Skip to main content

Posts

Showing posts from 2026

4015. ಮಟಕಾ ಕಲ್ಯಾಣ್ ಜಿ ಭಗತ್ ವರ್ಲಿ ಮಟಕಾ

ಕಲ್ಯಾಣ್_ಜೀ_ ಭಗತ್ ಪ್ರಾರಂಬಿಸಿದ ಮೊದಲ ವರ್ಲಿ ಮಟಕಾ.  ಇದಕ್ಕೆ ಕಲ್ಯಾಣಿ ಮಾರ್ಕೆಟ್ ಎಂತಲೂ ಜನ ಕರೆಯುತ್ತಾರೆ.   ನನ್ನ ಹಿಂದಿನ ರತನ್ ಖತ್ರಿ ಲೇಖನ ಓದಿದವರು ಕಲ್ಯಾಣ್ ಜಿ ಮಟಕಾ ಮಾರ್ಕೆಟ್ ಬಗ್ಗೆ ಕೂಡ ಬರೆಯುಂತೆ ವಿನಂತಿಸಿದ್ದರಿಂದ ಈ ಲೇಖನ ಓದಿ...   #ರತನ್_ಲಾಲ್_ಖತ್ರಿಗಿಂತ ಮೊದಲಿಗರು ಕಲ್ಯಾಣ್ ಜಿ ಭಗತ್ ಇವರೇ ಭಾರತದ ಮೊದಲ ಮಟ್ಕಾ / ಓಸಿ ಜುಗಾರಿಯ ಪ್ರವರ್ತಕರು.    ಆದರೆ ಮಟ್ಕಾ ಕಿಂಗ್ ಬಿರುದು ಜನಪ್ರಿಯತೆ ಮಾತ್ರ ರತನ್ ಲಾಲ್ ಖತ್ರಿಗೆ ಸೀಮಿತವಾಯಿತು.    ಭಾರತದ ಮೊದಲ ಮಟಕಾ ಪ್ರವರ್ತಕರಾದ ಕಲ್ಯಾಣ್ ಜಿ ಭಗತ್ ಇವರ ಓಸಿ ಮಾರ್ಕೆಟ್ ಹೆಸರು #ವರ್ಲಿ_ಮಟಕಾ.  ಕಲ್ಯಾಣ್ ಜಿ  ಭಗತ್ 1962 ರಲ್ಲಿ ವರ್ಲಿ ಮಟಕಾ ಆರಂಭಿಸಿದರು.    ನಂತರ #ರತನ್_ಖತ್ರಿ #ರತನ್_ಮಟ್ಕಾ ಅಥವಾ 'ಮೇನ್ ಬಜಾರ್' ಆರಂಭಿಸಿದರು ಅವರು ಇಸ್ಪೀಟ್ ಎಲೆಗಳನ್ನು ಬಳಸಿ ನಂಬರ್ ಡ್ರಾ ಮಾಡುವುದರಿಂದ ಮಟಕಾ ಹೆಚ್ಚು ಪಾರದರ್ಶಕಗೊಳಿಸಿದರು.   ಈಗಿನ ಸ್ಕಿಲ್ ಗೇಮ್, ಆನ್ ಲೈನ್, ಜಂಗಲಿ ರಮ್ಮಿ ಇತ್ಯಾದಿಗಳಷ್ಟು ಮಟಕಾ ಮಾರಕವಲ್ಲ ಎನ್ನುತ್ತಾರೆ.   ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಇದನ್ನು #ಅಂಕದ_ಜುಗರ್' ಎಂದು ಕರೆಯಲಾಗುತ್ತಿತ್ತು.    1960ರ ದಶಕದಲ್ಲಿ ನ್ಯೂಯಾರ್ಕ್ ಕಾಟನ್ ಎಕ್ಸ್‌ಚೇಂಜ್ ದರ ರದ್ದಾದ ನಂತರ ಮಣ್ಣಿನ ಮಡಕೆಯಿಂದ  ಚೀಟಿ ಎತ್ತುವ ಪದ್ಧತಿ ಜಾ...

4014. ಹತ್ತನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ

ಶತಮಾನಗಳ_ಹಿಂದಿನ_ಶಾಸನಗಳಲ್ಲಿ_ಅಡಿಕೆ.    ಸಾವಿರ ವರ್ಷಗಳ ಹಿಂದೆ ಅಡಿಕೆ ಪ್ರಮುಖ ಬೆಳೆ ಆಗಿತ್ತು ಮತ್ತು ಅಡಿಕೆಗೆ ತೆರಿಗೆ - ಸುಂಕಗಳನ್ನ ವಿದಿಸಲಾಗಿತ್ತೆಂಬ ಶಾಸನಗಳು ಅಡಿಕೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದೆ.   ಹತ್ತನೆ ಶತಮಾನದಲ್ಲಿ ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿಯ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತು.  ಮತ್ತು ಹನ್ನೆರಡನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ ಉಲ್ಲೇಖಗಳ ಸಂಗ್ರಹಿಸಿ ಬರೆದಿದ್ದಾರೆ ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್ ಹಿರೇಜಂಬೂರ್.   ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ  ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ ಇದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗಿದೆ.    ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.     ಅವರು 10ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕ...

4013. ನಮ್ಮ ಕಲ್ಲುಕುಟಿಕ ದೈವ

ಕಲ್ಲುಕುಟುಕಸ್ವಾಮಿ  ಸೊಪ್ಪುಗುಡ್ಡೆ - ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆ.   ನೂರಾ ನಲವತ್ತು ವರ್ಷಗಳ ನಮ್ಮ ಕುಟುಂಬದ ಕಥೆ.   ನಮ್ಮ ಕುಟುಂಬದ ಕಲ್ಲುಕುಟಿಕ ಮತ್ತು ವರ್ತೆ ದೈವಸ್ಥಾನ ಮೊನ್ನೆ 2026ರ ಮೇ ತಿಂಗಳ 10ನೇ ತಾರೀಖು ಭಾನುವಾರ    #ತೀರ್ಥಹಳ್ಳಿಯ_ಸೊಪ್ಪುಗುಡ್ಡೆಯಲ್ಲಿ ಪುನರ್ ಪ್ರತಿಷ್ಠಾಪನೆ ಆಯಿತು ಇದು ನೂರು ವರ್ಷಗಳಲ್ಲಿ ಮೂರನೆ ಪುನರ್ ಪ್ರತಿಷ್ಠಾಪನೆ ಆಗಿದೆ.      ಅಂದಾಜು 1890 ನೇ ಇಸವಿಯಲ್ಲಿ  ಉಡುಪಿ ಜಿಲ್ಲೆಯ #ಬೆಣ್ಣೆಕುದುರಿನಿಂದ ಘಟ್ಟಕ್ಕೆ ಬರುವಾಗ ನನ್ನ ಅಜ್ಜಿ ಅಬ್ಬಕ್ಕ ತನ್ನ ಜೊತೆ ತಂದಿದ್ದು ಕಲ್ಲುಕುಟಿಕ ದೇವರನ್ನ.        ನನ್ನ ಅಜ್ಜಿ ಕಲ್ಲುಕುಟಿಕ ದೇವರ ಆರಾದಿಸುತ್ತಿದ್ದವರು ಮತ್ತು  ಕಲ್ಲುಕುಟಿಕ ದೇವರ ನೇಮ, ರೀತಿ-ನೀತಿಗಳ ಕಟ್ಟುಪಾಡು ಕಡ್ಡಾಯವಾಗಿ ಪಾಲಿಸಿಕೊಂಡು ಬಂದವರು.      ಸುಮಾರು ನೂರು ವರ್ಷಗಳ ಹಿಂದೆ ತಾನು ಘಟ್ಟಕ್ಕೆ ತಂದ ಕಲ್ಲುಕುಟಿಕ ದೇವರನ್ನ ಸರಿಯಾಗಿ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಹೋಗುವ ಭರವಸೆಯನ್ನು ತನ್ನ ಅಕ್ಕನ ಮಗಳು ಶ್ರೀಮತಿ #ಚಿಕ್ಕಮ್ಮರ ಪತಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ  #ರಾಮಣ್ಣಪಾತ್ರಿಗಳಲ್ಲಿ ನೋಡಿ ಅಲ್ಲಿಗೆ ಕಲ್ಲುಕುಟಿಕ ದೇವರನ್ನ ಸ್ಥಳಾಂತರಿಸುತ್ತಾರೆ.     ಈ ರೀತಿ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ...

4012. ನನ್ನ 4000 ಬ್ಲಾಗ್ ಲೇಖನಗಳು

ನಾಲ್ಕು_ಸಾವಿರ_ನನ್ನ_ಬ್ಲಾಗ್_ಲೇಖನ   ನಾಲ್ಕು ಸಾವಿರ ಲೇಖನಗಳು,ನನ್ನ ಬ್ಲಾಗ್ ನಲ್ಲಿ ನಾನು ಬರೆದ ಲೇಖನಗಳ ಸಂಖ್ಯೆ 4000 ತಲುಪಿದೆ.    ಇದನ್ನೆಲ್ಲ ಪುಟಗಳಾಗಿ ಪರಿವರ್ತಿಸಿದರೆ 50 ಸಾವಿರಕ್ಕಿಂತ ಹೆಚ್ಚು ಪುಟಗಳಾಗಿ ಮಿಕ್ಕಲಿದೆ,ನನಗೇ ಆಶ್ಚರ್ಯಇದೆಲ್ಲ ನನ್ನಿಂದ ಸಾಧ್ಯವಾಯಿತಾ? ಅಂತ.    ಆ ಲೆಕ್ಕದಲ್ಲಿ ನಾನು ಪೇಸ್ ಬುಕ್ ನಲ್ಲಿ ಬರೆದದ್ದೆಲ್ಲವನ್ನೂ  ಬ್ಲಾಗ್ ನಲ್ಲಿ ದಾಖಲಿಸಿದ್ದರೆ ಲೇಖನ 10 ಸಾವಿರ ಆಗುತ್ತಿತ್ತು ಮತ್ತು ನನ್ನ ವಿಡಿಯೋಗಳು ಸೇರಿದರೆ ಇನ್ನೊಂದಿಷ್ಟು ಸಾವಿರ ಆದರೆ ನಾನು ನಾನು ಬರೆದ ಲೇಖನದಲ್ಲಿ ನನಗೆ ಇಷ್ಟವಾಗಿ ಅದನ್ನು ದಾಖಲೆಯಾಗಿ ಕಾಪಿಟ್ಟುಕೊಳ್ಳಬೇಕೆಂದೆನ್ನಿಸಿದ ಲೇಖನ ಮಾತ್ರ ದಾಖಲಿಸಿದ್ದೇನೆ.     Youtube ನಲ್ಲಿ ಸಾವಿರಾರು ಪ್ರತ್ಯೇಕ ವಿಡಿಯೊಗಳು ದಾಖಲಾಗಿದೆ,ಇದೆಲ್ಲ ಬೇಕಾ? ... ಇದರಿಂದ ಲಾಭ ಏನು? ...ಎಂದರೆ ಬೇಕಾಗಿಲ್ಲ -ಲಾಭ ಇಲ್ಲ ಅಂತನೇ ಹೇಳುತ್ತೇನೆ ಆದರೆ ಈ ಖಯಾಲಿಗಳು ಕೊಡುವ ಸಂತೋಷ ಇದೆಯಲ್ಲ ಅದರ ಲೆವೆಲ್ಲೇ ಬೇರೆ ಅದು ನಮ್ಮ ಜೀವಿತ ಅವದಿಯ ಒಂದು ರೀತಿ ಸ್ವರ್ಗ ಸುಖ.       ಶಿವಮೊಗ್ಗ ಜಿಲ್ಲೆಯ ವಿಶ್ವಕೋಶ ನಿಮ್ಮ ಬ್ಲಾಗ್, ನಿಮ್ಮ ಕ್ರಿಯಾಶೀಲತೆ  ನಮಗೂ ಪ್ರೇರಣೆ ಅಂತ ಪ್ರಖ್ಯಾತ ಸಾಹಿತಿ #ಕುಂ_ವೀರಭದ್ರಪ್ಪನವರು ಹೇಳಿದ್ದಾರೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಏನಿದೆ ಹೇಳಿ.    ನಾನು ಬರೆದ ಲೇಖ...

4011. ಮಟಕಾ ಕಿಂಗ್

ರತನ್_ಲಾಲ್_ಖತ್ರಿ ಜುಗಾರಿ ಕ್ಷೇತ್ರದಲ್ಲಿನ ದಂತಕಥೆ. ಭಾರತದ ಪ್ರಸಿದ್ಧ / ಕುಪ್ರಸಿದ್ದ ಮಟ್ಕಾ ಕಿಂಗ್ ಏನಿದು ಓಪನ್ ಮತ್ತು ಕ್ಲೋಸ್ ನ ಸಂಕ್ಷಿಪ್ತ OC?... ಸಣ್ಣ ಸಣ್ಣ ಹಳ್ಳಿಗಳಿಗೂ ತಲುಪಿರುವ ಜುಗಾರಿ ಜಾಲ      ಮಟಕಾ ಕಿಂಗ್ ರತನ್ ಲಾಲ್ ಖತ್ರಿಯವರ ಜೀವನವು ಧರ್ಮಾತ್ಮ (1975) ಸೇರಿದಂತೆ ಜನಪ್ರಿಯ ಮಾಧ್ಯಮಗಳಲ್ಲಿ ಹಲವಾರು ಚಿತ್ರಣಗಳಿಗೆ ಸ್ಫೂರ್ತಿ ನೀಡಿದೆ ಎಂದರೆ ಅವರೆಷ್ಟು ಪ್ರಸಿದ್ದರೆಂದು ಗೊತ್ತಾಗುತ್ತದೆ.   2024 ರಲ್ಲಿ ತೆರೆಕಂಡ ವರುಣ್ ತೇಜ್ ನಟಿಸಿದ ಮಟ್ಕಾ ಎಂಬ ತೆಲುಗು ಚಿತ್ರ  ಮತ್ತು 2026 ರಲ್ಲಿ ತೆರೆಕಂಡ ವಿಜಯ್ ವರ್ಮಾ ನಟಿಸಿದ "ಮಟ್ಕಾ ಕಿಂಗ್" ಎಂಬ ಹಿಂದಿ ಜೀವನ ಚರಿತ್ರೆಯ ಸರಣಿಗಳು ಅವರ ಜೀವನ ಮತ್ತು ಕಾಲದಿಂದ ಪ್ರೇರಿತವಾಗಿವೆ.     ರಾಯ್ ಕಪೂರ್ ಫಿಲಂ ಮತ್ತು ಆತ್ ಪತ್ ಪ್ರೊಡಕ್ಷನ್ಸ್ ಭಾರತದಲ್ಲಿ "ಮಟ್ಕಾ ಕಿಂಗ್" ಆಗಿ ಖತ್ರಿ ಅವರ ಉದಯ ಮತ್ತು ಸ್ವಾತಂತ್ರ್ಯದ ನಂತರ ಭಾರತೀಯ ಸಮಾಜದ ಮೇಲೆ ಮಟ್ಕಾ ಜೂಜಾಟದ ಪ್ರಭಾವವನ್ನು ಎತ್ತಿ ತೋರಿಸುತ್ತವೆ.   ಬ್ರಿಟಿಷ್ ಭಾರತದ (ಈಗ ಪಾಕಿಸ್ತಾನ ) ಕರಾಚಿಯಲ್ಲಿ ಜನಿಸಿದ ಖತ್ರಿ 1947 ರ ವಿಭಜನೆಯ ಸಮಯದಲ್ಲಿ ಮುಂಬೈಗೆ ವಲಸೆ ಬಂದರು.   1960 ರ ದಶಕದ ಆರಂಭದಿಂದ 1990 ರ ದಶಕದ ಮಧ್ಯಭಾಗದವರೆಗೆ ಮೂಲ ಮಟ್ಕಾ ರಾಜ ಎಂದು ಕರೆಯಲ್ಪಡುವ ರತನ್ ಖತ್ರಿ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ರಾಷ್ಟ್ರವ್ಯ...

4010. ನೀಟ್ ಪರೀಕ್ಷೆ 2026 ಲೀಕ್

ನೀಟ್_ಪರೀಕ್ಷೆ 2026   ಪ್ರಶ್ನೆ ಪತ್ರಿಕೆಗಳ ಸೋರುವಿಕೆ ಮೂಲಕ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಅನರ್ಹತೆ.   ಬದಲಾಗ ಬೇಕಾಗಿದೆ ಶಿಕ್ಷಣ ವ್ಯವಸ್ಥೆ ಎಲ್ಲರಿಗೂ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತಾಗಬೇಕು.     #National_Eligibility_cum_Entrance Test NEET ನ ಪೂರ್ಣ ರೂಪವೆಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಇದನ್ನು ಸಾಮಾನ್ಯವಾಗಿ NEET (UG) ಎಂದು ಕರೆಯಲಾಗುತ್ತದೆ.  ಇದರ ಅರ್ಥ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ).   ಇದು MBBS, BDS, BAMS, BSMS, BUMS, ಮತ್ತು BHMS ಸೇರಿದಂತೆ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಭಾರತದಲ್ಲಿ ಪ್ರಾಥಮಿಕ, ಏಕ-ಗವಾಕ್ಷಿ (single window) ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ ಇದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಾರ್ಷಿಕವಾಗಿ ನಡೆಸುತ್ತದೆ.   ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಈ ವರ್ಷದ NEET 2026 ಮರು ಪರೀಕ್ಷೆ ನಡೆಸಲಿದ್ದಾರೆ.     ಮೇ 12, 2026 ರಂದು NTA ಘೋಷಿಸಿದಂತೆ ಹೊಸ ದಿನಾಂಕಗಳು ಮತ್ತು ಪರಿಷ್ಕೃತ ಪ್ರವೇಶ ಪತ್ರದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುತ್ತಾರೆ.    ಸರ್ಕಾರ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವನ್ನು ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಿದೆ.    NTA...

4009. ಕುಂಚಿಕಲ್ ಫಾಲ್ಸ್

ಕುಂಚಿಕಲ್_ಪಾಲ್ಸ್  ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಉದ್ಭವ ಆಗುವ ವರಾಹಿ ನದಿಯ ಜಲಪಾತ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿ ಗ್ರಾಮದ ಅರಣ್ಯದಲ್ಲಿದೆ.   ವರಾಹಿ ನದಿಗೆ ಯಡೂರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಆಣೆಕಟ್ಟು ನಿರ್ಮಾಣವಾಗಿದೆ.     ವರಾಹಿ ನದಿ ಜಲಪಾತವಾಗಿ ಇಲ್ಲಿಂದ ದುಮುಕಿ ಉಡುಪಿ ಜಿಲ್ಲೆಯ ಹೊಸಂಗಡಿಯ ಮೂಲಕ ಕುಂದಾಪುರ ತಾಲೂಕಿನ ಬಸ್ರೂರು,ಗಂಗೊಳ್ಳಿ ಪ್ರದೇಶಗಳಲ್ಲಿ ಹರಿದು ಮುಂದೆ ಸೌಪರ್ಣಿಕಾ, ಕೇದಕ, ಚಕ್ರ ಮತ್ತು ಕುಬ್ಜ ನದಿಗಳನ್ನ ಸಂಗಮಿಸಿ ಅರಬ್ಬಿ ಸಮುದ್ರ ಸೇರುತ್ತದೆ.   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡು ಗ್ರಾಮದ ದಟ್ಟ ಅರಣ್ಯದಲ್ಲಿ ವರಾಹಿ ನದಿ ಜಲಪಾತ ಇದೆ.    1445 ಅಡಿ ಇದರ ಎತ್ತರ ಇದು ದೇಶದ ಅತ್ಯಂತ ದೊಡ್ಡ ಜಲಪಾತ ಎಂದು ದಾಖಲು ಆಗಿದೆ.    ಇದಕ್ಕೂ ಮೊದಲು ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ 1115 ಅಡಿ ಎತ್ತರದ ಮೇಘಾಲಯ ರಾಜ್ಯದ  #ನೋಹಾಕಾಲಿಕೈ ಜಲಪಾತ ಎಂದಾಗಿತ್ತು.     ಈಗ ವರಾಹಿ ನದಿಯ ನಮ್ಮ ಜಿಲ್ಲೆಯ #ಕುಂಚಿಕಲ್_ಪಾಲ್ಸ್ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಎಂಬ ದಾಖಲೆ ನಿರ್ಮಿಸಿದೆ.     ಎರೆಡು ವರ್ಷದ ಹಿಂದೆ ಈ ಬಗ್ಗೆ ನಾನು ಲೇಖನ ಬರೆದಾಗ ಅದ...

2008. ಆಂಜನೇಯ ಶಕ್ತಿ ಕೇಂದ್ರ ಬ್ರಾಂತೇಶ - ಕಾಂತೇಶ - ಶಾಂತೇಶ

ಅಧಿಕ_ಮಾಸ_2026  ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಮೂರು ಆಂಜನೇಯರ ದರ್ಶನ ಯಾತ್ರೆ ಅಧಿಕಮಾಸದಲ್ಲಿ ನಡೆಯುತ್ತದೆ ಗೊತ್ತಾ? ....   ಈ ಮೂರು ಅಂಜನೇಯ ವಿಗ್ರಹದಲ್ಲಿ ಸಾಲಿಗ್ರಾಮ ಅಳವಡಿಸಿದ್ದಾರೆ.    ಹಿಂದೂ ಪಂಚಾಂಗದಲ್ಲಿ ಅಧಿಕ ಮಾಸ ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರಕ್ಕೆ ಕೊನೆಗೊಳ್ಳುತ್ತದೆ.   ಅಧಿಕ ಮಾಸದಲ್ಲಿಯೇ  ಶಾಂತೇಶ, ಕಾಂತೇಶ, ಭ್ರಾಂತೇಶ ಮಹಿಮೆ ಅಪಾರ,ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮುಂಡಲಗಿಯ ಕಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ದರ್ಶನ ಪಡೆದರೆ ಕಾಶಿ ಫಲಯಾತ್ರೆ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ.    ಹೀಗಾಗಿ ಈ ಆಂಜನೇಯರಿಗೆ ಅಪಾರ ಭಕ್ತಸಮೂಹವಿದೆ, ಶಿಕಾರಿಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿ ಕದರಮಂಡಲಗಿ ಮತ್ತು 35 ಕಿ.ಮೀ ದೂರದಲ್ಲಿ ಸಾತೇನಹಳ್ಳಿ ಇರುವುದರಿಂದ, ಒಂದೇ ದಿನ ಈ ಮೂರೂ ಕ್ಷೇತ್ರಗಳನ್ನು ಭೇಟಿ ಮಾಡುವುದು ಸುಲಭ.   ಈ ಮಾಸದಲ್ಲಿ ದಾನ, ಪೂಜೆ, ವ್ರತ ಮತ್ತು ತೀರ್ಥಯಾತ್ರೆ (ವಿಶೇಷವಾಗಿ ಮಥುರಾ-ವೃಂದಾವನ) ಅತ್ಯಂತ ಫಲದಾಯಕವೆಂದು ಪರಿಗಣಿಸಲಾಗಿದೆ.   ಈ ಪವಿತ್ರ ತಿಂಗಳು ಪುರುಷೋತ್ತಮ ಮಾಸ ಅಥವ ಮಲಮಾಸ ಎಂದು ಕರೆಯುತ್ತಾ...

4007. ಲಕ್ಷ್ಮಣ್ ಹೂಗಾರ್

ಲಕ್ಷ್ಮಣ್_ಹೂಗಾರ್ ದಿಡೀರ್ ಆಗಿ ಸುದ್ದಿ ಸಮಾಚಾರ ಪ್ರಪಂಚದ ಸೆಲೆಬ್ರಿಟಿ ಸ್ಥಾನ ಒದ್ದು ಹೋದ ಪತ್ರಕರ್ತ.   ಕೃಷಿಯಲ್ಲಿ ತಲ್ಲೀನರಾಗಿದ್ದಾರೆ ಇಂತಹವರು ಅಪರೂಪದಲ್ಲಿ ಅಪರೂಪ.   ಟೀವಿ ಮಾಧ್ಯಮದಲ್ಲಿ ಇವರನ್ನ ನೋಡದೇ ಇರುವವರಿಲ್ಲ ಅಷ್ಟು ಪ್ರಸಿದ್ಧಿ ಪಡೆದಿದ್ದ ಇವರ ಮಾತು - ಧ್ವನಿ ಮತ್ತು ಬಾಡಿ ಲಾಂಗ್ವೇಜ್ ಆ ಕಾಲದಲ್ಲಿ ಹೆಚ್ಚು ಆಕರ್ಷಣೆ ಆಗಿತ್ತು.    ಐಟಿ ಇಂಜಿನಿಯರ್ ಓದಿ ನಂತರ ಪತ್ರಕರ್ತರಾಗಿ ಪ್ರಸಿದ್ಧಿ ಪಡೆದು ನಂತರ ಅದೆಲ್ಲ ಬಿಟ್ಟು ಕೃಷಿ ಕ್ಷೇತ್ರಕ್ಕೆ ತಲುಪಿದ್ದಾರೆ ಲಕ್ಷಣ ಹೂಗಾರ್.    ಇವರನ್ನ ಹುಡುಕಿ ಹೋಗಿ ಬೇಟಿ ಮಾಡಿದ ಕೆಲ ಸುದ್ದಿ ಮಾಧ್ಯಮಗಳಿಂದ ಮತ್ತು ಅಂತರ್ಜಾಲದಲ್ಲಿ  ಲಕ್ಷ್ಮಣ್ ಹೂಗಾರ್ ಬಗ್ಗೆ ತಿಳಿದ ಸುದ್ದಿಗಳು ಇಲ್ಲಿದೆ ನೋಡಿ.   ಲಕ್ಷ್ಮಣ್ ಹೂಗಾರ್ ಅವರು ಕರ್ನಾಟಕದ ಜನಪ್ರಿಯ ಮತ್ತು ಅನುಭವಿ ಪತ್ರಕರ್ತರಲ್ಲಿ ಒಬ್ಬರು.    ಅವರು ಪ್ರಮುಖ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.   ಹುಟ್ಟಿದ್ದು ಗುಲ್ಬರ್ಗಾದ ಆಳಂದ-ವೃತ್ತಿ ಕಟ್ಟಿಕೊಟ್ಟಿದ್ದು ಬೆಂಗಳೂರು-ಬದುಕು ನೀಡಿದ್ದು ಚಿತ್ರದುರ್ಗ.   ಲಕ್ಷ್ಮಣ್‌ ಹೂಗಾರ್‌ ಅವರದು ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕು.. ಮನೆಯಲ್ಲಿ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲವಂತೆ ಇದರ ನಡುವೆ  ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹತ್ತಿರದಿಂದ ನೋಡಿಕೊಂಡು ಬ...

4006. ಮೆಕ್ಕಾ ಯಾತ್ರೆ / ಹಜ್ ಯಾತ್ರೆ 2026

ಹಜ್_ಯಾತ್ರೆ (ಭಾಗ-1)   ಇಸ್ಲಾಂ ಧರ್ಮದಲ್ಲಿ ಹಜ್ ಯಾತ್ರೆ ವಾರ್ಷಿಕ ತೀರ್ಥಯಾತ್ರೆಯಾಗಿದೆ.     2026ರ ( ಹಿಜರ ಶಕೆ 1447 AH)  ಸೌದಿ ಅರೇಬಿಯಾದಲ್ಲಿ ಚಂದ್ರನ ವೀಕ್ಷಣೆಗೆ ಒಳಪಟ್ಟುಮೇ ತಿಂಗಳ ದಿನಾಂಕ 25-30 ರ ಪ್ರಮುಖ ದಿನಗಳನ್ನು ನಿರೀಕ್ಷಿಸಲಾಗಿದೆ.   ಹಜ್ ಮೆಕ್ಕಾ ಯಾತ್ರೆಯಲ್ಲಿ ಭಾರತದಿಂದ ಎಷ್ಟು ಇಸ್ಲಾಂ ಧರ್ಮದ ಅನುಯಾಯಿಗಳು ಭಾಗವಹಿಸುತ್ತಾರೆ?...   ಇದಕ್ಕೆ ಮಾನದಂಡ ಏನು?... ಇತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರದ ಮೂಲಕ ಮಾಹಿತಿ ನೀಡುವ ಸರಣಿ ಲೇಖನ ಓದಿ.      ಈ ವರ್ಷ 2026ರ ಹಜ್ ಯಾತ್ರೆಗೆ ಅಲ್ಲಿನ ಸೌದಿ ಅರೇಬಿಯಾ ಸರ್ಕಾರ ಮತ್ತು ಭಾರತ ಸರ್ಕಾರಗಳ ಒಪ್ಪಂದದಂತೆ ನಿಗದಿ ಪಡಿಸಿದ ಒಂದು ಲಕ್ಷದ ಎಪ್ಪತ್ತೈದು ಸಾವಿರದ ಇಪ್ಪತ್ತೈದು ಇಸ್ಲಾಂ ಧರ್ಮಿಯ ಯಾತ್ರಿಗಳು ಮಾತ್ರ ಭಾರತದಿಂದ ಹಜ್ ಯಾತ್ರೆ ಮಾಡಲು ಸಾಧ್ಯವಿದೆ.   ಸೌದಿ ಅರೇಬಿಯಾ ಜೊತೆಗಿನ ಹೊಸ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಭಾರತವು 2026 ಕ್ಕೆ 175,025 ಹಜ್ ಯಾತ್ರೆಗೆ ಅವಕಾಶಗಳನ್ನು ಪಡೆದುಕೊಂಡಿದೆ, ಕಳೆದ ವರ್ಷ 2025ರಲ್ಲೂ ಇಷ್ಟೇ ಸಂಖ್ಯೆಯ ಯಾತ್ರಿಗಳು ಅವಕಾಶ ಕಲ್ಪಿಸಲಾಗಿತ್ತು.   ಭಾರತ ದೇಶ ವಿಶ್ವದ ಎರಡನೆ ಅತಿ ಹೆಚ್ಚು ಹಜ್ ಯಾತ್ರಿಗಳು ಭಾಗವಹಿಸಲು ಅವಕಾಶ ಪಡೆದ ದೇಶವಾಗಿದೆ.   ವಿಶ್ವದ ಅತಿ ಹೆಚ್ಚು ಹಜ್ ಯಾತ್ರಿಗಳ ಅವಕಾಶ ಪಡೆಯುವ ದೇಶ ಇಂಡೋನೇಷಿಯ, ಅಲ...

4005. ದುಬಾರೆ ಆನೆ ಕ್ಯಾಂಪ್ ದುರಂತ

ದುಬಾರೆ_ಆನೆ_ದುರಂತ ತಮಿಳುನಾಡಿನ ಪ್ರವಾಸಿ ಮಹಿಳೆ ಮತ್ತು ಮಾರ್ತಾಂಡ ಎಂಬ ದಂತಗಳಿಲ್ಲದ ಗಂಡಾನೆ ಮೃತರಾಗಿದ್ದಾರೆ.     ಕೋರೆ ಇಲ್ಲದ ಗಂಡಾನೆಗಳನ್ನ ಹೆಣ್ಣಾನೆಗಳು ಇಷ್ಟಪಡುವುದಿಲ್ಲ ಇದರಿಂದ ಕೋರೆ ಇರುವ ಆನೆಗಳಿಗೂ ಮತ್ತು ಕೋರೆ ಇಲ್ಲದ ಮಖ್ನಾ ಆನೆಗಳಿಗೂ ಕಾಳಗ ನಡೆಯುತ್ತಿರುತ್ತದೆ.   ಪ್ರವಾಸಿಗಳು ಬೇಸಿಗೆ ರಜೆಯಲ್ಲಿ ಆನೆ ಕ್ಯಾಂಪ್ ಗಳಿಗೆ ಹೋಗುತ್ತಾರೆ, ಸಾಮಾನ್ಯವಾಗಿ ಆನೆ ಕ್ಯಾಂಪ್ ಗಳು ಹರಿಯುವ ನದಿ ನೀರಿನ ಪ್ರದೇಶವಾಗಿರುತ್ತದೆ.    ಅಲ್ಲಿ ರಾತ್ರಿ ಹೊತ್ತು ಕಾಡಿನಲ್ಲಿರುವ ಸಾಕಿದ ಆನೆಗಳನ್ನ ಬೆಳಿಗ್ಗೆ ಆಹಾರಕ್ಕಾಗಿ ಮತ್ತು ಸ್ನಾನಕ್ಕಾಗಿ ಆನೆ ಕ್ಯಾಂಪಿಗೆ ಮಾವುತರು ಕರೆ ತರುತ್ತಾರೆ ಆಗ ಪ್ರವಾಸಿಗಳಿಗೆ ಪ್ರವೇಶ ಶುಲ್ಕ ಪಡೆದು ಆನೆಗಳ ಸ್ನಾನ ಮಾಡಿಸುವ ಸ್ಥಳದಲ್ಲಿ ಪ್ರವಾಸಿಗಳನ್ನು ಬಿಡುತ್ತಾರೆ, ಪ್ರವಾಸಿಗಳು ಆನೆಯ ಜೊತೆ ನಿರಾಟ ಆಡುವ ಸೆಲ್ಫಿ ವಿಡಿಯೋ ಮಾಡಿಕೊಳ್ಳುತ್ತಾರೆ ಇದರಿಂದ ಹೆಚ್ಚು ಪ್ರವಾಸೋದ್ಯಮದ ಆಕರ್ಷಣೆ ಆನೆ ಕ್ಯಾಂಪ್ ಗಳಾಗಿದೆ.   ಇದೇ ರೀತಿ ಶಿವಮೊಗ್ಗ ಜಿಲ್ಲೆಯ #ಸಕ್ರೆಬೈಲು ಇದೆ, ಕೊಡಗಿನ #ದುಬಾರೆಯಲ್ಲಿ ದಂತವಿಲ್ಲದ #ಮಖ್ನಾ ಆನೆ ಮಾರ್ತಾಂಡ ನೀರಾಟದಲ್ಲಿದ್ದಾಗ ಅದರ ಮೇಲೆ ಕಂಜನ್ ಎಂಬ ದಸರಾ ಉತ್ಸವದಲ್ಲಿ ಭಾಗವಹಿಸುವ ಆನೆ ದಿಡೀರ್ ಆಗಿ ಮಾವುತನ ನಿಯಂತ್ರಣ ಮೀರಿ ದಾಳಿ ಮಾಡಿದೆ.    ಇದರಿಂದ ಆಯತಪ್ಪಿ ಮರ್ತಾಂಡ ಆನೆ ಬಿದ್ದಿದ್ದು ಪ್ರವಾಸಿ ಮಹಿಳ...

4004. ಹಿರಿಯ ಪತ್ರಕರ್ತ ರುದ್ರಪ್ಪನವರು ಬರೆದ IF GANDHI RETURNED ಪುಸ್ತಕ

ರುದ್ರಪ್ಪಚನ್ನಬಸಪ್ಪನವರು ಬರೆದ ಇಂಗ್ಲೀಷ್ ಪುಸ್ತಕ #if_Gandhi_Returned ದೊಡ್ಡ ದೊಡ್ಡ ವಿದ್ವಾಂಸರು ಓದಿ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ.    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರುದ್ರಪ್ಪನವರ ಪುಸ್ತಕಕ್ಕೆ ಸ್ವಾಗತಿಸುತ್ತಾ ಅವರ ಸಾದನೆಗೆ ಹೆಮ್ಮೆಪಡುತ್ತೇನೆ.   90ರ ದಶಕದಲ್ಲಿ ಉದಯ TVಯ ಮೊದಲ ಬ್ಯೂರೋ ಚೀಪ್ ಆಗಿದ್ದವರು ರುದ್ರಪ್ಪನವರು ಆಗ  ಉದಯ TV ಕನ್ನಡದ ಮೊದಲ ಖಾಸಾಗಿ TV ಜಾನಲ್ ಆಗಿತ್ತು.  ರುದ್ರಪ್ಪನವರು ಸಾಗರ ತಾಲೂಕಿನ ವಿಚಾರ ಕ್ರಾಂತಿಯ ಪಿತಾಮಹಾರಾಗಿದ್ದವರು ಸಾಗರ ತಾಲೂಕಿನಲ್ಲಿ ಅವರು ಹಚ್ಚಿದ ಜನಪರ ಹೋರಾಟದ ದೀಪ ಈಗಲೂ ಉರಿಯುತ್ತಿದೆ.   ರುದ್ರಪ್ಪನವರ ಕುಟುಂಬ ಎರೆಡು ಬಾರಿ ಶರಾವತಿ ನದಿ ಮುಳುಗಡೆಯಿಂದ ಸಂತ್ರಸ್ಥರಾದವರು, ಎಲ್ಲವನ್ನೂ ಕಳೆದುಕೊಂಡ ಕುಟುಂಬ.   ಒಮ್ಮೆ ಹಿರೇಬಾಸ್ಕರ ಆಣೆಕಟ್ಟಿನಿಂದ ಇನ್ನೊಂದು ಬಾರಿ ಲಿಂಗನಮಕ್ಕಿ ಆಣೆಕಟ್ಟಿನಿಂದ.     #ರುದ್ರಪ್ಪನವರು ಸೊನ್ನೆಯಿಂದ ದೊಡ್ಡ ಸಾದನೆಗೈದ ಸಾದಕರು.   70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು.    80ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಿ. ಕೃಷ್ಣಪ್ಪನವರ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು.    ಸಾಗರ ತಾಲೂಕಿನ ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂ...

4003. ಬೇಸೂರು ಅಣು ವಿದ್ಯುತ್ ಸ್ಥಾವರದ ಬಗ್ಗೆ ನಾಗೇಶ ಹೆಗಡೆ ಲೇಖನ

ಬೇಸೂರು_ಅಣುಸ್ಥಾವರದ_ಬಗ್ಗೆ, ವಿಮಾನ ಹಾರಾಟಕ್ಕೂ ಅಣುಸ್ಥಾವರಕ್ಕೂ ಸಂಬಂಧ ಇದೆಯಾ... ಈ ಬಗ್ಗೆ ಪರಿಸರ ಮತ್ತು ವಿಜ್ಞಾನ ಲೇಖಕ #ನಾಗೇಶ್_ಹೆಗಡೆ ಬರೆದ ಪ್ರಜಾವಾಣಿ  ಪತ್ರಿಕೆೆಯ ಲೇಖನ.    ನಿನ್ನೆ 20- ಮೇ -2026 ಬುಧವಾರ ಬೇಸೂರಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಅಣು ಸ್ಥಾವರ ವಿರೋದಿಸಿ ಪಾದಯಾತ್ರೆ ಮಾಡಿದ್ದಾರೆ.  ಸಾಗರದ ಸಮೀಪದ ದಟ್ಟ ಕಾಡಿನ #ಬೇಸೂರು ಎಂಬಲ್ಲಿ ಕೈಗಾ ಮಾದರಿಯ ಹೊಸ ಪರಮಾಣು ಸಂಕೀರ್ಣಕ್ಕೆ ಸ್ಥಳ ಸಮೀಕ್ಷೆ ನಡೆದಿದೆ.      ಅಲ್ಲಿ ನಿರಂತರ ವಿಮಾನಗಳ ಹಾರಾಟವೂ ನಡೆಯುತ್ತಿದೆ,ಕತ್ತಲಲ್ಲಿ ಕೊಳ್ಳಿದೆವ್ವ ಕಂಡಂತೆ ಜನ ಕಂಗಾಲಾಗಿದ್ದಾರೆ.     #ವಾಸ್ತವ ಏನು? ಈ ಕುರಿತು ಪ್ರಜಾವಾಣಿ ಪತ್ರಿಕೆಯಲ್ಲಿ ನಾಗೇಶ್ ಹೆಗಡೆ ಅಂಕಣ ಬರೆಹ ಇದು.    ಇದನ್ನು ಬೇಸೂರು ಅಣುಸ್ಥಾವರದ ಹೋರಾಟಗಾರರು ಮತ್ತು ಸ್ಥಳೀಯರು ಓದಲೇ ಬೇಕು.    ನಾಗೇಶ್ ಹೆಗಡೆ ಕರ್ನಾಟಕದ ಅತ್ಯಂತ ಪ್ರಮುಖ ಪರಿಸರವಾದಿ, ಪತ್ರಕರ್ತ ಮತ್ತು ಲೇಖಕರಾಗಿದ್ದಾರೆ. ​ ಪ್ರಸಿದ್ಧ ಕನ್ನಡ ದಿನಪತ್ರಿಕೆ #ಪ್ರಜಾವಾಣಿ ಮತ್ತು ಅದರ ಸಹೋದರ ಪ್ರಕಟಣೆಯಾದ 'ಸುಧಾ' ನಿಯತಕಾಲಿಕೆಯಲ್ಲಿನ ಅವರ ದೀರ್ಘಾವಧಿಯ ಮತ್ತು ಪ್ರಭಾವಶಾಲಿ ಅಂಕಣ ಬರಹಗಳಿಗಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.   ಇವರು ಬರೆದ ಪುಸ್ತಕ   #ಇರುವುದೊಂದೇ_ಭೂಮಿ ಇದು ಮನುಷ್ಯನ ದುರಾಸೆ, ಕೈಗಾರ...

4002. ಮುಖ್ಯಮಂತ್ರಿ ನಿಜಲಿಂಗಪ್ಪನವರು

#ಮುಖ್ಯಮಂತ್ರಿ_ನಿಜಲಿಂಗಪ್ಪನವರು. ನಮ್ಮೂರ ಬ್ಯಾಂಕ್ ಶಾಖೆ ಉದ್ಘಾಟಿಸಿದ್ದರು.  #ಆನಂದಪುರಂನ ಸ್ಟೇಟ್ ಬ್ಯಾಂಕ್ ಮೈಸೂರಿನ ಶಾಖೆ ಉದ್ಘಾಟನೆ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪರಿಂದ ನೆರವೇರಿತ್ತು.   ದಿನಾಂಕ 2 - ಸೆಪ್ಟೆಂಬರ್ - 1965 ನೇ ಇಸವಿ ಗುರುವಾರ ಸಂಜೆ 5ಕ್ಕೆ ನಡೆದ ಈ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಗಿನ ವಿದಾನ ಪರಿಷತ್ ಸದಸ್ಯರು ಮತ್ತು ರಾಷ್ಟ್ರೀಯ ಅಭಿವೃದ್ದಿ ಸಮಿತಿ ಸದಸ್ಯರಾಗಿದ್ದ ಆನಂದಪುರಂ #ಎ_ಆರ್_ಬದರಿನಾರಾಯಣ ಅಯ್ಯಂಗಾರ್ ಮತ್ತು ಆಗಿನ ಸಾಗರ ತಾಲೂಕ್ ಬೋಡ್೯ ಅಧ್ಯಕ್ಷರಾಗಿದ್ದ ಶಿರವಂತೆಯ #ಹೆಚ್_ಎಲ್_ವೀರಭದ್ರಪ್ಪಗೌಡರು ಭಾಗವಹಿಸಿದ್ದರು.  ಅವತ್ತೇ ಸಮೀಪದ ಹೊಸಗುಂದದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾದ #ಹೆಡತ್ರಿನಾಗರಾಜಗೌಡರ ತಂದೆ ಊರಿಗೆ ನಿರ್ಮಿಸಿಕೊಟ್ಟಿದ್ದ ಪ್ರಾಥಮಿಕ ಶಾಲೆ ಮತ್ತು ತೆರೆದಬಾವಿ ಮುಖ್ಯ ಮಂತ್ರಿ ನಿಜಲಿಂಗಪ್ಪನವರು ಉದ್ಘಾಟಿಸುತ್ತಾರೆ.   ಆನಂದಪುರಂಗೆ ಬ್ಯಾಂಕ್ ತಂದ ಕಥೆಯೂ ರೋಚಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಂಜೂರು ಮಾಡಿಸಿ ಈಗಿನ ಬಸ್ ಸ್ಟಾಂಡ್ ಇದ್ದ ಜಾಗದಲ್ಲಿ ನಿರ್ಮಿಸಿದವರು ಬದರಿನಾರಾಯಣ ಅಯ್ಯಂಗಾರ್.   ಇಡೀ ಆನಂದಪುರಂಗೆ ಇದು ಮೊದಲ RCC ಕಟ್ಟಡವಾಗಿತ್ತು.   ಉದ್ಘಾಟನೆ ಮಾಡಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ಆಗಿನ MLC ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕರು ಆಗಿದ್ದ ಬದರಿನಾರಾಯಣ ಅಯ್ಯಂಗಾರರು ಕ...

4001. ಲೋಬೋ ದಂಪತಿಗಳು ಶಿಕ್ಷಕರು

#ರಿಚರ್ಡ್_ಲೋಬೋ_ಮತ್ತು_ಲಿಲ್ಲಿಬಾಯಿ_ಶಿಕ್ಷಕ_ದಂಪತಿಗಳು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಈ ಸರ್ಕಾರಿ ಪ್ರಾಥಮಿಕ ಶಾಲೆ. ವಿದ್ಯಾಮಂತ್ರಿಗಳಾಗಿದ್ದ #ಎ_ಆರ್_ಬದರಿನಾರಾಯಣ್_ಅಯ್ಯಂಗಾರ್ ವ್ಯಾಸಂಗ ಮಾಡಿದ ಸರ್ಕಾರಿ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ದೀರ್ಘಕಾಲ ಶಿಕ್ಷಕ ವೃತ್ತಿಮಾಡಿದ್ದ ರಿಚರ್ಡ್ ಲೋಬೋ ಮಾಸ್ಟರ್ ಮತ್ತು ಅವರ ಪತ್ನಿ ಲಿಲ್ಲಿಬಾಯಿ ಟೀಚರ್ ಇವರ ಶಿಸ್ತಿನ ವೃತ್ತಿ ಜೀವನ ಆನಂದಪುರಂಗೆ ಮಾದರಿ.  ಈ ಶಾಲೆ ಆನಂದಪುರಂ ಜಾಮೀಯ ಮಸೀದಿ ಎದರು ಇದೆ, ಈ ಶಾಲೆಗೆ ಅವಶ್ಯವಿರುವ ಜಾಗ ಭೂದಾನ ನೀಡಿದವರು ರಾಮಣ್ಣ ಅಂತ ಶಾಲೆಗೆ ಭೂದಾನ ಮಾಡಿದ್ದರಿಂದ ಅವರ ಹೆಸರು ಸ್ಕೂಲ್ ರಾಮಣ್ಣ ಅಂತ ಆಯಿತು.    ಈ ಜಾಗ ಕೆಳದಿ ರಾಜ #ವೆಂಕಟಪ್ಪನಾಯಕ ಮತ್ತು ರಂಗೋಲಿ ಪ್ರವೀಣೆ #ಚಂಪಕ_ರಾಣಿಯ ದುರಂತ ಪ್ರೇಮ ಕಥೆಗೆ ತಳಕು ಹಾಕಿಕೊಂಡಿದೆ.    ರಾಣಿ ಚಂಪಕಾಳ ಈ ಮೂಲ ಮನೆ ಜಾಗವೇ ಈ ಶಾಲಾ ಜಾಗವಾಗಿದೆ.   ಆಗಿನ ಊರಿನ ಮಕ್ಕಳಿಗೆ ವಿದ್ಯೆ ದೊರೆಯಲೆಂಬ ಸದುದ್ದೇಶದಿಂದ  ಶಾಲೆಯ ಜಾಗ ಮತ್ತು ಪೋಲಿಸ್ ವಸತಿ ಗೃಹ ನಿರ್ಮಿಸಿದ ಜಾಗ (ಈಗ ಇದು ಅತ್ಯಂತ ಬೆಲೆಯ ನಿವೇಶನ) ದಾನ ಮಾಡಿದ್ದರಿಂದ ಆ ಮನೆತನಕ್ಕೆ ಸ್ಕೂಲ್ ಮನೆತನ ಎಂತಲೇ ಹೆಸರು ತಲೆಮಾರಿಂದ ತಲೆಮಾರಿಗೆ ಮುಂದುವರಿದಿದೆ.   ಆನಂದಪುರಂನ ಪತ್ರಕರ್ತ ಹಾಗೂ ಉತ್ಸಾಹಿ ಸಮಾಜ ಸೇವಕರಾದ #ಬಿ_ಡಿ._ರವಿಯ ತಾಯಿಯಾದ #ಲಕ್ಷ್ಮಮ್ಮನವರ ಅಜ್ಜ #ಸ್ಕೂಲ್_ರಾ...

4000. ನೀಟ್ ಪರೀಕ್ಷೆಯಲ್ಲಿ ಜನಿವಾರದ ವಿವಾದ

#ಪ್ರವೇಶ_ಪರೀಕ್ಷೆ #ಜನಿವಾರದ_ವಿವಾದ   ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2026 ಪರೀಕ್ಷೆಯನ್ನು  ದಿನಾಂಕ ಮೇ 3, 2026 ಭಾನುವಾರ ನಡೆಸಲಿದೆ.      ಮಧ್ಯಾಹ್ನ 2:00 ರಿಂದ ಸಂಜೆ 5:20 ರವರೆಗೆ ಒಂದೇ ಪಾಳಿಯಲ್ಲಿ ಪೆನ್ನು-ಪೇಪರ್ (ಆಫ್‌ಲೈನ್) ಮೋಡ್‌ನಲ್ಲಿ ನಡೆಯಲಿದೆ.   ಈ ಪರೀಕ್ಷೆಗಳಲ್ಲಿ ವಾಮ ಮಾರ್ಗದಲ್ಲಿ ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಇತ್ಯಾದಿ ವಂಚನೆ ಮಾಡುವುದನ್ನ ತಡೆಗಟ್ಟಲು, ಆಧುನಿಕ ತಂತ್ರಜ್ಞಾನದ ಗುಪ್ತ ಕ್ಯಾಮೆರಾ ಮತ್ತು ಮೈಕ್ರೋ ಫೋನ್ ಇತ್ಯಾದಿ ಪರೀಕ್ಷಾ ಕೇಂದ್ರದ ಒಳಗೆ ತರದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅನೇಕ ನಿಷೇಧಗಳನ್ನ ಹೇರಿದೆ ಮತ್ತು ಏನನ್ನ ತರಬಹುದು ಎಂದು ಮಾರ್ಗಸೂಚಿ ಪ್ರಕಟಿಸಿದೆ.    ಪರೀಕ್ಷ ಕೇಂದ್ರ ಪ್ರವೇಶದ ಮುನ್ನ ಕಡ್ಡಾಯ ತಪಾಸಣೆ ಮೂಲಕ ಪ್ರವೇಶ ನೀಡುತ್ತದೆ ಈ ಕಾರಣದಿಂದ ಸುಲಭ ತಪಾಸಣೆಗಾಗಿ ಡ್ರೆಸ್ ಕೋಡ್ ಮಾಡಿದೆ.    ಅನೇಕ ಧಾರ್ಮಿಕ ಕಾರಣದ ವಿನಾಯಿತಿ ಮತ್ತು ಆರೋಗ್ಯ ಕಾರಣದ ವಿನಾಯಿತಿಗಳನ್ನ ನೀಡಿದೆ  ಅಂತವರು ಪರೀಕ್ಷಾ ಕೇಂದ್ರಕ್ಕೆ ಆದಷ್ಟು ಮೊದಲಿಗೆ ಹೋಗಿ ತಮ್ಮ ತಪಾಸಣೆಗಳನ್ನು ಪೂರ್ಣಗೊಳಿಸಬೇಕು.   ನೀಟ್ ಪರೀಕ್ಷೆಯಲ್ಲಿ ಜನಿವಾರ ಧರಿಸುವ ಪ್ರಮುಖ ಅಂಶಗಳು ಮತ್ತು ವಿವಾದಗಳು ಹೆಚ್ಚು ಸುದ್ದಿ ಮಾಡುತ್ತಿದೆ.  ಏಪ್ರಿಲ್ 2026 ರಲ್ಲಿ ಕರ್ನಾಟಕದ ಕೆಲವು ಸಿಇಟಿ ಪರೀಕ್ಷಾ ಕೇಂದ...