Skip to main content

Blog number 855. ಗ್ರಾಮೀಣ ಪ್ರದೇದದಲ್ಲಿ ಪ್ರವಾಸೋದ್ಯಮ ಸುಲಭ ಸಾಧ್ಯವಲ್ಲ, ಮಲೆನಾಡಿನ ಸಂಪ್ರದಾಯಿಕ ಶುಚಿ ರುಚಿಯ ಆಹಾರ ಪ್ರವಾಸಿಗರಿಗೆ ಪರಿಚಯ ಮಾಡುವ ನನ್ನ ನಿರಂತರ ಪ್ರಯತ್ನ

#ನಮ್ಮ_ಮಲ್ಲಿಕಾ_ವೆಜ್_ನಲ್ಲಿ_ಈ_ವರ್ಷದ_ಬೇಸಿಗೆ_ಪೂರ_ಕೊಕಂ_ಜ್ಯೂಸ್ .

#ರೂ_25ಕ್ಕೆ_300ML_ಗ್ಲಾಸ್_ಜಗ್_ನಲ್ಲಿ_ತಂಪಾದ_ಕೊಕಂ_ಪಾನಿಯ

#ಸ್ಥಳಿಯ_ಆಹಾರ_ಪಾನಿಯ_ಪ್ರವಾಸಿಗಳಿಗೆ_ಪರಿಚಯಿಸುವ_ಕಾಯ೯ದಲ್ಲಿ.
  
 
Mallika Veg
https://maps.app.goo.gl/m26HG61eBpj43eb5A.

   ನಮ್ಮ ಮಲ್ಲಿಕಾ ವೆಜ್ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿದೆ ಶಿವಮೊಗ್ಗದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿದೆ, ಶಿವಮೊಗ್ಗದಿಂದ 50 km ಮತ್ತು ಜೋಗ್ ಫಾಲ್ಸ್ ನಿಂದ 50 Km (ಸಾಗರದಿಂದ 25 km ಶಿವಮೊಗ್ಗ ಹೋಗುವಾಗ ) ಮಧ್ಯದಲ್ಲಿದೆ.
  ಪಕ್ಕದಲ್ಲಿ ನಮ್ಮ ಹೊಂಬುಜ ರೆಸಿಡೆನ್ಸಿ ಎಂಬ ಹಳೆಯ ಲಾಡ್ಜ್, ಕೃಷ್ಣ - ಸರಸ ಕನ್ವೆನ್ಷನ್ ಹಾಲ್, ವಿಕ್ಟೋರಿಯಾ ಕಾಟೇಜ್ ಮತ್ತು ಹೊಂಬುಜ ಗಾರ್ಡನೀಯ ಎಂಬ ಹೊಸ ಲಾಡ್ಜ್ (AC ರೂಂ ಲಭ್ಯ) ಮತ್ತು ಚಂಪಕಾ ಪ್ಯಾರಾಡೈಸ್ ಎಂಬ ನಾನ್ ವೆಜ್ (ಮಡಕಾ ದಮ್ ಬಿರಿಯಾನಿಗೆ ಪ್ರಸಿದ್ಧ) ಇದೆ.
   ವಿಶಾಲ ಪಾರ್ಕಿಂಗ್, ಪುರಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹೈಟೆಕ್ & ಹೈಜನಿಕ್ ಶೌಚಾಲಯ ವ್ಯವಸ್ಥೆ, ಅಜಿನೋಮೊಟೋ, ಕೃತಕ ಬಣ್ಣಗಳ ಬಳಸದೇ ಆಹಾರ ತಯಾರಿಸುವ ಆಧುನಿಕ ಅಡುಗೆ ಮನೆಯಲ್ಲಿ ಮಲೆನಾಡಿನ ವಿಶೇಷವಾದ ಹಲಸಿನ ಎಲೆ ಕೊಟ್ಟೆ ಕಡಬು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿಗಳ ಜೊತೆ ತಮಿಳುನಾಡಿನ ಹೆಸರಾಂತ ಪೋಡಿ ಇಡ್ಲಿ (ಶುದ್ಧ ದೇಸಿ ತುಪ್ಪದೊಂದಿಗೆ)  ಜೊತೆಗೆ ಸಂಪ್ರದಾಯಿಕ ಇಡ್ಲಿ ವಡೆ - ಕಾಯಿನ್ ಇಡ್ಲಿ- ಬನ್ಸ್ - ಎಲ್ಲಾ ರೀತಿಯ ದೋಸೆ - ಉಪ್ಪಿಟ್ಟು - ಕೇಸರಿಬಾತ್ -ಪಲಾವ್ - ಬಿಸಿಬೇಳೆಬಾತ್ - ಪಕೋಡ - ಸೌತ್ ಇಂಡಿಯನ್ ಥಾಲಿ ನಿತ್ಯ ಸಿಗುತ್ತದೆ.
  ಕಳೆದ ಕೊರಾನ ವಷ೯ದಿಂದ ಉತ್ತರ ಭಾರತೀಯ ತಂದೂರಿ ರೋಟಿ ಇತ್ಯಾದಿ ನಿಲ್ಲಿಸಲಾಗಿದೆ ಸದ್ಯದಲ್ಲೇ ಪ್ರಾರಂಬಿಸುತ್ತೇನೆ.
  ಇದೇ ಕಾರಣದಿಂದ ನಿಂತಿರುವ ನಮ್ಮ ನಾನ್ ವೆಜ್ ರೆಸ್ಟೋರಾಂಟ್ #ಚಂಪಕಾ_ಪ್ಯಾರಾಡೈಸ್ ಮುಂದಿನ ವಾರದಿಂದ ಪುನಾರಾರಂಭ ಆಗಲಿದೆ ಇಲ್ಲಿನ ಪ್ರಸಿದ್ಧ ಮಡಕಾ ದಮ್ ಬಿರಿಯಾನಿ ಜೊತೆ ಮಲೆನಾಡಿನ ರುಚಿಕರವಾದ ನಾಟಿ ಚಿಕನ್ ಮತ್ತು ಕೋಳಿ ಕಜ್ಜಾಯ (ಡಾ.ರಾಜಕುಮಾರ್‌,ಬಂಗಾರಪ್ಪರ ಪೆವರಿಟ್), ಅಕ್ಕಿ/ರಾಗಿ ರೊಟ್ಟಿ ನಾಟಿ ಚಿಕನ್, ತಮಿಳುನಾಡಿನ ಚಟ್ಟಿ ನಾಡು ಚಿಕನ್ ರೋಸ್ಟ್ ಜೊತೆಗೆ ಬಾಳೆ ಎಲೆಯಲ್ಲಿ ಪಿಶ್ ಥಾಲಿ (ಉಪ್ಪಿನಕಾಯಿ - ಸೀಗಡಿ ಚಟ್ನಿ -ಪಲ್ಯ - ಕೋಕಂ ತಿಳಿ ಸಾರು - ಅನ್ ಲಿಮಿಟೆಡ್ ರೈಸ್ - ಪಿಶ್ ಮಸಾಲ - ತವಾ ಪಿಶ್ ಪ್ರೈ - ಮಜ್ಜಿಗೆ) ಮತ್ತು ಬಾಳೆ ಎಲೆಯಲ್ಲಿ ಚಿಕನ್ ಥಾಲಿ ಕೂಡ ಲಭ್ಯವಾಗಲಿದೆ.
  ಗ್ರಾಮೀಣ ಪ್ರದೇಶದಲ್ಲಿ ಸ್ಥಳಿಯ ಆಹಾರಗಳನ್ನು ಪ್ರವಾಸಿಗರಿಗೆ ಪರಿಚಯಿಸಿ ವ್ಯವಹಾರ ಮಾಡಿ ಉದ್ಯಮ ನಡೆಸುವುದು ಸುಖದ ಹಾದಿಯಲ್ಲ ಎಂಬುದು 2012ರಿಂದ ಈ ಉದ್ಯೋಗದಲ್ಲಿ ಪಡೆದ ಅನುಭವ.
  ನಮ್ಮ ಊರನ್ನು ಈ ಹೆದ್ದಾರಿಯಲ್ಲಿ ಹಾದು ಹೋಗುವ ಪ್ರವಾಸಿಗರೇ ನಮ್ಮ ಗ್ರಾಹಕರು ಆದರೆ 3 ವರ್ಷದಿಂದ ಕೊರಾನಾದಿಂದ ಪ್ರವಾಸೋದ್ಯಮದ ಈ ಉದ್ಯೋಗ ವೆಂಟಿಲೇಟರ್ ನಲ್ಲಿ ಉಸಿರಾಡುತ್ತಿದೆ ಅದರಲ್ಲೂ ದಿನಸಿ - ಖಾದ್ಯ ಎಣ್ಣೆಯ ಬೆಲೆ ಏರಿಕೆ ಜೊತೆಗೆ ವಾಣಿಜ್ಯ ಅನಿಲ ಸಿಲೆಂಡರ್ ಬೆಲೆ ರೂ 2387 ಕ್ಕೆ ಏರಿದೆ ಆದರೂ ನಮ್ಮ ಬೆಲೆ ಮೂರು ವರ್ಷದ ಹಿಂದಿನದ್ದೆ ಮುಂದುವರಿದಿದೆ.
  ನಮ್ಮ ಮಲ್ಲಿಕಾ ವೆಜ್ ನಲ್ಲಿ ತಂಪಾದ ಕೋಕಂ ಜ್ಯೂಸ್ ಎಲ್ಲಾ ಜ್ಯೂಸ್ ಜೊತೆಯಲ್ಲಿ ಲಭ್ಯವಿದೆ ಎಂದು ಹೇಳಲು ಹೊರಟವನಿಗೆ ಹೋಟೆಲ್ ಉದ್ಯಮದ ಕಥೆಯೂ ತಮಗೆ ಹೇಳುವಂತಾಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...