Skip to main content

Blog number 864. ಕನಾ೯ಟಕದ ಉಡುಪಿ ಜಿಲ್ಲೆಯ ಸಮಾಜವಾದಿ ಹೋರಾಟಗಾರ ಅನಿಲ್ ಹೆಗಡೆಯವರನ್ನು ಬಿಹಾರದಿಂದ ರಾಜ್ಯಸಭೆಗೆ ಕಳಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ ಅಭಿನಂದನೆಗಳು

#ಬೆಳಿಗ್ಗೆ_ಜಾರ್ಜ್_ಪನಾ೯೦ಡೀಸರ_ಉಲ್ಲೇಖಿಸಿ_ಪೋಸ್ಟ್_ಬರದ_ಸ್ವಲ್ಪ_ಸಮಯದಲ್ಲಿ
#ಬೆಂಗಳೂರಿನ_ದಿವಾಕರ_ವಕೀಲರು_ಅನಿಲ್_ಹೆಗ್ಗಡೆ_ಬಿಹಾರದಿಂದ
#ರಾಜ್ಯಸಬೆಗೆ_ನಾಮ_ಪತ್ರ_ಸಲ್ಲಿಸಿದ_ಸುದ್ದಿ_ತಿಳಿಸಿದರು.

#ಪ್ರಚಾರ_ಅಧಿಕಾರ_ಬಯಸದ_ಸಂತನಂತ_ಬ್ರಹ್ಮಚಾರಿ_ಅನಿಲ್_ಹೆಗ್ಗಡೆ .

#ಜಾಜ್೯_ಪರ್ನಾಂಡೀಸರ_ಜೊತೆ_ಕೊನೆಯವರೆಗೆ_ಅವರ_ಮನೆಯಲ್ಲೇ_ಇದ್ದವರು.

#ಉಡುಪಿ_ಜಿಲ್ಲೆಯ_ಅನಿಲ್_ಹೆಗ್ಗಡೆ_ಬಿಹಾರದಿಂದ_ರಾಜ್ಯಸಬೆಗೆ_ಆಯ್ಕೆ_ಮಾಡುತ್ತಿರುವ_ಮುಖ್ಯಮಂತ್ರಿ_ನಿತೀಶ್_ಕುಮಾರ್.

#ಸಾಮಾನ್ಯವಾಗಿ_ರಾಜ್ಯಸಬೆ_ಸೀಟು_ಮಾರಾಟವಾಗುವ_ಈ_ಕಾಲದಲ್ಲಿ.

   ಬೆಳಿಗ್ಗೆ ಬೆಂಗಳೂರಿನ ಪ್ರಸಿದ್ದ ವಕೀಲರಾದ ದಿವಾಕರ್ (ಈಗ ಆಮ್ ಆದ್ಮಿ ಸೇರಿದ್ದಾರೆ ಮೊದಲು ಮುಖ್ಯಮಂತ್ರಿ ಯಡೂರಪ್ಪರ ಸಲಹೆಗಾರರಾಗಿದ್ದರು) ಬಿಹಾರದಿಂದ ರಾಜ್ಯಸಭೆಯ ಮದ್ಯಂತರ ಚುನಾವಣೆಗೆ JDU ಪಾರ್ಟಿ ಅನಿಲ್ ಹೆಗ್ಗಡೆಗೆ ಅವಕಾಶ ನೀಡಿದೆ ಇವತ್ತು ನಾಮಪತ್ರ ಸಲ್ಲಿಸಲಿದ್ದಾರೆ ಪಲಿತಾಂಶ ಇದೇ ತಿಂಗಳ 30 ಅಂತ ತಿಳಿಸಿದಾಗ ನನಗೆ ತುಂಬಾ ಸಂತೋಷ ಆಯಿತು.
   1999 ರಿಂದ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಮುಖಾಂತರ ದೆಹಲಿಯ ಜಾರ್ಜ್ ಪನಾ೯೦ಡಿಸರ ಮನೇನಲ್ಲಿ ಅನಿಲ್ ಹೆಗಡೆ ಪರಿಚಯ ನಂತರ ಅನೇಕ ಬಾರಿ ದೆಹಲಿಗೆ ಶಿವಮೊಗ್ಗ - ತಾಳಗುಪ್ಪ ರೈಲ್ವೆ  ಬ್ರಾಡ್ ಗೇಜ್ ಕಾಮಗಾರಿ ಒತ್ತಾಯಿಸಿ, ಸಾಗರ ರೈಲು ನಿಲ್ದಾಣ ಡಾ.ರಾಮಮನೋಹರ ಲೋಹಿಯಾ ನಾಮಕರಣ ಒತ್ತಾಯಿಸಿ ನಾವು ನಿಯೋಗ ಹೋದಾಗೆಲ್ಲ ದೆಹಲಿಯಲ್ಲಿ ಅನಿಲ್ ಹೆಗಡೆ ಸಹಕಾರ ಪಡೆಯುತ್ತಿದ್ದೆವು.
  2002ರಲ್ಲಿ ಪರ್ನಾಂಡಿಸ್ ರ ಸಮತಾ ಪಾರ್ಟಿಗೆ ಸೇರಿ ಕನಾ೯ಟಕ ಸಂಘಟನೆ ಪ್ರಾರಂಬಿಸಿದಾಗ ನನ್ನನ್ನು ರಾಜ್ಯ ಪ್ರದಾನ ಕಾರ್ಯದರ್ಶಿ ಮಾಡಿದ್ದು ಅನಿಲ್ ಹೆಗಡೆ ನಂತರ ಸಮತಾ ಪಾರ್ಟಿ ಸಂಯುಕ್ತ ಜನತಾದಳವಾದಾಗಲೂ ನನ್ನ ರಾಜ್ಯ ಪ್ರದಾನ ಕಾಯ೯ದಶಿ೯ ಮಾಡಿದ್ದರು.
  ಆಗ ನಾನು ಬೆಂಗಳೂರಿನ ರಾಯಲ್ ಲಾಡ್ಜ್ ಖಾಯ೦ ವಾಸಿ ಆಗೆಲ್ಲ ದೆಹಲಿಯಿಂದಲೋ, ಗೋವಾದಿಂದಲೋ, ಕೇರಳದಿಂದಲೋ ಬೆಂಗಳೂರಿಗೆ ಬಂದವರು ನನ್ನ ರೂಮಿಗೆ ಬರುತ್ತಿದ್ದರು ಅವರ ಖಾದಿ ಬಟ್ಟೆ ಲಾಂಡ್ರಿ ಹಣ ತಾವೇ ಕೊಡಬೇಕೆಂಬ ಹಠ ಅವರಿಗೆ ಆದರೆ ನಾವು ಅವರ ಮೇಲಿನ ಪ್ರೀತಿಯಿಂದ ಬಿಡುತ್ತಿರಲಿಲ್ಲ.
   ದೆಹಲಿಯಲ್ಲಿ ಸುಮಾರು ಹತ್ತು ವರ್ಷ ಒಂದು ದಿನವೂ ತಪ್ಪದೆ ಕೋಕೋ ಕೋಲಾ ಮತ್ತು ಪೆಪ್ಸಿ ವಿದೇಶಿ ಪಾನಿಯ ವಿರುದ್ದ ಇವರ ಮೆರವಣಿಗೆ ಪಾರ್ಲಿಮೆಂಟ್ ಕಡೆ ಹೋಗುವುದು ಅಲ್ಲಿ ಜಂತರ್ ಮಂತರ್ ಪೋಲಿಸ್ ಠಾಣೆ ಪೋಲಿಸರು ಬಂಧಿಸುವುದು ನಂತರ ಬಿಡುಗಡೆ ಮಾಡುವುದು ಈ ಚಳವಳಿ 10 ವಷ೯ನಿರಂತರ ನಡೆದದ್ದು ಒಂದು ದಾಖಲೆ.
  ಅನೇಕ ಬಾರಿ ನಾನು ಇವರ ಈ ಚಳವಳಿಯಲ್ಲಿ ಭಾಗವಹಿಸಿ ದೆಹಲಿಯ ಜಂತರ್ ಮಂತರ್ ಪೋಲಿಸರಿಂದ ರಸ್ತಗಿರಿ ಆಗಿದ್ದು ಅನುಭವದ ನೆನಪುಗಳು.
  ಜಾರ್ಜ್ ಪನಾ೯೦ಡಿಸರ ಮನೆಯ ಮಗನೇ ಆಗಿದ್ದರು.
  ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಆದ ಮೇಲೆ ಬಿಹಾರದ JDU ಪಕ್ಷ ಮತ್ತು ಚುನಾವಣಾ ಕಮಿಷನ್ ಜೊತೆ ಸಂಪರ್ಕದ ಜವಾಬ್ದಾರಿ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
  ಕಳೆದ ಡಿಸೆಂಬರ್ ನಲ್ಲಿ JDU ರಾಜ್ಯ ಸಭಾ ಸದಸ್ಯರಾದ ಕಿಂಗ್ ಮಹೇಂದರ್ (ಶಾಲಾ ಶಿಕ್ಷಕರು ನಂತರ ಪಾರ್ಮಾ ಕಂಪನಿಗಳ ಸ್ಥಾಪಿಸಿ ಅತ್ಯಂತ ಶ್ರೀಮಂತರಾದ್ದರಿಂದ ಕಿಂಗ್ ಹೆಸರು) ನಿಧನರಾಗಿ ಖಾಲಿ ಆದ ಸ್ಥಾನಕ್ಕೆ ಅವರ ಸಹೋದರ ಮತ್ತು JDU ರಾಷ್ಟ್ರ ಪ್ರದಾನ ಕಾರ್ಯದರ್ಶಿ ತ್ಯಾಗಿ ಹೆಸರು ಮುನ್ನಲೆಯಲ್ಲಿತ್ತು ಆದರೆ ಯಾರೂ ನಿರೀಕ್ಷೆ ಮಾಡದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅನಿಲ್ ಹೆಗಡೆ ಹೆಸರು ಅಂತಿಮ ಮಾಡಿದ್ದಾರೆ.
  ಹಣ - ಅಧಿಕಾರ -ಖ್ಯಾತಿಯ - ಪ್ರಚಾರದಿಂದ ದೂರ ಇರುವ   ಕನಾ೯ಟಕದ ಉಡುಪಿ ಜಿಲ್ಲೆ ಮೂಲದ ಅನಿಲ್ ಹೆಗಡೆ ಎಂಬ ಅತ್ಯಂತ ಬುದ್ಧಿವಂತ  ಪ್ರಾಮಾಣಿಕ ಕಾರ್ಯಕರ್ತನ ಪಾರ್ಲಿಮೆಂಟಿಗೆ ಕಳಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ ಅಭಿನಂದನೆ ಸಲ್ಲಿಸಲೇ ಬೇಕು ಮತ್ತು ಜಾರ್ಜ್ ಪನಾ೯ಂಡಿಸರನ್ನು ಈ ಮೂಲಕ ಗೌರವಿಸಿದಂತೆ.
  ಇದೇ ಬಿಹಾರ ರಾಜ್ಯ ಕರ್ನಾಟಕದ ಮಂಗಳೂರಿನ ಮೂಲದ ಜಾರ್ಜರನ್ನು ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದಾಗಲೇ ಪಾರ್ಲಿಮೆಂಟಿಗೆ ಆಯ್ಕೆ ಮಾಡಿದ್ದು. ನಂತರ ಬಿಹಾರ ರಾಜ್ಯ ಅವರ ರಾಜಕೀಯ ಕರ್ಮಭೂಮಿಯೇ ಆಯಿತು.
   ಅನಿಲ್ ಹೆಗಡೆ ಉಡುಪಿ ಜಿಲ್ಲೆಯಲ್ಲಿನ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಪುರಾತನ ಬೀಜದ ತಳಿ ಸಂರಕ್ಷಣೆಯ ಕೆಲಸ ಪ್ರಾರಂಬಿಸಿದ್ದಾರೆ, ಮಲೆನಾಡು ಗಿಡ್ಡ ದನಗಳ ಖರೀದಿಸಿ ಪಶು ಸಂಗೋಪನೆ ಮಾಡುವ ಬಗ್ಗೆ ಪೋನಾಯಿಸಿದ್ದರು.
  ಇವತ್ತಿನ ರಾಜಕಾರಣದಲ್ಲಿ ರಾಜ್ಯ ಸಭೆಗೆ ಹೋಗುವವರೆಲ್ಲ ಕೊಟ್ಯಾಂತರ ಹಣ ನೀಡುವವರು ಮಾತ್ರ ಆದರೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಆಗುತ್ತಿರುವ ಅನಿಲ್ ಹೆಗಡೆ ಹತ್ತಿರ ಬುದ್ದಿವಂತಿಕೆ, ಸಂಘಟನಾ ಶಕ್ತಿ ಮತ್ತು ಪ್ರಾಮಾಣಿಕತೆ ಮಾತ್ರ ಇದೆ ಅಷ್ಟೆ ಅಲ್ಲ ಅವರು ನಮ್ಮ ರಾಜ್ಯದವರು ಎಂಬ ಹೆಮ್ಮೆ ಕೂಡ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ