Skip to main content

Posts

Showing posts from August, 2026

4153.ಜೋಗ್_ಪಾಲ್ಸ್_ನಲ್ಲಿದೆರಾಜಾ_ಕಲ್ಲುಮಡಿಕೇರಿ_ರಾಜಾಸೀಟ್_ನಂತೆ

ಜೋಗ್_ಪಾಲ್ಸ್_ನಲ್ಲಿದೆ ರಾಜಾ_ಕಲ್ಲು ಮಡಿಕೇರಿ_ರಾಜಾಸೀಟ್_ನಂತೆ     ಜೋಗ್ ಫಾಲ್ಸ್ ನ ರಾಜಾ ಕಲ್ಲು ಮತ್ತು ಮಡಿಕೆರೆಯ ರಾಜಾ ಸೀಟ್ ಗೆ ರಾಜರುಗಳ ನಂಟಿದೆ,ಸಾಮ್ಯತೆ ಇದೆ.   ನೀವು ಜೋಗ್ ಫಾಲ್ಸ್ ಗೆ ಹೋದಾಗ ರಾಜಾ ಕಲ್ಲು ಪ್ರದೇಶಕ್ಕೆ ಬೇಟಿ ನೀಡಿದ್ದಿರಾ? ನಿಮಗೆ ಈ ಸ್ಥಳದ ಬಗ್ಗೆ ಮಾಹಿತಿ ಗೊತ್ತಿತ್ತಾ? ...   ಆದರೆ ಜೋಗ್ ಫಾಲ್ಸ್ ಅಬ್ಬರದಲ್ಲಿ ಇದು ಪ್ರವಾಸಿಗರಿಗೆ ಗೊತ್ತೇ ಇಲ್ಲ.    ರಾಜಾಸೀಟ್  ಕೊಡಗು  ಜಿಲ್ಲೆಯ ಮಡಿಕೇರಿಯಲ್ಲಿರುವ ಅತ್ಯಂತ ಪ್ರಸಿದ್ಧ ಹಾಗೂ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ​ ಕೊಡಗನ್ನು ಆಳಿದ ಕೆಳದಿ ವಂಶಸ್ಥರಾದ #ಹಾಲೇರಿ_ರಾಜರು ತಮ್ಮ ರಾಣಿಯರೊಂದಿಗೆ ಸಂಜೆಯ ವೇಳೆ ವಿಶ್ರಾಂತಿ ಪಡೆಯಲು ಹಾಗೂ ಸೂರ್ಯಾಸ್ತದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಬರುತ್ತಿದ್ದರು.    ಆದ್ದರಿಂದ ಅದಕ್ಕೆ ‘ರಾಜಾಸೀಟ್’ (ರಾಜನ ಆಸನ) ಎಂಬ ಹೆಸರು ಬಂದಿದೆ.    ಇದೇ ರೀತಿ ಇತಿಹಾಸ ಇರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ​ಜೋಗ ಜಲಪಾತದ ಸಮೀಪವಿರುವ #ರಾಜಾ'ಕಲ್ಲು ಒಂದು ಸುಂದರ ಹಾಗೂ ಐತಿಹಾಸಿಕ ವೀಕ್ಷಣಾ ತಾಣವಾಗಿದೆ.  ​ಈ ಸ್ಥಳವು ಮೈಸೂರಿನ ಮಹಾರಾಜರಾದ #ನಾಲ್ವಡಿ_ಕೃಷ್ಣರಾಜ_ಒಡೆಯರ್ ಅವರ ನೆಚ್ಚಿನ ವೀಕ್ಷಣಾ ತಾಣವಾಗಿತ್ತು.   1939 ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶರಾವತಿ ಕಣಿವೆಯ...

4152.ಶಿವಮೊಗ್ಗ_ಮ್ಯಾಮ್_ಕೋಸ್_ಚರಿತ್ರೆMAMCOS.

ಶಿವಮೊಗ್ಗ_ಮ್ಯಾಮ್_ಕೋಸ್_ಚರಿತ್ರೆ MAMCOS.    ಶಿವಮೊಗ್ಗ ಜಿಲ್ಲೆಯ #ತೀರ್ಥಹಳ್ಳಿಯ ಆ ಕಾಲದ 1930ರ ದಶಕದ ಪ್ರಮುಖ ನಾಯಕರು ಮತ್ತು ವಿದ್ಯಾಭ್ಯಾಸ ಹೊಂದಿದ್ದ ತೀರ್ಥಹಳ್ಳಿ ಅಡಿಕೆ ಕೃಷಿಕರು ಸಹಕಾರ ತತ್ವದ ಅಗತ್ಯವನ್ನು ಮೊದಲು ಮನಗಂಡು ಪ್ರಾರಂಬಿಸಿದ ಈ ಸಂಸ್ಥೆ 87 ವರ್ಷದಲ್ಲಿ ಬೆಳೆದ ಪರಿ ಸಾಮಾನ್ಯದ್ದಲ್ಲ.  #ಪ್ರಾರಂಭ_ಕೇವಲ_ನಾಲ್ಕು_ಸಾವಿರ_ರೂಪಾಯಿಯಿಂದ ಇಂದು ಮ್ಯಾಮ್‌ಕೋಸ್ 30,000ಕ್ಕೂ ಹೆಚ್ಚು ಸದಸ್ಯ ರೈತರನ್ನು ಹೊಂದಿದ್ದು, ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಬಲಿಷ್ಠ ಸಹಕಾರಿ ಸಂಸ್ಥೆಯಾಗಿ ಬೆಳೆದುನಿಂತಿದೆ.   ಮಲೆನಾಡು ಅರೇಕಾ ಮಾರ್ಕೆಟಿಂಗ್ ಕೋ ಆಪರೇಟೀವ್ ಸೊಸೈಟಿ ಲಿಮಿಟೆಡ್ ಈಗ ದೊಡ್ಡ ಕಾರ್ಪೊರೇಟ್ ಕಂಪನಿ ಆಗಿದೆ ಶತಮಾನದ ಹೊಸ್ತಿಲಲ್ಲಿದೆ, ಇದರ ಪ್ರಾರಂಭದ ಇತಿಹಾಸ ಇಲ್ಲಿದೆ ಓದಿ.   ನೀವು ಅಡಿಕೆ ಬೆಳೆಗಾರರಾಗಿದ್ದರೆ, ಈ ಸಂಸ್ಥೆಯ ಶೇರುದಾರರಾಗಿದ್ದರೆ ಇದನ್ನು ಹೆಚ್ಚು ಶೇರ್ ಮಾಡಿ.   1930ರ ದಶಕದಲ್ಲಿ #ಮಲೆನಾಡು ಭಾಗದ ಅಡಿಕೆ ಬೆಳೆಗಾರರು ಎದುರಿಸುತ್ತಿದ್ದ ತೀವ್ರ ಶೋಷಣೆ ಮತ್ತು ಆರ್ಥಿಕ ಸಂಕಷ್ಟವೇ ಮ್ಯಾಮ್‌ಕೋಸ್ (MAMCOS) ಸ್ಥಾಪನೆಗೆ ಮುಖ್ಯ ಕಾರಣ.    ಅಂದಿನ ಕಾಲದಲ್ಲಿ ಅಡಿಕೆ ವ್ಯಾಪಾರ ಸಂಪೂರ್ಣವಾಗಿ ಖಾಸಗಿ ವರ್ತಕರು ಮತ್ತು ದಲ್ಲಾಳಿಗಳ ಹಿಡಿತದಲ್ಲಿತ್ತು.   ಅವರು ತೂಕದಲ್ಲಿ ಮೋಸ ಮಾಡುವುದು, ಅಡಿಕೆಗೆ ಅತಿ ಕಡಿಮೆ ಬೆಲೆ ನೀಡುವುದು ಮತ...

4151.ಗಾಯತ್ರಿ_ಮಂತ್ರಮಹರ್ಷಿ_ವಿಶ್ವಾಮಿತ್ರರುಭಾಗ_2.

ಗಾಯತ್ರಿ_ಮಂತ್ರ ಮಹರ್ಷಿ_ವಿಶ್ವಾಮಿತ್ರರು ಭಾಗ_2.  ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.   ಇದು ಸೂರ್ಯದೇವನ  ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ.  ನಿಮಗೆ ಗಾಯಿತ್ರಿ ಮಂತ್ರದ ಬಗ್ಗೆ ಆಸಕ್ತಿ ಇದ್ದರೆ ಈ ಲೇಖನ ಪೂರ್ಣ ಓದಿ ನಿಮ್ಮ ಆತ್ಮೀಯರಿಗೆ ಗಾಯಿತ್ರಿ ಮಂತ್ರದ ಈ ಪೋಸ್ಟ್ ಶೇರ್ ಮಾಡಿ.  ಬ್ರಹ್ಮರ್ಷಿ ವಿಶ್ವಾಮಿತ್ರರು ಪ್ರಾಚೀನ ಭಾರತೀಯ ಇತಿಹಾಸ ಮತ್ತು ಪುರಾಣಗಳಲ್ಲಿ ಅತ್ಯಂತ ಪ್ರಭಾವಶಾಲಿ ಋಷಿಗಳಲ್ಲಿ ಒಬ್ಬರು.     ಹುಟ್ಟಿನಿಂದ ರಾಜನಾಗಿದ್ದರೂ ಕಠಿಣ ತಪಸ್ಸಿನ ಮೂಲಕ ಬ್ರಹ್ಮರ್ಷಿ ಪದವಿ ಪಡೆದ ಅಸಾಧಾರಣ ವ್ಯಕ್ತಿತ್ವ ಇವರದು.   ​ಮೂಲ ಹೆಸರು ಕೌಶಿಕ (ಕುಶಿಕ ವಂಶದ ರಾಜ) ಕನ್ಯಾಕುಬ್ಜದ ಇಂದಿನ ಕನೌಜ್ ಪ್ರಬಲ ಅರಸನಾಗಿದ್ದ ವಿಶ್ವಾಮಿತ್ರರು, ವಸಿಷ್ಠ ಮಹರ್ಷಿಗಳ ಬಳಿಯಿದ್ದ ಕಾಮಧೇನುವನ್ನು ಪಡೆಯಲು ಹೋಗಿ ಪರಾಭವಗೊಂಡರು. ​  ರಾಜಬಲಕ್ಕಿಂತ (ಕ್ಷಾತ್ರ ತೇಜಸ್ಸು) ಆತ್ಮಬಲ ಮತ್ತು ತಪೋಬಲವೇ (ಬ್ರಹ್ಮ ತೇಜಸ್ಸು) ಶ್ರೇಷ್ಠವೆಂದು ಅರಿತು, ರಾಜ್ಯ ತೊರೆದು ಕಠಿಣ ತಪಸ್ಸಿಗೆ ತೆರಳಿದರು.   ಋಗ್ವೇದದ ಅತ್ಯಂತ ಪವಿತ್ರವಾದ 'ಗಾಯತ್ರಿ ಮಂತ್ರ'  ವಿಶ್ವಾಮಿತ್ರರಿಗೆ ತಪಸ್ಸಿನಲ್ಲಿ ದರ್ಶನವಾಯಿತು. ​ ಸಶರೀರವಾಗಿ ಸ್ವರ್ಗಕ್ಕೆ ಹೋಗಬಯಸಿದ ತ್ರಿಶಂಕು ರಾಜನಿಗೆ ಇಂದ್ರ ಪ್ರವೇಶ ನಿರಾಕರಿಸಿದಾಗ ತನ್ನ ತಪೋಶಕ್...

4150.ಈಶಾ_ಸಂಸ್ಥೆಯ_80_ಚಾರಣಿಗರು_ಎಲ್ಲಿ?..ಸದ್ಗುರು_ಜಗ್ಗಿ_ವಾಸುದೇವರ_ಸೃಷ್ಟಿಕರಣ...ನೇಪಾಳದ_ಪ್ಲಾಶ್_ಪ್ಲಡ್_ಕಾರಣ ...

ಈಶಾ_ಸಂಸ್ಥೆಯ_80_ಚಾರಣಿಗರು_ಎಲ್ಲಿ?.. ಸದ್ಗುರು_ಜಗ್ಗಿ_ವಾಸುದೇವರ_ಸೃಷ್ಟಿಕರಣ... ನೇಪಾಳದ_ಪ್ಲಾಶ್_ಪ್ಲಡ್_ಕಾರಣ ...   ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವ ದುರಂತದ ದೃಶ್ಯಗಳು ಎಂತವರನ್ನು ಅಧೀರನಾಗಿಸುತ್ತದೆ.    ಈ ಮಾಹಿತಿ ಪೂರ್ಣ ಲೇಖನ ಪೂರ್ತಿ ಓದಿ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ.    26 ಆಗಸ್ಟ್ 2026 ರಂದು ಟಿಬೆಟ್–ನೇಪಾಳ ಗಡಿ ಭಾಗದಲ್ಲಿ ಭೋಟೆ ಕೋಶಿ ನದಿ  ಪಾತ್ರದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ #ಈಶಾ_ಫೌಂಡೇಶನ್‌ನ 80 ಯಾತ್ರಿಕರ ತಂಡ ನಾಪತ್ತೆ ಆಗಿದೆ.    ಸದ್ಗುರು ಅವರ ಈಶಾ ಫೌಂಡೇಶನ್ ವತಿಯಿಂದ ಪ್ರತಿವರ್ಷ ಆಯೋಜಿಸುವ 'ಈಶಾ ಸೇಕ್ರೆಡ್ ವಾಕ್ಸ್' ಅಡಿಯಲ್ಲಿ ಯಾತ್ರಿಕರು ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು.     ಈಶಾ ಫೌಂಡೇಶನ್ ಆಯೋಜಿಸುವ '#ಈಶಾ_ಸೇಕ್ರೆಡ್_ವಾಕ್ಸ್'  ಕೈಲಾಶ ಮಾನಸ ಸರೋವರ ಯಾತ್ರೆಯ ಶುಲ್ಕವು ​ಸಾಮಾನ್ಯ (ಭೂಮಾರ್ಗ) ಪ್ಯಾಕೇಜ್ ತಲಾ ಸುಮಾರು ₹3.5 ಲಕ್ಷದಿಂದ ₹4.5 ಲಕ್ಷ ಭಾರತೀಯ ನಾಗರಿಕರಿಗೆ. ​ಹೆಲಿಕಾಪ್ಟರ್ ಮಾರ್ಗ / ಪ್ರೀಮಿಯಂ ಪ್ಯಾಕೇಜ್ ತಲಾ ಸುಮಾರು ₹5 ಲಕ್ಷದಿಂದ ₹6.5 ಲಕ್ಷ.   ​ವಿದೇಶಿ ಪೌರತ್ವ ಹೊಂದಿದವರಿಗೆ (NRI / Foreigners) ಸುಮಾರು $5,000 ದಿಂದ $6,500 ಡಾಲರ್,ಭಾರತೀಯ ರೂಪಾಯಿಗಳಲ್ಲಿ ಸುಮಾರು ₹4.2 ಲಕ್ಷದಿಂದ ₹5.5 ಲಕ್ಷಕ್ಕೂ ಹೆಚ್ಚು.  ​...

4149.ಗಾಯತ್ರಿ_ಮಂತ್ರಭಾಗ_1.

ಗಾಯತ್ರಿ_ಮಂತ್ರ ಭಾಗ_1.   ಮಹರ್ಷಿ ವಿಶ್ವಾಮಿತ್ರರಿಂದ ಬಂದ ಗಾಯಿತ್ರಿ ಮಂತ್ರದ ಅರ್ಥ ಮತ್ತು ಮೂಲ ಗೊತ್ತಾ? ... ಇದನ್ನು ಗಂಡು- ಹೆಣ್ಣು-ತೃತೀಯ ಲಿಂಗಿ- ಶೂದ್ರ ಮತ್ತು ದಲಿತರೂ ಪಠಿಸಬಹುದು, ಉಪನಯನವಾದವರು,ಜನಿವಾರ ಧರಿಸುವವರು ಮಾತ್ರ ನಿತ್ಯ ತಪ್ಪದೆ ಪಠಣ ಮಾಡಲೇ ಬೇಕು.  ಅನೇಕರು ಗಾಯಿತ್ರಿ ಮಂತ್ರ ನಿತ್ಯ ಪಠಿಸುತ್ತಾರೆ ಆದರೆ ಅದರ ಅರ್ಥ,ಅದನ್ನು ರಚಿಸಿದ ಕಾಲ ಮತ್ತು ರಚನೆಕಾರರ ಬಗ್ಗೆ ಸೂಕ್ತ ಮಾಹಿತಿ ಪಡೆದಿರುವವರು ಕಡಿಮೆ ಅಂತವರಿಗಾಗಿ ಈ ಗಾಯಿತ್ರಿ ಮಂತ್ರದ ಸರಣಿ ಲೇಖನದ ಮೊದಲ ಭಾಗ ಇದು.   ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ. ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.   ಇದು ಸೂರ್ಯದೇವನ  ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ. #ಗಾಯಿತ್ರಿ_ಮಂತ್ರ. ​ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ॥ #ಪ್ರತಿಯೊಂದು_ಪದದ_ಅರ್ಥ: ​ಓಂ: ಪರಬ್ರಹ್ಮ ಪರಮಾತ್ಮನ ಪ್ರಣವ ನಾದ ​ಭೂಃ: ಭೂಲೋಕ (ಭೌತಿಕ ಜಗತ್ತು) ​ಭುವಃ: ಭುವರ್ಲೋಕ (ಅಂತರಿಕ್ಷ) ​ಸುವಃ (ಸ್ವಃ): ಸ್ವರ್ಗಲೋಕ (ಆಧ್ಯಾತ್ಮಿಕ ಲೋಕ) ​ತತ್: ಆ ಪರಮಾತ್ಮನ ​ಸವಿತುಃ: ಸೂರ್ಯದೇವನ / ಸೃಷ್ಟಿಕರ್ತನ ​ವರೇಣ್ಯಂ: ಶ್ರೇಷ್ಠವಾದ / ಪೂಜ್ಯವಾದ ​ಭರ್ಗಃ: ದಿವ್ಯ ತೇಜಸ್ಸು / ಜ್ಞಾನದ ಪ್ರಕಾಶ ​ದೇವಸ್ಯ: ದೈವಿಕ ಶ...

4148.ಮಿಲೇನಿಯಲ್ಸ್_Millennials ಜೆನ್_ಎಕ್ಸ್_Gen_X

ಮಿಲೇನಿಯಲ್ಸ್_Millennials  ಜೆನ್_ಎಕ್ಸ್_Gen_X   ನನ್ನ ಹಿಂದಿನ ಲೇಖನ ಜೆನ್-ಜಿ ಓದಿದ್ದೀರಿ ಈಗ ಇವರಿಗಿಂತ ಹಿಂದಿನ ಎರೆಡು ತಲೆಮಾರುಗಳಾದ ಮಿಲೇನಿಯಲ್ಸ್ ಮತ್ತು ಜೆನ್-ಎಕ್ಸ್ ಬಗ್ಗೆ ಓದಿ ಇದು 1965 ರಿಂದ ನಂತರದ 1996 ರ ಅವಧಿಯಲ್ಲಿ ಜನಿಸಿದ ಜನರ ಎರೆಡು ತಲೆಮಾರು.   ಈ ಲೇಖನ ನಿಮಗೆ ಇಷ್ಟ ಆದರೆ ನಿಮ್ಮ ಸಮಕಾಲಿನವರಿಗೆ ಶೇರ್ ಮಾಡಿ ಅವರಿಗೆ ಈ ಮಾಹಿತಿ ಹಂಚಿ.   #ಮಿಲೇನಿಯಲ್ಸ್ ಎಂದರೆ ಸಾಮಾನ್ಯವಾಗಿ 1981 ರಿಂದ 1996ರ ಅವಧಿಯಲ್ಲಿ ಜನಿಸಿದ ಜನರ ತಲೆಮಾರು.     ಈಗಿನ 30 ರಿಂದ 47 ವರ್ಷದ ಒಳಗಿನ ವಯೋಮಾನದವರು ಈ ಗುಂಪಿನಲ್ಲಿ ಬರುತ್ತಾರೆ.   ಇವರು #ಜೆನ್_ಎಕ್ಸ್' (Gen X) ನಂತರ ಮತ್ತು '#ಜೆನ್_ಜಿ' (Gen Z) ಗಿಂತ ಮುಂಚಿನ ತಲೆಮಾರಿನವರಾಗಿದ್ದಾರೆ.   ಇವರ ​ಮುಖ್ಯ ಲಕ್ಷಣಗಳು ಮತ್ತು ಹಿನ್ನೆಲೆ,​ಡಿಜಿಟಲ್ ಬದಲಾವಣೆಯ ಸಾಕ್ಷಿ ಕಾಲದವರು ಈ ತಲೆಮಾರಿನವರು.   ಇಂಟರ್ನೆಟ್ ಇಲ್ಲದ ಅನಲಾಗ್ ಜಗತ್ತನ್ನು ಲ್ಯಾಂಡ್‌ಲೈನ್, ರೇಡಿಯೋ, ಟಿವಿ ಮತ್ತು ಡಿಜಿಟಲ್ ಕ್ರಾಂತಿಯ ಆರಂಭವನ್ನು (ಡಯಲ್-ಅಪ್ ಇಂಟರ್ನೆಟ್, ಕಂಪ್ಯೂಟರ್, ಮೊಬೈಲ್ ಫೋನ್, Facebook/Orkut) ಕಣ್ಣಾರೆ ಕಂಡ ಏಕೈಕ ತಲೆಮಾರು.      ​ ಇವರು ಆರ್ಥಿಕ ಸವಾಲುಗಳನ್ನ, 2008ರ ಜಾಗತಿಕ ಆರ್ಥಿಕ ಹಿಂಜರಿತ (Great Recession) ಮತ್ತು ಕೋವಿಡ್ ಬಿಕ್ಕಟ್ಟನ್ನು ವೃತ್ತಿಜೀವನದ ಆರಂಭ ಅಥವಾ ಬ...

4147.ಬ್ರಾಹ್ಮೀ_ಮಹೂರ್ತ_ವಿವಿದ_ಧರ್ಮಗಳ_ಆಚರಣೆಯಲ್ಲಿ

ಬ್ರಾಹ್ಮೀ_ಮಹೂರ್ತ_ವಿವಿದ_ಧರ್ಮಗಳ_ಆಚರಣೆಯಲ್ಲಿ.   #ಹಿಂದೂ ಧರ್ಮದಲ್ಲಿ ಬ್ರಾಹ್ಮೀ ಮುಹೂರ್ತಸೂರ್ಯೋದಯಕ್ಕೆ 96 ನಿಮಿಷ ಮುನ್ನ.   #ಸಿಖ್ ಧರ್ಮದಲ್ಲಿ ಅಮೃತ್ ವೇಳಾ ಮುಂಜಾನೆ 3 – 6 ನಾಮ ಜಪ, ಪವಿತ್ರ ಗ್ರಂಥ ಪಠಣ. #ಇಸ್ಲಾಂ ಧರ್ಮದಲ್ಲಿ ತಹಜ್ಜುದ್ / ಫಜ್ರ್ರಾತ್ರಿಯ ಕೊನೆಯ ಭಾಗ / ಮುಂಜಾನೆ ಏಕಾಂತದ ಪ್ರಾರ್ಥನೆ -ನಮಾಜ್.  #ಕ್ರಿಶ್ಚಿಯನ್ ಧರ್ಮದಲ್ಲಿ  ಮು0ಜಾನೆ 4 -5.30 ಏಕಾಂತ ಪ್ರಾರ್ಥನೆ, ಕೀರ್ತನೆಗಳ ಪಠಣ. #ಬೌದ್ಧ ಧರ್ಮದಲ್ಲಿ ಮುಂಜಾನೆಯ ಝೆನ್ ಧ್ಯಾನಮುಂಜಾನೆ 4– 5 ಚಿತ್ತಶುದ್ಧಿ, ವಿಪಸ್ಸನಾ ಸಾಧನೆ. #ಜೈನ ಧರ್ಮದಲ್ಲಿ ಮುಂಜಾನೆ ಣ ಮೋಕಾರ ಪಠಣ ಪ್ರಾರಂಬಿಸುತ್ತಾರೆ.   ಹೆಸರು ಮತ್ತು ವಿದಿ ವಿದಾನಗಳು ಬೇರೆಯಾಗಿದ್ದರೂ ಸೂಯೊ೯ದಯಕ್ಕೆ ಮುನ್ನ ವಾತಾವರಣದಲ್ಲಿರುವ ಪ್ರಶಾಂತತೆ, ಪರಿಶುದ್ಧತೆ ಮತ್ತು ಸಾತ್ವಿಕ ಶಕ್ತಿಯನ್ನು ಆಧ್ಯಾತ್ಮಿಕ ಉನ್ನತಿಗಾಗಿ ಬಳಸಿಕೊಳ್ಳಬೇಕೆಂಬುದು ವಿಶ್ವದ ಬಹುತೇಕ ಎಲ್ಲಾ ಧರ್ಮಗಳ ಸಮಾನ ಸಿದ್ಧಾಂತವಾಗಿದೆ. #ಸಿಖ್_ಧರ್ಮದಲ್ಲಿ. ಸೂರ್ಯೋದಯಕ್ಕೂ ಮುನ್ನ ಮಾಡುವ ಪ್ರಾರ್ಥನೆ ಮತ್ತು ಧ್ಯಾನವನ್ನು ಅಮೃತ ವೇಳೆಯ ನಿತ್‌ನೇಮ್ ಎಂದು ಕರೆಯಲಾಗುತ್ತದೆ. ​ಅಮೃತ ವೇಳೆ ಸೂರ್ಯೋದಯಕ್ಕೂ ಮುನ್ನ ಸುಮಾರು 3:00 ರಿಂದ 6:00 ಗಂಟೆಯವರೆಗಿನ (ಬ್ರಾಹ್ಮೀ ಮುಹೂರ್ತ) ಸಮಯವನ್ನು 'ಅಮೃತ ವೇಳೆ' ಎನ್ನುತ್ತಾರೆ.   ​ನಾಮ ಸಿಮ್ರನ್ ಮುಂಜಾನೆ ಎದ್ದು ಸ್ನಾನದ ನಂತರ ಭಗವಂತನ ಹೆಸರನ್ನ...

4146.ಕೇವಲ_ನಡಿಗೆಯಲ್ಲಇದು_ದೇಹದ_ಸಮತೋಲನದ_ಕಲೆ.ಕೋರ್_ವಾಕಿಂಗ್_ಮಾರ್ಚ್_ಫಾಸ್ಟ್.

ಕೇವಲ_ನಡಿಗೆಯಲ್ಲ ಇದು_ದೇಹದ_ಸಮತೋಲನದ_ಕಲೆ. ಕೋರ್_ವಾಕಿಂಗ್_ಮಾರ್ಚ್_ಫಾಸ್ಟ್.   2020ರ ಕೊರಾನಾ ಲಾಕ್ ಡೌನ್ ಮೊದಲ ದಿನದಿಂದ ಪ್ರಾರಂಭಿಸಿದ ನನ್ನ ವಾಕಿಂಗ್ ಗೆ ಇವತ್ತಿಗೆ ಆರು ವರ್ಷ ದಾಟಿದೆ.      ಪ್ರಾರಂಭಿಸುವಾಗ ನನ್ನ ವಯಸ್ಸು 55 ಈಗ 61 ಇದರ ಮಧ್ಯೆ ನನ್ನ ನಡಿಗೆ ಶೈಲಿ ಬದಲಾಗಿ ಬಿಟ್ಟಿತ್ತು, ನನ್ನ ಬೆನ್ನು ಬಾಗಿದೆ ಅಂತ ಮಕ್ಕಳು ಗುರುತಿಸಿದ್ದರು ಆದರೆ ಇದು ವಯೋ ಸಹಜ ಅಂತ ಸುಮ್ಮನಾಗಿದ್ದೆ.    ಮೊನ್ನೆ ಭಾರತಿ ಬಿ.ವಿ ಎಂಬುವರು ಬರೆದ ಪೇಸ್ ಬುಕ್ ಪೋಸ್ಟ್ ನೋಡಿದೆ ಅವರದ್ದು ನನ್ನದೇ ರೀತಿ ಸಮಸ್ಯೆ ಅವರು ಅದನ್ನು ಕೋರ್ ವಾಕಿಂಗ್ ಮೂಲಕ ಸರಿ ಪಡಿಸಿಕೊಂಡಿದ್ದು ವಿಡಿಯೋ ಸಹಿತ ಪೋಸ್ಟ್ ಮಾಡಿದ್ದರು ಅವರ ಪೋಸ್ಟ್ ಗೆ ನ #ಬಾ_ನಲ್ಲೆ_ಮದು_ಚಂದ್ರಕೆ ಕಥೆ ಬರೆದ ಸಾಹಿತಿ ಮತ್ತು ಪೋಲಿಸ್ ಅಧಿಕಾರಿ ಜೇಬರ್ ಅವರು ಪ್ರತಿ ನಿತ್ಯ ವಾಕಿಂಗ್ ನಲ್ಲಿ ಮಾರ್ಚ್ ಪಾಸ್ಟ್ ಶೈಲಿ ಅಳವಡಿಸಿಕೊಳ್ಳವಂತೆ ಪ್ರತಿಕ್ರಿಯೆ ನೀಡಿದ್ದರು ಅದರ ಲಿಂಕ್ ಕಾಮೆಂಟ್ ನಲ್ಲಿದೆ ನೋಡಿ.   ನಾನು ಇವರಿಬ್ಬರ ಸಲಹೆಯಿಂದ ಪ್ರೇರಿತನಾಗಿ ಪ್ರತಿ ದಿನದ ನನ್ನ ಒಂದು ಗಂಟೆ ವಾಕಿಂಗ್ ನಲ್ಲಿ ಕೆಲವು ನಿಮಿಷ ಕೋರ್ ವಾಕಿಂಗ್ ಮತ್ತು ಮಾರ್ಚ್ ಫಾಸ್ಟ್ ಎರೆಡೂ ಪ್ರಾರಂಬಿಸಿದ್ದೇನೆ.   ಕೋರ್ ಮಸಲ್ಸ್ ಅಂದರೆ ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳು.   ನಡೆಯುವಾಗ ಕೋರ್ ಮಸಲ್ಸ್‌ಗಳನ್ನು (ಹೊಟ್ಟೆ ಮತ್ತು ಬೆನ್ನಿನ ಸ...

4145.ಬ್ರಾಹ್ಮೀ_ಮುಹೂರ್ತ_ಎಂದರೇನು

ಬ್ರಾಹ್ಮೀ_ಮುಹೂರ್ತ_ಎಂದರೇನು?... "Early to bed and early to rise, makes a man healthy, wealthy, and wise."   ನೀವು ಈ ನುಡಿ ಮುತ್ತು ಕೇಳಿರುತ್ತೀರಿ ಈ ರೀತಿ ನಿಮ್ಮ ಜೀವನ ಶೈಲಿ ಇದ್ದರೆ ನಿಮ್ಮ ಅನುಭವ ಶೇರ್ ಮಾಡಲು ವಿನಂತಿ.  ಬ್ರಾಹ್ಮೀ ಮುಹೂರ್ತ ಎಂದರೆ ಸೂರ್ಯೋದಯಕ್ಕಿಂತ ಮುಂಚಿನ ಅತ್ಯಂತ ಪವಿತ್ರ ಮತ್ತು ಪ್ರಶಾಂತವಾದ ಸಮಯ.  ಪ್ರಾಚೀನ ವೈದಿಕ ಹಾಗೂ ಆಯುರ್ವೇದ ಪರಂಪರೆಯಲ್ಲಿ ಈ ಸಮಯಕ್ಕೆ ವಿಶೇಷ ಮಹತ್ವವಿದೆ.  ಸೂರ್ಯೋದಯಕ್ಕೆ 1 ಗಂಟೆ 36 ನಿಮಿಷಗಳ ಮೊದಲು ಈ ಮುಹೂರ್ತ ಆರಂಭವಾಗಿ, ಸೂರ್ಯೋದಯಕ್ಕೆ 48 ನಿಮಿಷಗಳ ಮುಂಚೆ ಕೊನೆಗೊಳ್ಳುತ್ತದೆ.  ಅಂದರೆ ಇದರ ಒಟ್ಟು ಅವಧಿ 48 ನಿಮಿಷಗಳು / 2 ಘಳಿಗೆಗಳು. ಸಾಮಾನ್ಯವಾಗಿ ಇದು ಮುಂಜಾನೆ 4:00 ರಿಂದ 5:30 ರ ನಡುವೆ ಬರುತ್ತದೆ.  ಬ್ರಹ್ಮಜ್ಞಾನದ ಸಮಯ: 'ಬ್ರಹ್ಮ' ಎಂದರೆ ಪರಮ ಸತ್ಯ ಅಥವಾ ಜ್ಞಾನ. 'ಬ್ರಾಹ್ಮೀ' ಎಂದರೆ ಬ್ರಹ್ಮನಿಗೆ ಅಥವಾ ಜ್ಞಾನಾರ್ಜನೆಗೆ ಸಂಬಂಧಿಸಿದ್ದು. ಈ ಸಮಯದಲ್ಲಿ ಪ್ರಕೃತಿಯು ಅತ್ಯಂತ ಪ್ರಶಾಂತವಾಗಿದ್ದು, ಪರಮಾತ್ಮನ ಚಿಂತನೆ, ಆತ್ಮಜ್ಞಾನ (ಬ್ರಹ್ಮಜ್ಞಾನ) ಮತ್ತು ವೇದಾಧ್ಯಯನಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಇದಕ್ಕೆ 'ಬ್ರಾಹ್ಮೀ ಮುಹೂರ್ತ' ಎಂಬ ಹೆಸರು ಬಂತು.   ರಾತ್ರಿಯ ಕೊನೆಯ ಮುಹೂರ್ತವಾದ 14ನೇ ಮುಹೂರ್ತಕ್ಕೆ ಸೃಷ್ಟಿಕರ್ತನಾದ ಬ್ರಹ್ಮದೇವನೇ ಅಧಿಪತಿ. ಆದ್ದರಿಂದ ಆ ಕಾಲಾವಧಿಗೆ ...

4144.ಈದ್_ಮಿಲಾದ್ವಿಶ್ವದಾದ್ಯಂತ_ಸಂಭ್ರಮಾಚರಣೆ.

ಈದ್_ಮಿಲಾದ್ ವಿಶ್ವದಾದ್ಯಂತ_ಸಂಭ್ರಮಾಚರಣೆ.  ಈದ್-ಎ-ಮಿಲಾದ್-ಉನ್-ನಬಿ ಅಥವಾ ಮಿಲಾದ್-ಉನ್-ನಬಿ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಪವಿತ್ರ ಹಬ್ಬ.  ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ 'ರಬಿ-ಉಲ್-ಅವ್ವಲ್' 12ನೇ ದಿನದಂದು ಇದನ್ನು ವಿಶ್ವಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ.  ಮಸೀದಿಗಳಲ್ಲಿ ಮತ್ತು ಮನೆಗಳಲ್ಲಿ ವಿಶೇಷ ನಮಾಜ್ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.   ಪ್ರವಾದಿಯವರ ಬೋಧನೆಗಳು, ತ್ಯಾಗ ಮತ್ತು ಮಾನವೀಯ ಸಂದೇಶಗಳನ್ನು ಸ್ಮರಿಸಲಾಗುತ್ತದೆ. ​ ಅನೇಕ ಕಡೆ ಜನರು ಧಾರ್ಮಿಕ ಧ್ವಜಗಳನ್ನು ಹಿಡಿದು, ಪ್ರವಾದಿಯವರ ಸ್ತುತಿ ಗೀತೆಗಳನ್ನು (ನಾತ್) ಹಾಡುತ್ತಾ ಶಾಂತಿಯುತ ಮೆರವಣಿಗೆ (ಜಲೂಸ್)ನಡೆಸುತ್ತಾರೆ. ​  ಬಡವರಿಗೆ, ನಿರ್ಗತಿಕರಿಗೆ ಆಹಾರ, ಬಟ್ಟೆ ಮತ್ತು ಹಣವನ್ನು ದಾನ ಮಾಡುವುದು ಈ ದಿನದ ಪ್ರಮುಖ ಆಚರಣೆಯಾಗಿದೆ. ​  ಮಸೀದಿಗಳು, ದರ್ಗಾಗಳು ಮತ್ತು ಪ್ರಮುಖ ಬೀದಿಗಳನ್ನು ದೀಪಗಳಿಂದ ಮತ್ತು ಹಸಿರು ಬಣ್ಣದ ತೋರಣಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ. ​  ಪ್ರವಾದಿಯವರ ಜೀವನ ಚರಿತ್ರೆ, ಶಾಂತಿ, ಕರುಣೆ ಮತ್ತು ಸೌಹಾರ್ದತೆಯ ಸಂದೇಶಗಳನ್ನು ಸಾರುವ ಧಾರ್ಮಿಕ ಸಭೆಗಳು ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ. ​ ಕುಟುಂಬಸ್ಥರು, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಸಿಹಿತಿಂಡಿ ಹಾಗ...

4143.ರೆಸ್ಟೋರೆಂಟ್__ಒಪನ್_ಕಿಚನ್_ಆಗಿದ್ದರೆ .... ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ 2012 ರಲ್ಲಿ ಪ್ರಾರಂಬಿಸುವಾಗಲೇ ಓಪನ್ ಕಿಚನ್ ಮಾಡಿದ್ದೆವು.

ರೆಸ್ಟೋರೆಂಟ್__ಒಪನ್_ಕಿಚನ್_ಆಗಿದ್ದರೆ ....  ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ 2012 ರಲ್ಲಿ ಪ್ರಾರಂಬಿಸುವಾಗಲೇ ಓಪನ್ ಕಿಚನ್ ಮಾಡಿದ್ದೆವು.  ಇದರಿಂದ ಗ್ರಾಹಕರು ತಾವು ತಿನ್ನುವ ಊಟ ಉಪಹಾರ ಎಷ್ಟು ಆರೋಗ್ಯಕರ ವಾತಾವರಣದಲ್ಲಿ ತಯಾರಿಸುತ್ತಿದ್ದಾರೆಂದು ನೋಡಿ ಖಾತ್ರಿ ಮಾಡಿಕೊಳ್ಳುತ್ತಾರೆ.  ನಿತ್ಯ ಸಂಜೆ ಮಲ್ಲಿಕಾ ವೆಜ್ ನಲ್ಲಿ ನೀರುಳ್ಳಿ ದೋಸೆ ಪೇಮಸ್ ಆಗಿದೆ, ಬಿಸಿ ಬಿಸಿಯಾದ ಘಮ ಘಮಿಸುವ ಗರಿ ಗರಿಯಾದ ನೀರುಳ್ಳಿ ದೋಸೆಯನ್ನು ಆಲೂ ಪಲ್ಯ ಮತ್ತು ಕಾಯಿ ಚಟ್ನಿ ಜೊತೆ ಸವಿಯ ಬಹುದು. ಮಲ್ಲಿಕಾ ವೆಜ್ ರೆಸ್ಟೋರೆಂಟ್ ವಿಳಾಸ NH 69, ಯಡೇಹಳ್ಳಿ ವೃತ್ತ - ಆನಂದಪುರಂ ಅಂಚೆ ಸಾಗರ ತಾಲ್ಲೂಕು - ಶಿವಮೊಗ್ಗ ಜಿಲ್ಲೆ - ಕರ್ನಾಟಕ #oniondosa #vegitarianrecipes #restoran  #mallikaveg #anandapuram #shivamogga  #lodge #hombujaresidency

4142.ಹಿಮಾಲಯಕ್ಕೆ_ಹೋಗುವುದಕ್ಕಿಂತ_ಮೊದಲು_ನಿಮ್ಮ_ಮನೆಯನ್ನು_ಹಿಮಾಲಯವಾಗಿಸಿ!...ಬ್ರಾಹ್ಮಿ_ಮಹೂರ್ತದ_ಸಮಯದ_ಸದುಪಯೋಗ.

ಹಿಮಾಲಯಕ್ಕೆ_ಹೋಗುವುದಕ್ಕಿಂತ_ಮೊದಲು_ನಿಮ್ಮ_ಮನೆಯನ್ನು_ಹಿಮಾಲಯವಾಗಿಸಿ!... ಬ್ರಾಹ್ಮಿ_ಮಹೂರ್ತದ_ಸಮಯದ_ಸದುಪಯೋಗ.    ಅನೇಕ ಗೆಳೆಯರು ಈ ವರ್ಷದ ಶ್ರಾವಣ ಮಾಸದ ನಿಮ್ಮ ಹೊಸ ಪ್ರಯೋಗ ಏನು? ಅಂತ ಕೇಳುತ್ತಿದ್ದಾರೆ.    ಈ ವರ್ಷ ಶ್ರಾವಣ ಮಾಸ 13- ಆಗಸ್ಟ್ -2026 ರ ಗುರುವಾರದಿಂದ ಪ್ರಾರಂಭ ಆಯಿತು ಈ ವರ್ಷ ನನ್ನ ಹೊಸ ಪ್ರಯೋಗ #ಬ್ರಾಹ್ಮಿ_ಮಹೂರ್ತದ_ಸಮಯದ ಸದುಪಯೋಗದ ದ ಕೆಲಸ ಪ್ರಾರಂಬಿಸಿ ಇವತ್ತಿಗೆ 25 ಆಗಸ್ಟ್ ಗೆ 13 ದಿನ ಆಯಿತು.   ಬೆಳಿಗ್ಗೆ 3.30 ಕ್ಕೆ ಏಳುವುದು, ಸ್ನಾನ ಮುಗಿಸಿ ಪೂಜೆ - ಮಂಗಲಾರತಿ ನಂತರ ಸಿದ್ದ ಸಮಾದಿಯೋಗದ ವಿಭಾಗಿಯಾ ಪ್ರಾಣಯಾಮ,ಮುದ್ರಾ ಪ್ರಾಣ ಯಾಮ_ನಾಡಿಶೋಧನಾ / ಸುಖ ಪ್ರಾಣಯಾಮ - ಕಪಾಲಭಾತಿ - 15 ನಿಮಿಷದ ಧ್ಯಾನ ನಂತರ ಓದು ಬರಹ, ಶಂಭೂ ರಾಮನ ಜೊತೆ ಒಂದು ಗಂಟೆ ವಾಕಿಂಗ್.    ಒಂದು ಮುಷ್ಟಿ ಮೆಂತೆ -ಹೆಸರುಕಾಳಿನ ಮೊಳಕೆ, 8-10 ಒಣ ಖರ್ಜೂರ ಮತ್ತು ಒಂದು ಕಪ್ ಹಾರ್ಲಿಕ್ಸ್ ಕುಡಿಯುತ್ತೇನೆ ಯಾಕೆಂದರೆ ಕಾಫಿ ಟೀ ಈ ತಿಂಗಳು ಕುಡಿಯುವುದಿಲ್ಲ.    ವಾರದಲ್ಲಿ ಸೋಮವಾರ ಮತ್ತು ಗುರುವಾರ ಉಪವಾಸ, ರಾತ್ರಿ ಊಟ ತ್ಯಜಿಸಿ ಅನೇಕ ವರ್ಷ ಆಯಿತು ಅದು ಮುಂದುವರಿದಿದೆ.    ಬೆಳಿಗ್ಗೆ ಒಂದು ಇಡ್ಲಿ + ಒಂದು ಸಣ್ಣ ಕಪ್ ಪಲಾವ್, ಮಧ್ಯಾಹ್ನ 3 ರಿಂದ 4 ರ ಒಳಗೆ ಅನ್ನ ತರಕಾರಿ ಸಾಂಬಾರ್ ಪಲ್ಯ ಸೇವಿಸುತ್ತೇನೆ ಇದು ಅನೇಕ ವರ್ಷದ ಅಭ್ಯಾಸ ಆಗಿದೆ. ...

4141.ಶಂಕರಾಚಾರ್ಯರು_ಬರೆದ_ಸೌಂದರ್ಯ_ಲಹರಿಅಕ್ಷೇಪ_ಮತ್ತು_ಸಮರ್ಥನೆಗಳು.

ಶಂಕರಾಚಾರ್ಯರು_ಬರೆದ_ಸೌಂದರ್ಯ_ಲಹರಿ ಅಕ್ಷೇಪ_ಮತ್ತು_ಸಮರ್ಥನೆಗಳು. ಸೌಂದಯ೯ ಲಹರಿ ಕೃತಿಯ ಆರಂಭಿಕ ಶ್ಲೋಕವೇ "ಶಕ್ತಿಯಿಲ್ಲದೆ ಶಿವನೂ ಚಲಿಸಲಾರ" ಎಂಬ ಅದ್ವೈತ ಮತ್ತು ಶಾಕ್ತ ಸಿದ್ಧಾಂತದ ಸಮನ್ವಯವನ್ನು ಸಾರುತ್ತದೆ.   ಇದರಲ್ಲಿರುವ ಪ್ರತಿಯೊಂದು ಶ್ಲೋಕಕ್ಕೂ ಒಂದು ನಿರ್ದಿಷ್ಟ ಯಂತ್ರ, ಬೀಜಾಕ್ಷರ ಮತ್ತು ಸಾಧನಾ ಫಲವಿದೆ ಎಂದು ತಂತ್ರಶಾಸ್ತ್ರದಲ್ಲಿ ನಂಬಲಾಗುತ್ತದೆ. ​  ಶಿಖರಿಣೀ ವೃತ್ತದಲ್ಲಿ ರಚಿತವಾಗಿರುವ ಈ ಕೃತಿಯು ಉಪಮೆ, ರೂಪಕ ಹಾಗೂ ಶೃಂಗಾರ-ಭಕ್ತಿ ರಸಗಳಿಂದ ಕೂಡಿದ ಅತ್ಯುನ್ನತ ಸಂಸ್ಕೃತ ಕಾವ್ಯವಾಗಿದೆ. ​ ಸೌಂದರ್ಯ ಲಹರಿಯು ದೇವಿಯ ಅಂತರಂಗದ ಶಕ್ತಿ (ಕುಂಡಲಿನಿ ಯೋಗ) ಮತ್ತು ಬಹಿರಂಗದ ದೈವಿಕ ಸೌಂದರ್ಯವನ್ನು ಏಕಕಾಲದಲ್ಲಿ ಅನಾವರಣಗೊಳಿಸುವ ಆಧ್ಯಾತ್ಮಿಕ ಮಹಾಕಾವ್ಯ. ಕೆಲವು ಶತಮಾನಗಳ ಹಿಂದಿನ ಈ ಗ್ರಂಥಗಳನ್ನ ಉಲ್ಲೇಖಿಸಿ ಈಗಲೂ ತಮ್ಮ ತಮ್ಮ ಸಿದ್ಧಾಂತ ಶ್ರೇಷ್ಠ ಎಂದು ನಿರೂಪಿಸಲು ಇವರೆಲ್ಲ ಖಂಡನೆ ಮಂಡನೆ ಮಾಡುತ್ತಲೇ ಇದ್ದಾರೆ ಅದನ್ನ ಎಲ್ಲರೂ ತಿಳಿಯಲು ಪ್ರಕಟಿಸಲಾಗಿದೆ.   ನನ್ನ ಹಿಂದಿನ ಲೇಖನ ಶ್ರೀಶಂಕರಾಚಾರ್ಯರು ರಚಿಸಿದ #ಮನೀಷಾ_ಪಂಚಕಂ ನಂತರ ಶ್ರೀಮಧ್ವಾಚಾರ್ಯರ ಶಿಷ್ಯರಾದ ನಾರಾಯಣ ಪಂಡಿತಾಚಾರ್ಯರು ರಚಿಸಿದ ಈ #ಮಣಿಮಂಜರಿ ಬಗ್ಗೆ ಬರೆದದ್ದು ತಾವು ಓದಿದ್ದೀರಿ.    ಈಗ  ಶ್ರೀ ಶಂಕರಾಚಾರ್ಯರ ಸೌಂದಯ೯ ಲಹರಿ ಬಗ್ಗೆ ಇಲ್ಲಿ ಪ್ರಕಟ ಮಾಡಿದ್ದೇನೆ ಓದಿ.   ಸೌಂದರ...

4140.ಜೆನ್_ಜಿ Gen_Z Generation_Z. ಜೆನ್ ಜಿ ಎಂದರೆ #ಯಾರು?....

ಜೆನ್_ಜಿ  Gen_Z  Generation_Z.   ಜೆನ್ ಜಿ ಎಂದರೆ #ಯಾರು?....  ಸಾಮಾನ್ಯವಾಗಿ 1997 ರಿಂದ 2012ರ ಅವಧಿಯಲ್ಲಿ ಜನಿಸಿದ ಜನರ ತಲೆಮಾರನ್ನು ಸೂಚಿಸುತ್ತದೆ.    ಈಗ ಎಲ್ಲಿ ನೋಡಿದರೂ ಇವರದ್ದೇ ಸುದ್ದಿ, ಪರ ವಿರೋಧಗಳ ಹೇಳಿಕೆ, ಇವರೆಲ್ಲ ಸೇರಿ ನೀಟ್ ಪರೀಕ್ಷೆ ಪತ್ರಿಕೆ ಲೀಕ್ ಆದ ನಂತರ ದೆಹಲಿ #ಜಂತರ_ಮಂತರ್ ಹೋರಾಟದಿಂದ  ಕೇಂದ್ರ ವಿದ್ಯಾ ಮಂತ್ರಿ ರಾಜಿನಾಮೆ ಹೀಗೆ ಸಾಲು ಸಾಲು...    ಎಲ್ಲಾ ರಾಜಕೀಯ ಪಕ್ಷಗಳಿಗೂ ಇವರ ಬಗ್ಗೆ ಭಯ, ಸರ್ವೊಚ್ಚ ನ್ಯಾಯಾಲಯ ಇವರನ್ನ ಕಾಕ್ರೋಚ್ (ಜಿರಳೆ) ಅಂದಿದ್ದಕ್ಕೆ #ಕಾಕ್ರೋಚ್_ಜನತಾ_ಪಾರ್ಟಿಯೇ ಹುಟ್ಟಿಕೊಂಡಿದೆ.    ರಾಜಕೀಯ ಪಕ್ಷಗಳು ಕೂಲಿ ಕೊಟ್ಟು ಪ್ರೇಕ್ಷಕರನ್ನ ಕರೆ ತಂದರೆ ಇವರೆಲ್ಲ ತಮ್ಮ ಬೆರಳ ತುದಿಯಿಂದ ಸಾಮಾಜಿಕ ಜಾಲ ತಾಣಗಳಲ್ಲಿ ನೀಡಿದ ಕರೆಗೆ ಲಕ್ಷಾಂತರ ಜನ ದೆಹಲಿ ಜಂತರ್ ಮಂತರ್ ನಲ್ಲಿ ಸೇರಿದರು, ಸರ್ಕಾರದ ಲಾಟಿ ಗೀಟಿಗೆ ಹೆದರಿ ಓಡದೆ ಬೆನ್ನು ಕೊಟ್ಟು ನಿಂತರು ಕೇಂದ್ರ ಮಂತ್ರಿ ರಾಜಿನಾಮೆ ನೀಡಿದರೂ ಇವರ ಮೇಲೆ ಹಾಕಿದ ಮೊಕದ್ದಮೆ ಹಿಂಪಡೆದ ಮೇಲೆ ತಮ್ಮ ಚಳವಳಿ ವಾಪಾಸು ಪಡೆದರು, ಇಡೀ ಜಂತರ್ ಮಂತರ್ ಪ್ರದೇಶದ ಕಸ ಆರಿಸಿ  ವಿಲೇವಾರಿ ಮಾಡಿ ತಮ್ಮ ಊರಿಗೆ ಮನೆಗೆ ತೆರಳಿದರು.   #ಜೆನ್_ಜಿ_ಅಂದರೆ_ಬೇರೆ_ಲೋಕದವರಲ್ಲ ನಮ್ಮ ಮುಂದಿನ ತಲೆ ಮಾರಿನ ಯುವ ಜನಾಂಗ, ನಮ್ಮ ಮನೆಯಲ್ಲಿ ನಮ್ಮ ಸುತ್ತ ಮುತ್ತಲೂ ಇದ್...

4139.ಮುಹೂರ್ತ_ಮೀರಿದ_ಮದುವೆ_37_ವಸಂತಗಳಸುಂದರ_ಪಯಣ.

ಮುಹೂರ್ತ_ಮೀರಿದ_ಮದುವೆ_37_ವಸಂತಗಳ ಸುಂದರ_ಪಯಣ.   ಅಂದು ಶಿವಮೊಗ್ಗದ ಕೋಟೆ ಆಂಜನೇಯನ ಸನ್ನಿಧಿಯಲ್ಲಿ ನಡೆದ ಆ ರೋಚಕ ಕಥೆ!.. ​ಜೀವನದಲ್ಲಿ ಕೆಲವು ನೆನಪುಗಳು ಕಾಲ ಸರಿದಂತೆ ಮಾಸುವುದಿಲ್ಲ ಬದಲಿಗೆ ಇನ್ನಷ್ಟು ಹಸನಾಗುತ್ತವೆ.   ಇಂದು ನಮ್ಮ ದಾಂಪತ್ಯ ಜೀವನಕ್ಕೆ ಭರ್ತಿ 37 ವರ್ಷ, ​ನಮ್ಮದು ಅಂತರ್ಜಾತಿ ಪ್ರೇಮ ವಿವಾಹ.    ಮೊದಲು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುಟ್ಟಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದೆವು,ಎರಡು ವರ್ಷಗಳ ಕಾಲ ಕಾದ ನಂತರ ಕೊನೆಗೂ ನಮ್ಮ ತಂದೆಯವರನ್ನು ಒಪ್ಪಿಸಿ 1989ರ ಆಗಸ್ಟ್ 23ರಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಅಧಿಕೃತವಾಗಿ ಶಾಸ್ತ್ರೋಕ್ತವಾಗಿ ಮದುವೆಯಾಗಲು ದಿನ ನಿಗದಿಯಾಗಿತ್ತು.  ​ಆದರೆ ಅಂದು ನಡೆದ ಘಟನೆಗಳು ಯಾವುದೋ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕಿಂತ ಕಡಿಮೆಯಿರಲಿಲ್ಲ! ​ಅವತ್ತು ನಮ್ಮೂರಲ್ಲಿ ಧಾರಾಕಾರ ಮಳೆ,ಇನ್ನೇನು ದೇವಸ್ಥಾನಕ್ಕೆ ಹೊರಡಬೇಕು ಅನ್ನುವಾಗಲೇ ನಮ್ಮ ತಂದೆಯವರು "ನಾನು ಮದುವೆಗೆ ಬರುವುದಿಲ್ಲ" ಎಂದು ಹಠ ಹಿಡಿದುಬಿಟ್ಟರು.   ಪರಿಸ್ಥಿತಿ ತೀರಾ ಗಂಭೀರವಾಗಿ ಕೊನೆ ಗಳಿಗೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸಿ ಒಪ್ಪಿಸುವಷ್ಟರಲ್ಲಿ ಸಮಯ ಮೀರಿಹೋಗಿತ್ತು.    ಸುರಿಯುವ ಮಳೆಯಲ್ಲೇ ಹೇಗೋ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಿದೆವು.   ಆದರೆ ಅಷ್ಟರಲ್ಲಾಗಲೇ ವಿವಾ...