Skip to main content

Posts

Showing posts from 2026

4037. ಭಾಗ -1 ಘಟ್ಟಕ್ಕೆ ವಲಸೆ ಬಂದ ಕರಾವಳಿ ಜನ

ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ... #ಭಾಗ_1. #ಯಾಕೆ_ಈ_ರೀತಿ_ವಲಸೆ_ಬಂದರು?....   ಎಷ್ಟನೇ ಇಸವಿಯಿಂದ ಇದು ಪ್ರಾರಂಭವಾಯಿತು?...   ಆ ಕಾಲದ ಪ್ರಯಾಣ ಹೇಗಿತ್ತು?...  ವಲಸೆ ಬಂದವರ ಜೀವನ ಶೈಲಿ?...      ಗೆಳೆಯರಾದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಕರಾವಳಿ ಭಾಗದ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ಈ ಲೇಖನ ಬರೆಯಲು ಪ್ರೇರಣೆ ಆಯಿತು, ಈ  ಲೇಖನ ದೀರ್ಘವಾಗಿರುವುದರಿಂದ ಕೆಲವು ಭಾಗಗಳಲ್ಲಿ ಪ್ರಕಟಿಸುತ್ತೇನೆ. ಕರಾವಳಿ ಜನರ ವಲಸೆಯು ಪ್ರಮುಖವಾಗಿ ಹವಾಮಾನ ವೈಪರೀತ್ಯಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ನಗರೀಕರಣದಿಂದ ಉಂಟಾಗುತ್ತಿತ್ತು.  ಸಾವಿರಾರು ಜನ ಈಗ ಘಟ್ಟ ವಾಸಿಗಳಾಗಿದ್ದಾರೆ ಅವರಿಗೆ ಅವರ ಕುಟುಂಬಗಳು ವಲಸೆ ಬಂದ ಕಥೆ ಮರೆತು ಹೋಗಿರಬಹುದು. #ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ಎಂಬುದು ಕರ್ನಾಟಕದ ಸಾಮಾಜಿಕ ಮತ್ತು ಅರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅದ್ಯಾಯವಾಗಿದೆ.   ಈ ಕರಾವಳಿ ಜನರ ವಲಸೆ ಬಗ್ಗೆ ಶಿವರಾಮ ಕಾರಂತರು ತಮ್ಮ ಕಾದಂಬರಿಯಲ್ಲಿ ದಾಖಲಿಸಿದ್ದಾರೆ ಅದು ಸಿನಿಮಾ ಕೂಡ ಆಗಿ ಪ್ರಸಿದ್ಧಿ ಪಡೆದಿತ್ತು.    ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ #ಚೋಮನದುಡಿಯಲ್ಲಿ ಕರಾವಳಿ ಭಾಗದ ವಲಸೆಯ ಚಿತ್ರಣವು ಕೇವಲ ಭೌಗೋಳಿಕ ಸ್ಥಳಾಂತರವಾಗಿರದೆ ಅದು ಅಂದಿನ ಕಾಲದ ಸಾಮಾಜಿಕ, ಆರ್ಥಿಕ ಮತ...

4036. ಶಿವಮೊಗ್ಗ ಬೆಂಗಳೂರು ವಿಮಾನಗಳು ರದ್ದು ಯಾಕೆ?

ಶಿವಮೊಗ್ಗ_ಬೆಂಗಳೂರು_ವಿಮಾನ_ಸಂಚಾರ_ರದ್ದು_ಏಕೆ?...  ಶಿವಮೊಗ್ಗ ಬೆಂಗಳೂರು ವಿಮಾನ ಮಾರ್ಗದಲ್ಲಿ ಪ್ರಯಣಿಕರ ಸಂಖ್ಯೆ ಉತ್ತಮವಾಗೇ ಇತ್ತು ಸುಮಾರು ಶೇಕಡಾ 80% ಸೀಟುಗಳು ಭರ್ತಿ ಆಗುತ್ತಿತ್ತು ಆದರೂ ವಿಮಾನಗಳ ಸಂಚಾರ ಸ್ಥಗಿತಗೊಳಿಸಲು ಕಾರಣ ಏನು?...  ತಿಂಗಳಿಗೆ ಸರಾಸರಿ 10 ರಿಂದ 13 ಸಾವಿರ ಜನ ವಿಮಾನದಲ್ಲಿ ಈ ಮಾರ್ಗದಲ್ಲಿ ಸಂಚರಿಸಿದರೂ ವಿಮಾನ ಸಂಚಾರ ನಿಲ್ಲಿಸಿದ್ದು ಏಕೆ?...   ಶಿವಮೊಗ್ಗ ಬೆಂಗಳೂರಿಗೆ #ಉಡಾನ್ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ ಏಕೆ?..   ಶಿವಮೊಗ್ಗದಲ್ಲಿ ಪ್ರಧಾನ ಮಂತ್ರಿ ಮೋದೀಜಿ ಅವರಿಂದ ಉದ್ಘಾಟನೆಗೊಂಡ #ಕುವೆಂಪು_ ವಿಮಾನ ನಿಲ್ದಾಣದಲ್ಲಿ ಸಾಲು ಸಾಲಾಗಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸುತ್ತಿರುವ ವಿಮಾನ ಸಂಸ್ಥೆಗಳ ನಿರ್ಧಾರದಿಂದ ಮೇಲಿನ ಈ ರೀತಿಯ ಪ್ರಶ್ನೆಗಳು ಏಳುತ್ತಿದೆ.   ಪ್ರಸ್ತುತ #ಶಿವಮೊಗ್ಗದಿಂದ_ಬೆಂಗಳೂರಿಗೆ_ಯಾವುದೇ_ನೇರ_ವಿಮಾನ_ಸೌಲಭ್ಯ_ಲಭ್ಯವಿಲ್ಲ.  ​ಈ ಹಿಂದೆ ಇಂಡಿಗೋ (IndiGo) ಸಂಸ್ಥೆಯು ಶಿವಮೊಗ್ಗ - ಬೆಂಗಳೂರು ನಡುವೆ ನೇರ ವಿಮಾನ ಸೇವೆ ನಡೆಸುತ್ತಿತ್ತಾದರೂ, ಕಾರ್ಯಾಚರಣೆಯ ಕಾರಣಗಳಿಂದಾಗಿ ಅದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.   ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವು ಆಗಸ್ಟ್ 31, 2023 ರಂದು ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.   ಭಾರತೀಯ ವಿಮಾನಯಾನ ಪ್ರಾಧಿಕಾರ (AAI) ಮತ್ತು ನಾಗರಿಕ ವಿಮಾನಯ...

4035. ದೇವನೂರು ಮಹಾದೇವ 78

ದ್ಯಾವನೂರು_ಮಹಾದೇವ_78.  ದೇವನೂರು ಮಹಾದೇವ ಅವರು 1948ರ ಜೂನ್ 10 ರಂದು ಜನಿಸಿದರು ಆ ಲೆಕ್ಕಾಚಾರದಲ್ಲಿ ಇಂದು ಜೂನ್ 10 ಅವರ 78ನೇ ಹುಟ್ಟುಹಬ್ಬ.  ದೇವನೂರು' ಮತ್ತು 'ದ್ಯಾವನೂರು' ಎರಡೂ ಸರಿಯೇ, ಆದರೆ ಅವುಗಳನ್ನು ಬಳಸುವ ಸಂದರ್ಭಗಳು ಬೇರೆ ಬೇರೆ.   ದೇವನೂರು' ಎಂಬ ಊರಿನ ಹೆಸರನ್ನೇ ಆ ಭಾಗದ ಗ್ರಾಮೀಣ ಜನ ಆಡುಭಾಷೆಯಲ್ಲಿ ಜನಪದ ಶೈಲಿಯಲ್ಲಿ 'ದ್ಯಾವನೂರು' ಎಂದು ಕರೆಯುತ್ತಾರೆ.   #ದ್ಯಾವನೂರು' ಎಂಬುದು ದೇವನೂರು ಮಹಾದೇವ ಅವರು 1973 ರಲ್ಲಿ ಪ್ರಕಟಿಸಿದ ತಮ್ಮ ಮೊದಲ ಸಣ್ಣಕಥೆಗಳ ಸಂಕಲನದ ಹೆಸರು.    ಇವರ ಎದೆಗೆ ಬಿದ್ದ ಅಕ್ಷರ ಪುಸ್ತಕ ನನ್ನ ಜೊತೆ ಇದೆ, ಪುಸ್ತಕ ಅರ್ಧ ಓದಿದ್ದೇನೆ,ನಿದಾನವಾಗಿ ಓದುವುದು ನನ್ನ ಅಭ್ಯಾಸ  ದೇವನೂರು ಮಹಾದೇವ ಅವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಪ್ರಭಾವಶಾಲಿ ಮತ್ತು ವಿಶಿಷ್ಟ ಲೇಖಕರಲ್ಲಿ ಒಬ್ಬರು.    ತಮ್ಮ ಸಾಮಾಜಿಕ ಬದ್ಧತೆ, ದಲಿತ ಚಳವಳಿಯ ನೇತೃತ್ವ ಮತ್ತು ಅನನ್ಯ ಬರವಣಿಗೆಯ ಶೈಲಿಯಿಂದ ಅವರು ಪ್ರಸಿದ್ಧರಾಗಿದ್ದಾರೆ.   ​ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇದೇ ಹಳ್ಳಿಯ ಹೆಸರೇ ಅವರ ಹೆಸರಿನ ಮುಂದಿದೆ. ನಾನು ಈವರೆಗೆ ಅವರ ಮುಖತಃ ಬೇಟಿ ಆಗಲು ಆಗಲೇ ಇಲ್ಲ ಆದರೆ ಅವರ ಜೊತೆ ಫೋನ್ ಸಂಬಾಷಣೆ ಮಾಡುವ ಅವಕಾಶ ಮೈಸೂರಿನ ಮಿತ್ರ ಕರುಣಾಕರ್ ಮಾಡಿಕೊಟ್ಟಿದ್ದರು.   ಇವತ್ತು ...

4034. DSS ಬಿ.ಕೃಷ್ಣಪ್ಪರ 88 ನೇ ಹುಟ್ಟುಹಬ್ಬ

ಬಿ_ಕೃಷ್ಣಪ್ಪ_ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕರು.     9- ಜೂನ್ 1938 ಪ್ರೋಪೆಸರ್ ಬಸಪ್ಪ ಕೃಷ್ಣಪ್ಪರ ಜನ್ಮದಿನ ಇವತ್ತು ಅವರ 88ನೇ ಹುಟ್ಟು ಹಬ್ಬ.   ಇವರು ಭದ್ರಾವತಿಯ ಸಿಲ್ವರ್ ಜುಬಿಲಿ ಕಾಲೇಜಿನಲ್ಲಿ (ಈಗಿನ ಸರ್ ಎಂ.ವಿ. ಕಲೆ ಮತ್ತು ವಾಣಿಜ್ಯ ಕಾಲೇಜು) ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ​  ಕರ್ನಾಟಕದಲ್ಲಿ ನಡೆದ #ಬೂಸಾ ಚಳವಳಿಯ ನಂತರ ದಲಿತರಲ್ಲಿ ಜಾಗೃತಿ ಉಂಟಾಯಿತು.    ಈ ಹಿನ್ನೆಲೆಯಲ್ಲಿ 1974ರಲ್ಲಿ ಬಿ. ಕೃಷ್ಣಪ್ಪ, #ದೇವನೂರುಮಹಾದೇವ, #ಸಿದ್ದಲಿಂಗಯ್ಯ ಮುಂತಾದ ಪ್ರಮುಖ ಪ್ರಗತಿಪರ ಚಿಂತಕರೊಂದಿಗೆ ಸೇರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಯನ್ನು ಸ್ಥಾಪಿಸಿದರು.   ​ಕೃಷ್ಣಪ್ಪನವರು ಈ ಸಂಘಟನೆಯ ರಾಜ್ಯ ಸಂಚಾಲಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿದರು.   ಇವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ಮಾರ್ಕ್ಸ್‌ವಾದಿ ತತ್ವಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು.    ಜಾತಿ ಪದ್ಧತಿಯ ನಿರ್ಮೂಲನೆ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ, ಭೂ ರಹಿತ ದಲಿತರಿಗೆ ಭೂಮಿ ಕೊಡಿಸುವುದು ಮತ್ತು ಶಿಕ್ಷಣದ ಹಕ್ಕುಗಳಿಗಾಗಿ ರಾಜ್ಯಾದ್ಯಂತ ಹಗಲಿರುಳು ಶ್ರಮಿಸಿದರು.   ​ಇವರ ಹೋರಾಟ ಅದು ಕೇವಲ ನಗರ ಕೇಂದ್ರಿತವಾಗಿರದೆ, ಕರ್ನಾಟಕದ ಹಳ್ಳಿ ಹಳ್ಳಿಗಳಿಗೂ ತಲುಪಿ ಶೋಷ...

4033.ನೇರಳೆ ಹಣ್ಣಿನಿಂದ ಜಂಬೂದ್ವೀಪ ಆಯಿತಾ? ...

ನೇರಳೇ_ಹಣ್ಣಿನಿಂದ_ಜಂಬೂದ್ವೀಪ_ಎಂಬ_ಭಾರತ_ದೇಶದ_ಮೂಲ_ಹೆಸರು.   ನಾವು ವಾಸಿಸುತ್ತಿರುವ ಈ ಪವಿತ್ರ ಭೂಮಿಗೆ ಅತ್ಯಂತ ಪ್ರಾಚೀನ ಕಾಲದಲ್ಲಿ ಹೆಸರು ತಂದುಕೊಟ್ಟಿದ್ದು ಇದೇ ನೇರಳೆ ಹಣ್ಣಿನ ಮರಗಳು.   ಇದು ಪ್ರಕೃತಿ ಮತ್ತು ಪರಿಸರಕ್ಕೆ ನಮ್ಮ ಪೂರ್ವಜರು ನೀಡುತ್ತಿದ್ದ ಮಹತ್ವಕ್ಕೆ ಈ ಹೆಸರೇ ಅತಿ ದೊಡ್ಡ ಸಾಕ್ಷಿ. ಪ್ರಾಚೀನ ಭಾರತೀಯ ಇತಿಹಾಸ, ಪುರಾಣ ಮತ್ತು ಭೂಗೋಳ ಶಾಸ್ತ್ರದಲ್ಲಿ ಭಾರತ ಉಪಖಂಡವನ್ನು 'ಜಂಬೂದ್ವೀಪ' ಎಂದು ಕರೆಯಲು ಮುಖ್ಯ ಕಾರಣ ನೇರಳೆ ಮರಗಳು.    ​ಸಂಸ್ಕೃತದಲ್ಲಿ #ಜಂಬೂ ಎಂದರೆ ನೇರಳೆ ಹಣ್ಣು ಮತ್ತು #ದ್ವೀಪ ಎಂದರೆ ನೀರು ಅಥವಾ ಸಮುದ್ರದಿಂದ ಆವೃತವಾದ ಭೂಭಾಗ ಎಂದರ್ಥ.    ಈ ಹೆಸರು ಬರಲು ಪ್ರಮುಖ ಕಾರಣಗಳು ​ಪ್ರಾಚೀನ ಕಾಲದಲ್ಲಿ ಈ ಭೂಪ್ರದೇಶದಲ್ಲಿ ನೇರಳೆ ಮರಗಳು ಅತ್ಯಂತ ವ್ಯಾಪಕವಾಗಿ ಮತ್ತು ದಟ್ಟವಾಗಿ ಬೆಳೆಯುತ್ತಿದ್ದವು.   ಇಲ್ಲಿನ ಪರಿಸರ, ಮಣ್ಣು ಮತ್ತು ಹವಾಮಾನವು ನೇರಳೆ ಮರಗಳ ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿತ್ತು.     ಒಂದು ಪ್ರದೇಶದ ಪ್ರಮುಖ ನೈಸರ್ಗಿಕ ವೈಶಿಷ್ಟ್ಯವನ್ನು ಆಧರಿಸಿ ಹೆಸರು ಇಡುವ ಪದ್ಧತಿಯಂತೆ ಈ ಭೂಭಾಗಕ್ಕೆ 'ಜಂಬೂದ್ವೀಪ' (ನೇರಳೆ ಮರಗಳ ಭೂಮಿ) ಎಂಬ ಹೆಸರು ಬಂದಿತು. ​  ವಿಷ್ಣು ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ​ಹಿಂದೂ ಪುರಾಣಗಳ ಪ್ರಕಾರ ಜಂಬೂದ್ವೀಪದ ಮಧ್ಯಭಾಗದಲ್ಲಿ ಇಂದಿನ ಹಿಮಾಲಯ ಅಥವಾ ಮೇರು ಪರ್ವತದ ಪ್ರ...

4032. ಇಡ್ಲಿ ದೋಸಾ ಬ್ಯಾಟರ್ ಉದ್ಯಮದ ಯಶಸ್ಸಿನ ಕಥೆ.

ದಿಡೀರ್_ಇಡ್ಲಿ_ದೋಸೆ_ಹಿಟ್ಟು_ಎಷ್ಟು_ಸಲೀಸು?... #Idli_Dosa_Batter ನಿಮಗೆ ನಿಮ್ಮ ಮನೆಯಲ್ಲಿ ತಯಾರಿಸಿದ ಇಡ್ಲಿ- ದೋಸೆ ಬ್ಯಾಟರ್ ಇಷ್ಟನಾ? ಅಥವ ಈ ರೆಡಿಮೇಡ್ ಇಡ್ಲಿ- ದೋಸೆ ಬ್ಯಾಟರ್ ಇಷ್ಟನಾ? ತಿಳಿಸಿ ...  ಬೆಂಗಳೂರಿಗೆ ಬಂದು ನೋಡಿ ....ಮಹಾನಗರಗಳಲ್ಲಿ ಇಡ್ಲಿ- ದೋಸೆ ಎಲ್ಲಾ ಇಲ್ಲಿ ಕಷ್ಟವಿಲ್ಲ ಈಗ.   ನಾವು ಮನೆಗಳಲ್ಲಿ ಇಡ್ಲಿ ದೋಸೆ ಮಾಡಲು ಹಿಂದಿನ ದಿನವೇ ಕೆಲವು ಗಂಟೆ ಕಾಲ ಅಕ್ಕಿ - ಉದ್ದಿನ ಬೇಳೆ ನೆನೆಸಿ ನಂತರ ರುಬ್ಬಿ ಅದು ಹುದುಗಿ ಬರಲು ಮುಚ್ಚಿ ಇಟ್ಟು ಮರು ದಿನ ಇಡ್ಲಿ- ದೋಸೆ ಮಾಡಬೇಕು ಇದು ಹೆಚ್ಚು ಶ್ರಮ ಮತ್ತು ಹೆಚ್ಚು ಸಮಯ ಕೇಳುವ ಕೆಲಸ.    ಆದರೆ ಈಗ ದೊಡ್ಡ ದೊಡ್ಡ ನಗರಗಳಲ್ಲಿ ಪ್ರಸಿದ್ಧ ಸಂಸ್ಥೆಗಳು ಆರೋಗ್ಯಕರವಾಗಿ ತಮ್ಮ ಆಹಾರ ಉದ್ಯಮದಲ್ಲಿ ಇಡ್ಲಿ- ದೋಸೆ ಹಿಟ್ಟು  ತಯಾರಿಸಿ ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದೆ.   ಇದರಿಂದ ಮಹಾನಗರಗಳಲ್ಲಿ ಬೇಕೆಂದಾಗಲೆಲ್ಲ ಈ ದಿಡೀರ್ ಇಡ್ಲಿ/ದೋಸೆ ಹಿಟ್ಟು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಕೆಲವೇ ನಿಮಿಷದಲ್ಲಿ ಮನೆಗೆ ತಲುಪುತ್ತದೆ ತಕ್ಷಣ ದೋಸೆ / ಇಡ್ಲಿ ತಯಾರಿಸಿ ತಿನ್ನ ಬಹುದು.    ನಿತ್ಯ ಬೆಳಿಗ್ಗೆ ಹಾಲು ತರಕಾರಿ ಮಾರಾಟ ಮಾಡುವ ಬೀದಿ ವ್ಯಾಪಾರಸ್ಥರೂ ಈ ದಿಡೀರ್ ಇಡ್ಲಿ /ದೋಸೆ ಹಿಟ್ಟು ಮಾರಾಟ ಮಾಡುತ್ತಾರೆ ಇದರಿಂದ ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ತಮ್ಮ ಮನೆಯಲ್ಲಿ ಇಡ್ಲಿ/ದೋಸೆ ತಯಾರಿ ಈಗ ಸುಲಭವಾಗಿದೆ. ...

4031. ಧಾರ್ಮಿಕ ಪ್ರವಾಸೋದ್ಯಮದ ಸರ್ಕ್ಯೂಟ್ ಮಾಡಬಹುದು

ಸರ್ಕಾರ_ಈ_ಧಾರ್ಮಿಕ_ಯಾತ್ರೆಯ #ಪ್ರವಾಸೋದ್ಯಮದ_ಸರ್ಕ್ಯೂಟ್_ಮಾಡಬಹುದಾ? ..  ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಈ ಮೂರು ಆಂಜನೇಯರ ಶಕ್ತಿ ಪೀಠಗಳ ದರ್ಶನ ಯಾತ್ರೆ ಅಧಿಕಮಾಸದಲ್ಲಿ ನಡೆಯುತ್ತದೆ ಗೊತ್ತಾ? ....   #ಹಾವೇರಿ_ಜಿಲ್ಲೆಯ #ಹಿರೇಕೆರೂರು ತಾಲೂಕಿನ #ಸಾತೇನಹಳ್ಳಿಯ_ಶಾಂತೇಶ, ಹಾವೇರಿ ಜಿಲ್ಲೆಯ #ಬ್ಯಾಡಗಿ ತಾಲ್ಲೂಕಿನ #ಕದರಮುಂಡಲಗಿಯ_ಕಾಂತೇಶ ಹಾಗೂ #ಶಿವಮೊಗ್ಗಜಿಲ್ಲೆಯ #ಶಿಕಾರಿಪುರದ_ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ದರ್ಶನ ಪಡೆದರೆ #ಕಾಶಿಯಾತ್ರೆಯಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ.   ಈ ವರ್ಷ ಇಲ್ಲಿಗೆ ಆಗಮಿಸಿದ ಭಕ್ತರ ಸಂಖ್ಯೆ ಹಿಂದಿನ ಎಲ್ಲಾ ದಾಖಲೆಗಳನ್ನ ಮುರಿದಿದೆ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಹೆಚ್ಚಾಗಲಿದೆ ಆದ್ದರಿಂದ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸುಲಭ ದೇವರ ದರ್ಶನದ ವ್ಯವಸ್ಥೆಗೆ ಮುಂದಾಗಬೇಕು.   ಹಿಂದೂ ಪಂಚಾಂಗದಲ್ಲಿ ಅಧಿಕ ಮಾಸ ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರಕ್ಕೆ ಕೊನೆಗೊಳ್ಳುತ್ತದೆ.   ಈ ವರ್ಷದ ಈ ಯಾತ್ರೆ ಮಾಡುವವರಿಗೆ ಮುಂದಿನ ಶನಿವಾರ ದಿನಾಂಕ 13 - ಜೂನ್ -2026 ಈ ಸಾಲಿನ ಅಧಿಕ ಮಾಸದ ಕೊನೆಯ ಪವಿತ್ರ ಶನಿವಾರ ಆಗಿದೆ ಇದು ಸಾಧ್ಯವಾಗದಿದ್ದರೆ #ಮುಂದಿನ_ಅಧಿಕ_ಮಾಸಕ್ಕೆ_ಮೂರು_ವರ್ಷ_ಕಾಯಬೇಕು. ...

4030.ರಾಹುಲ್ ಗಾಂಧಿ ಕುರ್ತಾ ಪೈಜಾಮನಿಂದ ಟೀ ಶರ್ಟ್ ಪ್ಯಾಂಟಿಗೆ ಬದಲಾಗಲು ಕಾರಣ

ರಾಹುಲ್_ಗಾಂಧಿ_ಯಾಕೆ_ಯಾವಾಗಲೂ_ಬಿಳಿ_ಟೀಶರ್ಟ್_ಧರಿಸುತ್ತಾರೆ?...   ಭಾರತೀಯ ರಾಜಕಾರಣಿಗಳ ಡ್ರೆಸ್ ಕೋಡ್ ಬದಲಾಗುವ ಸೂಚನೆಯಾ?...    ರಾಜಕಾರಣಿಗಳ ಡ್ರೆಸ್ ಕುರ್ತಾ ಪೈಜಾಮ ಅವರು ಧರಿಸುವುದಿಲ್ಲ ಏಕೆ?...   ವಿಸುಯಲ್ ಬ್ರಾಂಡಿಂಗ್?.. ಡಿಸಿಷನ್ ಪ್ಯಾಟಿಗೊ?... ಕಾರಣವಾ? ...   ಸಾಮಾನ್ಯವಾಗಿ ಭಾರತೀಯ ರಾಜಕಾರಣಿಗಳ ವೇಷ ಭೂಷಣಗಳು ಖಾದಿಯ ಕುರ್ತಾ ಪೈಜಾಮಗಳು ಆದರೆ ರಾಹುಲ್ ಗಾಂಧಿ ಭಾರತ್- ಜೋಡೋ ಯಾತ್ರೆಯಿಂದ ಬಿಳಿ ಟೀ -ಶರ್ಟ್ ಮತ್ತು ತಿಳಿಬೂದು, ಕಾಕಿ ಅಥವ ಕಪ್ಪು ಫ್ಯಾಂಟ್ ಗೆ ಬದಲಾಗಿದ್ದು ಯಾಕೆ?...   ಇಂತಹ ಪ್ರಶ್ನೆಗಳು ಭಾರತೀಯರಲ್ಲಿ ಮೂಡಿರುವುದು ಸಹಜ ಆದರೆ ಈ ಪ್ರಶ್ನೆಗಳಿಗೆ ನೇರ ಉತ್ತರ ಅವರಿಂದ ಇಲ್ಲವಾದರೂ ಇದಕ್ಕೆ ಕಾರಣ ಏನು ಎನ್ನುವುದಕ್ಕೆ ಉತ್ತರ ಇಲ್ಲಿದೆ ಓದಿ.   ರಾಹುಲ್ ಗಾಂಧಿ ಅವರು ಪ್ರಚಾರದ ಸಮಯದಲ್ಲಿ ವಿಶೇಷವಾಗಿ ತಮ್ಮ ಸುದೀರ್ಘ ಪಾದಯಾತ್ರೆಗಳ ದಿನಗಳಿಂದಲೂ ಒಂದೇ ಬಣ್ಣದ ಬಿಳಿ ಟಿ-ಶರ್ಟ್ ಮತ್ತು ತಿಳಿ ಬೂದು/ಬಿಳಿ ಪ್ಯಾಂಟ್  ಧರಿಸುವುದರ ಹಿಂದೆ ಕೆಲವು ಪ್ರಮುಖ ರಾಜಕೀಯ, ವೈಯಕ್ತಿಕ ಮತ್ತು ಕಾರ್ಯತಂತ್ರದ ಕಾರಣಗಳಿವೆ ಅವುಗಳ ವಿವರ ಇಲ್ಲಿದೆ. ​  ರಾಜಕೀಯ ಸಂದೇಶ ಮತ್ತು ಸರಳತೆಯ ಸಂಕೇತ ಏನೆಂದರೆ... ​ಸಾಮಾನ್ಯ ಜನರೊಂದಿಗೆ ಬೆರೆಯಲು ದುಬಾರಿ ರಾಜಕೀಯ ಉಡುಪುಗಳು ಅಥವಾ ಜರಿ ಕುರ್ತಾಗಳ ಬದಲಿಗೆ ಕೇವಲ ಒಂದು ಸಾಧಾರಣ ಬಿಳಿ ಟಿ-ಶರ್ಟ್ ಧರಿಸುವುದರಿಂದ...

4029. ಕೆಳದಿ ಮತ್ತು ಗೇರುಸೊಪ್ಪೆ ಸಂಸ್ಥಾನ

ಪ್ರಸನ್ನ_ಸಂತೆಕಡೂರು. #ವಿಜ್ಞಾನಿ_ಸಾಹಿತಿ_ಕನ್ನಡಿಗ.  ಗಜಾನನ ಶರ್ಮರು ಬರೆದ ಚೆನ್ನಬೈರಾದೇವಿ ಕಾದಂಬರಿ ಓದಿದ್ದೀರಾ? .... ಈ ರಾಣಿ ಬಗ್ಗೆ ಅವಳ ಜೀವನದ ಬಗ್ಗೆ ಕನ್ನಡಿಗರಿಗೆ ತಿಳಿದದ್ದು ತೀರಾ ಕಡಿಮೆಯೇ. ಈ ಕಾದಂಬರಿಯ ಮೂಲಕ  ರಾಣಿ ಚೆನ್ನಭೈರಾದೇವಿಯ ಹುಟ್ಟು, ಹೋರಾಟ, ಸಲ್ಲೇಖನ ಎಲ್ಲದರ ಬಗ್ಗೆಯೂ ತಿಳಿಯುತ್ತದೆ.   ಚೆನ್ನಭೈರಾದೇವಿ ಸಲ್ಲೇಖನ ಕೈಗೊಂಡು ದೇಹ ತ್ಯಾಗ ಮಾಡಿದ ಮೇಲೂ ಇಕ್ಕೇರಿ ಸಮೀಪದ ಹಿಂದೆ ಅದೇ ಚೆನ್ನಭೈರಾದೇವಿಗೆ ಸೇರಿದ #ಆವಿನಹಳ್ಳಿಯಲ್ಲಿಯೇ ಅಂತ್ಯ ಸಂಸ್ಕಾರ ಮಾಡಿಸಿ ಆ ಸಮಾಧಿಯ ಮೇಲೆ #ನಿಶಿಧಿ_ಮಂಟಪವನ್ನು ಸ್ಥಾಪಿಸುತ್ತಾನೆ.   ಚೆನ್ನಬೈರಾದೇವಿ ಕಾದಂಬರಿ ವಿಮರ್ಶೆಯಲ್ಲಿ ಡಾ. ಪ್ರಸನ್ನ  ಸಂತೆಕಡೂರು ನಮ್ಮ ಸೀಮೆಯ ಎರೆಡು ರಾಜಮನೆತನಗಳಾದ #ಕೆಳದಿ ಮತ್ತು #ಗೇರುಸೊಪ್ಪೆ ಇತಿಹಾಸದ ಬಗ್ಗೆ ಇವರಿಗೆ ಇರುವ ಅಪಾರವಾದ  ಜ್ಞಾನ ತಿಳಿದು ಆಶ್ಚರ್ಯ ಆಯಿತು.    ಇವರು #ಗಜಾನನಶರ್ಮಾರು ಬರೆದ  #ಚೆನ್ನಬೈರಾದೇವಿ ಪುಸ್ತಕದ ವಿಮರ್ಶೆ ಒಮ್ಮೆ ನೋಡಿ ಇದನ್ನು ಓದಿದರೆ ಕೆಳದಿ ಮತ್ತು ಗೇರುಸೊಪ್ಟೆ  ಸಂಸ್ಥಾನದ ಈ ವರೆಗೆ ಪ್ರಕಟನೆಗೊಂಡ ಎಲ್ಲಾ ಪುಸ್ತಕಗಳ ಸಾರ ತಿಳಿಯುತ್ತದೆ.   ಪ್ರಸನ್ನಸಂತೆಕಡೂರು ನಮ್ಮ ಶಿವಮೊಗ್ಗ ಜಿಲ್ಲೆಯವರು, ಅಮೇರಿಕಾದಲ್ಲಿ ನೆಲೆಸಿ ಅಲ್ಲಿ ಸೇವೆ ಸಲ್ಲಿಸಿ ಈಗ ಮೈಸೂರಿನ JSS ಮೆಡಿಕಲ್ ಕಾಲೇಜ್ ನಲ್ಲಿ ಬಯೋಕೆಮಿಸ್ಟ್ರಿ ಪ್...

4028. ಆನಂದಪುರಂ ರೈಲ್ವೆ ಸ್ಟೇಷನ್ ವಡೆ ವಾಸಣ್ಣ

ಆನಂದಪುರಂ_ರೈಲ್ವೆಸ್ಟೇಶನ್_ವಡೆ_ವಾಸಣ್ಣ  ಆನಂದಪುರಂ ರೈಲು ನಿಲ್ದಾಣದ ಹೆಸರು ಪ್ರಸಿದ್ದಿಗೆ ಬಂದಿದ್ದೇ ವಾಸಣ್ಣ ತಯಾರಿಸುತ್ತಿದ್ದ ಬಿಸಿ ಬಿಸಿ ಗರಿ ಗರಿ ಉದ್ದಿನ ವಡೆಯಿಂದ.  ಖ್ಯಾತ ಚಲನಚಿತ್ರ ನಟ ಡಾಕ್ಟರ್ #ರಾಜಕುಮಾರ್, ಮುಖ್ಯಮಂತ್ರಿ #ರಾಮಕೃಷ್ಣಹೆಗಡೆ ಕೂಡ ವಾಸಣ್ಣರ ಉದ್ದಿನ ವಡೆ ಸವಿದವರು ಈ ಮಾರ್ಗದಲ್ಲಿ ಆಗಮಿಸುವ ಎಲ್ಲಾ ಸೆಲೆಬ್ರಿಟಿಗಳು -ಜನ ಸಾಮಾನ್ಯರೂ ವಾಸಣ್ಣನ ರೈಲ್ವೆ ಕ್ಯಾಂಟೀನ್ ನ ಉದ್ದಿನ ವಡೆಗೆ ಫಿದಾ ಆಗಿದ್ದರು.    ವಾಸಣ್ಣ ದಂಪತಿಗಳು ಡಬಲ್ ಘೋಡಾ ಬ್ರಾಂಡಿನ ಉತ್ಕೃಷ್ಟ ಉದ್ದಿನ ಬೇಳೆ ನೆನೆಸಿ ನಂತರ ಅದನ್ನು ತಿರುವ ಕಲ್ಲಿನಲ್ಲಿ ಕೈಯಲ್ಲಿ ಅರೆದು ಕಟ್ಟಿಗೆ ಒಲೆಯಲ್ಲಿ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ಕರಿದು ಮುತ್ತುಗದ ಎಲೆಯಲ್ಲಿ ಹಾಕಿ ಜೊತೆಗೆ ಕಾಯಿ ಚಟ್ನಿ ಸುರಿದು ಕೊಡುತ್ತಿದ್ದರು.  ಆ ಕಾಲದಲ್ಲಿ ಗ್ರೈಂಡರ್, LPG ಗ್ಯಾಸ್ ಸ್ಟವ್ ನಮ್ಮ ಊರಿಗೆ ಬಂದಿರಲಿಲ್ಲ.   ಆಗ ಬೆಳಿಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಒಂದು ರೈಲು ಇನ್ನೊಂದು ಬೆಂಗಳೂರಿಂದ ತಾಳಗುಪ್ಪಕ್ಕೆ ಒಂದು ರೈಲು ಬರುತ್ತಿತ್ತು ಇದೇ ರೀತಿ ರಾತ್ರಿ ಎರೆಡು ರೈಲು ಇವೆಲ್ಲವೂ ಕಲ್ಲಿದ್ದಲು ಉರಿಸಿ ಉುಗಿಯಿಂದ ಚಲಿಸುತ್ತಿದ್ದ ಉಗಿ ಬಂಡಿಗಳಾದ್ದರಿಂದ ಅದಕ್ಕೆ ಬೇಕಾದ ನೀರು ಆನಂದಪುರ0 ನಿಲ್ದಾಣದಲ್ಲೇ ತುಂಬಿಸಿಕೊಳ್ಳ ಬೇಕಾದ್ದರಿಂದ ಹೆಚ್ಚು ಸಮಯ ರೈಲು ನಿಲ್ಲುತ್ತಿತ್ತು.   ಪ್ರಯಾಣಿಕರು ವಾಸಣ್ಣನ ಕ್ಯಾಂಟೀನ...

4027. ಜೇನಿ ಮಂಜುನಾಥ ಭಟ್ಟರು

ಹೀಗೂ ಉಂಟೇ... ಇಷ್ಟು ಕಡಿಮೆ ಬೆಲೆಯಲ್ಲಿ ಅಡಿಕೆ ಸಸಿ ಸಿಗುತ್ತಾ? ... #ಮಲೆನಾಡಿನಲ್ಲಿ_ಕೇವಲ_20_ರೂಪಾಯಿಗೆ_ಅಡಿಕೆ_ಸಸಿ_ಲಭ್ಯವಿದೆ.   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರದಲ್ಲಿ ( ರಿಪ್ಪನಪೇಟೆ ಹೊಸನಗರ ಮುಖ್ಯ ರಸ್ತೆಯಲ್ಲಿ) #ಮಂಜುಶ್ರೀ_ನರ್ಸರಿ ಇದೆ.   ಇದು ನನ್ನ ಆಪ್ತ ಗೆಳೆಯರಾದ ಮಂಜುನಾಥ ಭಟ್ಟರದ್ದು ಇವತ್ತು ಅವರು ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ಅವರಲ್ಲಿ #ಅಡಿಕೆ_ಸಸಿಗಳು_ಲಭ್ಯವಿದೆ_ಬೆಲೆ_20ರೂಪಾಯಿ.    ಇದು ಕೇಳಿದವರು ಆಶ್ಚರ್ಯ ಪಡುತ್ತಾರೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗುತ್ತಿದೆ ಇದರಿಂದ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ ಇದೆ ಆದರೆ ಅಡಿಕೆ ಸಸಿ ಬೆಲೆ ಒಂದಕ್ಕೆ 100 ರಿಂದ 150 ರ ತನಕ ಆಗಿದೆ.     ಹಾಗಂತ ಇವರು ನರ್ಸರಿ ಕ್ಷೇತ್ರಕ್ಕೆ ಹೊಸಬರಲ್ಲ 1985 ರಿಂದ ಇವರು ಈ ಕ್ಷೇತ್ರದಲ್ಲಿದ್ದಾರೆ ಸುಮಾರು 40 ವರ್ಷದ ಅನುಭವ ಇವರದ್ದು ಇವರ ನರ್ಸರಿಯ ಯಾವುದೇ ಸಸಿ ಕೂಡ ಉತ್ಕೃಷ್ಟ ದರ್ಜೆಯದ್ದೇ ಆಗಿದೆ.    #ಜೇನಿಮಂಜುನಾಥಭಟ್ಟರ ಜೀವನ ಶೈಲಿಯೇ ಬೇರೆ ಅವರಿಗೆ ಆಸೆ ಇಲ್ಲವೇ ಇಲ್ಲ ಅಲ್ಲಿ ದುರಾಸೆ ಎಲ್ಲಿ ಬರಬೇಕು? ... ಕಳೆದ ವರ್ಷ ಇವರಲ್ಲಿ ಅಡಿಕೆ ಸಸಿ ಬೆಲೆ ಕೇವಲ 12 ಇತ್ತು.    ಅವರ ಕಂಡೀಷನ್ ಏನೆಂದರೆ ನೇರವಾಗಿ ರೈತರಿಗೆ ಮಾತ್ರ ಅಡಿಕೆ ಸಸಿ ಮಾರಾಟ ಮಾಡುತ್ತಾರೆ ...

4026. ಹಜ್ ಯಾತ್ರೆ ಭಾಗ-2

ಹಜ್_ಯಾತ್ರೆ_ಭಾಗ_2. ಮುಸ್ಲಿಂ ಧರ್ಮಿಯರ ಹಜ್ ಯಾತ್ರೆ ವಾರ್ಷಿಕ ತೀರ್ಥಯಾತ್ರೆಯಾಗಿದೆ.   ಒಬ್ಬ ಭಾರತೀಯ ಮುಸ್ಲಿಂ ಸಮುದಾಯದ ವ್ಯಕ್ತಿ  ಹಜ್ ಯಾತ್ರೆ ಮಾಡಲು ಹಣ ಎಷ್ಟು ಬೇಕು ?..     ಭಾರತದಿಂದ ಹಜ್ ಯಾತ್ರೆ ಮಾಡಲು ಒಬ್ಬರಿಗೆ ಸರಿಸುಮಾರು ರೂ 3.5 ಲಕ್ಷದಿಂದ ರೂ 10 ಲಕ್ಷದವರೆಗೆ ವೆಚ್ಚವಾಗುತ್ತದೆ.   ಈ ಮೊತ್ತವು ನೀವು ಆಯ್ಕೆ ಮಾಡುವ ಪ್ಯಾಕೇಜ್ (ಸರ್ಕಾರಿ ಅಥವಾ ಖಾಸಗಿ) ಮತ್ತು ಸೌಲಭ್ಯಗಳನ್ನು ಅವಲಂಬಿಸಿರುತ್ತದೆ.   ಹಜ್ ಯಾತ್ರೆಯ ಖರ್ಚುಗಳನ್ನು ಕೆಳಗೆ ವಿವರಿಸಲಾಗಿದೆ.  1.#ಭಾರತೀಯ_ಹಜ್_ಸಮಿತಿ (Haj Committee of India)  ಸರ್ಕಾರಿ ಹಜ್ ಸಮಿತಿಯ ಮೂಲಕ ಪ್ರಯಾಣಿಸಿದರೆ ಒಬ್ಬರಿಗೆ ಸುಮಾರು ರೂ 3.5 ಲಕ್ಷದಿಂದ ರೂ 4.5 ಲಕ್ಷದವರೆಗೆ ಖರ್ಚಾಗುತ್ತದೆ.    ಇದರಲ್ಲಿ ವಿಮಾನ ಪ್ರಯಾಣ, ವಸತಿ, ಸಾರಿಗೆ ಮತ್ತು ಮೂಲಭೂತ ಸೌಕರ್ಯಗಳು ಒಳಗೊಂಡಿರುತ್ತವೆ. 2. #ಖಾಸಗಿ_ಹಜ್_ಟ್ರಾವೆಲ್ ಏಜೆನ್ಸಿಗಳ (Private Tour Operators) ಮೂಲಕ ಖಾಸಗಿ ಆಪರೇಟರ್‌ಗಳು ನೀಡುವ ಐಷಾರಾಮಿ ಸೌಲಭ್ಯಗಳ ಆಧಾರದ ಮೇಲೆ ಒಬ್ಬರಿಗೆ ರೂ 6 ಲಕ್ಷದಿಂದ ರೂ 10 ಲಕ್ಷದವರೆಗೆ ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚವಾಗಬಹುದು.       ಹರಾಮ್ ಮಸೀದಿಯ ಸಮೀಪದ ಹೋಟೆಲ್‌ಗಳು, ಉತ್ತಮ ಊಟದ ವ್ಯವಸ್ಥೆ ಮತ್ತು ವಿಶೇಷ ಮಾರ್ಗದರ್ಶಕರನ್ನು ಇವರು ಒದಗಿಸುತ್ತಾರೆ.  ಇತರ...

4025. ಹಜ್ ಯಾತ್ರೆ ಭಾಗ-3

ಹಜ್_ಯಾತ್ರೆ_ಭಾಗ_3 #ಹಜ್_ಯಾತ್ರೆ_ಹೇಗೆ_ಪ್ರಾರಂಭವಾಯಿತು?... ಹಜ್ ಯಾತ್ರೆಯ ನನ್ನ ಈ ಲೇಖನ ಸರಣಿಯಲ್ಲಿ ಹಜ್ ಯಾತ್ರೆ ಇತಿಹಾಸ - ದುರಂತಗಳು - ಧಾರ್ಮಿಕ ಕ್ರಮಗಳ ವಿವರಗಳು ವಿಶೇಷವಾಗಿ ಮುಸ್ಲೀಮೇತರರು ತಿಳಿಯುವಂತೆ ಬರೆಯಲಾಗುತ್ತದೆ.    ಈ ಲೇಖನ ಸರಣಿ ದೀರ್ಘವಾಗಿರುವುದರಿಂದ ಅದನ್ನು ಕೆಲವು ಭಾಗಗಳಾಗಿ ವಿಂಗಡಿಸಿ ಪ್ರಕಟಿಸಲಾಗುತ್ತದೆ #ಭಾಗ_4 ಮುಂದಿನ ದಿನದಲ್ಲಿ ನಿರೀಕ್ಷಿಸಿ. #ಹಜ್_ಯಾತ್ರೆ_ಮಹತ್ವ_ಮತ್ತು_ಇತಿಹಾಸ ಹಜ್‌ನ ಆಚರಣೆಗಳು ಪ್ರವಾದಿಯವರ ಕಾಲದಲ್ಲಿ ಪ್ರಾರಂಭವಾದರೂ ತೀರ್ಥಯಾತ್ರೆಯ ಮೂಲಗಳು 4,000 ವರ್ಷಗಳಷ್ಟು ಹಿಂದಿನವು.  2000 BC ಯ ಸುಮಾರಿಗೆ ಇಬ್ರಾಹಿಂ ತನ್ನ ಪತ್ನಿ ಹಜೇರಾ (ಹಗೆರ್) ಮತ್ತು ಶಿಶು ಮಗ ಇಷ್ಮಾಯೇಲ್ ಅವರನ್ನು ಮರುಭೂಮಿಯಲ್ಲಿ ಬಿಡಲು ದೇವರು ಆದೇಶಿಸಿದ್ದನೆಂದು ಮುಸ್ಲಿಮರು ನಂಬುತ್ತಾರೆ.  ಇಷ್ಮಾಯೇಲ್ ನಿರ್ಜಲೀಕರಣಗೊಂಡು ತುಂಬಾ ಹಸಿದಿದ್ದರಿಂದ, ಹಜೇರಾ ಸಫಾ ಮತ್ತು ಮಾರ್ವಾ ಬೆಟ್ಟಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಓಡಿ, ವಿಮೋಚನೆಗಾಗಿ ಪ್ರಾರ್ಥಿಸುತ್ತಾರೆ.  ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಆಗ ಒಬ್ಬ ದೇವದೂತ ಕಾಣಿಸಿಕೊಂಡು #ಝಮ್ಜಮ್ ಬಾವಿ ಎಂದು ಕರೆಯಲ್ಪಡುವ ಹೊಸ ನೀರಿನ ಬುಗ್ಗೆಯನ್ನು ಸೃಷ್ಟಿಸುತ್ತಾರೆ.   ಮುಸ್ಲಿಮರು ನಂಬುವಂತೆ ಇಬ್ರಾಹಿಂ ತನ್ನ ಕುಟುಂಬಕ್ಕೆ ಮರಳಿದರು ಮತ್ತು ದೇವರಲ್ಲಿ ತಮ್ಮ ನಂಬಿಕೆಯನ್ನು ಬಲಪಡಿಸಲು ಬಯಸುವವರಿ...

4024. ಪಂಕ್ತಿಯಲ್ಲಿ ಗೌರವದಿಂದ ಅನ್ನ ಬಡಿಸಬಾರದೇಕೆ

ಅನ್ನದಾನದ_ಮುಂದೆ_ಅನ್ಯ_ದಾನವಿಲ್ಲ_ಸರ್ವಜ್ಞ ಹಸಿದವರ ಹೊಟ್ಟೆ ತುಂಬಿಸುವುದೇ ಶ್ರೇಷ್ಠ ಧರ್ಮ ಮತ್ತು ಮಾನವೀಯತೆಯ ಲಕ್ಷಣ,ಆತ್ಮಶುದ್ಧಿಯಿಂದ,ಗೌರವದಿಂದ ಹಸಿದವರಿಗೆ ಅನ್ನ ಬಡಿಸಿದರೆ   ಮಾತ್ರ ತಿಂದವರಿಗೆ ಆತ್ಮತೃಪ್ತಿ ಮತ್ತು ಸಂತೃಪ್ತಿ. #ಅನ್ನ_ಬಡಿಸುವಾಗ ಅನ್ನ ಚೆಲ್ಲುವುದು ಅನ್ನಪೂರ್ಣೇಶ್ವರಿ ದೇವಿಗೆ ಮಾಡುವ ಅಪಮಾನ ಮತ್ತು ದಾರಿದ್ರ್ಯದ ಸಂಕೇತವೆಂದು ಭಾರತೀಯ ಸಂಪ್ರದಾಯದಲ್ಲಿ ನಂಬಲಾಗುತ್ತದೆ.    ಇದು ಮನೆಯಲ್ಲಿ ಆರ್ಥಿಕ ನಷ್ಟ ಅಥವಾ ಆಹಾರದ ಕೊರತೆ ಉಂಟಾಗುವ ಸೂಚನೆ ಎಂದು ಹಿರಿಯರು ಹೇಳುತ್ತಾರೆ.     ಇಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಚೆಲ್ಲಿದ ಅನ್ನವನ್ನು ತೆಗೆದು ಕೈಮುಗಿದು ಕ್ಷಮೆ ಯಾಚಿಸುವುದು ರೂಢಿ.    ಆದರೆ ಈಗಿನ ಕಾಲದಲ್ಲಿ ದೇವಸ್ಥಾನಗಳಲ್ಲಿ ಮಠಗಳಲ್ಲಿ ಅನ್ನಸಂತರ್ಪಣೆಗಳು ಮಾತ್ರ ಅನೇಕ ರೀತಿಯ ಅವ್ಯವಸ್ಥೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಆಗುತ್ತಿದೆ. #ಅತಿಥಿದೇವೋಭವ' ಎಂದರೆ ಅತಿಥಿಯನ್ನು ದೇವರಿಗೆ ಸಮಾನವಾಗಿ ಕಾಣುವುದು ತೈತ್ತಿರೀಯ ಉಪನಿಷತ್ತಿನಿಂದ ಬಂದ ಈ ಪವಿತ್ರ ಮಂತ್ರವು ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ಸತ್ಕಾರಕ್ಕೆ ನೀಡಲಾಗುವ ಅತ್ಯುನ್ನತ ಗೌರವ ಮತ್ತು ಆದ್ಯತೆಯನ್ನು ಸಾರುತ್ತದೆ. ಈ ತತ್ವದ ಪ್ರಮುಖ ಅಂಶಗಳು ದೈವತ್ವದ ಗೌರವ,ಮನೆಗೆ ಬರುವ ಅತಿಥಿಗಳನ್ನು ಯಾವುದೇ ಭೇದಭಾವವಿಲ್ಲದೆ ದೇವರೆಂದು ಪರಿಗಣಿಸಿ ಉಪಚರಿಸುವುದು.   ಸಾಂಪ್ರದಾಯಿಕ ಮ...

4023. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಗೋಪಾಲಕೃಷ್ಣ ಬೇಳೂರುರವರಿಗೆ ಮಂತ್ರಿ ಸ್ಥಾನ ಸಿಗಲಿ.

ಸಾಗರನ_ವಿಧಾನಸಭಾ_ಕ್ಷೇತ್ರಕ್ಕೆ_ಮಂತ್ರಿ_ಸ್ಥಾನ_ಸಿಗಲಿ.   ಶಾಸಕರಾದ #ಗೋಪಾಲಕೃಷ್ಣಬೇಳೂರು ನೂತನ ಮುಖ್ಯಮಂತ್ರಿ #ಡಿ_ಕೆ_ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಲಿ ಎಂದು ಹಾರೈಸುತ್ತೇನೆ.   ನಮ್ಮ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ದೊರೆತರೆ ಈ ಮೂಲಕ ನಮ್ಮ ಸಾಗರ ವಿಧಾನ ಸಭಾ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಸಾಧ್ಯವಿದೆ ಆದ್ದರಿಂದ ಯಾವುದೇ ಪಕ್ಷದ ಶಾಸಕರಾಗಿದ್ದರೂ ಅವರ ಪಕ್ಷದ ಸರ್ಕಾರದಲ್ಲಿ ಮಂತ್ರಿ ಆಗಲಿ ಎಂದು ಬಯಸುತ್ತೇನೆ.  ನಮ್ಮ ಸಾಗರ ವಿದಾನ ಸಭಾ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಮಂತ್ರಿ - ಸ್ಪೀಕರ್ ಆಗಿದ್ದರು, ನಮ್ಮ ಆನಂದಪುರಂನವರೇ ಆಗಿದ್ದ ಬದರಿನಾರಾಯಣ ಅಯ್ಯಂಗಾರ್ ಮತ್ತು ನಮ್ಮ ತಾಲ್ಲೂಕಿನವ ರೇ ಆಗಿದ್ದ ಕೆ.ಹೆಚ್. ಶ್ರೀನಿವಾಸರು ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರೂ ಮಂತ್ರಿ ಆಗಿರಲಿಲ್ಲ ಇವರುಗಳು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆದಾಗ ಮಂತ್ರಿ ಆಗಿದ್ದು ಇತಿಹಾಸ. ಶಿವಮೊಗ್ಗ ಜಿಲ್ಲೆಯ ಕಡಿದಾಳು ಮಂಜಪ್ಪ, ಬಂಗಾರಪ್ಪ, ಜೆ. ಹೆಚ್. ಪಟೇಲರು ಮತ್ತು ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು, ಶಿಕಾರಿಪುರದ ಯಂಕಟಪ್ಪ, ಬಸವಣ್ಯಪ್ಪ , ಕಿಮ್ಮನೆರತ್ನಾಕರ್, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಮತ್ತು ಮಧು ಬಂಗಾರಪ್ಪ ಮಂತ್ರಿಗಳಾಗಿದ್ದವರು.   ನಮ್ಮ ಸಾಗರದ ಮೂವರು ಅಳಿಯಂದಿರು ತಮಕೂರಿನ ನಾಗೇಶ್, ಕಾರ್ಕಳದ ಸುನಿಲ್ ಕುಮಾರ್, ಸಾಗರ ತಾಲೂಕಿನ ಸೊಸೆ ಚಿತ...