Skip to main content

Blog number 869. ಪ್ರತಿ ಹಳ್ಳಿಯಲ್ಲೂ ಇಂತಹ ಮಾನಸಿಕ ರೋಗಿಗಳು ಇದ್ದಾರೆ, ಸ್ಯಾಡಿಸ್ಟ್ ಎಂದು ಇಂಗ್ಲೀಷ್ ನಲ್ಲಿ ಕರೆಯುವ ಇವರಿಗೆ ಹಳ್ಳಿಯಲ್ಲಿ ಮೂಕರ್ಜಿ ವೀರರೆಂದೇ ಹೆಸರು

#ಹಳ್ಳಿಗಳಲ್ಲಿ_ಮೂಕಜಿ೯_ವೀರರು

#ಎಷ್ಟೋ_ಕುಟುಂಬ_ಹಾಳು_ಮಾಡುತ್ತಾರೆ.

#ಇದು_ಮನೋರೋಗ

#ನಮ್ಮ_ಸುತ್ತಲೂ_ಇಂತಾ_ಸ್ಯಾಡಿಸ್ಟ್_ಈಗಲೂ_ಇದ್ದಾರೆ.

  ಹಳೆಯ ಗೆಳೆಯ ಕೆಲ ದಶಕದಿಂದ ಸಂಪರ್ಕ ಇಲ್ಲ, ನಿತ್ಯ ಕುಡುಕ ಬೇರೆ,ಒಂದು ಬೆಳ್ಳಂ ಬೆಳಿಗ್ಗೆ ಪೋನ್ ಮಾಡಿದ್ದ "ನಿನ್ನೆ ರಾತ್ರಿ ಕನಸು ಬಿತ್ತು,ನನ್ನ ತಪ್ಪು ನನಗೇ ಗೊತ್ತಾಯಿತು ಕ್ಷಮಿಸಿ ಬಿಡು" ಅಂದ ಅಂತಹ ತಪ್ಪೇನು ಮಾಡಿದಿಯಾ ಮರಾಯ ಅಂದೆ, ಇಲ್ಲ ನಿನಗೆ ಗೊತ್ತಿಲ್ಲ ನಿನ್ನ ಏಳಿಗೆ ಸಹಿಸದೆ ನಾನು ಅನೇಕ ರೀತಿ ನಿನಗೆ ತೊಂದರೆ ಕೊಟ್ಟಿದ್ದೆ ಅಂದ. ಯಾಕೋ ಬೆಳಿಗ್ಗೆ ಬೆಳಿಗ್ಗೆ ಕುಡಿದಿದಿಯಾ ಅಂದೆ, ಹೌದು ಕ್ಷಮಿಸುತ್ತೀಯಾ ಇಲ್ಲವೊ? ಅಂದ ನನ್ನ ಹೃದಯ ಮೃದು ಆಯಿತು ಪಶ್ಚಾತ್ತಾಪದ ಮುಂದಿನ ಪ್ರಾಯಶ್ಚಿತ ಬೇರೆ ಇಲ್ಲ ಅನ್ನಿಸಿ ಖಂಡಿತಾ ಕ್ಷಮಿಸಿದ್ದೇನೆ ಅಂದೆ.
  ಕೆಲವು ದಿನದ ನಂತರ ಆರೋಗ್ಯ ಇಲಾಖೆಯವರು ಒಂದು ಬೇನಾಮಿ ಅರ್ಜಿ ಹಿಡಿದು ಬಂದಿದ್ದರು ಅದರಲ್ಲಿ ನಮ್ಮ ಮಲ್ಲಿಕಾ ರೆಸ್ಟೋರೆಂಟ್ ಸ್ವಚ್ಚವಾಗಿಲ್ಲ ಜನರ ಆರೋಗ್ಯಕ್ಕೆ ಮಾರಕ ಇತ್ಯಾದಿ, ಬಂದವರೆ ಪರಿಶೀಲಿಸಿ ಹೇಳಿದ್ದು ಈ ಹೋಟೆಲ್ ಇಡೀ ತಾಲ್ಲೂಕನಲ್ಲೇ ಸ್ವಚ್ಚವಾಗಿದೆ ಇದರ ಮೇಲೆ ಇಂತಹ ಅರ್ಜಿ ಮಾಡಿದಾರೆ ಅಂದರೆ? ಅಂತ ಇದ್ದರು.       ನಂತರ ಗೊತ್ತಾಗಿದ್ದು ಈ ಅರ್ಜಿ ಬರೆದಾತ ಪೋನ್ ಮಾಡಿ ಕ್ಷಮೆ ಪಡೆದ ಮಿತ್ರನೇ ಬರೆದ ಮೂಕರ್ಜಿ!!..
  ಹಳ್ಳಿಗಳಲ್ಲಿ ಇಂತವರಿಗೆ ಮೂಕರ್ಜಿ ವೀರರೆಂದೆ ಹೆಸರು, ಇವರಿಗೆ ಹಳ್ಳಿಯಲ್ಲಿ ಸುಖ ಸಂಸಾರ ಇದ್ದರೆ ಅದನ್ನು ದುಃಖಕ್ಕೆ ಈಡು ಮಾಡುವುದು, ಅಣ್ಣ ತಮ್ಮಂದಿರು ಅನೋನ್ಯವಾಗಿದ್ದರೆ ಅವರಲ್ಲಿ ಬಿನ್ನಾಭಿಪ್ರಾಯ ತಂದು ಹಿಸ್ಸೆ ಮಾಡಿಸುವುದು,ಅಕ್ಕ ಪಕ್ಕದ ಮನೆಯ ಬೇಲಿ ತಕರಾರು ತಂದು ಹೊಡೆದಾಡಿಸುವುದು, ಮನೆ ಕಟ್ಟುವವರ ಮೇಲೆ ಅರಣ್ಯ ಇಲಾಖೆಗೆ ಅರ್ಜಿ ಕಳಿಸಿ ನಾಟ ಹಿಡಿಸುವುದು,ಕೆರೆ ಒತ್ತುವರಿ ಮಾಡಿದ್ದಾರೆ, ಅರಣ್ಯ ಒತ್ತುವರಿ ಮಾಡಿದ್ದಾರೆ ಅಂತೆಲ್ಲ ವರ್ಷ ಪೂರ್ತಿ ಅರ್ಜಿ ಬರೆಯುವ ಪೋನು ಮಾಡಿ ತೊಂದರೆ ಕೊಡುವುದೇ ಕೆಲಸ.
  ಅಷ್ಟೆ ಅಲ್ಲ ಸತ್ತ ನಾಯಿ ಬೆಕ್ಕು ಇನ್ನೊಬ್ಬರ ಮನೆ ಎದರು ಹಾಕಿಸುವುದು, ಕಸ ತಂದು ಬೇರೆಯವರ ಗೇಟಿನ ಎದರು ಹಾಕಿಸುವುದು, ಕುಡುಕರು ಹುಚ್ಚರಿಗೆ ಹಣ ನೀಡಿ ಕೆಟ್ಟ ಬೈಯ್ಗುಳ ಬೈಯಿಸುವುದು, ಊರಿಗೆ ಉಪಕಾರ ಮಾಡುವವನ ಮೇಲೆ ಸಲ್ಲದ ಅಪಾದನೆ ಮಾಡುವುದು ಎಲ್ಲಾ ಮಾಡಿ ಎದುರಿನಲ್ಲಿ ಅವರನ್ನು ಹೊಗಳುವುದು ಮಾಡುತ್ತಾರೆ.
  ವೈಯಕ್ತಿಕವಾಗಿ ಇವರ ಸಂಸಾರಿಕ ಜೀವನ ಸರಿ ಇರುವುದಿಲ್ಲ.
  ಅಷ್ಟೆ ಅಲ್ಲ ಸಾಲ ಕೊಡೋ ಬ್ಯಾಂಕಿಗೂ ಅಜಿ೯ ಬರೆದು ಇನ್ನೊಬ್ಬರ ವ್ಯವಹಾರಕ್ಕೆ ತಡೆ ಮಾಡುವ, ಕೈಗಡ ಕೊಡುವ ವನಿದ್ದರೆ ಅವನು ಸಾಲ ನೀಡದಂತೆ ಪಿಟ್ಟಿಂಗ್‌,ಸದಾ ಬೇರೆಯವರಿಗೆ ತೊಂದರೆ ಕೊಡಲು ನಿದ್ದೆ ಬಿಟ್ಟು ಸ್ವಂತ ಆರೋಗ್ಯ - ಹಣ ಕಳೆದುಕೊಳ್ಳುವ ಈ ಮೂಕರ್ಜಿ ವೀರರಿಗೆ ಇಂಗ್ಲೀಷ್ ನಲ್ಲಿ ಸ್ಯಾಡಿಸ್ಟ್ ಅಂತ ಹೆಸರು.
  ಮನೋವಿಜ್ಞಾನದಲ್ಲಿ ಇದಕ್ಕೆ ಅನೇಕ ಕಾರಣಗಳಿದೆ ಇದು ಕೆಲವೊಮ್ಮೆ ವಂಶವಾಹಿನಿ ಆಗಿ ಕೂಡ ಮುಂದುವರಿದದ್ದು ಹಳ್ಳಿಗಳಲ್ಲಿ ನೋಡುತ್ತೇವೆ ಇಂತಹ ಕುಟುಂಬಗಳಿಗೆ ತಲೆತಲಾಂತರದಿಂದಲೂ ಜನರಿಗೆ ತೊಂದರೆ ಕೊಡುವುದರಲ್ಲಿ ನಿಸ್ಸೀಮರೆಂದೆ ಹೆಸರಿಸುತ್ತಾರೆ.
  ಮೊದಲೆಲ್ಲ ಕೈ ಬರಹದಲ್ಲಿ ಬರೆಯುತ್ತಿದ್ದ ಇವರು ಅಕ್ಷರದಿಂದ ತಮ್ಮ ಬಣ್ಣ ಬಯಲಾದೀತೆಂದು, ಎಡಗೈಯಲ್ಲಿ ಬರೆಯುವುದು, ನಂತರ ಟೈಪ್ ಮಾಡಿಸಿ ಅರ್ಜಿ ಹಾಕುವವರೆಲ್ಲ ಈಗ ಕಂಪ್ಯೂಟರ್ ನಲ್ಲಿ DTP ಮಾಡಿಸಿ ಅಜಿ೯ಸಲ್ಲಿಸುತ್ತಿದ್ದಾರೆ ಈಗ ಮೊಬೈಲ್ ನಲ್ಲಿ ಬೇನಾಮಿ ಕರೆ ಮಾಡಿ ತೊಂದರೆ ನೀಡುತ್ತಾರೆ ಆದರೆ ಟ್ರೂ ಕಾಲರ್ ನಿಂದ ಇವರ ಬಣ್ಣ ಬಯಲಾಗುತ್ತಿದೆ.
  ಇಂತವರ ಅರ್ಜಿಗಳು ಕೆಲವೊಮ್ಮೆ ಅಧಿಕಾರಿಗಳಿಗೆ ಆದಾಯಕ್ಕೂ ದಾರಿ.
   ಮೊದಲೆಲ್ಲ ಈ ರೀತಿ ಅರ್ಜಿ ಮಾಡುವವರನ್ನು ಪತ್ತೆ ಮಾಡುವುದು ಕಷ್ಟ ಈಗ ಒ0ದಲ್ಲ ಒಂದು ರೀತಿ ಸಿಕ್ಕಿಬೀಳುತ್ತಾರೆ.
  ನನಗಂತೂ ನನ್ನ ಎದುರಿಗೆ ಬಂದು ನಯವಾಗಿ ನಮಸ್ಕರಿಸುವ ಹದ ಹೇಳುವ ಗೆಳೆಯನೇ ಈ ರೀತಿ ಅಜಿ೯ ಬರೆಯುತ್ತಾನೆ ಅಂತ ಗೊತ್ತೇ ಇರಲಿಲ್ಲ, ಅಜಿ೯ ಬರೆದರೂ ಕ್ರಮ ಯಾಕೆ ಕೈಗೊಂಡಿಲ್ಲ ಅಂತ ಕೇಳಲು ಹೋದವನ ಪೋಟೋ ಅಧಿಕಾರಿಗಳೇ ಅವರ ಪೋನಿನಲ್ಲಿ ತೆಗೆದು ತೋರಿಸಿದ ಮೇಲೆ ನಂಬಬೇಕಾಯಿತು.
  ನಿನ್ನೆ ವಿದ್ಯುತ್ ಇಲಾಖೆಗೆ ಪೋನ್ ಮೂಲಕ ದೂರು ದಾಖಲಿಸಿದಾತ ನನ್ನ ಸಂಸ್ಥೆಯ ಹೆಸರು ಬಳಸಿದ್ದಾನೆ, ನನ್ನ ಮಗನ ಹೆಸರಲ್ಲಿ, ಅಧಿಕಾರಿಗಳಿಗೆ ಅನುಮಾನ ಬಂದು ನನಗೆ ಪೋನಾಯಿಸಿದ್ದಾರೆ ನಂತರ ಪೋನ್ ನಂಬರ್ ಪರಿಶೀಲಿಸಿದಾಗ ಗೊತ್ತಾಗಿದ್ದು ಈ ಹಿಂದೆ ಇಂತದೇ ತೊಂದರೆ ಕೊಡುತ್ತಿದ್ದ ಗೆಳೆಯನೋವ೯ನ ಮಗ ಈ ಕೆಲಸ ಮಾಡಿದ್ದಾನೆ!.
  ಹೀಗೆ ಸ್ಯಾಡಿಸ೦ ಇನ್ನೊಂದು ತಲೆಮಾರಿಗೂ ಮುಂದುವರಿದಿದೆ, ಮೂಕಜಿ೯ ವೀರ ಚಿರಾಯು ಅಂತ ವಿಷಾದವಾಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...