Skip to main content

Blog number 854. ಅಮಟೆಕಾಯಿ ಮೌಲ್ಯವರ್ಧನೆ ಆಗಬೇಕಾಗಿದೆ, ಅಮಟೆಕಾಯಿ ಇಲ್ಲದೆ ಕೆಸುವಿನ ಕರಕಲಿ ಮತ್ತು ಹುಳ್ಳಿಕಟ್ಟು ಸಂಪೂರ್ಣವಾಗುವುದಿಲ್ಲ.

#ಅಮಟೆಕಾಯಿ_ಮಿಡಿಯ_ಕಾಲವಿದು.

#ಮಾವಿನ_ಮಿಡಿ_ಮುಗಿದಂತೆ_ಅಮಟೆಕಾಯಿ_ಮಿಡಿ 

#ಅಮಟೆಕಾಯಿ_ಮೌಲ್ಯವರ್ಧನೆ_ಕೆಲಸ_ಆಗಬೇಕಾಗಿದೆ.

#ಒಂದು_ಕಾಲದಲ್ಲಿ_ಹುರುಳಿಕಟ್ಟಿನಲ್ಲಿ_ಕೆಸುವಿನ_ಕರಕಲಿಯಲ್ಲಿ_ಅಮಟೆಕಾಯಿ_ಇರಲೇ_ಬೇಕಿತ್ತು.

  ಸಂಸ್ಕೃತದಲ್ಲಿ ಅಮಟೆಕಾಯಿಗೆ ಅಮರಾಟ ಅನ್ನುತ್ತಾರೆಂದರೆ ಅಮಟೆಕಾಯಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋನೇಷಿಯದ ಮೂಲದ್ದಿರಬಹುದಾ ಎಂಬ ಅನುಮಾನಗಳು ಇದೆ ಯಾಕೆಂದರೆ ಅಮಟೆ ಅಮೇರಿಕಾದ ಉಷ್ಣವಲಯದ ಮೂಲದದ್ದು 17 ನೇ ಶತಮಾನದಲ್ಲಿ ಭಾರತಕ್ಕೆ ಪೋಚು೯ಗೀಸರಿಂದ ತಲುಪಿತು ಎ೦ದು ದಾಖಲಿಸಿದ್ದಾರೆ.
   ನಮ್ಮ ಮನೆಯಲ್ಲಿ 1997 ರಲ್ಲಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಘಂಟಿನಕೊಪ್ಪದ ಮಾಜಿ ಸಾಗರ ತಾಲ್ಲೂಕ್ ಬೋರ್ಡ್ ಸದಸ್ಯರಾಗಿದ್ದ ಹಿರೇನಾಯಕರ ಪುತ್ರ ಸ್ವಾಮಿ ರಾವ್ ಅವರ ಮನೆಯ ಅಮಟೆ ಮರದ ರೆಂಬೆ ತಂದು ಕೊಟ್ಟಿದ್ದರು.
  ನಾನು ಅವರ ಕೈಯಲ್ಲೇ ನನ್ನ ಅವರ ಗೆಳೆತನದ ಸಂಬಂದದ ನೆನಪಿಗಾಗಿ ನಡೆಸಿದೆ ಅದು ಹುಲುಸಾಗಿ ಬೆಳೆದಿದೆ, ಕಾಲ ಕಾಲಕ್ಕೆ ರೂಪಾಂತರವೂ ಮಾಡಿದ್ದೇನೆ.
   ಅಮಟೆಕಾಯಿ ಚಿಗುರು - ಹೂವು - ಕಾಯಿ ಎಲ್ಲವೂ ಬಳಸುತ್ತಾರೆ ಇದರ ಆರೋಮ ಕೂಡ ವಿಶಿಷ್ಟ.
  ಅಮಟೆಕಾಯಿ ಎಳೆ ಮಿಡಿ ಉಪ್ಪಿನಕಾಯಿ, ಪೂರ್ಣ ಬೆಳೆಯುವ ಮೊದಲು ಉದ್ದ ಸಿಗಿದು ಹಾಕುವ ಕಡಿ ಉಪ್ಪಿನಕಾಯಿ, ನಂತರ ಜಜ್ಜಿ ಇಡಿಯಾಗಿ ಸಿಹಿ ಅಥವ ಕಾರದ ಉಪ್ಪಿನ ಕಾಯಿ, ಮಾವಿನ ಮಿಡಿಯಂತೆ ಚಟ್ಟಿಸಿ ಹಾಕುವ ಉಪ್ಪಿನಕಾಯಿ ಹೀಗೆ ತರಹಾವಾರಿ ಉಪ್ಪಿನಕಾಯಿ ಮಾಡುತ್ತಾರೆ.
   ಕೆಸುವಿನ ಸೊಪ್ಪಿನ ಅಡುಗೆಯಲ್ಲಿ ಅಮಟೆಕಾಯಿ ಜಜ್ಜಿ ಹಾಕಿದರೆ ಅದರ ರುಚಿಯೇ ಬೇರೆ, ಎತ್ತಿನ ಬೇಸಾಯದ ದಿನದಲ್ಲಿ ಹುರುಳಿ ಬೇಸಿ ಅವುಗಳಿಗೆ ಹಾಕಬೇಕಾದ ಕಾಲದಲ್ಲಿ ರೈತರ ಮನೆಗಳಲ್ಲಿ ನಿತ್ಯ ಹುರುಳಿ ಹಾಲು ಬೆಳೆದ ಅಮಟೆಕಾಯಿ ಜಜ್ಜಿ ಹಾಕಿ ಕುದಿಸಿ ಹುರುಳಿ ಕಟ್ಟು ಮಾಡುತ್ತಿದ್ದರು ಆಗೆಲ್ಲ ಹುರುಳಿ ಕಟ್ಟಿನಲ್ಲಿ ಇರುತ್ತಿದ್ದ ಅಮಟೆಕಾಯಿಗೆ ಮಕ್ಕಳಲ್ಲಿ ಪೈಪೋಟಿ ಇರುತ್ತಿತ್ತು.
  ಅಮಟೆಕಾಯಿಗೆ ಈಗಲೂ ಬೆಲೆ ಇಲ್ಲ ಇದರಿಂದ ಉಪ್ಪಿನಕಾಯಿ ಹೊರತು ಪಡಿಸಿ ಇದರ ಹುಳಿ ರಸಕ್ಕೆ ಬೆಲೆ ಬರುವಂತೆ ಅಮಟೆಕಾಯಿ ಮೌಲ್ಯವರ್ಧನೆಯ ಸಂಶೋದನೆಗಳು ಆಗಬೇಕಾಗಿದೆ.
   ಇವತ್ತು ನಮ್ಮ ಮನೆಯ ಅಮಟೆ ಮಿಡಿಗೆ ಉಪ್ಪಿನಲ್ಲಿ ಹಾಕಿಡುವಾಗ ಹಿಂದಿನ ವರ್ಷದ ಅಮಟೆಕಾಯಿ ಕೂಡ ರುಚಿ ನೋಡಲು ಸಿಕ್ಕಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...