Skip to main content

Blog number 863.ಹಣ ಕೊಟ್ಟು ಬಾಡಿಗೆ ಕಾರ್ಯಕರ್ತರ ಸೇರಿಸಿ ನಡೆಸುವ ಬೃಹತ್ ಸಭೆ - ಸಮಾವೇಶ ಇನ್ನು ಪ್ರಸ್ತುತವೇ?

#ಸಾರ್ವಜನಿಕ_ಸಬೆ_ಬೃಹತ್_ಸಮಾವೇಷಗಳು_ಈಗಿನ_ಕಾಲಕ್ಕೂ_ಪ್ರಸ್ತುತವೇ?

#ಇದರ_ಹಣದ_ಮೂಲ_ಯಾವುದು?

#ಜನ_ಸ್ವಯಂ_ಪ್ರೇರಿತರಾಗಿ_ಸೇರುವ_ಕಾಲ_ಇದಲ್ಲ

#ಕೂಲಿ_ಕಾರ್ಯಕರ್ತರ_ಎದರು_ಕೋಣನ_ಮುಂದೆ_ಕಿನ್ನರಿ_ಭಾರಿಸಿದಂತೆ_ಪರಿಣಾಮ_ಶೂನ್ಯ.

ಬೇರೆ ದೇಶದಲ್ಲಿ ಟಿಕೇಟ್ ಖರೀದಿಸಿ ಭಾಷಣ ಕೇಳಲು ಸಭೆಗೆ ಹೋಗುತ್ತಾರಂತೆ !? ನಮ್ಮಲ್ಲಿ ಭಾಷಣ ಕೇಳುವವನಿಗೆ ಹಣ ನೀಡಬೇಕು!!

  ಜಾರ್ಜ್ ಫರ್ನಾಂಡಿಸರು ಹೇಳಿದ್ದು ಕೇಳಿದ್ದೆ "ನಾನು ಬಿಹಾರದಲ್ಲಿ ಹಳ್ಳಿಗಳಲ್ಲಿ ಸಣ್ಣ ಸಣ್ಣ ಗುಂಪುಗಳ ಜನರ ಜೊತೆ ಚಾರ್ ಪಾಯ್ (ಅಲ್ಲಿನ ಸಂಪ್ರದಾಯಕ ಹಗ್ಗದ ಮಂಚ) ಮೇಲೆ ಕುಳಿತು ಮಾಡುತ್ತಿದ್ದ ಸಭೆ ಪರಿಣಾಮಕಾರಿ ಆಗುತ್ತಿತ್ತು, ನಾನು ಹೇಳುವ ವಿಷಯ ಅವರ ಮೆದುಳಿಗೆ ಹೋಗಿ ದಾಖಲಾಗುತ್ತಿತ್ತು, ಹತ್ತು ಜನರಲ್ಲಿ ಎಂಟು ಜನರಿಗಾದರೂ ತಲುಪಿತ್ತಿತ್ತು ಆದರೆ ಸಾವಿರಾರು ಜನ ಸೇರಿಸುವ ಸಭೆಗಳಲ್ಲಿ ವಿಚಾರ ಯಾರ ತಲೆಗೂ ತಲುಪುವುದಿಲ್ಲ" ಅಂತ. ನಾವೆಲ್ಲ ಸೇರಿ (ಐ.ಎಂ.ಜಯರಾಂ ಶೆಟ್ಟರು, ಹರಿ ಕೋಡೆ) ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ 2004 ರಲ್ಲಿ ಸಂಯುಕ್ತ ಜನತಾದಳ ಮತ್ತು ಕೋಡೆಯವರ ಪಾರ್ಟಿ ಸೇರಿಸಿ ಸಮಾವೇಶ ನಡೆಸುವ ನಮ್ಮ ಉದ್ದೇಶಕ್ಕಾಗಿ ಅವರನ್ನು ಆಹ್ವಾನಿಸುವ ಸಂದರ್ಭದಲ್ಲಿ.
  ಇವತ್ತು #ಅರವಿಂದ_ಚೊಕ್ಕಾಡಿ ಯವರ ಪೋಸ್ಟಿನಲ್ಲಿ ಸಭೆ ಸಮಾವೇಷದ ಚರ್ಚೆ ನೋಡಿ ಇದನ್ನು ಬರೆಯುವ ಮನಸ್ಸಾಯಿತು, ಮುಂದಿನ ದಿನದಲ್ಲಿ ಬದಲಾದೀತಾ ಇದು?
  
   ನಾನು ಭಾವಿಸುವುದು ಜನ ಸೇರಿಸಿ ಸಭೆ ಮಾಡುವ ಉದ್ದೇಶ outdated. ಯಾಕೆಂದರೆ ಆಗ ಜನರಿಗೆ ಟೀವಿ ಮೊಬೈಲ್ ಇರಲಿಲ್ಲ, ಅಕ್ಷರ ಜ್ಞಾನ ಇರಲಿಲ್ಲ, ಆಗ ಗಾಂದೀ ನೋಡಲು ಅವರ ಮಾತು ಕೇಳಲು ಲಕ್ಷಾಂತರ ಜನ ಸ್ವಯ೦ ಪ್ರೇರಿತರಾಗಿ ಸೇರುತ್ತಿದ್ದರು ಮತ್ತು ಅವರ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕುತ್ತಿದ್ದರು.
   ಈಗ ಇಡೀ ವಿಶ್ವದ ಆಗು ಹೋಗು ಪ್ರತ್ಯಕ್ಷವಾಗಿ ನೋಡಬಹುದಾದ ಸಾಮಾಜಿಕ ಜಾಲ ತಾಣ ಇದೆ.
 ರಾಜಕೀಯ ಪಕ್ಷಗಳು ತಮಗೆ ಜನಪ್ರಿಯತೆ ಇದೆ ಅಂತ ತೋರಿಸಲು ಹಣ - ಬಿರಿಯಾನಿ - ಹೆಂಡ-ವಾಹನ - ಟೀ ಶರ್ಟ್ - ಟೋಪಿ ಕೊಟ್ಟು ಜನಪ್ರಿಯ ಸಿನಿಮಾ - ಸೀರಿಯಲ್ ನಿರೂಪಕರನ್ನು ಕರೆಸಿ ಅವರಿಂದ ಜೈಕಾರ ಹಾಕಿಸುವುದು ಮತ್ತು ನಾಯಕರುಗಳು ಅವರೆದರು  ಕೋಣನ ಮುಂದೆ ಕಿಂದರಿ ಬಾರಿಸುವುದು ಅದಕ್ಕೆ ಕೊಟ್ಟ ಕೂಲಿಯ ಪ್ರತಿಫಲವಾಗಿ ಚಪ್ಪಾಳೆ ..ಟ್ರಾಪಿಕ್ ಜಾಮ್, ನಾಳೆ ಇವರೇ ಬೇರೆ ಗೆಟಪ್ ನಲ್ಲಿ ಬೇರೆ ಪಕ್ಷದ ಸಮಾವೇಶ ಇದೊಂದು ತರ ಅಪಹಾಸ್ಯ.
  ಆದ್ದರಿಂದ ಅವಶ್ಯವಿರುವ ಮತ್ತು ಅರಿವಿರುವ 10 ಜನರು ಸೇರಿ ಸಭೆ ನಡೆಸಿ ಲಕ್ಷಾಂತರ ಜನರಿಗೆ ತಲುಪಿಸುವ ಸಾಮಾಜಿಕ ಜಾಲ ತಾಣ ಬಳಸಿಕೊಳ್ಳುವ ಕಾಲ ಇದು.
  ಪತ್ರಿಕೆಯಲ್ಲಿ ಟಿವಿಯಲ್ಲಿ ಇದು ವರದಿ ಆಗುವುದು ಬೇಕಾಗಿಲ್ಲ, ಜನರಿಗೆ ಅವುಗಳ ಮೇಲೆ ವಿಶ್ವಾಸವೂ ಇಲ್ಲ ಅವೆಲ್ಲ ಜಾಹಿರಾತು ಹಣಕ್ಕಾಗಿ ನಡೆಯುವ ದಂದೆ ಅಷ್ಟೆ.
  🙏

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ