ಭಾಗ_2_ಜೈನ_ನಿಶಿದಿಗಳನ್ನು_ಸಿದ್ದಪ್ಪನ_ದೇವಾಲಯಗಳನ್ನಾಗಿ_ಮಾಡುವುದಕ್ಕೆ_ಆಗಮ_ಶಾಸ್ತ್ರದಲ್ಲಿ_ಒಪ್ಪಿಗೆ_ಇದೆಯೇ?... ಶಾಸ್ತ್ರಗಳು ಏನು ಹೇಳುತ್ತವೆ?... ನಿಮ್ಮೂರ ಹಳೆಯ ದೇವಸ್ಥಾನದ ಕಂಬಗಳನ್ನು ನೋಡಿದ್ದೀರಾ . ಇತಿಹಾಸ ವರ್ಸಸ್ ಆಗಮ ಶಾಸ್ತ್ರ 'ಪರಧರ್ಮ ಕ್ಷೇತ್ರ ಪರಿವರ್ತನೆ' ಮಹಾದೋಷ ಎನ್ನುತ್ತದೆ ವಾಸ್ತುಶಾಸ್ತ್ರ!. ಸಿದ್ದಪ್ಪನ ಗುಡಿಗಳ ಹಿಂದಿನ ಶಾಸ್ತ್ರೀಯ ಸತ್ಯ ಏನು?, ಮತಾಂತರಗೊಂಡ ಸ್ಮಾರಕಗಳ ಬಗ್ಗೆ ಧರ್ಮಶಾಸ್ತ್ರದ ನಿಲುವೇನು? ... ಕಳೆದ ಲೇಖನದಲ್ಲಿ ನಾವು ಜೈನ ಧರ್ಮದ "ನಿಶಿದಿ ಮಂಟಪಗಳು" ಸಲ್ಲೇಖನ ಸ್ಮಾರಕಗಳು ಕಾಲಾಂತರದಲ್ಲಿ ಹೇಗೆ ಸಿದ್ದಪ್ಪನ ಗುಡಿಗಳಾಗಿ ಬದಲಾದವು ಎಂಬ ಇತಿಹಾಸವನ್ನು ತಿಳಿದುಕೊಂಡಿದ್ದೆವು. ಆದರೆ ಇಲ್ಲಿ ಕಾಡುವ ಒಂದು ದೊಡ್ಡ ಪ್ರಶ್ನೆ ಎಂದರೆ ಹೀಗೆ ಒಂದು ಧರ್ಮದ ಪವಿತ್ರ ಸ್ಮಾರಕವನ್ನು ಮತ್ತೊಂದು ಧರ್ಮದ ಆರಾಧನಾ ಕೇಂದ್ರವನ್ನಾಗಿ ಮಾಡಲು ಹಿಂದೂ ಧರ್ಮಶಾಸ್ತ್ರ ಮತ್ತು ಆಗಮ ಶಾಸ್ತ್ರಗಳಲ್ಲಿ ಒಪ್ಪಿಗೆ ಇದೆಯೇ?.. ಇದಕ್ಕೆ ನೇರವಾದ ಉತ್ತರ ಖಂಡಿತವಾಗಿಯೂ ಇಲ್ಲ!, ಹಿಂದೂ ಧರ್ಮದ ಪ್ರಮುಖ ವಾಸ್ತು ಗ್ರಂಥಗಳಾದ ಮಯಮತ, ಮಾನಸಾರ ಹಾಗೂ ಶೈವ-ವೈಷ್ಣವ ಆಗಮ ಶಾಸ್ತ್ರಗಳು ಇಂತಹ ಪರಿವರ್ತನೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ. ಶಾಸ್ತ್ರಗಳ ಪ್ರಕಾರ ಇದು ಏಕೆ ತಪ್ಪು ಎಂಬುದಕ್ಕೆ ಮೂರು ಪ್ರಮುಖ ಕಾರಣಗಳು ಇಲ್ಲಿವೆ. ನಿಶಿದಿ ...