Skip to main content

ಆನಂದಪುರಂ ಇತಿಹಾಸ -9, ರಂಗನಾಥ ದೇವರ ಮೂಲ ಅರ್ಚಕರ ಕುಟುಂಬಗಳು, ನಿರಂತರ ಒಂದು ದಿನವೂ ತಪ್ಪದೇ ರಂಗನಾಥನಿಗೆ ಹೂವಿನ ಸೇವೆ ಸಲ್ಲಿಸುವ ಪ್ರತಾಪ್ ಸಿಂಗ್ ಕುಟುಂಬ, ಈಗಿನ ಜನಾನುರಾಗಿ ಅರ್ಚಕರಾದ ವೆಂಕಟರಾಮು ಅಯ್ಯಂಗಾರ್.

ಆನಂದಪುರಂ ಇತಿಹಾಸ ಭಾಗ_9.

#ಆನಂದಪುರದ_ರಂಗನಾಥ_ಸ್ವಾಮಿ_ಮೂಲ_ಭಕ್ತರು

#ನಿರಂತರ_ಅರವತ್ತು_ವರ್ಷದಿಂದ_ರಂಗನಾಥ_ದೇವರಿಗೆ_ನಿರಂತರ_ನಿತ್ಯಪೂಜೆಗೆ
#ಹೂವಿನ_ಸೇವೆ_ನೀಡುತ್ತಿರುವ_ಪ್ರತಾಪ್_ಸಿಂಗ್_ಕುಟುಂಬ.

   ಅಯ್ಯಂಗಾರರು ಆನಂದಪುರಂಗೆ ಬಂದು ಯಶಸ್ವಿ ಜಮೀನ್ದಾರರಾದ ನಂತರ ರಂಗನಾಥ ದೇವರ ಪೂಜೆ, ಉತ್ಸವಗಳಿಗೆ ತಮ್ಮ ಸ್ವಜಾತಿ ಅಯ್ಯ೦ಗಾರ್ ಅರ್ಚಕರುಗಳನ್ನು ನೇಮಿಸುತ್ತಾರೆ ಅದಕ್ಕೂ ಮೊದಲು ಆನಂದಪುರಂನ ಅಗ್ರಹಾರದ ಬ್ರಾಹ್ಮಣರಾದ ಜೋಯ್ಸ್ ರು ಗಳು ಅರ್ಚಕರಾಗಿರಬೇಕು ಯಾಕೆಂದರೆ ರಾಮಕೃಷ್ಣ ಅಯ್ಯಂಗಾರ್‌ ಕಾಲದಲ್ಲಿ ನೀಲ ಕಂಠ ಜೋಯ್ಸರ ಕುಟುಂಬವೇ ಆನಂದಪುರಂನ ಪುರೋಹಿತರಾಗಿದ್ದರು ಅವರ ಹಿಂದಿನ ತಲೆಮಾರು ರಂಗನಾಥ ದೇವಾಲಯದ ಪುರೋಹಿತರಾಗಿರುವ ಸಾಧ್ಯತೆ ತಳ್ಳಿಹಾಕಲಾಗುವುದಿಲ್ಲ, ನೀಲಕಂಠ ಜೋಯ್ಸರ ಸಹೋದರರೆ ಪತ್ರಕರ್ತರು ಸಾಹಿತಿಗಳು ಆಗಿರುವ ಅರಸಾಳಿನ ರಂಗನಾಥ ಜೋಯಿಸರು ಹೀಗೆ ಈ ಕುಟುಂಬದ ಕವಲುಗಳು ದೂರ ದೂರ ಹರಿದು ಹಂಚಿ ಹೋಗಿದ್ದಾರೆ.
  ರಂಗನಾಥ ದೇವರಿಗೆ ಆನಂದಪುರಂ ಮಲಂದೂರಿನ ಕೃಷ್ಣ ಗೊಲ್ಲ ಸಮುದಾಯದವರು, ಆನಂದಪುರದ ಗಂಗಾಮತಸ್ಥರು ಮತ್ತು ಆಚಾಪುರ ಖ್ಯೆರಾ ಗ್ರಾಮಗಳ ಚೆಲುವಾದಿ ಸಮುದಾಯದವರು ಶತಮಾನಗಳಿಂದ ಮೂಲ ಭಕ್ತರು. ಈಗಲೂ ದೂರದ ಊರಲ್ಲಿ ನೆಲೆಸಿದ್ದರೂ ಪ್ರತಿ ವರ್ಷದ ರಥ ಸಪ್ತಮಿಯ ರಥೋತ್ಸವದಲ್ಲಿ ತಪ್ಪದೇ ಭಾಗವಹಿಸುತ್ತಾರೆ.
  ಆನಂದಪುರದ ಊರ ಪುರೋಹಿತರಾದ ನೀಲಕಂಠ ಜೋಯಿಸರಿಗೆ ಕೃಷ್ಣಸ್ವಾಮಿ ಜೋಯಿಸ್ (ಈಗಿನ ಬಳ್ಳಿಬೈಲಿನಲ್ಲಿ ನೆಲೆಸಿರುವ ಕಿಟ್ಟ ಜೋಯಿಸರು) ಮತ್ತು ಪ್ರಾಣೇಶ್ ಜೋಯಿಸರೆಂಬ ಇಬ್ಬರು ಮಕ್ಕಳು.
  ಕಿಟ್ಟಾ ಜೋಯಿಸರ ಮಗ ಸುಬ್ರಮಣ್ಯ ಜೋಯಿಸ್ ಈಗಲೂ ಆನಂದಪುರಂ ಭಾಗದಲ್ಲಿ ಪ್ರಸಿದ್ದ ಪುರೋಹಿತರಾಗಿ ಕೋಟೆಯ ಆಂಜನೇಯ ದೇವಾಲಯದಲ್ಲಿ ತಮ್ಮ ಕುಟುಂಬದಿಂದ ನಡೆದು ಬಂದ ಅರ್ಚಕ ವೃತ್ತಿ ಮುಂದುವರಿಸಿದ್ದಾರೆ.
    ಪ್ರಾಣೇಶ್ ಜೋಯಿಸರಿಗೆ ಐವರು ಮಕ್ಕಳು ನೀಲಕಂಠ ಜೋಯಿಸರು (ಕಂಟಿ ಜೋಯಿಸರು), ರಾಮಚಂದ್ರ ಜೋಯಿಸರು ಮತ್ತು ಮಾಲತೇಶ ಹಾಗೂ ಅನುಸೂಯ ಕುಮುದ ಎಂಬಿಬ್ಬರು ಹೆಣ್ಣು ಮಕ್ಕಳು ಬೆಂಗಳೂರಲ್ಲಿ ನೆಲೆಸಿದ್ದಾರೆ, ರಾಮಚಂದ್ರ ಜೋಯಿಸರು ಬೆಂಗಳೂರಿನ ಜಯಚಾಮರಾಜೇಂದ್ರ ವಿಜ್ಞಾನ ಸಂಸ್ಥೆಯಲ್ಲಿ ರಿಜಿಸ್ಟ್ರಾರ್ ಆಗಿ ನಿಯೋಜನೆಯಲ್ಲಿದ್ದಾರೆ.
  
    #ನಿರಂತರ_ಅರವತ್ತು_ವರ್ಷದಿಂದ_ನಿತ್ಯ_ಪೂಜೆಗೆ_ಹೂವು_ಸಮರ್ಪಿಸುವ_ಪ್ರತಾಪ್_ಸಿಂಗ್_ಕುಟುಂಬ
   ನಿರಂತರ ಅರವತ್ತು ವರ್ಷದಿಂದ ರಂಗನಾಥ ದೇವರಿಗೆ ಒಂದು ದಿನವೂ ತಪ್ಪದೇ ನಿತ್ಯ ಪೂಜೆಗೆ ಹೂವು ಅರ್ಪಿಸುವ ಕುಟುಂಬ ಆನಂದಪುರದಲ್ಲಿದೆ, ಇಲ್ಲಿನ ಕನಕಮ್ಮಾಳ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಆಗಿದ್ದ ಬಾಲಾಜಿ ಸಿಂಗ್ ಮಕ್ಕಳಾದ ದ್ವಾರಕ ಸಿಂಗ್ ಮತ್ತು ಪ್ರತಾಪ್ ಸಿಂಗ್ ಈ ಸೇವೆ ನಿರಂತರ ನಡೆಸಿಕೊಂಡು ಬಂದರಿವುದು ಒಂದು ದಾಖಲೆಯೇ ಆಗಿದೆ.
  60 ವಷ೯ದ ಹಿಂದೆ ದ್ವಾರಕಿ ಸಿಂಗ್ ಅಯ್ಯಂಗಾರರ ಮನೆಯ ಸಂಪಿಗೆ ಮರದ ಹೂವು ತೆಗೆದು ರಾಯರ ಮನೆ ಪೂಜೆಗೆ ಮತ್ತು ರಂಗನಾಥ ದೇವರ ನಿತ್ಯ ಪೂಜೆಗೆ ಬೇಕಾದಷ್ಟು ಹೂವು ನೀಡಿ ಉಳಿದ ಹೂವು ಮಾರಾಟ ಮಾಡಿ ಜೀವನ ಮಾಡುತ್ತಾ ಬಂದಿದ್ದು ಈಗಲೂ ಮುಂದುವರಿದಿದೆ.
  ಈಗ ದ್ವಾರಕಿ ಸಿಂಗ್ ಇಲ್ಲ ಅವರ ಮಕ್ಕಳು ಮತ್ತು ಸಹೋದರ ಪ್ರತಾಪ್ ಸಿಂಗ್ ಕುಟುಂಬ ಈ ಸೇವೆ ನಡೆಸುತ್ತಿದೆ ಆದರೆ ಈಗ ಸಂಪಿಗೆ ಮರವೂ ಇಲ್ಲ ತಮ್ಮ ಬಡತನದ ಜೀವನದ ಜೊತೆ ಪ್ರತಿ ನಿತ್ಯ ಇನ್ನೂರು ರೂಪಾಯಿಯಷ್ಟು ಹೂವು ಖರೀದಿಸಿ ಬೆಳಿಗ್ಗೆ ರಂಗನಾಥನಿಗೆ ಅರ್ಪಿಸಿ ಉಳಿದ ಕೆಲಸಕ್ಕೆ ಪ್ರತಾಪ್ ಸಿಂಗ್ ಈಗಿನ ತಮ್ಮ 68 ನೇ ವಯಸಲ್ಲೂ ಮುಂದುವರಿಸಿದ್ದಾರೆ.
  ಪ್ರತಾಪ್ ಸಿಂಗ್ ತಂದೆ ಭಾಲಾಜಿ ಸಿಂಗ್ ಆನಂದಪುರದ ಕನಕಮ್ಮಾಳ್ ಆಸ್ಪತ್ರೆ ನೌಕರಿ ಮಾಡಿದ್ದರೆ, ಅಜ್ಜ ಭಗವಾನ್ ಸಿಂಗ್ ಆನಂದಪುರಂ ನಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್ ದಪೇದಾರರಾಗಿದ್ದರು, ಇವರ ಮೂಲ ಮೈಸೂರಿನ ಗಂಜಾಂನವರು, ಟಿಪ್ಪು ಸುಲ್ತಾನ್ ಆನಂದಪುರದ ಕೋಟೆ ಕೆಳದಿ ಅರಸರಿಂದ ವಶ ಪಡಿಸಿಕೊಂಡ ನಂತರ ಮೈಸೂರು ರಾಜರ ಸ್ಯೆನಿಕರಾಗಿ ಬಂದವರು.
  ಪ್ರತಾಪ್ ಸಿಂಗ್ ಆನಂದಪುರಂ ನ ವಿಲೇಜ್ ಪಂಚಾಯತ್ ನೌಕರರಾಗಿ 1972 ರಲ್ಲಿ ಆಗಿನ ವಿಲೇಜ್ ಅಕೌಂಟೆಂಟ್ ಕಂ ವಿಲೇಜ್ ಪಂಚಾಯತ್ ಕಾರ್ಯದರ್ಶಿ ಆಗಿದ್ದ ಶ್ಯಾಂಸುಂದರ್ ಕೆಲಸಕ್ಕೆ ಸೇರಿಸಿದ್ದರಂತೆ ಆಗ ಛೇರ್ ಮನ್ ಆಗಿದ್ದವರು ಯಡೇಹಳ್ಳಿಯ ಬಾಲ ಗಂಗಾದರ್ ಗೌಡರು .
   #ಈಗ_ಮುಖ್ಯ_ಅರ್ಚಕರಾಗಿರುವ_ಜನಾನುರಾಗಿ_ವೆಂಕಟರಾಮು_ಅಯ್ಯಂಗಾರರು.
    ಆನಂದ ಆಳ್ವಾರ್ ನಂತರ ಬೆಂಗಳೂರಿನ ಅನೇಕಲ್ ಬಳ್ಳೂರು ಮೂಲದ ಶಿವಮೊಗ್ಗದ ಪ್ರಖ್ಯಾತ ಕೋಟೆ ಆಂಜನೇಯ ದೇವಾಲಯದಲ್ಲಿ ಪ್ರದಾನ ಅರ್ಚಕರಾಗಿದ್ದ ಶ್ರೀನಿವಾಸ ಅಯ್ಯಂಗಾರರ ಪುತ್ರ ಬಿ.ಎಸ್.ವೆಂಕಟರಾಮು ಅಯ್ಯಂಗಾರರು ರಂಗನಾಥ ದೇವಾಲಯದಲ್ಲಿ ಪುರೋಹಿತರಾಗಿ ಆನಂದಪುರದಲ್ಲಿ ಜನಾನುರಾಗಿಗಳಾಗಿದ್ದಾರೆ (38 ವರ್ಷದಿಂದ)ಇವರ ಪುತ್ರ ಕೂಡ ವೈದಿಕ ಶಾಸ್ತ್ರ ಕಲಿತು ಅರ್ಚಕ ವೃತ್ತಿ ಮುಂದುವರಿಸಿದ್ದಾರೆ.
  #ಈ_ಹಿಂದೆ_ರಂಗನಾಥ_ದೇವರಿಗೆ_ಯಡೇಹಳ್ಳಿ_ತಿರುಮಲ_ದೇವರೆಂದೂ_ಕರೆಯುತ್ತಿದ್ದ_ಕಾರಣ
#ಏನೂ_ಅನ್ನುವುದಕ್ಕೆ_ಉತ್ತರ_ಮಾತ್ರ_ಸಿಕ್ಕಿಲ್ಲ.

(ನಾಳೆ ಮುಂದಿನ ಭಾಗ - 10)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ