Skip to main content

Blog number number 874. ಶರಾವತಿ ಮುಳುಗಡೆ ಸಂತ್ರಸ್ಥರ ಊರಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮಕ್ಕೆ ನನ್ನ ಬಸ್ ಪರ್ಮಿಟ್. ಆಗಿನ ಜಿಲ್ಲಾದಿಕಾರಿ ವಿಜಯ ಕುಮಾರರ ಕನಸಿನ ಗ್ರಾಮಾಂತರ ಸಾರಿಗೆ ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು, ಪ್ರಸ್ತಾವಿಕ ಭಾಷಣ ಮಾಡಿದ ನಾನು.

#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಬೆಳ್ಳೂರಿನಲ್ಲಿ_ಜಿಲ್ಲಾದಿಕಾರಿ_ವಾಸ್ತವ್ಯ_ಇವತ್ತು 

#ರಿಪ್ಪನ್ಪೇಟೆಯಿಂದ_14_ಕಿಮಿ_ದೂರ

#ಅಭಯಾರಣ್ಯದ_ಮಧ್ಯೆ_ಶರಾವತಿ_ಮುಳುಗಡೆ_ಸಂತ್ರಸ್ಥರ_ಬೀಡು.

#ಈ_ಹಳ್ಳಿಗೆ_ಬಸ್_ಸೌಕರ್ಯ_ನೀಡಿದ_ನನ್ನ_ಅನುಭವ.

#ಆಗಿನ_ಉತ್ಸಾಹಿ_ಜಿಲ್ಲಾಧಿಕಾರಿ_ವಿಜಯಕುಮಾರರ_ಗ್ರಾಮಾಂತರ_ಸಾರಿಗೆ_ಯೋಜನೆ.

#ಅದನ್ನು_ಶಿವಮೊಗ್ಗ_ನೆಹರೂ_ಸ್ಟೇಡಿಯಂನಲ್ಲಿ_ಉದ್ಘಾಟಿಸಿದ_ಆಗಿನ_ಮುಖ್ಯಮಂತ್ರಿ_ವೀರೆಂದ್ರಪಾಟೀಲರು.

#ಪ್ರಸ್ತಾವಿಕ_ಭಾಷಣ_ಮಾಡಿದ_ನಾನು_ಜಿಲ್ಲಾ_ಗ್ರಾಮಾಂತರ_ಸಾರಿಗೆ_ಬಸ್_ಮಾಲಿಕರ_ಸಂಘದ_ಅಧ್ಯಕ್ಷನಾಗಿದ್ದೆ.

  ಇವತ್ತು ಶಿವಮೊಗ್ಗ ಜಿಲ್ಲಾದಿಕಾರಿಗಳು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಿಂದ 14 ಕಿಮಿ ದೂರದ ಬೆಳ್ಳೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾರೆ.
  ಈ ಸಂದರ್ಭದಲ್ಲಿ 1992-93ರ ಒಂದು ಘಟನೆ ನೆನಪಾಯಿತು ಹಾಗಾಗಿ ಅದನ್ನು ಬರೆಯಲು ಅವಕಾಶ.
  ಸುಮಾರು 30 ವರ್ಷದ ಹಿಂದೆ ನನಗೆ 26 ರ ಪ್ರಾಯ, ಹೊಸದು ಮತ್ತು ಹೊಸತನದ ಬಗ್ಗೆ ತೆರೆದುಕೊಳ್ಳುವ ಬಿಸಿ ರಕ್ತದ ಹುಮ್ಮಸ್ಸು, ಆಗ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿ ಬಂದವರು ವಿಜಯ ಕುಮಾರ್.
  ತಮಿಳುನಾಡಿನ ಮೂಲದ ಐ.ಎ.ಎಸ್ ಅಧಿಕಾರಿ ತುಂಬಾ ಜನಪರ ಕಾಳಜಿಯ ಜಿಲ್ಲಾಧಿಕಾರಿಗಳು ಅವರು ಶಿವಮೊಗ್ಗ ಜಿಲ್ಲೆಗೆ ಬಂದಾಗ ಇಲ್ಲಿನ ಅನೇಕ ಕುಗ್ರಾಮಗಳಿಗೆ ರಸ್ತೆ ಇದ್ದರೂ ಬಸ್ ಸೌಕರ್ಯ ಇರಲಿಲ್ಲ.
   ಆ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿತ್ತು, ಅವತ್ತು ಹಾಸ್ಟೆಲ್ ಸೌಲಭ್ಯ ಇರಲಿಲ್ಲ, ದ್ವಿಚಕ್ರ ವಾಹನ ಈಗಿನಂತೆ ಎಲ್ಲರೂ ಹೊಂದಿರಲಿಲ್ಲ.
  ಖಾಸಾಗಿ ಬಸ್ ಕಂಪನಿಗಳಾದ ಗಜಾನನ - ಹನುಮಾನ್ - ಕೃಷ್ಣ ಮತ್ತು ವಿಜಯ ಮೋಟಾರ್ಸ್ ಗಳ ಮಾನೊಪಲ್ಲಿಯಲ್ಲಿ ಪೈಪೋಟಿಯಲ್ಲಿ ಅವರೂ ಬಸ್ ಬಿಡುವುದಿಲ್ಲ, ಬೇರೆಯವರಿಗೆ ಬಸ್ ಸೌಕರ್ಯ ನೀಡಲು ಬಿಡುವುದಿಲ್ಲ ಎಂಬ ಶಫಥ ಅವರದ್ದು.
  ಕೆ .ಎಸ್.ಆರ್. ಟಿ .ಸಿ . ಬಸ್ ಬಿಡಲು ಆ ಸಾರಿಗೆ ಇಲಾಖೆ ಸಶಕ್ತ ಆಗಿರದ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಆಥಾರಿಟಿ ಛೇರ್ಮನ್ ಆಗಿದ್ದ ಜಿಲ್ಲಾದಿಕಾರಿ ಒಂದು ಯೋಜನೆ ಜಾರಿ ಮಾಡಿದರು.
 ಬಸ್ ಸೌಕರ್ಯ ಬೇಕಾದ ಮಾರ್ಗಗಳ ಗುರುತಿಸಿ ಆ ಲೈನ್ ಗೆ ಬಸ್ ಬಿಡಲು ಖಾಸಾಗಿ ಯುವ ಉದ್ಯಮಿಗಳಿಗೆ ಆಹ್ವಾನಿಸಿ ಪ್ರತಿ ತಾಲ್ಲೂಕಿನಲ್ಲಿ ಜನಸಂಪರ್ಕ ಸಭೆ ಕರೆಯುತ್ತಿದ್ದರು ಇದರಿಂದ ಅಸಾಧ್ಯವಾದ ಬಸ್ ಪಮಿ೯ಟ್ ಸರಳವಾಗಿ ಅನೇಕ ಸ್ವಯಂ ಉದ್ಯಮಿಗಳಿಗೆ ಅವಕಾಶ ಉಂಟು ಆಯಿತು, ಅನೇಕರಿಗೆ ಉದ್ಯೋಗವೂ ಸಿಕ್ಕಿತು.
  ಹೊಸನಗರ ತಾಲ್ಲೂಕ್ ಕೇಂದ್ರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನಾನು ಇವತ್ತು ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡಿರುವ ಬೆಳ್ಳೂರಿನಿಂದ - ರಿಪ್ಪನ್ ಪೇಟೆ - ಆನಂದಪುರಂ - ಸಾಗರ ಮತ್ತು ತಿರುಗಿ ಇದೇ ಮಾರ್ಗದಲ್ಲಿ ಬೆಳ್ಳೂರು ಸೇರಿ ಹಾಲ್ಟ್ ಮಾಡುವ ಬಸ್ ಮಾರ್ಗದಲ್ಲಿ ಬಸ್ ಸೌಕಯ೯ ನೀಡಲು ಅರ್ಜಿ ಸಲ್ಲಿಸಿ ಪರ್ಮಿಟ್ ಪಡೆದಿದ್ದೆ.
  ಕೇರಳದ ಕಾಸರಗೋಡಿನಿಂದ ಹಳೇ ಬಸ್ ಒಂದನ್ನು ಖರೀದಿಸಿ ತಂದಿದ್ದು ಅದರದ್ದೇ ಒ0ದು ಕಥೆ.
  ಮೊದಲ ದಿನ ಬೆಳ್ಳೂರು ಗ್ರಾಮಸ್ಥರು ನನ್ನ ಹೆಸರಿನ ಪರ್ಮಿಟ್ ನ "ಪ್ರಶಾಂತ್ " ಎಂಬ ಬಸ್ ನ್ನು ಅವರ ಊರಿಗೆ ತಲುಪಿಸಲು ತುಂಬಾ ಶ್ರಮ ಪಟ್ಟರು ಅವರ ಕಾಳಜಿ ಮತ್ತು ಆಸಕ್ತಿಗೆ ನಾನು ಇವತ್ತೂ ಚಿರರುಣಿ. ಅವತ್ತು ರಸ್ತೆ ಸರಿಪಡಿಸಿ, ರಸ್ತೆ ಸಂಚಾರಕ್ಕೆ ಅಡ್ಡವಾಗಿದ್ದ ಬಿದಿರು ಮೆಳೆ, ಮರದ ರೆಂಬೆ ಎಲ್ಲಾ ಶ್ರಮದಾನದಿಂದ ತೆರವು ಮಾಡಿಕೊಟ್ಟಿದ್ದು ಮರೆಯಲಾಗುವುದಿಲ್ಲ.
  ಬೆಳ್ಳೂರು ಅಭಯಾರಣ್ಯದ ಮಧ್ಯದ ಶರಾವತಿ ಮುಳುಗಡೆಯ ರೈತರು ವಾಸಿಸುತ್ತಿರುವ ಹಳ್ಳಿ ಅವತ್ತು ಕುಗ್ರಾಮ ಆಗಿತ್ತು.
  ನಂತರ ಜಿಲ್ಲಾದಿಕಾರಗಳು ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಮಾಲಿಕರ ಸಂಘದ ಅಧ್ಯಕ್ಷನಾಗಿ ನನ್ನ ನೇಮಿಸಿ ಆಗಿನ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್, ಕೃಷಿ ಮಂತ್ರಿ ಬಂಗಾರಪ್ಪರ ಕರೆಸಿ ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ಗ್ರಾಮಾಂತರ ಸಾರಿಗೆ ನೂರಾರು ಬಸ್ಸುಗಳನ್ನು ಮುಖ್ಯಮಂತ್ರಿ ವಿರೇ೦ದ್ರ ಪಾಟೀಲರು ಹಸಿರು ಭಾವುಟ ತೋರಿಸಿ ಉದ್ಘಾಟನೆ ಮಾಡಿದ ಐತಿಹಾಸಿಕ ಸಭೆಯಲ್ಲಿ ಪ್ರಸ್ತಾವಿಕ ಭಾಷಣಕ್ಕೆ ನನಗೆ ಅವಕಾಶ ಕಲ್ಪಿಸಿದ್ದು ನನಗೆ ನನ್ನ ಜೀವಮಾನದ ಸವಿ ನೆನಪು.
  ಬಸ್ಸು ನಂತರ ನಾಗತಿಹಳ್ಳಿ ಚಂದ್ರಶೇಖರರ ಮೊದಲ ಚಲನಚಿತ್ರ "ಉಂಡೂ ಹೋದ ಕೊಂಡು ಹೋದ" ಸಿನಿಮಾದಲ್ಲಿ ನಾಯಕ ನಟ ಅನಂತನಾಗ್ ಹಳ್ಳಿಗೆ ಬರುವ ರಾಜಧಾನಿ ಎಕ್ಸ್ ಪ್ರೆಸ್ ಆಗಿ ಚಿತ್ರಿಕರಣಕ್ಕೆ ಉಪಯೋಗಿಸಿದ ದಾಖಲೆಯೂ ಆಯಿತು.
   ಇಂತಹ ಕುಗ್ರಾಮಕ್ಕೆ ಬಸ್ ಸೌಕಯ೯ ನೀಡಬೇಕೆಂಬ ಆಗಿನ ಜಿಲ್ಲಾದಿಕಾರಿಗಳಾದ ವಿಜಯ ಕುಮಾರರ ಸದುದ್ದೇಶಕ್ಕೆ ನಾನು ಕೈಜೋಡಿಸಿದ್ದೆನೆಂಬ ಹೆಮ್ಮೆ ನನ್ನದು.
  ಹಾಗಾಗಿ #ಬೆಳ್ಳೂರು ಎಂಬ ಹಳ್ಳಿ ನನ್ನ ಜೀವಮಾನದಲ್ಲಿ ಮರೆಯಲಾಗದ್ದು

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ