Skip to main content

4157.ರಾಣಿ_ಚೆನ್ನಭೈರಾದೇವಿ_ಸೆರೆಮನೆ_ವಾಸದನಿಜವಾದ_ಅವಧಿ_ಎಷ್ಟು?...


ರಾಣಿ_ಚೆನ್ನಭೈರಾದೇವಿ_ಸೆರೆಮನೆ_ವಾಸದ
ನಿಜವಾದ_ಅವಧಿ_ಎಷ್ಟು?...

   ಕಾಳು ಮೆಣಸಿನ ರಾಣಿ ಬಿರುದಾಂಕಿತ ಗೇರುಸೊಪ್ಪೆಯ ಸಾಳ್ವ ಕುಲದ #ಮಹಾ_ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಕೆಳದಿ ರಾಜ ವೆಂಕಟಪ್ಪ ನಾಯಕರಿಂದ ಪರಾಭವಗೊಂಡು ಅವರ ರಾಜಧಾನಿ ಇಕ್ಕೇರಿಯ ಸೆರೆಮನೆಯಲ್ಲಿ ಬಂದನದಲ್ಲಿದ್ದರು.

   ರಾಣಿ ಚೆನ್ನ ಬೈರಾದೇವಿ ಯುದ್ಧದಲ್ಲಿ ಸೋತು ಬಂದನಕ್ಕೆ ಒಳಗಾಗಿದ್ದು 1606ರಲ್ಲಿ ಹಾಗಾದರೆ ಅವರು ಎಷ್ಟು ದಿನ ಬಂದನದಲ್ಲಿದ್ದರು ಎಂಬ ಜಿಜ್ಞಾಸೆಗೆ ಕಾರಣ ಆಗಿದ್ದು ಅವರು ಮರಣ ಕೂಡ 1606 ಎಂದು ಇತಿಹಾಸದ ಬರವಣಿಗೆಯಲ್ಲಿ ತಪ್ಪಾಗಿ ಅನೇಕರು ಬರೆಯುತ್ತಿದ್ದರಿಂದ ಇದರಿಂದ ರಾಣಿ ಚೆನ್ನ ಬೈರಾದೇವಿ ಹೆಚ್ಚು ದಿನ ಇಕ್ಕೇರಿ ಕೋಟೆಯಲ್ಲಿ ಬಂದನದಲ್ಲಿರಲಿಲ್ಲ ಎನ್ನುವಂತಾಗಿತ್ತು.

   ಆದರೆ ಇದು ತಪ್ಪು ಮಾಹಿತಿ ಆಗಿದೆ, ರಾಣಿ ಅವರು ಸುಮಾರು ಎರೆಡು ವರ್ಷ ಕಾಲ ಇಕ್ಕೇರಿಯಲ್ಲಿ ಸೆರೆವಾಸದಲ್ಲಿ ಇರುತ್ತಾರೆ ಅದಕ್ಕೆ ಇಲ್ಲಿರುವ ದಾಖಲೆ ನೋಡಿ.

  ಬಂದನದಲ್ಲಿ ಅವರಿಗೆ ಯಾರೊಂದಿಗೂ ಬೇಟಿಗೆ ಅವಕಾಶ ಇರಲಿಲ್ಲ ಆದರೆ ಅವರಿಗೆ ಆ ಸಮಯದಲ್ಲಿ ಜೈನ ಮುನಿಗಳು ಹಾಗೂ ಗುರುಗಳ ದರ್ಶನ ಪಡೆದು ಸಲ್ಲೇಖನ ವ್ರತ ಕೈಗೊಳ್ಳಲು ಅವಕಾಶ ರಾಜ ವೆಂಕಟಪ್ಪ ನಾಯಕರು ನೀಡುತ್ತಾರೆ.

  ​ ​ಕೆಳದಿಯ ವೆಂಕಟಪ್ಪ ನಾಯಕರು ವೀರಶೈವ ಧರ್ಮೀಯರಾಗಿದ್ದರೂ ಜೈನ ಧರ್ಮ ಮತ್ತು ಮುನಿಗಳಿಗೆ ಅತ್ಯಂತ ಗೌರವ ನೀಡುತ್ತಿದ್ದರು.

 ರಾಣಿ ಚೆನ್ನಭೈರಾದೇವಿಯನ್ನು  ಸಾಮಾನ್ಯ ಅಪರಾಧಿಯಂತೆ ಕತ್ತಲ ಕೋಣೆಯಲ್ಲಿ ಬಂಧಿಸಿಡಲಿಲ್ಲ ಬದಲಿಗೆ ಇಕ್ಕೇರಿ ಕೋಟೆಯ ಆವರಣದಲ್ಲಿದ್ದ ರಾಜಮನೆತನದ ಗೃಹ ಬಂಧನದಲ್ಲಿ (ರಾಯಲ್ ಹೌಸ್ ಅರೆಸ್ಟ್) ಇರಿಸಿದ್ದರು.

 ಹೀಗಾಗಿ ರಾಣಿಯ ಧಾರ್ಮಿಕ ಆಚರಣೆಗಳಿಗೆ ರಾಜ ವೆಂಕಟಪ್ಪ ನಾಯಕರು ಯಾವುದೇ ತಡೆ ಒಡ್ಡಲಿಲ್ಲ ಜೈನ ಧರ್ಮದ ಶಾಸ್ತ್ರಗಳ ಪ್ರಕಾರ ಒಬ್ಬ ಶ್ರಾವಕ ಅಥವಾ ಶ್ರಾವಕಿ ತನ್ನಷ್ಟಕ್ಕೆ ತಾನೇ ದಿಢೀರನೆ ಆಹಾರ ತ್ಯಜಿಸುವಂತಿಲ್ಲ.

   ದಿಗಂಬರ ಜೈನ ಮುನಿಗಳ ಅಥವಾ ಮಠಾಧೀಶರ (ಸಂಘದ) ಸನ್ನಿಧಿಯಲ್ಲಿ ಅವರಿಂದ 'ವ್ರತ ಸ್ವೀಕಾರ' ಮಾಡಿ ಅವರಿಂದ ನಿತ್ಯ ಪಂಚ ನಮೋಕಾರ ಮಂತ್ರೋಪದೇಶ ಪಡೆಯುತ್ತಾ ಸಲ್ಲೇಖನ ಆಚರಿಸುವುದು ಕಡ್ಡಾಯ. 

  ರಾಣಿ ಸಲ್ಲೇಖನ ವ್ರತ ಕೈಗೊಂಡಿದ್ದರು ಎಂದರೆ ಮಠಾಧೀಶರ ಅಥವಾ ಮುನಿಗಳ ಮಾರ್ಗದರ್ಶನ ಅವರಿಗೆ ಲಭ್ಯವಿತ್ತು ಎಂದೇ ಅರ್ಥ.

 ​ರಾಣಿ ಚೆನ್ನಭೈರಾದೇವಿಯ ಆಡಳಿತಾವಧಿಯಲ್ಲಿ ಸ್ವಾಧಿ (ಸೋಂದಾ) ಜೈನ ಮಠದ ಅಭಿನವ ಭಟ್ಟಾಕಲಂಕ ಸ್ವಾಮೀಜಿ ಮುಂತಾದ ಪ್ರಸಿದ್ಧ ಜೈನ ವಿದ್ವಾಂಸರು ಹಾಗೂ ಮುನಿಗಳು ಅವರ ಆಸ್ಥಾನದಲ್ಲಿದ್ದರು.

  ರಾಣಿ ಬಂದಿಯಾಗಿದ್ದಾಗಲೂ ಇಂತಹ ಪ್ರಭಾವಿ ಜೈನ ಧಾರ್ಮಿಕ ಗುರುಗಳು ಕೆಳದಿ ನಾಯಕರ ಅನುಮತಿ ಪಡೆದು ರಾಣಿಗೆ ಅಂತಿಮ ದಿನಗಳಲ್ಲಿ ಧಾರ್ಮಿಕ ಮಾರ್ಗದರ್ಶನ ನೀಡಲು ಭೇಟಿ ಮಾಡುತ್ತಿದ್ದರು.

  ​ಮಧ್ಯಕಾಲೀನ ಕರ್ನಾಟಕದ ರಾಜರು ಯುದ್ಧದಲ್ಲಿ ಶತ್ರು ರಾಜರನ್ನು ಸೋಲಿಸಿದರೂ ಅವರ ಅಂತಿಮ ಇಷ್ಟಾರ್ಥಗಳಿಗೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು.

   ಇದರಿಂದ ರಾಣಿ ಚೆನ್ನಭೈರಾದೇವಿ ರಾಜಕೀಯವಾಗಿ ಮತ್ತು ಭೌತಿಕವಾಗಿ ಬಂಧಿಯಾಗಿದ್ದರೂ ಜೈನ ಮುನಿಗಳ ದರ್ಶನ ಪಡೆಯುವ ಮತ್ತು ಅವರ ಮಾರ್ಗದರ್ಶನದಲ್ಲೇ ಸಲ್ಲೇಖನ ವ್ರತ ಸ್ವೀಕರಿಸುವ ಧಾರ್ಮಿಕ ಸ್ವಾತಂತ್ರ್ಯ ಅವರಿಗೆ ಇಕ್ಕೇರಿಯ ಆಸ್ಥಾನದಲ್ಲಿ ಸಿಕ್ಕಿತ್ತು ಎನ್ನುವುದಕ್ಕೆ ಒಂದು ಆದಾರವಾಗಿದೆ.

  ​ಜೈನ ಪರಂಪರೆಯಲ್ಲಿ ಸಲ್ಲೇಖನ ವ್ರತ (ಸಮಾಧಿ ಮರಣ) ಕೈಗೊಂಡು ಮರಣ ಹೊಂದಿದ ಗಣ್ಯರ ಸ್ಮರಣಾರ್ಥವಾಗಿ ನಿಶಿದಿ ಶಾಸನಗಳನ್ನು ಕೆತ್ತಿಸುವುದು ವಾಡಿಕೆ.

  ಸಾಮಾನ್ಯ ಇತಿಹಾಸ ಪುಸ್ತಕಗಳಲ್ಲಿ ಯುದ್ಧ ನಡೆದ ವರ್ಷವಾದ ಕ್ರಿ.ಶ. 1606ನ್ನೇ ರಾಣಿಯ ಮರಣದ ವರ್ಷವೆಂದು ಅಂದಾಜಿಸಿ ಬರೆಯಲಾಗುತ್ತಿತ್ತು ಆದರೆ ನಿಶಿದಿ ಕಲ್ಲಿನ ಶಾಸನದ ಪ್ರಕಾರ ರಾಣಿ ಚೆನ್ನಭೈರಾದೇವಿಯವರ ಸಮಾಧಿ ಮರಣವು ಕ್ರಿ.ಶ. 1608 ರ ಅಕ್ಟೋಬರ್ 10 ರಂದು ಸಂಭವಿಸಿತು.

​ ಈ ನಿಶಿದಿ ಶಾಸನವೇ ರಾಣಿ ಚೆನ್ನಭೈರಾದೇವಿ ಅವರು ಇಕ್ಕೇರಿಯ ಬಂದೀಖಾನೆಯಲ್ಲಿದ್ದಾಗ ಜೈನ ಮುನಿಗಳ ಸನ್ನಿಧಿಯಲ್ಲಿ ನಿಯಮಬದ್ಧವಾಗಿ ಸಲ್ಲೇಖನ ವ್ರತವನ್ನು (ಸಮಾಧಿ ಮರಣ) ಕೈಗೊಂಡಿದ್ದರು ಎಂಬುದಕ್ಕೆ ಸಿಗುವ ಅತ್ಯಂತ ಬಲವಾದ ಮತ್ತು ನೇರ ಶಾಸನಿಕ ಸಾಕ್ಷಿಯಾಗಿದೆ.

​ ಈ ನಿಶಿದಿ ಶಾಸನದ ದಿನಾಂಕವನ್ನು ಆಧರಿಸಿ ನೋಡಿದರೆ, ಕ್ರಿ.ಶ. 1606 ರ ಯುದ್ಧದ ನಂತರ ರಾಣಿ ಸುಮಾರು 2 ವರ್ಷಗಳ ಕಾಲ (1606 - 1608) ಇಕ್ಕೇರಿಯ ಗೃಹಬಂಧನದಲ್ಲಿದ್ದರು ಮತ್ತು ತಮ್ಮ ಅಂತಿಮ ದಿನಗಳಲ್ಲಿ ಸಲ್ಲೇಖನ ವ್ರತದ ಮೂಲಕ ಪ್ರಾಣತ್ಯಾಗ ಮಾಡಿದರು ಎಂಬುದು ಸ್ಪಷ್ಟವಾಗುತ್ತದೆ ಇದು ರಾಣಿಯ ಸೆರೆಮನೆಯ ನಿಜವಾದ ಅವಧಿ ಆಗಿದೆ.

  ಒಬ್ಬ ಮಹಾನ್ ಚಕ್ರವರ್ತಿನಿಯ ಅಂತ್ಯವು ಶಾಸನೋಕ್ತವಾಗಿ (Nishidhi Inscription) ದಾಖಲಾಗಿರುವುದು ಆಕೆಯ ಶೌರ್ಯ, ಧಾರ್ಮಿಕ ನಿಷ್ಠೆ ಹಾಗೂ ಕನ್ನಡ ನಾಡಿನ ಇತಿಹಾಸದಲ್ಲಿ ಆಕೆಗಿದ್ದ ಅತ್ಯುನ್ನತ ಸ್ಥಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

    ಈ ಲೇಖನ ನಿಮ್ಮ ಇತಿಹಾಸ ಆಸಕ್ತ ಗೆಳೆಯರಿಗೆ ಪೋಸ್ಟ್ ಶೇರ್ ಮಾಡಲು ವಿನಂತಿ.

#gerusoppe #chennabyradevi #jainreligion #keladiking #venkatappanayaka #ikkeri #genasinakuni #nishidishasana

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...