Skip to main content

Posts

Showing posts with the label Mass fishing sports challenge the village peace.

Blog number 876, ಹಿಂಸೆಗೆ ತಿರುಗಿದ ಕೆರೆ ಬೇಟೆ, ಜಿಲ್ಲಾಡಳಿತ ಇದಕ್ಕೊಂದು ನಿಯಮ ಗೊತ್ತುಪಡಿಸಬೇಕು, ಆಯೋಜಕರೂ ಕೆರೆ ವಿಸ್ತಿರ್ಣ ಮತ್ತು ಕೆರೆಯಲ್ಲಿ ಸಿಗಬಹುದಾದ ಮೀನಿನ ಪ್ರಾಮಾಣ ನೋಡಿ ಪ್ರವೇಶ ಮಿತಿಗೊಳಿಸಬೇಕು.

#ಹಿಂಸಾಚಾರಕ್ಕೆ_ತಿರುಗಿದ_ಕೆರೆಬೇಟೆ #ಜಿಲ್ಲಾಡಳಿತ_ಇದಕ್ಕೊಂದು_ನಿಯಮ_ಗೊತ್ತು_ಮಾಡಬೇಕು. #ಪೋಲಿಸರ_ಅನುಮತಿ_ಜೊತೆಗೆ_ಕೆರೆಬೇಟೆಗೆ_ನಿರ್ದಿಷ್ಟ_ಜನರಿಗೆ_ಮಾತ್ರ_ಅವಕಾಶ_ನೀಡಬೇಕು.   ನನ್ನ ಮನೆ ಕೆರೆ ಅಂಚಿನಲ್ಲಿದೆ ಆದ್ದರಿಂದ ಕೆರೆಯ ಮೀನು ಶಿಕಾರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವಂತಾಯಿತು.   ಮೀನು ಶಿಕಾರಿಗೆ ಬೇಕಾದ ಏಕಾಗ್ರತೆ ಮತ್ತು ತಾಳ್ಮೆ ಇಲ್ಲದಿದ್ದರೆ ಮೀನು ಸಿಗುವುದು ದೂರದ ಮಾತು.    ಮೀನುಗಾರಿಕಾ ಇಲಾಖೆ/ ಗ್ರಾಮ ಪಂಚಾಯತ್ ಗಳು ಕೆರೆಗಳನ್ನು ಹರಾಜು ಮಾಡಿ ಆದಾಯ ಪಡೆಯಲು ಶುರು ಮಾಡಿದ ಮೇಲೆ ಹರಾಜು ಹಿಡಿದವ ತಾನು ವಿನಿಯೋಗಿಸಿದ ಬಂಡವಾಳದ ಮೇಲೆ ಲಾಭ ಪಡೆಯಲು ಈ ಕೆರೆ ಬೇಟೆ ಎಂಬ ಕ್ರೀಡೆಯಂತಹ ಮೀನು ಶಿಕಾರಿಗೆ ಖದರು ಬಂತು.   40-50 ವರ್ಷದ ಹಿಂದೆ 50 ರಿಂದ 100 ಕೂಣಿ (ಮೀನು ಹಿಡಿಯುವ ಬಿದಿರಿನ ಸಾದನ ) ಬಂದರೆ ಹೆಚ್ಚು, 40 ಎಕರೆ ವಿಸ್ತಿರ್ಣದ ಕೆರೆಯಲ್ಲಿ ನೂರು ಜನರಿಗೆ ಯಥೇಚ್ಚ ಮೀನು ಸಿಗುತ್ತಿತ್ತು ಆಗೆಲ್ಲ ಕೆರೆ ಬೇಟೆಗೆ ಕೂಣಿಗೆ 1ರೂಪಾಯಿ ಅಥವ 2 ರೂಪಾಯಿ ಇರುತ್ತಿತ್ತು ಆದರೆ ಆ ಕಾಲದಲ್ಲಿ ಇದು ದುಬಾರಿ ಅಂತ ಬೇಟೆಗಾರರು ತಗಾದೆ ತೆಗೆಯುತ್ತಿದ್ದರು.    ಆ ಕಾಲದಲ್ಲಿ ಕೆರೆಯಲ್ಲಿ ಸಿಗುತ್ತಿದ್ದ ಕುಚ್ಚು, ಮುರುಗೋಡು ಮತ್ತು ಚೇಳಿ ಮೀನಿನ ತಳಿಗಳು ಈಗ ಇಲ್ಲವೇ ಇಲ್ಲ.   ನಿನ್ನೆ ಪಕ್ಕದ ಸಿದ್ದಾಪುರ ತಾಲ್ಲೂಕಿನ ಕಾನಗೋಡಿನ ಕೆರೆ ಬೇಟೆ ಸದರಿ ಕೆ...