Skip to main content

Posts

Showing posts from August, 2026

4118. ಭಾಗ_1_ನಾಥಪಂಥದ_ಬಾರಾ_ಪಂಥ್_ಯಾತ್ರೆಯಲ್ಲಿ #ದರ್ಮದ_ಸಂರಕ್ಷಕರಾಗಿ_ನಾಗಸಾಧುಗಳು_ಬರುತ್ತಾರೆ.

ಭಾಗ_1_ನಾಥಪಂಥದ_ಬಾರಾ_ಪಂಥ್_ಯಾತ್ರೆಯಲ್ಲಿ  #ದರ್ಮದ_ಸಂರಕ್ಷಕರಾಗಿ_ನಾಗಸಾಧುಗಳು_ಬರುತ್ತಾರೆ.   ನಾಗ ಸಾಧುಗಳು ಧರ್ಮದ ರಕ್ಷಕರು ಅಥವಾ ಸನಾತನ ಧರ್ಮದ ಸೈನಿಕರು ಎಂದೇ ಭಾರತೀಯ ಹಿಂದೂ ಧರ್ಮದ ಎಲ್ಲಾ ಅಖಾಡಗಳು ಹೇಳುತ್ತದೆ.   2027 ರ ಶಿವರಾತ್ರಿ ದಿನದಂದು ಲೋಕಾರ್ಪಣೆ ಆಗಲಿರುವ ನಾನು ಬರೆದ ನಾಥ ಪಂಥದ ಬಾರಾ ಪಂಥ್ ಯಾತ್ರೆ ಪುಸ್ತಕದಲ್ಲಿನ ಈ ಅಧ್ಯಾಯ ನಿಮಗಿಷ್ಟವಾಗಬಹುದು...   ಸ್ವಲ್ಪ ದೀರ್ಘವಾದ ನಾಗ ಸಾದು ಗಳ ಈ ಅದ್ಯಾಯ ಎರಡು ಭಾಗಗಳಾಗಿ ಇಲ್ಲದೆ ಓದಿ.   ನಾಥಪಂಥದ ನಾಸಿಕ್‌ನಿಂದ ಕದ್ರಿ ತನಕದ ಬಾರಾ ಪಂಥ್ ಯಾತ್ರೆ ಯಲ್ಲಿ ನಾಗಾಸಾಧುಗಳ ಉಪಸ್ಥಿತಿ ಮತ್ತು ಅವರ ಪಾತ್ರದ ಕುರಿತಾದ ಮಾಹಿತಿ ಗುಪ್ತವಾಗಿರುತ್ತದೆ.   2015 ರ ಆಗಸ್ಟ್‌ನಲ್ಲಿ ನಾಸಿಕ್ ತ್ರಿಯಂಬಕೇಶ್ವರದಲ್ಲಿ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಜುಂಡಿ ಯಾತ್ರೆ ಹೊರಡುವ ಮುನ್ನ ನಡೆದ ಧಾರ್ಮಿಕ ವಿಧಿವಿಧಾನಗಳು ಹಾಗೂ ಶಾಹಿ ಸ್ನಾನಗಳಲ್ಲಿ ದಿಗಂಬರ (ನಗ್ನ) ನಾಗಾಸಾಧುಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.    ನಾಸಿಕ್‌ನಿಂದ ಮಂಗಳೂರಿನ ಕದ್ರಿ ತನಕ ಸಾಗಿದ 1,100 ಕಿ.ಮೀ. ಸುದೀರ್ಘ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾಧುಗಳು ಪ್ರಧಾನವಾಗಿ ನಾಥಪಂಥದ 'ದೀಕ್ಷಿತ ಕನ್ಫಟಾ ಯೋಗಿಗಳು' (ಕೇಸರಿ ವಸ್ತ್ರಧಾರಿಗಳು).    ಯಾತ್ರೆಯ ಭದ್ರತೆ, ಶಿಸ್ತು ಮತ್ತು ಸಾಂಪ್ರದಾಯಿಕ ಧ್ವಜಗಳನ್ನು ಹಿಡಿದು ಮುನ್ನಡೆ...

4117 ಸಾಗರ_ಹೊಸನಗರ_ವಿಧಾನಸಭಾ_ಕ್ಷೇತ್ರಕ್ಕೆ_ಸಿಗದ_ಮಂತ್ರಿ_ಸ್ಥಾನ

ಸಾಗರ_ಹೊಸನಗರ_ವಿಧಾನಸಭಾ_ಕ್ಷೇತ್ರಕ್ಕೆ_ಸಿಗದ_ಮಂತ್ರಿ_ಸ್ಥಾನ.   ಭದ್ರಾವತಿಯ ಹಿರಿಯ ಶಾಸಕ ಸಂಗಮೇಶ್ವರರಿಗೂ ಮಂತ್ರಿ ಸ್ಥಾನ ಇಲ್ಲ, ಸೊರಬ ಕ್ಷೇತ್ರದ ಮಧು ಬಂಗಾರಪ್ಪರಿಗೆ ಮಂತ್ರಿ ಸ್ಥಾನ ದೊರಕಿರುವುದು ಜಿಲ್ಲೆಗೆ ನೀಡಿದ ಗೌರವ ಆಗಿದೆ.   ಬಹು ನಿರೀಕ್ಷೆಯಲಿದ್ದ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರ ಹೆಸರು ಇವತ್ತು ಪ್ರಮಾಣ ವಚನ ಸ್ವೀಕಾರ ಮಾಡುವವರ ಪಟ್ಟಿಯಲ್ಲಿ ಇಲ್ಲದೆ ಇರುವುದು ಬೇಸರ ತಂದಿದೆ.    ಯಾವುದೇ ಪಕ್ಷದ ಸರ್ಕಾರ ಇರಲಿ ನಮ್ಮ ವಿಧಾನ ಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಇರಲಿ ಎಂದು ನಾನು ಕೂಡ ಆಸೆ ಪಟ್ಟಿದ್ದೆ.    ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ, ದೀರ್ಘಕಾಲದ ರಾಜಕಾರಣದಲ್ಲಿದ್ದ ಸ್ಥಳೀಯ ಶಾಸಕರಿಗೆ ಒಂದು ಅಧಿಕಾರ ಸಿಗಲಿ ಎನ್ನುವುದು.    ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಮನಸ್ಸು ಮಾಡ ಬೇಕಿತ್ತು ಶಿವಮೊಗ್ಗ ಜಿಲ್ಲೆಗೆ ಇಬ್ಬರು ಮಂತ್ರಿ ಮಾಡಬಹುದಿತ್ತು.    ಹಿಂದೆ ಜನತಾ ದಳ ಸರ್ಕಾರ ಇದ್ದಾಗ ಜೆ. ಹೆಚ್.ಪಟೇಲರು ಮತ್ತು ಬಸವಣ್ಯಪ್ಪ ಇಬ್ಬರು ಮಂತ್ರಿಗಳಿದ್ದರು.    ಬಿಜೆಪಿ ಸರ್ಕಾರ ಇದ್ದಾಗ ಯಡೂರಪ್ಪ, ಈಶ್ವರಪ್ಪ ಮತ್ತು ಹರತಾಳು ಹಾಲಪ್ಪ ಮೂವರು ಮಂತ್ರಿಗಳಿದ್ದರು.   ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗಾಗಿ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ನಮ್ಮ ಕ್ಷೇತ್ರದ ಶಾಸಕ #ಗೋಪಾಲಕೃಷ್ಣ_ಬೇಳೂರು ಮತ್ತು ಭದ್ರಾವತಿ ಶಾಸಕ #ಸಂಗಮೇಶ...

4116. ಡಾಕ್ಟರ್_ಎನ್_ಎಸ್_ವಿಶ್ವಪತಿಗಳ_ಸ್ಮರಣೆಸದ್ಗತಿಗಾಗಿ_ಪ್ರಾರ್ಥನೆ. ಆತ್ಮವು ಎಲ್ಲ ಲೌಕಿಕ ಬಂಧನಗಳಿಂದ ಮುಕ್ತವಾಗಿ ಭಗವಂತನ ಪಾದವನ್ನು ಸೇರಲಿ ಎಂದು ವೈಕುಂಠ ಸಮಾರಾಧನೆ ನಡೆಯುತ್ತದೆ.

ಡಾಕ್ಟರ್_ಎನ್_ಎಸ್_ವಿಶ್ವಪತಿಗಳ_ಸ್ಮರಣೆ ಸದ್ಗತಿಗಾಗಿ_ಪ್ರಾರ್ಥನೆ.   ಆತ್ಮವು ಎಲ್ಲ ಲೌಕಿಕ ಬಂಧನಗಳಿಂದ ಮುಕ್ತವಾಗಿ ಭಗವಂತನ ಪಾದವನ್ನು ಸೇರಲಿ ಎಂದು ವೈಕುಂಠ ಸಮಾರಾಧನೆ ನಡೆಯುತ್ತದೆ.  ​ಸಾಮಾನ್ಯವಾಗಿ ವ್ಯಕ್ತಿ ತೀರಿಕೊಂಡ 11, 12  ಅಥವಾ ೧೩ನೇ ದಿನದಂದು ವೈಕುಂಠ ಸಮಾರಾಧನೆಯನ್ನು ನೆರವೇರಿಸಲಾಗುತ್ತದೆ. (ಕೆಲವು ಸಮುದಾಯಗಳಲ್ಲಿ ಅವರವರ ಕುಲಾಚಾರಕ್ಕೆ ತಕ್ಕಂತೆ ದಿನಗಳು ಬದಲಾಗಬಹುದು). ​  ಪ್ರಮುಖ ಧಾರ್ಮಿಕ ವಿಧಿಗಳು ​ಧಾರ್ಮಿಕ ಪೂಜೆ ಹಾಗೂ ಪಿಂಡದಾನ ಪುರೋಹಿತರ ಮಾರ್ಗದರ್ಶನದಲ್ಲಿ ಮೃತರ ಹೆಸರಿನಲ್ಲಿ ತರ್ಪಣ, ಶ್ರಾದ್ಧ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.   ​ಅನ್ನದಾನ (ಬ್ರಹ್ಮಸಂತರ್ಪಣೆ), ಆಗಮಿಸಿದ ಬಂಧು-ಮಿತ್ರರಿಗೆ ಹಾಗೂ ಅಭ್ಯಾಗತರಿಗೆ ಭೋಜನವನ್ನು ಏರ್ಪಡಿಸುವುದು ಈ ದಿನದ ಪ್ರಮುಖ ಭಾಗ.   ​ದಾನ ಧರ್ಮಗಳು,ಮೃತರ ಆತ್ಮದ ಶ್ರೇಯಸ್ಸಿಗಾಗಿ ಗೋದಾನ, ಭೂದಾನ, ವಸ್ತ್ರದಾನ, ಹಾಗೂ ದೀಪದಾನಗಳಂತಹ ಕಾರ್ಯಗಳನ್ನು ಮಾಡಲಾಗುತ್ತದೆ.   ಇವತ್ತು ನನ್ನ ಜೀವನದ ಮಾರ್ಗದರ್ಶಕ ಗುರುಗಳಾಗಿದ್ದ ಬೆಂಗಳೂರಿನ ವಿಜಯನಗರದ ಖ್ಯಾತ ಜೋತಿಷಿ ಆಗಿದ್ದ ಡಾಕ್ಟರ್ ಎನ್. ಎಸ್. ವಿಶ್ವಪತಿಗಳ 13 ನೇ ದಿನದ ವೈಕುಂಠ ಸಮಾರಾಧನೆ ( 3 - ಆಗಸ್ಟ್-2026 ಸೋಮವಾರ).   ನಮ್ಮೂರ ಪುರ ದೈವ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಅವರ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ 21 ವರ್ಷದ ಹಿಂದೆ...

4115. ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ. ಈ ರೀತಿ ಭೂಕುಸಿತಕ್ಕೆ ಕಾರಣ ಏನು?... ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....

ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ.   ಈ ರೀತಿ ಭೂಕುಸಿತಕ್ಕೆ ಕಾರಣ ಏನು?...  ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....   ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಗೆ ನಿರ್ಮಿಸಿದ್ದ ತಡೆಗೋಡೆ ಮಣ್ಣು ಕಾರ್ಮಿಕರ ಶೆಡ್ ಮೇಲೆ ಕುಸಿದು ಮೂವರು ಕಾರ್ಮಿಕ ಕುಟುಂಬ ಭಾನುವಾರ ಮೃತರಾದ ದುರಂತ ನಡೆದಿದೆ.   ಮಲೆನಾಡು ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ,ಭೂಕುಸಿತ ಸಂಭವಿಸಲು ನೈಸರ್ಗಿಕ ಕಾರಣಗಳು ಮತ್ತು ಮಾನವಕೃತ ಕಾರಣಗಳು  ಪ್ರಮುಖ ಪಾತ್ರವಹಿಸುತ್ತವೆ.     ಮಲೆನಾಡಿನಲ್ಲಿ ಕೆಲವೇ ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದಾಗ ಮಣ್ಣು ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಂಡಾಗ,ಮಣ್ಣಿನ ಕಣಗಳ ನಡುವಿನ ಸಾಂದ್ರತೆ ಕಡಿಮೆಯಾಗಿ ಭಾರ ಹೆಚ್ಚುತ್ತದೆ. ​   ಗುಡ್ಡಗಳಲ್ಲಿ ಕೆಂಪು ಮಣ್ಣು  ಮತ್ತು ಜೇಡಿಮಣ್ಣಿನ ಅಂಶ ಹೆಚ್ಚಿರುವಾಗ ನೀರು ಬಿದ್ದಾಗ ಈ ಮಣ್ಣು ಬೇಗನೆ ಸಡಿಲಗೊಂಡು ಜಾರಲು ಪ್ರಾರಂಭಿಸುತ್ತದೆ. ​   ಪಶ್ಚಿಮ ಘಟ್ಟಗಳ ಭೂಪ್ರದೇಶವು ಕಡಿದಾದ ಇಳಿಜಾರುಗಳನ್ನು ಹೊಂದಿದ್ದು, ಗುರುತ್ವಾಕರ್ಷಣೆಯ ಬಲದಿಂದಾಗಿ ಸಡಿಲಗೊಂಡ ಮಣ್ಣು ಮತ್ತು ಬಂಡೆಗಳು ವೇಗವಾಗಿ ಕೆಳಗೆ ಜಾರುತ್ತವೆ.  ​ಅವೈಜ್ಞಾನಿಕ ರಸ್ತೆ ಮತ್ತು ಹೆದ್ದಾರಿ ನಿರ್ಮಾಣ,ಗುಡ್ಡಗಳನ್ನು ಕಡಿದು ರಸ್ತೆ ಅಗಲೀ...

4114. ಟಿ_ಪಿ_ಕೈಲಾಸಂಜುಲೈ 29 ಅವರ 142ನೆ ಹುಟ್ಟು ಹಬ್ಬ, ಅವರ ಮೊದಲ ನಾಟಕ #ಟೊಳ್ಳುಗಟ್ಟಿ ಅವರು ಶಿವಮೊಗ್ಗದಲ್ಲಿದ್ದಾಗಲೇ ಬರೆದ ನಾಟಕ ಇದು.

ಟಿ_ಪಿ_ಕೈಲಾಸಂ ಜುಲೈ 29 ಅವರ 142ನೆ ಹುಟ್ಟು ಹಬ್ಬ, ಅವರ ಮೊದಲ ನಾಟಕ #ಟೊಳ್ಳುಗಟ್ಟಿ ಅವರು ಶಿವಮೊಗ್ಗದಲ್ಲಿದ್ದಾಗಲೇ ಬರೆದ ನಾಟಕ ಇದು.   ​ಕೈಲಾಸಂ ಅವರು ಇಂಗ್ಲೆಂಡ್‌ನಿಂದ ಹಿಂದಿರುಗಿದಾಗ, ಭಾರತದಲ್ಲಿದ್ದ (ವಿಶೇಷವಾಗಿ ಮೈಸೂರು/ಬೆಂಗಳೂರು ಪ್ರಾಂತ್ಯದ) ಅಂದಿನ ಇಂಗ್ಲಿಷ್ ಶಿಕ್ಷಣ ಪದ್ಧತಿಯನ್ನು ಹತ್ತಿರದಿಂದ ನೋಡಿದರು.    ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಲು ಬಾಯಿಪಾಠ (Rote learning) ಮಾಡುವುದನ್ನು, ಪೋಷಕರು ಅಂಕಗಳ ಆಧಾರದ ಮೇಲೆ ಮಕ್ಕಳನ್ನು ಅಳೆಯುವುದನ್ನು ಕಂಡು, ಆ ಪದ್ಧತಿಗೆ ವಿರೋಧವಾಗಿ ಹಾಗೂ ಜಾಗೃತಿ ಮೂಡಿಸಲು ಈ ನಾಟಕವನ್ನು ಬರೆದರು.    ಇನ್ನೂ ಒಂದು ವಿಶೇಷ ಆ ನಾಟಕದ ಮೊದಲ ರಂಗ ಪ್ರಯೋಗ ಆಗಿದ್ದು ಕುಂಸಿಯಲ್ಲಿ.  ಕುಂಸಿ -ಚೋರಡಿ ಮತ್ತು  ತುಪ್ಪೂರಿನಲ್ಲಿದ್ದ MML ಮ್ಯಾಂಗನೀಸ್ ಗಣಿಯ ಉನ್ನತಾಧಿಕಾರಿ ಆಗಿದ್ದರು ಟಿ.ಪಿ. ಕೈಲಾಸಂ.   ಮಹಾನ್ ನಾಟಕಕಾರ ಸಾಹಿತಿ ಟಿ.ಪಿ.ಕೈಲಾಸಂ ಶಿವಮೊಗ್ಗ ಜಿಲ್ಲೆಯಲ್ಲಿ ನಾಟಕ ಬರೆದರು ಮತ್ತು ಅ ನಾಟಕ  ಪ್ರದರ್ಶನ ಕುಂಸಿ ಎಂಬ ಊರಲ್ಲಿ ಮಾಡಿಸಿದ್ದರು ಎಂಬುದೇ ವಿಶೇಷ ಸುದ್ದಿ.     ಟಿ.ಪಿ.ಕೈಲಾಸಂ ಬರೆದ ಕೊ ಕೋ ಕೋಳಿಕೆ ರಂಗ ಎಂಬ ಹಾಡು ಕನ್ನಡದ ಖ್ಯಾತ ಗಾಯಕ ಕಾಳಿಂಗರಾವ್ ದ್ವನಿಯಲ್ಲ ಅದ್ಬುತವಾಗಿ ಮೂಡಿ ಬರುತ್ತಿತ್ತು ನೆನಪಿಸಿಕೊಳ್ಳಿ.    ನಮ್ಮ ಶಿವಮೊಗ್ಗ ತಾಲ್ಲೂಕಿನ ಕುಂಸಿ, ಚೋರಡಿ ಮತ್ತುತುಪ...

4113.ತಮಿಳು_ಚಿತ್ರರಂಗದ_ಯಶಸ್ವಿ_ನಿರ್ಮಾಪಕ_ನಟ_ಪಿರಮಿಡ್_ನಟರಾಜ್

ತಮಿಳು_ಚಿತ್ರರಂಗದ_ಯಶಸ್ವಿ_ನಿರ್ಮಾಪಕ_ನಟ_ಪಿರಮಿಡ್_ನಟರಾಜ್   ನನ್ನ ರೆಸ್ಟೋರೆಂಟ್ ಉದ್ಯಮಕ್ಕೆ ಪ್ರೇರಕರು ಅವರು, ನನಗೆ ಅವರಿಂದ ಅನೇಕ ಪ್ರೋತ್ಸಾಹ ದೊರೆತಿತ್ತು, ಅವರು ಒಬ್ಬ ವಿಶೇಷ ಕ್ರಿಯಾಶೀಲ ವ್ಯಕ್ತಿ  ಖ್ಯಾತ ನಿಧೇ೯ಶಕ ಕೆ. ಬಾಲಚಂದರ್ ಮತ್ತು ಇವರ ಜೋಡಿ ನೀಡಿದ ಸೂಪರ್ ಹಿಟ್ ಸಿನಿಮಾಗಳು,ಇವರ ತಮಿಳು ಚಿತ್ರ ಅವಲ್ ಒರು ಥೋಡರ್ ಕತೈ ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾ.   ಪಿರಮಿಡ್ ನಟರಾಜ್ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಇವರು 1997 ರಲ್ಲಿ ಸ್ಥಾಪಿಸಿದ ಪಿರಮಿಡ್ ಎಂಟರ್ ಟೈನ್ ಮೆಂಟ್ ಲಿ. ಸಂಸ್ಥೆಯ ಪ್ರಖ್ಯಾತಿ ನಟರಾಜ್ ಹೆಸರಿಗೆ ಪಿರಮಿಡ್ ಸೇರಲು ಕಾರಣ.     ಪ್ರಖ್ಯಾತ ನಿಧೇ೯ಶಕ ಕೆ.ಬಾಲಚಂದರ್ ಜೊತೆ ಕವಿತಾಲಯ ಸಂಸ್ಥೆ ಪೋಷಕರಾಗಿ ಅನೇಕ ಯಶಸ್ಸಿಗೆ ಕಾರಣರಾದರು.   ​ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಮತ್ತು ಕೆಲವು ತೆಲುಗು ಸಿನಿಮಾಗಳಲ್ಲಿ ಇವರು ನಾಯಕನ ತಂದೆಯಾಗಿ, ಖಳನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಟನಾಗಿ  ​ಅಲೈಪಾಯುದೆ  ಮಣಿರತ್ನಂ ನಿರ್ದೇಶನದ ಈ ಸೂಪರ್‌ಹಿಟ್ ಸಿನಿಮಾದಲ್ಲಿ ನಾಯಕ ಮಾಧವನ್ ಅವರ ತಂದೆಯ (ವರದರಾಜನ್) ಪಾತ್ರದ ಮೂಲಕ ಇವರಿಗೆ ದೊಡ್ಡ ಬ್ರೇಕ್ ಸಿಕ್ಕಿತು.  ​ಫ್ರೆಂಡ್ಸ್ ನಲ್ಲಿ ವಿಜಯ್ ಮತ್ತು ಸೂರ್ಯ ನಟನೆಯ ಈ ಸಿನಿಮಾದಲ್ಲಿ ಗೌತಮ್ (ವಿಜಯ್) ತಂದೆಯ ಪಾತ್ರ.   ​ವಿರುಮಾಂಡಿ ಕಮಲ್ ಹಾ...

4112. ದಿನಾಂಕ 02.08.2026ರ ಬಾನುವಾರ ಆನಂದಪುರಂನ #ಯಡೇಹಳ್ಳಿಯ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ 245ನೇ ಸಂಕಷ್ಟಹರ ಚತುರ್ಥಿ ಆಚರಣೆ ನೆರವೇರಲಿದೆ.

ನಮ್ಮೂರ_ಪುರದೈವ ಶೀವರಸಿದ್ದಿವಿನಾಯಕ_ಸ್ವಾಮಿ_ದೇವಾಲಯದಲ್ಲಿ ಸಂಕಷ್ಟಹರ_ಚತುರ್ಥಿ.    ದಿನಾಂಕ 02.08.2026ರ  ಬಾನುವಾರ ಆನಂದಪುರಂನ #ಯಡೇಹಳ್ಳಿಯ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ 245ನೇ ಸಂಕಷ್ಟಹರ ಚತುರ್ಥಿ ಆಚರಣೆ ನೆರವೇರಲಿದೆ.   ಶ್ರೀವರಸಿದ್ಧಿವಿನಾಯಕ ಸ್ವಾಮಿಗೆ ಭಾನುವಾರ ಮಧ್ಯಾನ್ಹ 12 ಗಂಟೆ 30 ನಿಮಿಷಕ್ಕೆ ಸಾಮೂಹಿಕ ಗಣಪತಿ ಹೋಮ, ಹಣ್ಣುಕಾಯಿ ಅರ್ಪಣೆ ಮತ್ತು ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.    ರಾತ್ರಿ 9 ಗಂಟೆ25 ನಿಮಿಷಕ್ಕೆಚಂದ್ರೋದಯ ವಾಗಲಿದೆ.    ಚಂದ್ರೋದಯದಲ್ಲಿ ಸಂಕಷ್ಟಹರ ಚತುರ್ಥಿಯ ಶ್ರೀವರ ಸಿದ್ಧಿ ವಿನಾಯಕ ಸ್ವಾಮಿಗೆ ಹಣ್ಣುಕಾಯಿ ನೈವೇದ್ಯ ಅರ್ಪಣೆ ಮಾಡಲಾಗುವುದು ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ.   ನಂತರ ಸರ್ವ ಭಕ್ತರಿಗೂ ಅನ್ನ ಪ್ರಸಾದ ಸೇವೆ ನೆಡೆಯಲಿದೆ,                ಸರ್ವಭಕ್ತಾಧಿಗಳು ಸಕಾಲದಲ್ಲಿ ಆಗಮಿಸಿ ಸಂಕಷ್ಟಹರ ಚತುರ್ಥಿಯ ಶ್ರೀವರಸಿದ್ದಿ ವಿನಾಯಕ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಲು ದೇವಾಲಯದ ಆಡಳಿತ ಮಂಡಲಿಯವರು ಪ್ರಾರ್ಥಿಸಿಕೊಂಡಿದ್ದಾರೆ.   245 ನೇ ಸಂಕಷ್ಟಹರ ಚತುರ್ಥಿಯ ಈ ತಿಂಗಳ ದೇವರ ಬೆಣ್ಣೆ ಅಲಂಕಾರ ಮತ್ತು ರಾತ್ರಿಯ ಅನ್ನ ಪ್ರಸಾದ ಸೇವೆಯನ್ನು #ಹೂವಿನಕೋಣೆ_ಶ್ರೀಆದರ್ಶರ ಕುಟುಂಬದಿಂದ ನೆರವೇರಲಿದೆ. ವಿ...

4111. ಈ_ವರ್ಷ_2026_ಲಿಂಗನಮಕ್ಕಿ_ಆಣೆಕಟ್ಟು_ತುಂಬುತ್ತಾ

ಈ_ವರ್ಷ_ಲಿಂಗನಮಕ್ಕಿ_ಆಣೆಕಟ್ಟು_ತುಂಬುತ್ತಾ? ...   ಮಲೆನಾಡಿನಲ್ಲಿ ಮುಂಗಾರು ಮಳೆ ಕೊರತೆ ಆಗಿದೆ ಆದರೆ ಜೋಗ್ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ನಿರಾಶೆ ಪಡಬೇಕಾಗಿಲ್ಲ ಯಾಕೆಂದರೆ ಜೋಗ್ ಜಲಪಾತ ಸುತ್ತಲಿನ ಪ್ರದೇಶದಲ್ಲಿ ಆಗುತ್ತಿರುವ ಮಳೆಯಿಂದ ಜೋಗ್ ಜಲಪಾತ ನೋಡಲು ಸುಂದರವಾಗಿ ಕಾಣುತ್ತದೆ.  2025 ಮತ್ತು 2024ರ ಆಗಸ್ಟ್ ತಿಂಗಳ 1 ನೇ ತಾರೀಖಿನಲ್ಲಿನ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1810 ಅಡಿ ತಲುಪಿತ್ತು.   ನಿನ್ನೆ ಬೆಳಿಗ್ಗೆ 8 am  31-ಜುಲೈ-2026 ಕ್ಕೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1776 ಅಡಿ ತಲುಪಿತ್ತು ಇದು ಜಲಾಶಯದ 31.30 % ಮಾತ್ರ ನೀರು ಸಂಗ್ರಹ ಆಗಿದೆ.  ( 31 - ಜುಲೈ-2026 ರ ಬೆಳಗಿನ ಮಾಹಿತಿಯ ಪ್ರಕಾರ).   ಕಳೆದ ವರ್ಷ ಇದೇ ದಿನಕ್ಕೆ ಡ್ಯಾಮಿನಲ್ಲಿ 1811 ಅಡಿ ನೀರು ಸಂಗ್ರಹವಾಗಿತ್ತು ಅವತ್ತು ಡ್ಯಾಮ್ ಶೇಕಡಾ 83.12% ಭರ್ತಿ ಆಗಿತ್ತು.   ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, ಸಾಗರ ತಾಲೂಕಿನ ಲಿಂಗನಮಕ್ಕಿ ಆಣೆಕಟ್ಟಿನಲ್ಲಿ ಸಂಗ್ರಹವಾಗಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಜೋಗ್ ಜಲಪಾತವಾಗಿ ಧುಮುಕಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬಿ ಸಮುದ್ರ ಸೇರುತ್ತದೆ ಶರಾವತಿ ನದಿ.   1815 ಆಡಿದಾಟಿದ ಮೇಲೆ ಒಳಹರಿವು ಲೆಕ್ಕಾಚಾರ ಮಾಡಿ ಡ್ಯಾಮಿನ ಕ್ರಸ್ಟ್ ಗೇಟ್ ಗಳನ್ನು ತೆರೆದು ನೀರ...

4110. ಕೊರಗಜ್ಜ_ನಂಬಿದವರನ್ನು_ಎಂದೂ_ಕೈಬಿಡದತುಳುನಾಡಿನ_ಪವಾಡ_ಪುರುಷ.

ಕೊರಗಜ್ಜ_ನಂಬಿದವರನ್ನು_ಎಂದೂ_ಕೈಬಿಡದ ತುಳುನಾಡಿನ_ಪವಾಡ_ಪುರುಷ.   ​ತುಳುನಾಡಿನ ಕಾರಣಿಕ ದೈವ, ಭಕ್ತರ ಆಪತ್ಬಾಂಧವ ಶ್ರೀ ಕೊರಗಜ್ಜ.   ಇಂದಿನ ಆಧುನಿಕ ಯುಗದಲ್ಲೂ ಕೊರಗಜ್ಜನ ಪವಾಡಗಳು ಕಡಿಮೆಯಾಗಿಲ್ಲ,ಜಾತಿದರ್ಮಗಳ ಗಡಿಯನ್ನು ಮೀರಿ ಕೊರಗಜ್ಜನನ್ನು ಆರಾಧಿಸುವ ಭಕ್ತರು ಪ್ರಪಂಚದಾದ್ಯಂತ ಇದ್ದಾರೆ.   ​ತುಳುನಾಡು ಎಂದರೆ ಪವಿತ್ರ ದೈವರಾಧನೆಯ ಪುಣ್ಯಭೂಮಿ ಇಲ್ಲಿನ ಪ್ರತಿಯೊಂದು ಶಕ್ತಿಯ ಹಿಂದೆ ದೊಡ್ಡ ಪವಾಡ ಮತ್ತು ಸತ್ಯದ ಕಥೆಯಿದೆ.    ಅಂತಹ ಅಪಾರ ಕಾರಣಿಕ ಹಾಗೂ ಧಾರ್ಮಿಕ ನಂಬಿಕೆಯ ಪ್ರತೀಕವೇ ‘ಶ್ರೀ ಕೊರಗಜ್ಜ’.   ​ಕೊರಗಜ್ಜನನ್ನು ತುಳುನಾಡಿನಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ತಕ್ಷಣವೇ ಭಕ್ತರ ಪ್ರಾರ್ಥನೆಗೆ ಓಗೊಡುವ ದೈವವೆಂದು ನಂಬಲಾಗುತ್ತದೆ.     ಕಷ್ಟದಲ್ಲಿದ್ದಾಗ, ವಸ್ತುಗಳು ಕಳೆದುಹೋದಾಗ ಅಥವಾ ಜೀವನದಲ್ಲಿ ದಿಕ್ಕು ತೋಚದಿದ್ದಾಗ "ಕೊರಗಜ್ಜಾ ಕಾಪಾಡು" ಎಂದು ಶ್ರದ್ಧೆಯಿಂದ ನೆನೆದರೆ ಆತ ಭಕ್ತರ ನೆರವಿಗೆ ಧಾವಿಸುತ್ತಾನೆ ಎಂಬುದು ಕೋಟ್ಯಂತರ ಜನರ ಅನುಭವ.   ​ಕೊರಗಜ್ಜ ದೇವರಿಗೆ ಯಾವುದೇ ಆಡಂಬರದ ಪೂಜೆ-ಪುರಸ್ಕಾರಗಳ ಅಗತ್ಯವಿಲ್ಲ,ಶುದ್ಧ ಮನಸ್ಸಿನ ಪ್ರಾರ್ಥನೆ, ನಂಬಿಕೆ ಮತ್ತು ಸರಳ ನೇಮ-ನಿಷ್ಠೆಗಳೇ ಆತನಿಗೆ ಪ್ರಿಯ.   ತಮಲಪಾಲು (ವೀಳ್ಯದೆಲೆ, ಅಡಿಕೆ), ಸುರಾಪಾನ (ಕಳ್ಳು/ಶೇಂದಿ) ಮತ್ತು ಸಿಹಿತಿಂಡಿಗಳನ್ನು ಅಗೇಲು ಸೇವೆಯಾಗಿ ಅರ್ಪಿಸುವುದು ಇಲ್ಲಿನ ...

4109. ಗೋರೊಚನ_ನಿಮಗೆ_ಗೊತ್ತಾ? ಗೋರೋಚನ ಎಂಬುದು ಮುಖ್ಯವಾಗಿ ಗೋವಿನ (ಆಕಳ) ಪಿತ್ತಕೋಶದಲ್ಲಿ ರೂಪಗೊಳ್ಳುವ ಒಂದು ಅಪರೂಪದ ಹಳದಿ-ಕಿತ್ತಳೆ ಬಣ್ಣದ ಪದಾರ್ಥ. ಇದನ್ನು ಆಯುರ್ವೇದ, ಪೂಜಾವಿಧಿಗಳು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನದಿಂದ ನೋಡಲಾಗುತ್ತದೆ.

ಗೋರೊಚನ_ನಿಮಗೆ_ಗೊತ್ತಾ?    ಗೋರೋಚನ  ಎಂಬುದು ಮುಖ್ಯವಾಗಿ ಗೋವಿನ (ಆಕಳ) ಪಿತ್ತಕೋಶದಲ್ಲಿ  ರೂಪಗೊಳ್ಳುವ ಒಂದು ಅಪರೂಪದ ಹಳದಿ-ಕಿತ್ತಳೆ ಬಣ್ಣದ ಪದಾರ್ಥ.   ಇದನ್ನು ಆಯುರ್ವೇದ, ಪೂಜಾವಿಧಿಗಳು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನದಿಂದ ನೋಡಲಾಗುತ್ತದೆ.   ಆನೆ, ಗೋವು ಮತ್ತು ಹಿಮಾಲಯದ ಯಾಕ್ ನಲ್ಲಿ ಮಾತ್ರ ಲಭ್ಯ. ಮಲೆನಾಡು ಗಿಡ್ಡ ತಳಿಯ ಗೋವುಗಳಲ್ಲಿ ಇದು ಹೆಚ್ಚು ಲಭ್ಯ.   ಇದು ಪ್ರಾಣಿಜನ್ಯ ಆಯುರ್ವೇದ, ಶುದ್ದ ಗೋರೋಚನದ ಬೆಲೆ ಗ್ರಾಮಿಗೆ ಎರೆಡು ಸಾವಿರ!!..    ಔಷದಿಯಾಗಿ, ಸುವಾಸನ ದ್ರವ್ಯದಲ್ಲಿ, ತಂತ್ರವಿದ್ಯೆಯ ವಶೀಕರಣದಲ್ಲಿ, ಅದೃಷ್ಟ ಎಂಬ ನಂಬಿಕೆಯಲ್ಲಿ ಬಳಕೆ.   ಆದುನಿಕ ವೈದ್ಯಕೀಯ ಶಸ್ತ್ರಚಿಕಿತ್ಸಾ ವಿಧಾನ ಬಳಕೆಯ ಸಾವಿರಾರು ವರ್ಷದ ಹಿಂದೆಯೇ ಭಾರತೀಯರಿಗೆ ಇದೆಲ್ಲದರ ಅರಿವು ಇತ್ತು ಮತ್ತು ಅದರ ಬಳಕೆ ಗೊತ್ತಿರುವುದು ಸೋಜಿಗದ ವಿಷಯ.   ಮೊದಲ ದರ್ಜೆಯ ಗೋರೊಚನ ಆನೆಯ ಮೆದುಳಿನಿಂದ ಪಡೆಯುತ್ತಿದ್ದರೆಂದು ಪುರಾತನ ಕಾಲದಿಂದಲೂ ನಂಬಿಕೆ ಇದೆ.   ಇದನ್ನು ಬಿಟ್ಟರೆ ಗೋವಿನ ಪಿತ್ತ ಕೋಶದಿಂದ ಪಡೆಯುವುದು ಸದ್ಯದ ಬಳಕೆಯ ಮಾರ್ಗವಾಗಿದೆ.    ಹಿಮಾಲಯ ತಪ್ಪಲಲ್ಲಿ ಮತ್ತು ನೇಪಾಳದಲ್ಲಿ ಯಾಕ್ ಪ್ರಾಣಿಯಲ್ಲಿ ಮತ್ತು ಗೋವುಗಳಲ್ಲಿ ಸಿಗುತ್ತದೆ ಆದರೆ ಎಲ್ಲಾ ಗೋವುಗಳಲ್ಲಿ ಗೋರೋಚನ ಇದು ಸಿಗುವುದಿಲ್ಲ.   ಪಶ್ಚಿಮ ಘಟ್ಟಗಳ ಮಲೆ...

4708. ಸತ್ಯವತಿ (ಮತ್ಸ್ಯಗಂಧಿ) ಭಾರತೀಯ ಮಹಾಕಾವ್ಯ ಮಹಾಭಾರತದ ಕಥೆಗೆ ಬಹುದೊಡ್ಡ ತಿರುವು ನೀಡಿದ ಅತ್ಯಂತ ಪ್ರಮುಖ ಮತ್ತು ಪ್ರಭಾವಶಾಲಿ ಪಾತ್ರಗಳಲ್ಲಿ ಒಬ್ಬರು.

ಸತ್ಯವತಿ_ಮತ್ಯಗಂಧಿ ..   ಸತ್ಯವತಿ (ಮತ್ಸ್ಯಗಂಧಿ) ಭಾರತೀಯ ಮಹಾಕಾವ್ಯ ಮಹಾಭಾರತದ ಕಥೆಗೆ ಬಹುದೊಡ್ಡ ತಿರುವು ನೀಡಿದ ಅತ್ಯಂತ ಪ್ರಮುಖ ಮತ್ತು ಪ್ರಭಾವಶಾಲಿ ಪಾತ್ರಗಳಲ್ಲಿ ಒಬ್ಬರು.    ಮಹಾಭಾರತದ ಕಥೆಯಲ್ಲಿ ಸತ್ಯವತಿಯ ಪಾತ್ರ ಅತ್ಯಂತ ನಿರ್ಣಾಯಕವಾದದ್ದು.  ಒಂದು ವೇಳೆ ಮಹಾಭಾರತದಲ್ಲಿ ಸತ್ಯವತಿಯೇ ಇಲ್ಲದಿದ್ದರೆ ಅಥವಾ ಆಕೆಯ ಪ್ರವೇಶವಾಗದಿದ್ದರೆ ಕಥೆಯ ತಿರುವು ಸಂಪೂರ್ಣವಾಗಿ ಬದಲಾಗುತ್ತಿತ್ತು.   ​ಸತ್ಯವತಿ ಇಲ್ಲದಿದ್ದರೆ ಏನೇನು ಆಗುತ್ತಿತ್ತೆಂದರೆ....    ಭೀಷ್ಮನ ಪ್ರತಿಜ್ಞೆ ನಡೆಯುತ್ತಿರಲಿಲ್ಲ,​ಶಂತನು ಮಹಾರಾಜನು ಸತ್ಯವತಿಯನ್ನು ಮದುವೆಯಾಗಲು ಬಯಸಿದ್ದರಿಂದಲೇ ದೇವವ್ರತನು (ಭೀಷ್ಮ) ತಂದೆಯ ಸಂತೋಷಕ್ಕಾಗಿ ರಾಜ್ಯತ್ಯಾಗ ಮಾಡಿ, ಆಜೀವನ ಬ್ರಹ್ಮಚಾರಿಯಾಗಿ ಉಳಿಯುವ ಭೀಕರ ಪ್ರತಿಜ್ಞೆ ಮಾಡಿದನು.   ​ಸತ್ಯವತಿ ಇಲ್ಲದಿದ್ದರೆ, ದೇವವ್ರತನೇ ಹಸ್ತಿನಾಪುರದ ಅರಸನಾಗಿ ಸಿಂಹಾಸನ ಏರುತ್ತಿದ್ದ, ಭೀಷ್ಮ' ಎಂಬ ಹೆಸರು ಮತ್ತು ಆತನ ಕಠಿಣ ಪ್ರತಿಜ್ಞೆಯೇ ಇರುತ್ತಿರಲಿಲ್ಲ. ​   ಮಹರ್ಷಿ ವೇದವ್ಯಾಸರ ಜನನವಾಗುತ್ತಿರಲಿಲ್ಲ ...ಸತ್ಯವತಿಗೆ ಪರಾಶರ ಮುನಿಯಿಂದ ವೇದವ್ಯಾಸರು (ಕೃಷ್ಣದ್ವೈಪಾಯನ) ಜನಿಸಿದರು,​ವೇದವ್ಯಾಸರಿಲ್ಲದಿದ್ದರೆ ನಾಲ್ಕು ವೇದಗಳ ವಿಂಗಡಣೆ, ಮಹಾಭಾರತ ಗ್ರಂಥದ ರಚನೆ ಮತ್ತು ಶ್ರೀಮದ್ಭಾಗವತದಂತಹ ಮಹಾನ್ ಗ್ರಂಥಗಳು ನಮಗೆ ಸಿಗುತ್ತಿರಲಿಲ್ಲ. ​  ಕೌರವರು ಮ...

4107. ಸಾಳ್ವರಾಣಿ_ಚೆನ್ನಬೈರಾದೇವಿ_ಸೋಲಿಸಿಹಾನಗಲ್ಲಿನಲ್ಲಿ_ಸ್ಥಾಪಿಸಿದ_ವಿಜಯ_ಸ್ಥಂಭvictorypillar

ಸಾಳ್ವರಾಣಿ_ಚೆನ್ನಬೈರಾದೇವಿ_ಸೋಲಿಸಿ ಹಾನಗಲ್ಲಿನಲ್ಲಿ_ಸ್ಥಾಪಿಸಿದ_ವಿಜಯ_ಸ್ಥಂಭ victorypillar     ಕೆಳದಿ ರಾಜ ವೆಂಕಟಪ್ಪ ನಾಯಕರು ಗೇರುಸೊಪ್ಪೆಯ ರಾಣಿ ಚೆನ್ನ ಬೈರಾದೇವಿ ಸಾಮ್ರಾಜ್ಯ ಗೆದ್ದು ವಿಜಯ ಸ್ಥಂಭ ಸ್ಥಾಪಿಸಿದ್ದು ದೂರದ ಹಾನಗಲ್ಲಿನಲ್ಲಿ ... ​"ಸಾಳ್ವ ಗೇರುಸೊಪ್ಪೆಯ ರಾಜ್ಯಾಧಿಪತಿಯಾಗಿದ್ದ ಚೆನ್ನಭೈರಾದೇವಿಯ ಸೇನಾ ಬಲಮಂ ತರಿದು...  ಹಾನಗಲ್ಲಿನಲ್ಲಿ ವಿಜಯ ಸ್ಥಂಭ ನಿರ್ಮಾಣಕ್ಕೆ ಕಾರಣ ಗೊತ್ತಾ...   ಕೆಳದಿ ಸಂಸ್ಥಾನದ ಇತಿಹಾಸವನ್ನು ವಿವರಿಸುವ ಪ್ರಸಿದ್ಧ ಕನ್ನಡ ಐತಿಹಾಸಿಕ ಕಾವ್ಯವಾದ 'ಕೆಳದಿನ್ರಪವಿಜಯ' ಮತ್ತು ಸಂಸ್ಕೃತ ಗ್ರಂಥ 'ಶಿವತತ್ತ್ವ ರತ್ನಾಕರದಲ್ಲಿ ವೆಂಕಟಪ್ಪ ನಾಯಕರು ಹಾನಗಲ್‌ನಲ್ಲಿ ಈ ವಿಜಯ ಸ್ತಂಭವನ್ನು ಸ್ಥಾಪಿಸಿದ ಘಟನೆಯನ್ನು ಹೆಮ್ಮೆಯಿಂದ ದಾಖಲಿಸಲಾಗಿದೆ.  ಹಾನಗಲ್ಲಿನ ವಿಜಯ ಸ್ತಂಭವು ಕೆಳದಿ ಸಂಸ್ಥಾನದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಒಂದು ಐತಿಹಾಸಿಕ ಸ್ಮಾರಕವಾಗಿದ್ದು, ಕೆಳದಿಯ ವೈಭವ ಹಾಗೂ ಕರಾವಳಿ ಪ್ರದೇಶದ ಮೇಲಿನ ಆಧಿಪತ್ಯವನ್ನು ಸಾರುತ್ತದೆ.    ಕೆಳದಿಯ ಶ್ರೇಷ್ಠ ದೊರೆ ಹಿರಿಯ ವೆಂಕಟಪ್ಪ ನಾಯಕರು(ಕ್ರಿ.ಶ. 1586 – 1629) ಗೇರುಸೊಪ್ಪೆಯ ರಾಜಪ್ರಭುತ್ವದ ಮೇಲೆ ಸಾಧಿಸಿದ ಪೂರ್ಣ ವಿಜಯದ ಸಂಕೇತವಾಗಿ. ​ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಸೇನೆ ಮತ್ತು ಅವರ ಮೈತ್ರಿಕೂಟವನ್ನು 1606 ರ ಯುದ್ಧದಲ್ಲಿ ಸೋಲಿಸಿದ ನಂತರ ಈ ವಿಜಯದ ನೆನಪಿ...

4106.ವ್ಯಾಸ_ಪೂರ್ಣಿಮೆ. ಈ ದಿನವನ್ನು 'ವೇದ ವ್ಯಾಸರ' ಜನ್ಮದಿನವಾಗಿಯೂ ಆಚರಿಸಲಾಗುತ್ತದೆ.​"ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||"​ಗುರು ಪೂರ್ಣಿಮೆಯು ಕೇವಲ ಒಂದು ದಿನದ ಹಬ್ಬವಲ್ಲ ಅದು ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನದ ಮೌಲ್ಯವನ್ನು ಮತ್ತು ಗುರುವಿನ ಸ್ಥಾನವನ್ನು ನೆನಪಿಸುವ ಪವಿತ್ರವಾದ ಆಚರಣೆ.

ವ್ಯಾಸ_ಪೂರ್ಣಿಮೆ.   ಈ ದಿನವನ್ನು 'ವೇದ ವ್ಯಾಸರ' ಜನ್ಮದಿನವಾಗಿಯೂ ಆಚರಿಸಲಾಗುತ್ತದೆ. ​"ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||" ​ಗುರು ಪೂರ್ಣಿಮೆಯು ಕೇವಲ ಒಂದು ದಿನದ ಹಬ್ಬವಲ್ಲ ಅದು ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನದ ಮೌಲ್ಯವನ್ನು ಮತ್ತು ಗುರುವಿನ ಸ್ಥಾನವನ್ನು ನೆನಪಿಸುವ ಪವಿತ್ರವಾದ ಆಚರಣೆ. ಜನ್ಮ ನೀಡಿದ ತಾಯಿ ಮತ್ತು ತಂದೆಯನ್ನು ಮೊದಲ ಗುರುಗಳೆಂದು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.   ನಾಲ್ಕು ವೇದಗಳನ್ನು ವಿಭಾಗಿಸಿ, ಮಹಾಭಾರತ, ಅಷ್ಟಾದಶ ಪುರಾಣಗಳನ್ನು ರಚಿಸಿದ ಮಹರ್ಷಿ ವೇದವ್ಯಾಸರನ್ನು ಜಗತ್ತಿನ ಪ್ರಥಮ ಗುರು ಎಂದು ಪರಿಗಣಿಸಿ ಈ ದಿನ ಅವರಿಗೆ ನಮನ ಸಲ್ಲಿಸಲಾಗುತ್ತದೆ.  ​ಗುರು ಪೂರ್ಣಿಮೆ ಎಂದರೆ ನಮಗೆ ತಕ್ಷಣ ನೆನಪಾಗುವುದು ಮಹರ್ಷಿ ವೇದವ್ಯಾಸರು ಅವರು ಸನಾತನ ಧರ್ಮದ ಜ್ಞಾನ ಪರಂಪರೆಗೆ ವೇದವ್ಯಾಸರು ನೀಡಿದ ಕೊಡುಗೆ ಅಪಾರ ಮತ್ತು ಅಪ್ರತಿಮ.   ​ಅಷ್ಟಕ್ಕೂ ವೇದವ್ಯಾಸರು ಯಾರು? ಅವರ ಮಹತ್ವವೇನು? ಇಲ್ಲಿದೆ ಒಂದು ಕಿರು ನೋಟ... ​   ​ವೇದವ್ಯಾಸರ ಮೂಲ ಹೆಸರು 'ಕೃಷ್ಣ ದ್ವೈಪಾಯನ' ​ಇವರು ಮಹರ್ಷಿ ಪರಾಶರ ಮತ್ತು ಸತ್ಯವತಿಯ ಪುತ್ರ.     ​ಒಮ್ಮೆ ಪರಾಶರರು ಯಮುನಾ ನದಿಯನ್ನು ದಾಟಬೇಕಾದಾಗ, ದೋಣಿ ನಡೆಸುತ್ತಿದ್ದ ಸತ್ಯವತಿಯನ್ನು (ಮತ್ಸ್ಯಗಂಧಿ) ಭೇಟಿಯಾಗುತ್ತಾರೆ.  ...

4105.ಶಿವಮೊಗ್ಗದ_ಹಿರೇಹಾಳ್_ಇಬ್ರಾಹಿಂ_ಸಾಹೇಬರು.ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು

ಶಿವಮೊಗ್ಗದ_ಹಿರೇಹಾಳ್_ಇಬ್ರಾಹಿಂ_ಸಾಹೇಬರು. ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು    ಇವರು ಇಸ್ಲಾಂನ ಪ್ರವಚನ ಕನ್ನಡಕ್ಕೆ ಅನುವಾದಿಸಿದವರು ಮತ್ತು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದವರರು.     #ಹಿರೇಹಾಳ_ಇಬ್ರಾಹಿಂ ಸಾಹೇಬರಿಗೆ ಮರಣೋತ್ತರ ಡಾಕ್ಟರೇಟ್ ಪದವಿ ವಿಜಯನಗರದ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ 13 ಜುಲೈ 2023 ರಂದು ತನ್ನ 11ನೇ ಘಟಿಕೋತ್ಸವದಲ್ಲಿ ನೀಡಿತು.   ಆದರೆ ಹಿರೇಹಾಳ ಇಬ್ರಾಹಿಂ ಸಾಹೇಬರ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಸ್ಮರಿಸುವ ಕಾರ್ಯಕ್ರಮಗಳು ನಡೆಯಲೇ ಇಲ್ಲ.   ಹಿರೇಹಾಳ ಇಬ್ರಾಹಿಂ ಸಾಹೇಬರ ಬಗ್ಗೆ ಕನ್ನಡ ಸಾಹಿತ್ಯ ಲೋಕದಲ್ಲಿನ ಎಲ್ಲಾ ಹಿರಿಯ ಸಾಹಿತಿಗಳಲ್ಲಿ ಅತ್ಯಂತ ಗೌರವಾಭಿಮಾನ ಕಾರಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪೋಷಕ ಸ್ಥಾನ.    ನಾಡಿನ ಸಾಹಿತಿಗಳಿಗೆ ಶಿವಮೊಗ್ಗಕ್ಕೇ ಆಹ್ವಾನಿಸಿ ಆಧರಿಸಿ ಗೌರವಿಸುತ್ತಿದ್ದ ರೀತಿ ಹಿರೇಹಾಳ ಇಬ್ರಾಹಿಂ ಸಾಹೇಬರ ಬಿಟ್ಟರೆ ಇನ್ನೊಬ್ಬರಿಲ್ಲ.   ಆ ಕಾಲದಲ್ಲಿ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ #ಹಯವದನ ನಾಟಕ ಪ್ರದರ್ಶನದ ಪ್ರಾಯೋಜಕತ್ವ ಮಾಡುವ ದೈರ್ಯ ಮಾಡಿದ್ದು ಹಿರೇಹಾಳ ಇಬ್ರಾಹಿಂ ಸಾಹೇಬರು, ನಂತರ ಹಯವದನ ನಾಟಕ ಯಶಸ್ವಿಯಾಗಿ ನಡೆಯಿತು.   ಇಬ್ರಾಹಿಂ ಸಾಹೇಬರು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದರು, ರಾಜ್ಯ ಸರ್ಕ...

4104.ಭಾಗ_13_ಬೈರಪ್ಪರ_ಸಾಹಿತ್ಯದಲ್ಲಿ_ಘಟ್ಟಕ್ಕೆಕರಾವಳಿಗರ_ವಲಸೆ

ಭಾಗ_13_ಬೈರಪ್ಪರ_ಸಾಹಿತ್ಯದಲ್ಲಿ_ಘಟ್ಟಕ್ಕೆ ಕರಾವಳಿಗರ_ವಲಸೆ   ಕರಾವಳಿಯಿಂದ ಘಟ್ಟಕ್ಕೆ ಕೇವಲ ಶ್ರಮಜೀವಿಗಳು ಹಿಂದುಳಿದ ವರ್ಗಗಳ ಜನರು ಮಾತ್ರ ವಲಸೆ ಬಂದಿದ್ದಲ್ಲ ಅಲ್ಲಿಂದ ಮೇಲು ಜಾತಿಯ ಬ್ರಾಹ್ಮಣರೂ ವಲಸೆ ಬಂದಿದ್ದಾರೆ.   ಹೋಟೆಲ್, ವ್ಯಾಪಾರ ಮತ್ತು ಪುರೋಹಿತ್ಯಕ್ಕಾಗಿ ಬಂದವರು ಇಲ್ಲೇ ನೆಲೆಸಿದ್ದಾರೆ.     ನನ್ನ ಕರಾವಳಿ ವಲಸಿಗರ ಲೇಖನ ಓದದ ಅನೇಕರು ಅವರ ಕುಟುಂಬಗಳೂ ಕೂಡ ಕರಾವಳಿಯಿಂದ ವಲಸೆ ಬಂದ ಕುಟುಂಬವಾಗಿದೆ ಆದರೆ ಕೃಷಿ ಕೆಲಸಕ್ಕೆ ಬರಲಿಲ್ಲ ಹೋಟೆಲ್ ಕೆಲಸಕ್ಕೆ ಬಂದವರು ಅಂತ ಇನ್ನು ಕೆಲವರು ಪುರೋಹಿತ್ಯ ಮಾಡಲು  ಘಟ್ಟದ ದೇವಸ್ಥಾನಕ್ಕೆ ಬಂದವರು ಎಂದು ತಿಳಿಸಿದ್ದಾರೆ.   ಕರಾವಳಿ ಜನರ ಜಾಗತಿಕ ವಲಸೆಯ ಇತಿಹಾಸದಲ್ಲಿ #ಉಡುಪಿ_ಹೋಟೆಲ್ ಉದ್ಯಮಕ್ಕೆ ದೊಡ್ಡ ಹೆಸರಿದೆ.    #ಕುವೆಂಪು ಅವರ ಸಾಹಿತ್ಯವು ಮಲೆನಾಡಿನ ಹಿನ್ನೆಲೆಯಲ್ಲಿ ಕರಾವಳಿ ವಲಸೆಯನ್ನು ಚಿತ್ರಿಸಿದರೆ, ಕನ್ನಡದ ಮತ್ತೊಬ್ಬ ದಿಗ್ಗಜ ಕಾದಂಬರಿಕಾರರಾದ ಡಾ. #ಎಸ್_ಎಲ್_ಭೈರಪ್ಪ ಅವರ ಸಾಹಿತ್ಯದಲ್ಲಿ ಕರಾವಳಿ ಮತ್ತು ಅಲ್ಲಿನ ಜನರ ವಲಸೆಯ ಚಿತ್ರಣ ಸಂಪೂರ್ಣ ಭಿನ್ನವಾದ ತಾರ್ಕಿಕ, ತಾತ್ವಿಕ ಮತ್ತು ಸಾಮಾಜಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ.   ​ಭೈರಪ್ಪನವರ ಕಾದಂಬರಿಗಳಲ್ಲಿ ಕರಾವಳಿ ವಲಸಿಗರು ಕೇವಲ ದೈಹಿಕ ಶ್ರಮದ ಕೂಲಿಯಾಳುಗಳಾಗಿ ಬರುವುದಿಲ್ಲ ಬದಲಿಗೆ ಅವರು ಬುದ್ಧಿಜೀವಿಗಳಾಗಿ, ಭಟ್ಟರಾಗಿ, ಉದ್ಯಮಿಗಳಾಗಿ...

4103. ಇದು ನಾನು ಬರೆದ #ನಾಥಪಂಥದ_ಬಾರಾ_ಪಂಥ್_ಯಾತ್ರೆ ಪುಸ್ತಕದ್ದು, ಈ ಪುಸ್ತಕ ಮುದ್ರಣವಾಗಿ 2027 ರ ಶಿವರಾತ್ರಿಗೆ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಯೋಚನೆ.

ಲೇಖಕನ_ಮಾತು ...  ಇದು ನಾನು ಬರೆದ #ನಾಥಪಂಥದ_ಬಾರಾ_ಪಂಥ್_ಯಾತ್ರೆ ಪುಸ್ತಕದ್ದು, ಈ ಪುಸ್ತಕ ಮುದ್ರಣವಾಗಿ 2027 ರ ಶಿವರಾತ್ರಿಗೆ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಯೋಚನೆ.   ಈ ಪುಸ್ತಕ ನಾನು ಸಮರ್ಪಣೆ ಮಾಡಿದ #ಶ್ರೀ_ಫೀರ್_ಯೋಗಿ _ಸೋಮನಾಥ_ಜೀ ಜೊತೆ ನನ್ನ ಸತ್ಸಂಗದ ನೆನಪುಗಳು.    ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಗೋರಕ್ ಪುರದ ನಾಥಪಂತದ ಕೇಂದ್ರದ ಅಧ್ಯಕ್ಷರು.     ಅದರ ಒಂದು ಉಪಶಾಖಾ ಮಠವೇ ಶ್ರೀಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವರಿ ಮಠ, ಇದು ಕರ್ನಾಟಕದ ಕೊಡಚಾದ್ರಿ ಶೃಂಗ ಶ್ರೇಣಿಯ ಕರಾವಳಿ ಭಾಗದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ  ಕಮಲಶಿಲೆ ಸಮೀಪದ ಯಡಮೊಗೆ ಎಂಬ ಹಳ್ಳಿಯಲ್ಲಿದೆ.   ದೀರ್ಘ ಕಾಲ ಇಲ್ಲಿನ ಪೀಠದಲ್ಲಿದ್ದವರು ಶ್ರೀ ಫೀರ್ ಯೋಗಿ ಸೋಮನಾಥ  ಬಾವೋಜಿ .   ಶ್ರೀ ಪೀರ್ ಯೋಗಿ ಸೋಮನಾಥ ಜೀ ಮೂಲ ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರ್ ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥ ಮಠದಲ್ಲಿ ಮಠಾದೀಶರಾಗಿದ್ದರು.   ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಉತ್ತರ ಪ್ರದೇಶದ ಗೋರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ.     ಪ್ರತಿ 12 ವಷ೯ಕ್ಕೆ ಒಮ್...

4102.ಪರಿಸರ_ಸೂಕ್ಷ್ಮ_ಪ್ರದೇಶ_ಘೋಷಣೆESA_Ecologically_Sensitive_Areaಏಳನೆ_ಕರಡು_ಅಧಿಸೂಚನೆ_ಯಾಕೆ?..

ಪರಿಸರ_ಸೂಕ್ಷ್ಮ_ಪ್ರದೇಶ_ಘೋಷಣೆ ESA_Ecologically_Sensitive_Area ಏಳನೆ_ಕರಡು_ಅಧಿಸೂಚನೆ_ಯಾಕೆ?...   ​ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ಈ ಹಿಂದಿನ ಕರಡು ಅಧಿಸೂಚನೆಯ ಅವಧಿ ಮುಗಿದಿದ್ದರಿಂದ 7ನೇ ಕರಡು ಅಧಿಸೂಚನೆಯನ್ನು ಮರುಹೊರಡಿಸಿದೆ.    ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಯು ತಕ್ಷಣಕ್ಕೆ ಪ್ರಸ್ತುತ ಇರುವ ರೂಪದಲ್ಲೇ ಜಾರಿಗೆ ಬರುವ ಸಾಧ್ಯತೆ ತೀರ ಕಡಿಮೆ.   ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಯ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಈ ಕೆಳಗಿನ ಪ್ರಮುಖ ಅಂಶಗಳ ಮೂಲಕ ಅರ್ಥಮಾಡಿಕೊಳ್ಳಬಹುದು.  ಈ ಕರಡಿನ ಕುರಿತು ಸಾರ್ವಜನಿಕರು ಹಾಗೂ ರಾಜ್ಯ ಸರ್ಕಾರಗಳು ತಮ್ಮ ಆಕ್ಷೇಪಣೆಗಳು/ಸಲಹೆಗಳನ್ನು ಸಲ್ಲಿಸಲು ಸಮಯ ನೀಡಲಾಗಿದೆ.    ​  ಪ್ರಸ್ತುತ ಹೊರಡಿಸಿರುವ ಹೊಸ ಕರಡಿನಲ್ಲೂ ಕರ್ನಾಟಕದ 20,668 ಚ.ಕಿ.ಮೀ ಸೇರಿದಂತೆ ಒಟ್ಟು 56,825.7 ಚ.ಕಿ.ಮೀ ಪ್ರದೇಶವನ್ನೇ ESA ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಲಾಗಿದೆ.    ​  ಕರ್ನಾಟಕ ಸರ್ಕಾರ ಮತ್ತು ಮಲೆನಾಡು ಭಾಗದ ಜನಪ್ರತಿನಿಧಿಗಳು ಈ ವರದಿಯನ್ನು ಪ್ರಸ್ತುತ ರೂಪದಲ್ಲಿ ಜಾರಿಗೆ ತರುವುದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.   ​ಉಪಗ್ರಹ ಚಿತ್ರಣದ ಆಧಾರದ ಮೇಲೆ ಹಳ್ಳಿಗಳನ್ನು ಗುರ್...