Skip to main content

Blog number 870, ಸಾಗರ ಮೂಲದ ಹೈಕೋರ್ಟನ ಖ್ಯಾತ ವಕೀಲರಾದ ದಿವಾಕರ್ ವಕೀಲರು ಆಮ್ ಆದ್ಮಿ ಪಾರ್ಟಿ ಯಾಕೆ ಸೇರಿದರು?

#ಸಾಗರದ_ದಿವಾಕರ್_ವಕೀಲರು_ಹೈಕೋರ್ಟಿನ_ಪ್ರಖ್ಯಾತ_ವಕೀಲರು

#ಮುಖ್ಯಮಂತ್ರಿಗಳ_ಕಾನೂನು_ಸಲಹೆಗಾರರಾಗಿದ್ದವರು

#ಕೆ_ಎಸ್_ಐ_ಡಿ_ಸಿ_ನಿಗಮದ_ಅಧ್ಯಕ್ಷರಾಗಿದ್ದವರು

#ಮೊನ್ನೆ_ದೆಹಲಿಯಲ್ಲಿ_ಕೇಜ್ರಿವಾಲರ_ಸಮ್ಮುಖ_ಆಮ್_ಆದ್ಮಿ_ಪಾರ್ಟಿ_ಸೇರಿದ್ದಾರೆ.

#ಸಾಗರ_ವಿದಾನಸಭಾ_ಕ್ಷೇತ್ರದಿಂದ_ಸ್ಪರ್ಧಿಸಲು_ತಯಾರಿ_ನಡೆಸಿದ್ದಾರೆ.

 https://youtu.be/NNHeMgE1qK0

 ಇವತ್ತು ನಮ್ಮ ಲಾಡ್ಜ್ ನ ಲಿಪ್ಟ್ ಮೆಷಿನ್ ರೂಂ ಗೆ 30 ಅಡಿ ಎತ್ತರದ ಕಬ್ಬಿಣದ ಸ್ಟೇರ್ ಕೇಸ್ ಅಳವಡಿಸುವ ಸ್ವಲ್ಪ ಕಷ್ಟದ ಕೆಲಸ, ಮೈ ಮರೆತರೆ ಅಪಾಯದ ಕೆಲಸವೂ ಆದ ಕೆಲಸದಲ್ಲಿ ನಮ್ಮ ಕೆಲಸಗಾರರಿಗೆ ಅವರ ಕೆಲಸದಲ್ಲಿ ರಕ್ಷಣೆಯ ನೆಪದಲ್ಲಿ ಅವರ ಜೊತೆ ಇದ್ದೆ, ನಮ್ಮ ಕೆಲಸಗಾರರು ಕೆಲಸದ ಮಧ್ಯೆ ದೇಶದ ರಾಜಕೀಯನೂ ಮಾತಾಡುತ್ತಾರೆ, ಪ್ರತಿಯೊಬ್ಬರ ಮನೆಯಲ್ಲಿ ಟೀವಿ ಇದೆ, ಅಂಗೈಯಲ್ಲಿ ಮೊಬೈಲ್ ಹಾಗಾಗಿ ಅವರಿಗೆ ಪ್ರಚಲಿತ ವಿಷಯಗಳು ಗೊತ್ತಿರುತ್ತದೆ.
   ಲಿಫ್ಟ್ ರೂಂನ 70 ಅಡಿ ಎತ್ತರದಲ್ಲಿ ಸ್ವಲ್ಪ ಕಸ ಇತ್ಯಾದಿ ಬಿದ್ದಿದ್ದು ಅದನ್ನು ತೆಗೆಯಲು ಪೊರಕೆ ಬೇಕು ಅಂದಾಗ ದೆಹಲಿಯ ಕೇಜ್ರಿವಾಲನ (ಸಾಮಾನ್ಯವಾಗಿ ಹಿಂದಿನಿಂದ ಎಲ್ಲರಿಗೂ ಏಕವಚನ ಬಳಸುತ್ತಾರೆ) ಪೊರಕೆನೆ ಈ ಸಾರಿ ಕರ್ನಾಟಕದಲ್ಲಿ ಗ್ಯಾರಂಟಿ ಅಂತ ಅವರವರೆ ಮಾತಾಡುತ್ತಿದ್ದರು.
     ಯಾಕ್ರೋ ಬಿಜೆಪಿ-ಕಾಂಗ್ರೇಸ್ -ಜೆಡಿಎಸ್ ಬಿಟ್ರಾ?, ಅಂದೆ ಇನ್ನೇನಣ್ಣಾ ಎಲ್ಲರನ್ನೂ ನೋಡಿ ಆಯಿತು ಯಾರೂ ಉಪಯೋಗ ಇಲ್ಲ, ದೆಲ್ಲಿಲಿ ಶಾಲೆ - ಆಸ್ಪತ್ರೆ ನೋಡಬೇಕಂತೆ ಹಂಗೆ ಮಾಡಿದಾನೆ, ಹಂಗಾಗೆ ಪಂಜಾಬಿನ ಸಿಕ್ಕರು ಈ ಪಾರ್ಟಿನೆ ಗೆಲ್ಲಿಸಿದ್ದಾರೆ.... ಅನ್ನುವಾಗಲೇ ಅಚಾನಕ್ಕಾಗಿ ದಿವಾಕರ್ ವಕೀಲರು ನಾವು ಕೆಲಸ ಮಾಡುತ್ತಿದ್ದ ಜಾಗಕ್ಕೇ ಮೆಟ್ಟಿಲು ಹತ್ತಿ ಬಂದರು.
  ಅವರು ಪೋನ್ ಮಾಡಿದ್ದಾರೆ ಆದರೆ ಸೈಲೆಂಟಾಗಿಟ್ಟು ಕೆಲಸದ ಮೇಲೆ ಇದ್ದಿದ್ದರಿಂದ ನಾನು ನೋಡಿರಲಿಲ್ಲ.
  ದೀರೆಂದ್ರ ಕೆ. ಝಾ ಬರೆದ ''ಗಾಂದೀಸ್ ಅಸಾಸಿನ್" ಪುಸ್ತಕ ನೀಡಿದರು.
     ಈಗಾಗಲೇ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಮುಖ್ಯಮಂತ್ರಿ ಕೇಜ್ರಿವಾಲರ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.
   ಇವರ ತಾಯಿ ಮನೆ ಸಾಗರ ಪೇಟೆಗೆ ಸಮೀಪದ ಸೂರನಗದ್ದೆಯ ಹತ್ತಿರದ ಸಂಗಳ, ಶರಾವತಿ ಮುಳುಗಡೆಯ ಕುಟುಂಬದವರು. ಇವರ ತಂದೆ ಸೊರಬ ತಾಲ್ಲೂಕಿನ ಕಾಥವಳ್ಳಿಯವರು, ಇವರ ಕುಟುಂಬದ ಆಸ್ತಿ ಜಮೀನು - ತೋಟ ಶಿಕಾರಿಪುರದಲ್ಲಿದೆ.
  ಇವರು ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪ್ರೌಡ ಶಾಲೆ ಶಿಕ್ಷಣದವರೆಗೆ ಸಾಗರದ ಮುನ್ಸಿಪಲ್ ಹೈಸ್ಕೂಲ್ ನಲ್ಲೇ ಓದಿದವರು, ಸಾಗರದ ಗಣಪತಿ ದೇವಸ್ಥಾನದ ಹತ್ತಿರದ ಇವರ ಮಾವನ ಮನೆಯಲ್ಲೇ ಇದ್ದು ವ್ಯಾಸಂಗ ಮಾಡಿದವರು.
   ಇವರೂ ನನ್ನ ಗುರುಗಳಾದ ಈಗ ಸಚಿವ ಕೋಟಾ ಶ್ರೀನಿವಾಸ್ ಪೂಜಾರರ ವಿಶೇಷ ಅಧಿಕಾರಿ ಕೆ.ಆರ್.ಧರ್ಮಪ್ಪರ ಹಿರಿಯ ಶಿಷ್ಯರೂ ಹೌದು.
  ಇವರ ತಂದೆ ಶಿಕಾರಿಪುರ ತಾಲ್ಲೂಕಿನಲ್ಲಿ ಸಮಾಜವಾದಿ ಪಕ್ಷದ ಅನುಯಾಯಿಯಾಗಿದ್ದವರು, ಶಾಂತವೇರಿ ಗೋಪಾಲಗೌಡರ, ಬಸವಣ್ಯಪ್ಪರ ಜೊತೆಗಾರರು ಮತ್ತು ಶಿಕಾರಿಪುರ ರಾಜಕಾರಣದಲ್ಲಿ ಸ್ಥಳಿಯ ಸಂಸ್ಥೆಗೆ ಆಯ್ಕೆ ಆಗಿ ಅಧಿಕಾರವೂ ಚಲಾಯಿಸಿದವರು.
  ಯಡ್ಯೂರಪ್ಪ ಹಿಂದಿನ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿದ್ದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾಗಿದ್ದರು, ಕೆ.ಎಸ್.ಐ.ಡಿ.ಸಿ.ನಿಗಮದ ಅದ್ಯಕ್ಷರೂ ಆಗಿದ್ದರು.
  #ಹಾಯ್_ಬೆಂಗಳೂರಿನ ರವಿ ಬೆಳೆಗೆರೆಯವರ ವಕೀಲರೂ ಆಗಿದ್ದರಿಂದ ಹಾಯ್ ಬೆಂಗಳೂರು ಅಭಿಮಾನಿಗಳಿಗೆ ಇವರ ಮೇಲೆ ವಿಶೇಷ ಪ್ರೀತಿ.
  ಆರು ವರ್ಷದ ಹಿಂದೆಯೇ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ಎಂಬ ಗ್ರಾಮ ಪಂಚಾಯತ್ ನಲ್ಲಿ ಆಮ್ ಆದ್ಮಿ ಹೆಸರಲ್ಲೇ ಸ್ಪರ್ಧೆ ಮಾಡಿ ಐದು ವರ್ಷ ಗ್ರಾಮ ಪಂಚಾಯತ್ ಅಧಿಕಾರ ನಡೆಸಿದ ಯುವಕರ ತಂಡದ ಬಗ್ಗೆ ದಿವಾಕರ್ ವಕೀಲರಿಗೆ ನೆನಪು ಮಾಡಿದೆ.
  ಅಸಮಾನ್ಯ ಚತುರ, ರಾಜಕೀಯ ಚಾಣಕ್ಷತನದ ದಿವಾಕರ್ ವಕೀಲರಿಗೆ ಬೆಂಗಳೂರು ದೆಹಲಿ ಸಂಪರ್ಕ ಹೇಗೆ ಇದೆಯೋ ಹಾಗೆ ಸಾಗರ - ಹೊಸನಗರ- ಸೊರಬ-ಶಿಕಾರಿಪುರ- ತೀರ್ಥಹಳ್ಳಿಯ ಹಳ್ಳಿಗಳಲ್ಲೂ ಸಂಪರ್ಕ ಹೊಂದಿದ್ದಾರೆ.
  ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಕಾಂಗ್ರೇಸ್ ನ ಬಣ ರಾಜಕೀಯದಲ್ಲಿ  ಡಿ.ಕೆ.ಶಿವಕುಮಾರರ ಗುಂಪಿನವರು ಹೆಚ್ಚಿನ ಪ್ರಾತಿನಿಧ್ಯ ಹೊಂದಿದ್ದಾರೆ, ತಮ್ಮ ನಾಯಕರನ್ನು ಕಡೆಗಾಣಿಸಲಾಗಿದೆ, ಅವಮಾನ ಮಾಡಲಾಗಿದೆ ಎಂದು  ಕಾಂಗ್ರೇಸ್ ನ ಹಿರಿಯರ ದೊಡ್ಡ ಗುಂಪು ಸಿಡಿದೆದ್ದಿದೆ.
    ಆ ಗುಂಪು ಬಿಜೆಪಿಗೆ ಹೋಗುವುದಿಲ್ಲ ಆದರೆ  ಅಮ್ ಆದ್ಮಿ ಪಾರ್ಟಿ ಬರದಿದ್ದರೆ ಜೆಡಿಎಸ್ ಅವರ ಆಯ್ಕೆ ಆಗುತ್ತಿತ್ತೇನೋ ಆದರೆ ಈಗ ರಾಜ್ಯದಲ್ಲಿ ಪೊರಕೆ ಗುರುತಿನ ಆಮ್ ಆದ್ಮಿ ಬಂದಿರುವುದು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ದಿವಾಕರ್ ವಕೀಲರೂ ಅದರಲ್ಲಿ ಸೇರಿರುವುದರಿಂದ ಮುಂದಿನ ದಿನದಲ್ಲಿ ಆಮ್ ಆದ್ಮಿ ಮ್ಯಾಜಿಕ್ ಮಾಡಿದರೂ ಮಾಡೀತು.
  ಜಾರ್ಜ್ ಫರ್ನಾಂಡೀಸ್ ರ ಮನೆ ಮಗನಂತಿದ್ದ ನಮ್ಮ ರಾಜ್ಯದ ಕರಾವಳಿಯ ಅನಿಲ್ ಹೆಗ್ಗಡೆಗೆ ಬಿಹಾರದಿಂದ ನಿತೀಶ್ ಕುಮಾರ್ ರಾಜ್ಯಸಭೆಗೆ ಸ್ಪರ್ದೆಗೆ ಅವಕಾಶ ನೀಡಿದ ಸುದ್ದಿ ನನಗೆ ಮೊದಲಿಗೆ ತಿಳಿಸಿದವರೇ ದಿವಾಕರ್ ವಕೀಲರು.
  ಹೀಗೆ ಸ್ವಲ್ಪ ಸಮಯ ಮಾತಾಡಿ ರಿಪ್ಪನ್ ಪೇಟೆಯಲ್ಲಿ ಅವರ ಪಕ್ಷದ ಸಭೆಗೆ ಹೋದರು.
  ಅಧಿಕಾರ ಇರುವ ಪಕ್ಷದಲ್ಲಿ ಕ್ಯಾಬಿನೆಟ್ ದರ್ಜೆಯಲ್ಲಿ ಅಧಿಕಾರದಲ್ಲಿದ್ದ ರಾಜ್ಯದ ಪ್ರಖ್ಯಾತ ವಕೀಲರು ಆಮ್ ಆದ್ಮಿ ಪಾರ್ಟಿ ಸೇರಿದ್ದೇಕೆ ಎಂಬುದರ ವಿವರ ಈ ವಿಡಿಯೋದಲ್ಲಿದೆ ಮತ್ತು ಅವರ ಸಂಪರ್ಕ ಸಂಖ್ಯೆ 9448072605.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ