Skip to main content

Blog number 871.ಹೆಲ್ತ್ ಟೂರಿಸಂ ಭಾಗವಾಗಿ ನನ್ನ ಕನಸಿನ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭ ಆಗಲಿದೆ ಇದು ಸುಸಜ್ಜಿತವಾದ ಸ್ಟಾರ್ ಕೆಟಗರಿಯ ವಸತಿ - ಊಟ ಸೌಲಭ್ಯದ ಜೊತೆ ಚಿಕಿತ್ಸೆಯನ್ನು ಸುಲಭವಾಗಿ ಅವರವರ ಬಜೆಟ್ ನಲ್ಲಿ ಪಡೆಯುವಂತೆ ಯೋಜಿಸಲಾಗುತ್ತದೆ.

#ಹೆಲ್ತ್_ಟೂರಿಸಂ

#ಪ್ರವಾಸೋದ್ಯಮದ_ಅಂಗವಾಗಿ

#ನನ್ನ_ಬಹುದಿನದ_ಕನಸು.

#ಸದ್ಯದಲ್ಲೇ_ಪ್ರಾರಂಭವಾಗುವ_ಹಂತದಲ್ಲಿ

#ಶಿವಮೊಗ್ಗ_ಜಿಲ್ಲೆಯಲ್ಲಿ_ಸುಂದರ_ಪರಿಸರದಲ್ಲಿ_ಎಲ್ಲಾ_ಸೌಕಯ೯_ಹೊಂದಿದ_ಮೊದಲ_ಚಿಕಿತ್ಸಾಕೇಂದ್ರವಿದು.
  
  ಜೀವನದ ಕನಸುಗಳು ಕೆಲವು ಅದು ನನಸಾದರೆ ಏನಾದೀತು? ಗೊತ್ತಿಲ್ಲ ಆದರೆ ಅದು ನನಸಾಗುವ ತನಕ ಮನಸ್ಸಿಗೆ ವಿಶ್ರಾಂತಿ ಇಲ್ಲ.
  ನನ್ನ ತಂದೆ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆ ಸೇರಿದ್ದರು, ಅವರ ಕುಶಲತೆ ಜ್ಞಾನವನ್ನು ನೋಡಿ ಆಗಿನ ಪ್ರಸಿದ್ದ ವೈದ್ಯರಾದ ಡಾಕ್ಟರ್ ಕೃಷ್ಣನ್ ನಮ್ಮ ತಂದೆಗೆ ಬೆಂಗಳೂರಿಗೆ  ಹೋಮಿಯೋಪತಿ ವೈದ್ಯ ಕಾಲೇಜಿಗೆ ಸೇರಿಸಿ ವೈದ್ಯರನ್ನಾಗಿಸಿ ಅವರು ಸ್ಥಳಿಯವಾಗಿ ಮತ್ತು ಬಟ್ಟೆ ಮಲ್ಲಪ್ಪದಲ್ಲಿ ಕ್ಲೀನಿಕ್ ಮಾಡಿ ಜನರ ಆರೋಗ್ಯ ಸೇವೆ ಮಾಡುವಂತೆ ಮಾಡುತ್ತಾರೆ.
    1960-70 ರ ದಶಕದಲ್ಲಿ ಆನಂದಪುರಂ ಆಸ್ಪತ್ರೆಗೆ ಹೊಸನಗರ ತಾಲ್ಲೂಕಿನಿಂದ - ಶಿವಮೊಗ್ಗ ತಾಲ್ಲೂಕಿನ ಕುಂಸಿಯಿಂದ,ಶಿಕಾರಿಪುರ ತಾಲ್ಲೂಕಿನ ಸಾಲೂರಿನ ತನಕ ರೋಗಿಗಳು ಬರುತ್ತಿದ್ದರು.
  ಆಪರೇಷನ್ ಕೂಡ ಮಾಡುತ್ತಿದ್ದರು, ಡಾಕ್ಟರ್ ಕೃಷ್ಣನ್ ಶ್ರೀಮಂತರು, ಕನಕಮ್ಮಳ್ ಆಸ್ಪತ್ರೆ ನಿರ್ಮಿಸಿದ ಅಯ್ಯಂಗಾರ್ ಕುಟುಂಬದ ವೆಂಕಟಾಚಲ ಅಯ್ಯಂಗಾರರು ಅಂಬಾಸಡರ್ ಕಾರು ಹೊಂದಿದ್ದರು ಹಾಗೆ ಡಾಕ್ಟರ್ ಕೃಷ್ಣನ್ ಕೂಡ ಅಂಬಾಸಡರ್ ಕಾರು ಹೊಂದಿದ್ದರು.
  ಮಧ್ಯರಾತ್ರಿಯಲ್ಲಿ ಡಾಕ್ಟರ್ ಕೃಷ್ಣನ್ ಕಾರು ಹಾರನ್ ಕೇಳಿ ನಮ್ಮ ತಂದೆ ಗಡಿಬಿಡಿಯಿಂದ ಎದ್ದು ಹೊರ ಹೋಗುತ್ತಿದ್ದರು ಅಲ್ಲಿ ಕಾರಿನ ಎದರು ಸಿಗರೇಟು ಸೇದುತ್ತಾ ಡಾಕ್ಟರ್ ಕೃಷ್ಣನ್ ನಮ್ಮ ತಂದೆಗೆ " ಕೃಷ್ಣ ... ಒಂದು ಸ್ಪೆಷಲ್ ಕೇಸ್ ಬಂದಿದೆ ಈಗಲೇ ಆಪರೇಷನ್ ಮಾಡಬೇಕು.. ನಿನಗೆ ಒಂದು ಒಳ್ಳೇ ಅನುಭವ..." ಅನ್ನುತ್ತಿದ್ದರು, ನಮ್ಮ ತಂದೆ ಕ್ಷಣಾರ್ದದಲ್ಲಿ ತಯಾರಾಗಿ ಅವರ ಜೊತೆ ಹೋಗುತ್ತಿದ್ದರು.
  ಆಗೆಲ್ಲ ಈಗಿನ ಹಾಗೆ ಆನೆಸ್ತಿಯಾಗೆ - ಆರೈಕೆಗೆಲ್ಲ ಬೇರೆ ಬೇರೆ ತಂತ್ರಜ್ಞರು ಇರಲೇ ಬೇಕಾಗಿರಲಿಲ್ಲವೊ? ಅಥವ ಡಾಕ್ಟರ್ ಕೃಷ್ಣನ್ ರವರೆ ಅದೆಲ್ಲ ಜವಾಬ್ದಾರಿ ವಹಿಸುತ್ತಿದ್ದರೋ ಗೊತ್ತಿಲ್ಲ ಆದರೆ ವೈದ್ಯರೇ ತಮ್ಮ ಸಹಾಯಕರನ್ನೆಲ್ಲ ಮಧ್ಯರಾತ್ರಿ ತಮ್ಮ ಸ್ವಂತ ಕಾರಿನಲ್ಲಿ ಕರೆದುಕೊಂಡು ಹೋಗಿ ಆಪರೇಷನ್ ಮಾಡಿ ರೋಗಿ ಜೀವ ಉಳಿಸುವ ದೇವರಾಗಿದ್ದರು.
  ಈ ಅನುಭವ ತರಬೇತಿ ನಮ್ಮ ತಂದೆ ನಮ್ಮ ಬಾಗದಲ್ಲಿ ಪ್ರಸಿದ್ಧ ವೈದ್ಯರೆಂಬ ಹೆಸರು ಪಡೆಯಲು ಕಾರಣವಾಯಿತು. ಅವರ ಹಣಕ್ಕಾಗಿ ಅಲ್ಲದ ಬಡವರ ಸೇವೆ ಅವರ ಜೀವನ ಸಾಥ೯ಕಗೊಳಿಸಿತು.
  ನನಗೂ ಜೀವನದಲ್ಲಿ ಆಸ್ಪತ್ರೆ ಮಾಡಬೇಕು, ಜನರಿಗೆ ಆರೋಗ್ಯದ ಸಲಹೆ- ಚಿಕಿತ್ಸೆ ನೀಡಬೇಕೆಂಬ ಅದಮ್ಯ ಆಸೆ ಇದೆ.
  ಇದರ ಮೊದಲ ಹಂತವಾಗಿ ನನ್ನ ಪ್ರವಾಸೋದ್ಯಮದ ಉದ್ಯಮದ ಅಂಗವಾಗಿ ( Health Tourism division) ಪ್ರಾರಂಬಿಸುವ ಕಾಲ ಬಂದಿದೆ.
  ಎರೆಡು ವರ್ಷದ ಕೊರಾನಾ ಗಂಡಾಂತರದಿಂದ ವಿಳಂಬವಾಯಿತು ಮತ್ತು ಇದು ತಕ್ಷಣ ಟೇಕಾಫ್ ಆಗಲು ಅನೇಕ ಕಷ್ಟ ಕೂಡ ( Post Corana ಕಾಲದಲ್ಲಿ) ಇದೆ.
  ಇದಕ್ಕೆ ಬೇಕಾದ ಎಲ್ಲಾ ತಯಾರಿಗಳು ಆಗಿದೆ, ವಿಶೇಷವಾಗಿ #ಶೀರೋದಾರ_ಚಿಕಿತ್ಸೆ ಬೇಕಾದ ಪರಿಕರಗಳು, ಅದಕ್ಕೆ ಬೇಕಾದ ಚಿಕಿತ್ಸಾ ಕೋಣೆ ಕೂಡ ತಯಾರಾಗಿದೆ ಜೊತೆಗೆ ವಿಶೇಷವಾಗಿ ಎ೦ಟು ಕಾಟೇಜುಗಳು ನಿರ್ಮಿಸಲಾಗಿದೆ.
   ಶಿರೋದಾರ - ಮಡ್ ಬಾತ್ ಗಾಗಿ ಪ್ಯಾಕೇಜ್ ಘೋಷಣೆ ಮಾಡಲಿದ್ದೇನೆ ಇದರಲ್ಲಿ ನಮ್ಮದೆ ಲಾಡ್ಜ್ ಅಥವ ಕಾಟೇಜಿನಲ್ಲಿ ತಂಗಿದ್ದು ನಾವೇ ತಯಾರಿಸುವ ವಿಶೇಷ ಮಲೆನಾಡಿನ ಪಶ್ಚಿಮ ಘಟ್ಟದ ಆಹಾರದ ಜೊತೆ ಶಿರೋದಾರ - ಮಡ್ ಬಾತ್ ಚಿಕಿತ್ಸೆ ಪಡೆಯಬಹುದು.
  ಸ್ಥಳಿಯರು ಇಲ್ಲಿ ತಂಗದೆ ನೇರವಾಗಿ ಚಿಕಿತ್ಸೆ ಪಡೆಯಲು ಅವಕಾಶ ಇದೆ ಆದರೆ ಮುಂಗಡವಾಗಿ ಅಪಾಯಿಂಟ್ಮೆಂಟ್ ಪಡೆಯಬೇಕು.
  ಮುಂದಿನ ದಿನದಲ್ಲಿ ಇಲ್ಲಿ ನ್ಯಾಚುರಾಪತಿ, ತೂಕ ಇಳಿಸುವ ಅನೇಕ ಚಿಕಿತ್ಸೆಗಳು ಪ್ರಾರಂಭವಾಗಲಿದೆ.
  ನನ್ನ ಜೊತೆ ಕೈ ಜೋಡಿಸಿರುವವರೆಲ್ಲ ವಿಶೇಷ ವ್ಯಕ್ತಿಗಳು ಇದ್ದಾರೆ ಅವರೆಲ್ಲರ ಬೆಂಬಲದಿಂದ ನನ್ನ ಈ #ವೈದ್ಯೋ_ನಾರಾಯಣಹರಿ_ಆಯುರ್ವೇದ_ಕ್ಲೀನಿಕ್ ಕೆಲವೇ ದಿನದಲ್ಲಿ ಶುಭಾರಂಭ ಮಾಡಲಿದೆ ಎಂದು ತಿಳಿಸಲು ಸಂತೋಷವಾಗುತ್ತದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ