಕ್ಷ್ಮಿಕಾಂತಪ್ಪ ಶಿರಸ್ತೇದಾರರಾಗಿ ನಿವೃತ್ತರಾದರು, ಮೂರನೆಯವರು ನಾಗರಾಜ್ ನಿವೃತ್ತ ಹಿರಿಯ ಆರೋಗ್ಯ ಸಹಾಯಕರು, ನಾಲ್ಕನೆಯವರು ಷಣ್ಮುಖ ಶೆಟ್ಟರು ಆನಂದಪುರಂನ ವರ್ತಕರು, ಐದನೆಯವರು ಲಕ್ಷ್ಮಿ ಆರನೆಯವರು ಕನಕ (ಶಿವಮೊಗ್ಗದ ಖ್ಯಾತ ವಕೀಲರಾದ ಜನಕ ಶೆಟ್ಟರ ಪತ್ನಿ) ಕೊನೆಯವರು ಕೃಷ್ಣಮೂರ್ತಿ ಶಿವಮೊಗ್ಗದಲ್ಲಿ ಡಿವಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
  ಶಿರಸ್ತೆದಾರರಾಗಿದ್ದ ಲಕ್ಷ್ಮೀಕಾಂತಪ್ಪ ಮತ್ತು ನೇತ್ರಾವತಿ ದಂಪತಿಗಳಿಗೆ ಒಬ್ಬ ಪುತ್ರಿ ವಾಣಿಶ್ರೀ ಮತ್ತು ವಿನಯ ಪ್ರಸಾದ್, ವಿಜಯ ಪ್ರಸನ್ನ (ವಿಪ್ರೋದಲ್ಲಿ ಇಂಜಿನಿಯರ್), ಗುರುರಾಜ ಮತ್ತು ಪ್ರಶಾ೦ತ ಎ೦ಬ ನಾಲ್ವರು ಪುತ್ರರು ಶಿವಮೊಗ್ಗದಲ್ಲಿ ದುರ್ಗಿಗುಡಿಯ ಶನೀಶ್ವರ ದೇವಸ್ಥಾನದ ಹತ್ತಿರ ಸ್ವರ್ಣಾ ಜ್ಯುವೆಲ್ಲರಿ ಎಂಬ ಅಭರಣದ ಅಂಗಡಿ ಇದೆ.
  ಹಿರಿಯ ಆರೋಗ್ಯ ಸಹಾಯಕರಾಗಿದ್ದ ಹಾಡುಗಾರರು, ಕಬ್ಬಡಿ ಆಟಗಾರರೂ ಆಗಿದ್ದ ನಾಗರಾಜ್ ಮತ್ತು ಯಶೋದ ದಂಪತಿಗಳಿಗೆ  ಇಬ್ಬರು ಪುತ್ರರು ಸಿಂದೂರ ಮತ್ತು ಸಂದೀಪ್ ಇಬ್ಬರೂ ಅಡಿಕೆ ಕೃಷಿ ಮಾಡುತ್ತಿದ್ದಾರೆ.
  ಹಿರಿಯ ವರ್ತಕರಾಗಿರುವ ಷಣ್ಮುಖ ಶೆಟ್ಟರು ಮತ್ತು ಪುಷ್ಪಾ ದಂಪತಿಗಳಿಗೆ ಮೂವರು ಪುತ್ರರು ಮೊದಲನೆಯ ಸತೀಶ್ ಇಂಜಿನಿಯರ್ ಆಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ, ದ್ವಿತಿಯ ಪುತ್ರ ಸಂತೋಷ್ ಸಾಗರದ ಗಣಪತಿ ಅರ್ಬನ್ ಬ್ಯಾಂಕ್ ಉದ್ಯೋಗಿ ಆಗಿದ್ದಾರೆ ಕೊನೆಯ ಪುತ್ರ ನೀಲೇಶ್ ತಂದೆಯ ವ್ಯವಹಾರ ಮುಂದುವರಿಸಿದ್ದಾರೆ.
  ಶಿವಮೊಗ್ಗದ ಪ್ರತಿಷ್ಟಿತ ಡಿವಿಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಕೃಷ್ಣಮೂರ್ತಿ ಮತ್ತು ಗೀತಾ ದಂಪತಿಗಳಿಗೆ ಇಬ್ಬರು ಪುತ್ರಿಯರು ಮೊದಲ ಪುತ್ರಿ ಸೌಜನ್ಯ KPC ಯ ಇಂಜಿನಿಯರ್ ಪೃಥ್ವಿರಾಜ್ ಜೊತೆ ವಿವಾಹ ಆಗಿ ರಾಯಚೂರಲ್ಲಿ ನೆಲೆಸಿದ್ದಾರೆ ಕೊನೆಯ ಪುತ್ರಿ ಅನನ್ಯ ಇಂಜಿನಿಯರ್ ವೃತ್ತಿ ಮಾಡುತ್ತಿದ್ದಾರೆ.
  ರಾಜರ ಕಾಲದಲ್ಲಿ ಸುಂಕ ವಸೂಲಿ ವೃತ್ತಿಯಿಂದ ಸುಂಕದ ಮನೆ ಎಂಬ ಅನ್ವರ್ಥಕ ಕುಟುಂಬ ನಾಮದ ನಾನೂರು ವರ್ಷದ ಇತಿಹಾಸದ ಈ ಮನೆತನ ಆನಂದಪುರಂನ ಮೂಲ ನಿವಾಸಿಗಳೂ ಕೂಡ ಆಗಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ