ಭಾಗ_5_ನಿಶಿಧಿ_ಮಂಟಪದ_ಹೊರ_ಮೇಲ್ಚಾವಣೆ_ಮತ್ತು
#ಒಳ_ಮೇಲ್ಚಾವಣೆಗಳ_ಕೆತ್ತನೆ_ಈ_ರೀತಿ_ಇರುತ್ತದೆ.
ಜೈನ ಧರ್ಮದಲ್ಲಿ ಸನ್ಯಾಸಿಗಳು ಅಥವಾ ಶ್ರಾವಕರು ಸಲ್ಲೇಖನ ವ್ರತ ಅಂದರೆ ಉಪವಾಸವಿದ್ದು ಪ್ರಾಣತ್ಯಾಗ ಮಾಡುವುದು ಕೈಗೊಂಡ ನೆನಪಿಗಾಗಿ 'ನಿಶಿದಿ' ಅಥವಾ 'ನಿಶಿಧಿ' ಕಲ್ಲುಗಳನ್ನು ಹಾಗೂ ಮಂಟಪಗಳನ್ನು ಸ್ಥಾಪಿಸಲಾಗುತ್ತಿತ್ತು.
ಇವುಗಳ ಒಳಭಾಗದ (ಗಭ೯ಗುಡಿ )ಮೇಲ್ಛಾವಣಿಯಲ್ಲಿ ಶಾಂತಿಯುತ ಕಮಲದ ಕೆತ್ತನೆಗಳು ಸಾಮಾನ್ಯವಾಗಿರುತ್ತವೆ.
ಇಡೀ ಮೇಲ್ಛಾವಣಿಯನ್ನು ಕಣಶಿಲೆ ಅಥವಾ ಬಳಪದ ಕಲ್ಲಿನಲ್ಲಿ ಅತ್ಯಂತ ಸೂಕ್ಷ್ಮವಾಗಿ ಇಂಟರ್ಲಾಕಿಂಗ್ ವಿಧಾನದ ಮೂಲಕ ಜೋಡಿಸಲಾಗಿರುತ್ತದೆ.
ಮಧ್ಯಭಾಗಕ್ಕೆ ಹೋದಂತೆಲ್ಲಾ ಆಳವು ಹೆಚ್ಚುತ್ತಾ ಹೋಗುವ ಈ ವಿನ್ಯಾಸವು ಮಂಟಪಕ್ಕೆ ಭವ್ಯವಾದ ನೋಟವನ್ನು ನೀಡುತ್ತದೆ
ನಿಶಿಧಿ ಮಂಟಪದ ಹೊರ ಆವರಣದ ಮೇಲ್ಚಾವಣೆ ಈ ಕೆಳಕಂಡ ರೀತಿ ಇರುತ್ತದೆ.
ಇದು ಸಾಂಪ್ರದಾಯಿಕ ಜೈನ ವಾಸ್ತುಶಿಲ್ಪ ಶಾಸ್ತ್ರದ ಅತ್ಯಂತ ಸುಂದರ ಹಾಗೂ ಕಲಾತ್ಮಕ ಕೆತ್ತನೆಗೆ ಅತ್ಯುತ್ತಮ ಉದಾಹರಣೆಯಾಗಿದೆ.
ಚಾವಣಿಯ ಮಧ್ಯಭಾಗದಲ್ಲಿ ಸುಂದರವಾದ ಅರಳಿದ ಕಮಲದ ಹೂವಿನ ಆಕೃತಿಯನ್ನು ಕೆತ್ತಲಾಗುತ್ತದೆ, ಇದು ಜೈನ ಧರ್ಮದಲ್ಲಿ ಪವಿತ್ರತೆ ಮತ್ತು ಜ್ಞಾನದ ಸಂಕೇತವಾಗಿರುತ್ತದೆ.
ಕಮಲದ ಸುತ್ತಲೂ ಎಂಟು ಮತ್ತು ಹನ್ನೆರಡು ಕೋನಗಳ ನಕ್ಷತ್ರಾಕಾರದ ಜ್ಯಾಮಿತೀಯ ರೇಖೆಗಳನ್ನು ಪರಸ್ಪರ ಹೆಣೆದುಕೊಂಡಿರುವಂತೆ ಅತ್ಯಂತ ನಿಖರವಾಗಿ ಕೆತ್ತಲಾಗುತ್ತದೆ.
ಕಠಿಣವಾದ ಕಲ್ಲಿನಲ್ಲೇ ಇಷ್ಟೊಂದು ಸೂಕ್ಷ್ಮವಾದ ಮತ್ತು ಜ್ಯಾಮಿತೀಯವಾಗಿ ನಿಖರವಾದ ವಿನ್ಯಾಸಗಳನ್ನು ಮೂಡಿಸಿರುವುದು ಅಂದಿನ ಶಿಲ್ಪಿಗಳ ಅದ್ಭುತ ಕೌಶಲ್ಯವನ್ನು ಪ್ರದರ್ಶಿಸುತ್ತದೆ.
ನಿಶಿಧಿ ಮಂಟಪ ಮತ್ತು ವಾಸ್ತುಶಿಲ್ಪದ ಪ್ರಮುಖ ಲಕ್ಷಣಗಳು,ಭುವನೇಶ್ವರಿ ಮತ್ತು ಕಮಲದ ವಿನ್ಯಾಸದ ಚಿತ್ರದ ಮಧ್ಯಭಾಗದಲ್ಲಿ ತಲೆಕೆಳಗಾಗಿ ಬಿದ್ದಿರುವ ದೊಡ್ಡ ಕಮಲದ ಮೊಗ್ಗಿನಂತಹ ರಚನೆಯಿರುತ್ತದೆ.
ಇದನ್ನು ಸುತ್ತುವರಿದು ವೃತ್ತಾಕಾರದ ಹಲವು ಪದರಗಳಲ್ಲಿ ದಳಗಳನ್ನು ಕೆತ್ತಲಾಗುತ್ತದೆ.
ಇದರಿಂದ ಜೈನ ಸಮಾದಿ ಮಂದಿರವನ್ನು ಸುಲಭವಾಗಿ ಗುರುತಿಸ ಬಹುದಾಗಿದೆ.
#ಮುಂದಿನ_ಭಾಗ_6_ನಿಶಿದಿ_ಮಂಟಪದ_ಒಳಗೆ_ಪೀಠದ_ಮೇಲೆ_ನಿಶಿದಿ_ಶಾಸನ
#jainism #chennabyradevi
#samadhi #siddeshwaratemple #genasinakuni
#avinahalli #ikkeri #keladi #nishadimantapa
Comments
Post a Comment