#ಶನಿವಾರ_ಅರವಿಂದ_ಚೊಕ್ಕಾಡಿ_ಶಿವಮೊಗ್ಗದಲ್ಲಿ. #ಪ್ರತಿಷ್ಠಿತ_ಕರ್ನಾಟಕ_ಸಂಘದಲ್ಲಿ_ಸಂಜೆ_5_30ಕ್ಕೆ_ತಿಂಗಳ_ಅತಿಥಿ_ಆಗಿ_ಭಾಗವಹಿಸಲಿದ್ದಾರೆ. #ಸಾಹಿತ್ಯ_ಮತ್ತು_ಜೀವನ_ದೃಷ್ಟಿ_ಎಂಬ_ವಿಷಯದ_ಮೇಲೆ_ಉಪನ್ಯಾಸ_ನೀಡಲಿದ್ದಾರೆ. ಖ್ಯಾತ ಸಾಹಿತಿಗಳು, ಅಂಕಣಕಾರರು ಮತ್ತು ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ ಅವರು ನಾಳೆ ಶನಿವಾರ ದಿನಾಂಕ 20-ಮೇ -2023 ರ ಸಂಜೆ 5.30 ಕ್ಕೆ ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ತಿಂಗಳ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಹಿತ್ಯ ಮತ್ತು ಜೀವನದೃಷ್ಟಿ ಎಂಬ ವಿಷಯದ ಮೇಲೆ ಮಾತನಾಡಲಿದ್ದಾರೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತಿಥೇಯ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರ್ ರಾಜ್ ವಹಿಸಲಿದ್ದಾರೆ ಎಂದು ಸಂಘದ ಗೌರವ ಕಾರ್ಯದರ್ಶಿ ಪ್ರೋಪೆಸರ್ ಆಶಾಲತ ಆಹ್ವಾನಿಸಿದ್ದಾರೆ. ಶಿವಮೊಗ್ಗ ಭಾಗದವರು ಅರವಿಂದ ಚೊಕ್ಕಾಡಿ ಅವರನ್ನು ಈ ಸಂದರ್ಭದಲ್ಲಿ ಬೇಟಿ ಮಾಡುವುದಿದ್ದರೆ ಅವರು ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಬೇಟಿ ಮಾಡಬಹುದೆಂದು ಅರವಿ೦ದ ಚೊಕ್ಕಾಡಿ ಅವರ ಪೇಸ್ ಬುಕ್ ನಲ್ಲಿ ವಿನಂತಿಸಿದ್ದಾರೆ.