Skip to main content

Blog number 876, ಹಿಂಸೆಗೆ ತಿರುಗಿದ ಕೆರೆ ಬೇಟೆ, ಜಿಲ್ಲಾಡಳಿತ ಇದಕ್ಕೊಂದು ನಿಯಮ ಗೊತ್ತುಪಡಿಸಬೇಕು, ಆಯೋಜಕರೂ ಕೆರೆ ವಿಸ್ತಿರ್ಣ ಮತ್ತು ಕೆರೆಯಲ್ಲಿ ಸಿಗಬಹುದಾದ ಮೀನಿನ ಪ್ರಾಮಾಣ ನೋಡಿ ಪ್ರವೇಶ ಮಿತಿಗೊಳಿಸಬೇಕು.

#ಹಿಂಸಾಚಾರಕ್ಕೆ_ತಿರುಗಿದ_ಕೆರೆಬೇಟೆ

#ಜಿಲ್ಲಾಡಳಿತ_ಇದಕ್ಕೊಂದು_ನಿಯಮ_ಗೊತ್ತು_ಮಾಡಬೇಕು.

#ಪೋಲಿಸರ_ಅನುಮತಿ_ಜೊತೆಗೆ_ಕೆರೆಬೇಟೆಗೆ_ನಿರ್ದಿಷ್ಟ_ಜನರಿಗೆ_ಮಾತ್ರ_ಅವಕಾಶ_ನೀಡಬೇಕು.

  ನನ್ನ ಮನೆ ಕೆರೆ ಅಂಚಿನಲ್ಲಿದೆ ಆದ್ದರಿಂದ ಕೆರೆಯ ಮೀನು ಶಿಕಾರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವಂತಾಯಿತು.
  ಮೀನು ಶಿಕಾರಿಗೆ ಬೇಕಾದ ಏಕಾಗ್ರತೆ ಮತ್ತು ತಾಳ್ಮೆ ಇಲ್ಲದಿದ್ದರೆ ಮೀನು ಸಿಗುವುದು ದೂರದ ಮಾತು.
   ಮೀನುಗಾರಿಕಾ ಇಲಾಖೆ/ ಗ್ರಾಮ ಪಂಚಾಯತ್ ಗಳು ಕೆರೆಗಳನ್ನು ಹರಾಜು ಮಾಡಿ ಆದಾಯ ಪಡೆಯಲು ಶುರು ಮಾಡಿದ ಮೇಲೆ ಹರಾಜು ಹಿಡಿದವ ತಾನು ವಿನಿಯೋಗಿಸಿದ ಬಂಡವಾಳದ ಮೇಲೆ ಲಾಭ ಪಡೆಯಲು ಈ ಕೆರೆ ಬೇಟೆ ಎಂಬ ಕ್ರೀಡೆಯಂತಹ ಮೀನು ಶಿಕಾರಿಗೆ ಖದರು ಬಂತು.
  40-50 ವರ್ಷದ ಹಿಂದೆ 50 ರಿಂದ 100 ಕೂಣಿ (ಮೀನು ಹಿಡಿಯುವ ಬಿದಿರಿನ ಸಾದನ ) ಬಂದರೆ ಹೆಚ್ಚು, 40 ಎಕರೆ ವಿಸ್ತಿರ್ಣದ ಕೆರೆಯಲ್ಲಿ ನೂರು ಜನರಿಗೆ ಯಥೇಚ್ಚ ಮೀನು ಸಿಗುತ್ತಿತ್ತು ಆಗೆಲ್ಲ ಕೆರೆ ಬೇಟೆಗೆ ಕೂಣಿಗೆ 1ರೂಪಾಯಿ ಅಥವ 2 ರೂಪಾಯಿ ಇರುತ್ತಿತ್ತು ಆದರೆ ಆ ಕಾಲದಲ್ಲಿ ಇದು ದುಬಾರಿ ಅಂತ ಬೇಟೆಗಾರರು ತಗಾದೆ ತೆಗೆಯುತ್ತಿದ್ದರು.
   ಆ ಕಾಲದಲ್ಲಿ ಕೆರೆಯಲ್ಲಿ ಸಿಗುತ್ತಿದ್ದ ಕುಚ್ಚು, ಮುರುಗೋಡು ಮತ್ತು ಚೇಳಿ ಮೀನಿನ ತಳಿಗಳು ಈಗ ಇಲ್ಲವೇ ಇಲ್ಲ.
  ನಿನ್ನೆ ಪಕ್ಕದ ಸಿದ್ದಾಪುರ ತಾಲ್ಲೂಕಿನ ಕಾನಗೋಡಿನ ಕೆರೆ ಬೇಟೆ ಸದರಿ ಕೆರೆ ಮೀನು ಸಾಕಾಣಿಕೆ ಮಾಡುತ್ತಿರುವ ಊರಿನ ದೇವಸ್ಥಾನದ ಸಮಿತಿ ಹಮ್ಮಿಕೊಂಡಿದೆ ಇದರಲ್ಲಿ ಬರುವ ಆದಾಯ ಗ್ರಾಮದ ದೇವಾಲಯದ ಅಭಿವೃದ್ಧಿಗಾಗಿ ಬಳಸುತ್ತಾರೆ ಅಂತ ಇದೇ ಊರಿನ ಈಗ ಬೆಂಗಳೂರಲ್ಲಿ ಖ್ಯಾತ ವಕೀಲರಾಗಿರುವ ಕಾನುಗೋಡು ಗಣಪತಿಯವರ ಪೇಸ್ ಬುಕ್ ನಲ್ಲಿ ನೋಡಿದ್ದೆ.
  ಕುತೂಹಲದಿಂದ ನಿನ್ನೆ ಬೆಳಿಗ್ಗೆ ಅಲ್ಲಿ೦ದ ಲೈವ್ ಮಾಡುತ್ತಿದ್ದ ಅನೇಕ FB ಗೆಳೆಯರ ವಾಲ್ ನಲ್ಲಿ ನೋಡುವಾಗ ಅಲ್ಲಿನ ವ್ಯವಸ್ಥೆ, ಪ್ರವೇಶ ಧರ 600, ಬೇಟೆಗಾರರಿಗೆ ಸಮಿತಿಯಿಂದ ಟೀ ಶರ್ಟ್ ಎಲ್ಲ ನೀಡುತ್ತಿದ್ದನ್ನು ನೋಡುತ್ತಾ ಇದ್ದೆ.
  ವ್ಯಾಪಕ ಪ್ರಚಾರ ಸಾಮಾಜಿಕ ಜಾಲ ತಾಣದಿಂದ ಈ ಕೆರೆ ಬೇಟೆಗೆ ಸಿಕ್ಕಿದ್ದರಿಂದ ನಿರೀಕ್ಷೆಗೂ ಮೀರಿ ಮೀನು ಹಿಡಿಯುವ ಸಾದನ ಬಿದಿರಿನ ಕೂಣಿಗಳು ಬಂದಿದ್ದವು ಅದಕ್ಕೂ ನಾಲ್ಕು ಪಟ್ಟು ಪ್ರೇಕ್ಷಕರು ಅಲ್ಲಿದ್ದರು.
  5000 ದಾಟಿದೆ 7000 ಮುಟ್ಟಿದೆ (ಉತ್ಪ್ರೇಕ್ಷೆ ಇರಬಹುದು) ಎಂಬ ಮಾತುಗಳು, 7000 ಕೂಣಿ X 600 ರೂಪಾಯಿ ಅಂದರೆ 42 ಲಕ್ಷ ಹಣ ಆಯಿತು ಎಂಬ ಗುಲ್ಲೂ ಆಯಿತು ಇದರ ಅದ೯ ಆದರು ಖರ್ಚು ಕಳೆದು 20 ಲಕ್ಷ ದೇವಾಲಯ ನಿರ್ಮಾಣಕ್ಕೆ ಸಂಗ್ರಹ ಆಗಿರಬೇಕು.
  ಕೆರೆ ವಿಸ್ತಿರ್ಣಕ್ಕಿಂತ ಸೇರಿದ ಶಿಕಾರಿಗಾರರ ಸಂಖ್ಯೆ ಮಿತಿ ಮೀರಿದ್ದರಿಂದ ಸ್ವಾಭಾವಿಕವಾಗಿ ಎಲ್ಲರಿಗೂ ಮೀನು ಸಿಗಲಿಲ್ಲ ಇದು ಶಿಕಾರಿಯನ್ನು ಕ್ರೀಡೆ ಎಂಬ ಕ್ರೀಡಾ ಮನೋಬಾವದಲ್ಲಿ ಭಾಗವಹಿಸಿದವರು ಪರಿಗಣಿಸಿದ್ದರೆ ಮತ್ತು ಈ ಹಣ ಯಾರೋ ವ್ಯಾಪಾರಿಗೆ ಲಾಭ ಆಗುವುದಿಲ್ಲ ಸಮೂದಾಯದ ದೇವಾಲಯಕ್ಕೆ ಬಳಕೆ ಆಗುತ್ತಿದೆ ಎಂಬುದರಿಂದ ಮತ್ತು ಎಲ್ಲೇ ಕೆರೆ ಬೇಟಿ ಆದರೆ ಶಿಕಾರಿ ಆಗಲಿ ಬಿಡಲಿ ಕಟ್ಟಿದ ಪ್ರವೇಶ ಧನ ವಾಪಾಸು ಕೊಡುವ ಪದ್ಧತಿ ಇಲ್ಲವಾದ್ದರಿಂದ ಇಲ್ಲಿ ಮೀನು ಸಿಕ್ಕಿಲ್ಲ ಹಣ ವಾಪಾಸು ಕೊಡಿ ಎಂದು ತಕರಾರು ಮಾಡಿದವರ ಉದ್ದೇಶ ಸರಿ ಅಲ್ಲ.
   ಪೇಸ್ ಬುಕ್ ಲೈವ್ ನೋಡುವಾಗಲೇ ಯಾರಿಗೂ ಮೀನು ಸಿಕ್ಕಿಲ್ಲ, ಮೋಸ ಅಂತೆಲ್ಲ ಹೇಳುತ್ತಿದ್ದ ಪ್ರೇಕ್ಷಕರ ಮಾತು ನಂತರ ಹಣ ವಾಪಾಸಿಗೆ ಒತ್ತಡ, ಪೋಲಿಸರ ಹರ ಸಾಹಸ ನಂತರ ಊರಲ್ಲಿ ಮನೆಗೆ ನುಗ್ಗುತ್ತಿದ್ದಾರೆಂಬಲ್ಲಿಗೆ ಕೇಳಿ ಬಂತು.
  ಇವತ್ತು ಪತ್ರಿಕೆಗಳಲ್ಲಿ, ಟೀವಿ ಚಾನಲ್ ನಲ್ಲಿ ಊರಿಗೆ ನುಗ್ಗಿ ದರೋಡೆ ಹಲ್ಲೆ ಮಾಡಿದ್ದು ನೋಡಿ ಸದುದ್ದೇಶದ ಜನಪದ ಕ್ರೀಡೆಯಂತ ಕೆರೆ ಬೇಟೆ ಮುಂದಿನ ದಿನದಲ್ಲಿ ಈ ರೀತಿ ಹಿಂಸಾತ್ಮಕವಾಗಿ ಊರಿನ ಶಾಂತಿ ಭಂಗ ದರೋಡೆ - ಕೊಲೆಗಳೂ ಆಗುವ ಸಾಧ್ಯತೆ ಇದೆ.
  ಆದ್ದರಿಂದ ಜಿಲ್ಲಾಡಳಿತ ಪೋಲಿಸ್ ಅನುಮತಿ ಇಲ್ಲದೆ ಇಂತಹ ಕೆರೆ ಬೇಟೆ ನಡೆಸಲು ಬಿಡ ಭಾರದು, ಕೆರೆ ವಿಸ್ತಿಣ೯ಕ್ಕೆ ತಕ್ಕ೦ತೆ ಬೇಟೆಗಾರರ ಸಂಖ್ಯೆ ನಿಗದಿ ಮಾಡಬೇಕು.
  ಒ0ದು ಎಕರೆ ವಿಸ್ತಿರ್ಣ ಅಂದರೆ 42 ಸಾವಿರ ಚದರಡಿ ಪ್ರತಿ ಕೆರೆ ಬೇಟೆ ಶಿಕಾರಿಗಾರನಿಗೆ 2000 ಅಡಿ ಮೀಸಲೆಂದರು (40×50 ಅಡಿ ವಿಸ್ತಿರ್ಣ) ಕನಿಷ್ಟ 20 ಗರಿಷ್ಟ 25 ಜನರಿಗೆ ಎನ್ನುವ ಲೆಖ್ಖದಲ್ಲಿ 10 ಎಕರೆ ವಿಸ್ತಿಣ೯ದ ಕೆರೆಗೆ 250 ಜನರಿಗೆ ಮಾತ್ರ ಪ್ರವೇಶ ನೀಡಿದರೆ ಶಿಕಾರಿಗಾರರಿಗೂ ತೃಪ್ತಿಯಷ್ಟು ಮೀನು ಮತ್ತು ಸೇರುವ ಜನಸಂಖ್ಯೆಯ ಮಿತಿಯಿಂದ ಜಗಳಾ ಗಲಾಟೆ ನಿಯಂತ್ರಿಸಬಹುದು.
   ಇಲ್ಲ ಇದು ನಷ್ಟ ಅಂದರೆ ಪ್ರವೇಶ ಧರ ಜಾಸ್ತಿ ಮಾಡಿ ಸರಿದೂಗಿಸಬಹುದು ಅಥವ ಶಿಕಾರಿಗೆ ಸಮಯ ನಿಗದಿ ಮಾಡಿ ಎರೆಡು ಅವಧಿ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು.
   ನಿನ್ನೆ ಕಾನುಗೋಡಿನಲ್ಲಿ ಶಿಕಾರಿಗಾರರು ಹೆಚ್ಚು ಸೇರಿದ್ದು, ಕೆರೆ ವಿಸ್ತಿರ್ಣ ಆ ಸಂಖ್ಯೆಯ ಜನರಿಗೆ ಸಮಪಾತವಾಗಿರಲಿಲ್ಲ, ಮೀನು ಸಿಗದ ಬಗ್ಗೆ ಶಿಕಾರಿಗಾರರಿಗೆ ನಿರಾಸೆ ಇದ್ದರೂ ಅವರು ಹಿಂಸೆಗೆ ಹೋಗುತ್ತಿರಲಿಲ್ಲ ಅನ್ನಿಸುತ್ತೆ ಆದರೆ ಇದನ್ನು ಹಿಂಸಾತ್ಮಕವಾಗಿ ದೊಂಬಿಗೆ ಪ್ರೇರೇಪಿಸಿದವರು ಪ್ರೇಕ್ಷಕರು ಅದರಲ್ಲಿ ಊರಿನ ದೇವಾಲಯದ ಅಭಿವೃದ್ಧಿ ಅಥವ ದೇವಾಲಯ ಸಮಿತಿಗೆ ಸಂಗ್ರಹವಾದ ಹಣವನ್ನು ನೋಡಿ ಸಹಿಸದ ಅವರ ವಿರೋದಿಗಳ ಕುಮ್ಮಕ್ಕೂ ಇಲ್ಲಿ ಪರೋಕ್ಷವಾಗಿ ಬೆಂಬಲಿಸಿದ ಸಾಧ್ಯತೆ ಇದೆ.
   ಮುಂದಿನ ದಿನಗಳಲ್ಲಿ ಕೆರೆ ಬೇಟೆ ಆಯೋಜಕರು ಹೆಚ್ಚು ಯೋಚಿಸಬೇಕು ಮತ್ತು ಇಂತಹ ಗಲಬೆಗಳಿಗೆ ಅವಕಾಶ ಆಗುವ ಈ ಕೆರೆ ಬೇಟೆ ಕೈ ಬಿಡಲೂ ಬಹುದು

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ