Skip to main content

Blog number 878, ನಮ್ಮ ಸುರಕ್ಷತೆಗಾಗಿ ಗ್ಯಾಸ್ ಪೈಪ್ ಲೈನ್ ಮಾಡಿಸಿ ಗ್ಯಾಸ್ ಸಿಲೆಂಡರ್ ಅಡುಗೆ ಮನೆಯ ಹೊರಗೆ ಅಳವಡಿಸಲು ಸೂಕ್ತ ವ್ಯಕ್ತಿ ಶಿವಮೊಗ್ಗದ ಮೊಹಮ್ಮದ್ ವಾಸಿಂ, ಮನೆ- ಹೋಟೆಲ್ - ಕಲ್ಯಾಣ ಮಂಟಪ - ಆಹಾರ ಉದ್ಯಮ ಇದನ್ನು ಅಳವಡಿಸಿಕೊಳ್ಳಬೇಕು.

#ನನ್ನ_ಮತ್ತು_ಶಿವಮೊಗ್ಗದ_ಮೊಹಮದ್_ವಾಸೀಮ್_ವ್ಯವಹಾರದ_ಗೆಳೆತನಕ್ಕೆ_ದಶಕದ_ಹರೆಯ.

#ಹೋಟೆಲ್_ಮತ್ತು_ಗೃಹಬಳಕೆಗೆ_ಎಲ್_ಪಿ_ಜಿ_ಗ್ಯಾಸ್_ಪೈಪ್_ಲೈನ್_ಅತ್ಯುತ್ತಮವಾಗಿ_ಅಳವಡಿಸಿಕೊಡುತ್ತಾರೆ.

#ಇದರಿಂದ_ನೂರಕ್ಕೆ_ನೂರು_ಗ್ಯಾಸ್_ಅವಘಡ_ತಡೆಯಬಹುದು.

#ಆಹಾರ_ಉದ್ಯಮ_ಕಲ್ಯಾಣಮಂಟಪ_ಹೋಟೆಲ್_ಮತ್ತು_ಮನೆಗೂ_ಅಳವಡಿಸಿಕೊಳ್ಳುವುದು_ಉತ್ತಮ.

  ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ನೇರವಾಗಿ ಅಡುಗೆ ಮನೆಯ ಒಳಗೆ ತಂದು ಒಲೆಗೆ ಅಳವಡಿಸಿ ಅಡುಗೆ ಮಾಡುವಾಗ ಗ್ಯಾಸ್ ಲೀಕ್ ಆದರೆ, ಗ್ಯಾಸ್ ಪೈಪ್ ಒಡೆದರೆ, ಅಡುಗೆ ಉಕ್ಕಿ ಬನ೯ರ್ ಬೆಂಕಿ ನಂದಿದರೆ,ಮರೆತು ಗ್ಯಾಸ್ ಆಫ್ ಮಾಡದಿದ್ದರೆ ಲೀಕಾದ ಗ್ಯಾಸ್ ಎಲೆಕ್ಟ್ರಿಕ್ ಸ್ವಿಚ್ ಆನ್ ಮಾಡಿದರೆ ಅಥವ ಯಾವುದೇ ರೀತಿಯ ಬೆಂಕಿ ಕಿಡಿಯಿಂದ ಅಗ್ನಿ ಅವಘಡಗಳು ಸಂಭವಿಸಿದರೆ ಆಗ ಒಳಗಿರುವ ಗ್ಯಾಸ್ ಸಿಲಿಂಡರ್ ಸೇರಿ ದೊಡ್ಡ ಅಗ್ನಿ ದುರಂತ ಶತಸಿದ್ದ .
   ಹೋಟೆಲ್ ಗಳಲ್ಲಿ, ಪಾಸ್ಟ್ ಫುಡ್ ಗಳಲ್ಲಿ, ಆಹಾರ ಉತ್ಪನ್ನ ಕೈಗಾರಿಕೆಯಲ್ಲಿ ಹೆಚ್ಚು ಪ್ರೆಶರ್ ನಲ್ಲಿ ಗ್ಯಾಸ್ ಒಲೆ ಬಳಸುವುದರಿಂದ ಯಾವುದೇ ಕಾರಣಕ್ಕೂ ಗ್ಯಾಸ್ ಸಿಲೆಂಡರ್ ಅಡುಗೆ ಮನೆಯಲ್ಲಿ ಇಡುವುದು ಅಪಾಯ.
  2012ರಲ್ಲಿ ನಾನು ನನ್ನ ಕಲ್ಯಾಣ ಮಂಟಪ, ಮಲ್ಲಿಕಾ ವೆಜ್ ಮತ್ತು ಚಂಪಕಾ ಪ್ಯಾರಾಡೈಸ್ ನಾನ್ ವೆಜ್ ಹೋಟೆಲ್ ಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸಲು ತೀರ್ಮಾನಿಸಿ ಒಬ್ಬರಿಗೆ ಗುತ್ತಿಗೆ ಕೊಟ್ಟೆ ಆದರೆ ಅವರ ಅನನುಭವಿ ಕೆಲಸ ನನಗೆ ತೃಪ್ತಿ ತರಲಿಲ್ಲ.
  ಮುಂಬೈನ ನನ್ನ ಗೆಳೆಯರ ತಂಡ ಬಂದು ಅದನ್ನು ತೆಗೆದು ಹೊಸ ಪೈಪ್ ಲೈನ್ ಅಳವಡಿಸಿ ಸರಿಪಡಿಸಿದರು. ಆದರೆ ಅಷ್ಟು ದೂರದಿಂದ ಕಾಲಕಾಲಕ್ಕೆ ಬಂದು ದುರಸ್ತಿ ಇತ್ಯಾದಿ ಅವರಿಗೆ ಸಾಧ್ಯವಿಲ್ಲದ ಸಮಯದಲ್ಲಿ ನನ್ನ ಮತ್ತು ವಾಸಿಂ ಸಾಹೇಬರ ಸಂಪರ್ಕ ಆಯಿತು.
  ನ್ಯಾಮತಿ ಮೂಲದ ಇವರ ತಂದೆ ತಾಯಿ ವ್ಯವಹಾರಕ್ಕಾಗಿ  ಸಾಗರದಲ್ಲಿ ನೆಲೆಸುತ್ತಾರೆ, ಇವರ ತಂದೆ ಮೊಹಮ್ಮದ್ ಇಬ್ರಾಹಿಂ ಸಾಹೇಬರು ಸಾಗರದ ಪ್ರಥಮ ಶುಂಠಿ ವ್ಯಾಪಾರಸ್ಥರು ಎಂದರೆ ತಪ್ಪಾಗಲಾರದು, ಆಗ ಜವಾರಿ ಶುಂಠಿ ಖರೀದಿಸಿ ಒಣ ಶುಂಠಿ ಮಾಡಿ ಕೇರಳಕ್ಕೆ ಅವರು ರವಾನಿಸುತ್ತಿದ್ದರು, ಇವರ ಸಹೋದರರ ಕುಟುಂಬಗಳು ಈಗಲೂ ಶುಂಠಿ ಟ್ರೇಡಿಂಗ್ ನಲ್ಲಿದ್ದಾರೆ.
  ಒಣ ಶುಂಠಿ ಕೇರಳಕ್ಕೆ ಮಾರಾಟಕ್ಕೆ ಕಳಿಸಲು ಆಗ ಅರಣ್ಯ ಇಲಾಖೆಯಿಂದ ಪರ್ಮಿಟ್ ಬೇಕಿತ್ತಂತೆ ಅಂತಹ 1950ರ ಪರ್ಮಿಟ್ ಪ್ರತಿ ಇವರು ಕಾಪಿಟ್ಟಿದ್ದಾರೆ.
  ನಂತರ ಆಯನೂರಿಗೆ ಹೋಗಿ ನೆಲೆಸಿದ ಈ ಕುಟುಂಬ ತಮ್ಮ ಮಕ್ಕಳ ಉತ್ತಮ ವಿದ್ಯಾಬ್ಯಾಸದ ಕಾರಣದಿಂದ ಶಿವಮೊಗ್ಗದ ಗಾಡಿ ಕೊಪ್ಪದಲ್ಲಿ 5 ಎಕರೆ ಜಮೀನು ಖರೀದಿಸಿ ಅದರಲ್ಲಿ ಗೋಪಿ ಸುಣ್ಣ ತಯಾರಿಸುವ ಕೈಗಾರಿಕೆ ಪ್ರಾರಂಭಿಸುತ್ತಾರೆ.
    ಈಗ ಇವರ ಜಮೀನಿನ ಹೆಚ್ಚಿನ ಭಾಗ ಸರ್ಕಾರದ ಕೆಲ ಯೋಜನೆಗಾಗಿ ಕಳೆದುಕೊಂಡರೂ ಈಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಲುಕೊಳದ ವೃತ್ತದಲ್ಲಿ ಉಳಿದಿರುವ ಜಾಗದ ಬೆಲೆ ಹಲವು ಕೋಟಿ ಮೌಲ್ಯದ್ದು.
  ಇವರ ಕುಟುಂಬದಲ್ಲಿ ಎಲ್ಲರೂ ವಿದ್ಯಾವಂತರು, ಒಬ್ಬ ಸಹೋದರ ದೆಹಲಿಯಲ್ಲಿ ಪ್ರೋಪೆಸರ್ ಕೂಡ ಆಗಿದ್ದಾರೆ.
  ವಾಸಿಂ ಶಿವಮೊಗ್ಗದಲ್ಲಿ ದೊಡ್ಲಾ ಹಾಲಿನ ಅಧಿಕೃತ ಡೀಲರ್ ಮತ್ತು ಗ್ಯಾಸ್ ಪೈಪ್ ಲೈನ್ ಅಳವಡಿಸುವುದರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವರಂತಹ ಇನ್ನೊಬ್ಬರು ನನಗೆ ಸಿಕ್ಕಿಲ್ಲ.
  ಕಳೆದ 10 ವಷ೯ದಿಂದ ನನ್ನ ಉದ್ದಿಮೆಗೆ ಇವರ ಸೇವೆ ನಿರಂತರವಾಗಿದೆ ಮತ್ತು ಯೋಗ್ಯವಾಗಿದೆ.
   ನನ್ನ ಮತ್ತು ನನ್ನ ಸಹೋದರನ ಮನೆ 2015ರಲ್ಲಿ ನಿರ್ಮಿಸಿದ ನೂತನ ಮನೆಗಳಿಗೂ ಗ್ಯಾಸ್ ಪೈಪ್ ಲೈನ್ ಇವರೇ ಮಾಡಿದ್ದಾರೆ, ಗ್ಯಾಸ್ ಸಿಲಿಂಡರ್ ಗಳು ಅಡುಗೆ ಮನೆಯಲ್ಲಿ ಇಡಬೇಕಾಗಿಲ್ಲ.
  ಈಗಿನ LPG ಸಿಲೆಂಡರ್ ಗಳು ಸಾಕಾಣಿಕೆಯಲ್ಲಿ ಎಲ್ಲೆಲ್ಲೊ ಬಿದ್ದು ಕೊಳೆ ಅಂಟಿಸಿಕೊಂಡು ಕುಲಷಿತವಾಗಿ ಬರುವುದು ಅಡುಗೆ ಮನೆಯಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಅಲ್ಲವೇ ಅಲ್ಲ.
  ಇವತ್ತು ಒಂದು ವಷ೯ದಿಂದ ಕೊರಾನ ಕಾರಣದಿಂದ ನಿಂತಿದ್ದ ನನ್ನ ಚಂಪಕಾ ಪ್ಯಾರಾಡೈಸ್ ನಾನ್ ವೆಜ್ ಹೋಟೆಲ್ ಪುನಾರಂಭಗೊಳಿಸಲು ಗ್ಯಾಸ್ ಪೈಪ್ ಲೈನ್ ಮತ್ತು ಒಲೆಗಳ ಸರ್ವಿಸ್ ಗಾಗಿ ಇವರನ್ನು ಕರಿಸಿದ್ದೆ.
  ನಿಮ್ಮ ಮನೆಗೆ / ಹೋಟೆಲ್ / ಉದ್ಯಮಗಳಲ್ಲಿ ಸುರಕ್ಷೆ ದೃಷ್ಟಿಯಿಂದ ಗ್ಯಾಸ್ ಪೈಪ್ ಲೈನ್ ಅಳವಡಿಸುವುದಾದರೆ ಇವರ ಸೆಲ್ ನಂಬರ್ 9008213138/7338133107 ಸಂಪರ್ಕಿಸಬಹುದಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...