Skip to main content

Blog number 875, ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದಲ್ಲಿ ಅಮೂರ್ತ ವೇಳೆಯಲ್ಲಿ ನನ್ನ ಮದುವೆ ಆಗಿ 33 ವರ್ಷ ಆಗಲಿದೆ, ಮದುವೆ ಮಾಡಿಸಿದವರು ಪ್ರದಾನ ಅರ್ಚಕರಾದ ವಿಶ್ವ ಹಿಂದೂ ಪರಿಷತ್ ಸಂತ ಸಮಾವೇಶದ ಸಂಚಾಲಕರಾದ ನರಸಿಂಹಮೂರ್ತಿ ಆಯ್ಯಂಗಾರರು

#ಶಿವಮೊಗ್ಗದ_ಕೋಟೆ_ಆಂಜನೇಯ_ದೇವಸ್ಥಾನ.

#ಕೆಳದಿ_ಅರಸರ_ಶಿವಮೊಗ್ಗ_ಕೋಟೆಯ_ಆಂಜನೇಯ

#ಇಲ್ಲಿನ_ಅರ್ಚಕರಾಗಿದ್ದ_ನರಸಿಂಹಮೂರ್ತಿ_ಅಯ್ಯಂಗಾರ್

#ನನ್ನ_ಮದುವೆ_ಮಾಡಿಸಿದವರು.

  1989 - ಆಗಸ್ಟ್ -23 ರಂದು ನನ್ನ ಮದುವೆ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯಲ್ಲಿ ನಿಗದಿ ಆಗಿತ್ತು, ವಿವಾಹ ಆಹ್ವಾನ ಪತ್ರಿಕೆ ಇಲ್ಲ, ಕೆಲವೇ ಕೆಲವು ಆಪ್ತರ ಸಾಕ್ಷಿಯಾಗಿ ನನ್ನ ಮದುವೆ.
  ಇದಕ್ಕೂ ಒ0ದು ವರ್ಷ ಮೊದಲು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಮನೆಯಲ್ಲಿ ಯಾರಿಗೂ ತಿಳಿಸದೆ ವಿವಾಹ ನೊಂದಾವಣೆ ಮಾಡಿಸಿದ್ದೆ.
   ನನಗೆ ಗಾರ್ಡಿಯನ್ ಆಗಿ ಸಾಗರದ ತೀ.ನಾ. ಶ್ರೀನಿವಾಸ್ (ನಂತರರ ಸಾಗರ ಪುರಸಭೆ ಅಧ್ಯಕ್ಷರಾದರು - ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ನನ್ನ ಪತ್ನಿಗೆ ಗಾರ್ಡಿಯನ್ ಆಗಿ ಅವಳ ಸಹೋದರಿಯ ಬಾಡಿಗೆ ಮನೆ ಮಾಲಿಕರಾದ ಶ್ರೀ ಮತಿ ಮುತ್ತು ಮೇರಿಯಮ್ಮ ಸಹಿ ಮಾಡಿದ್ದರು.
  ವಿವಾಹ ನೊಂದಾವಣೆ ಮಾಡಿದ್ದು ನನ್ನ ಪತ್ನಿಗೆ ಮುಂದೆ ಮದುವೆಗೆ ಏನಾದರೂ ಅಡೆತಡೆ ಬಂದರೂ ನಮ್ಮ ವಿವಾಹ ಖಾತ್ರಿ ಎಂದು ದೃಡೀಕರಿಸಲು ಮತ್ತು ಇದು ರಹಸ್ಯವಾಗಿಡಬೇಕೆಂಬುದು ನಮ್ಮ ಉದ್ದೇಶ ಆದರೆ ನಮ್ಮ ವಿವಾಹ ನೊಂದಾವಣಿಯನ್ನು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಸಾಗರದ ಸಬ್ ರಿಜಿಸ್ಟ್ರಾರ್ ಆಫೀಸಿನ ನೋಟೀಸ್ ಬೋರ್ಡಿಗೆ ಹಾಕುತ್ತಾರಂತ ಗೊತ್ತಿರಲಿಲ್ಲ.
  ಪಕ್ಕದ ಟ್ರಜರಿಯಲ್ಲಿ ಉದ್ಯೋಗಿ ಆಗಿದ್ದ ನನ್ನಣ್ಣನ ಶಾಲಾ ಸಹಪಾಠಿ ಅಣ್ಣಪ್ಪನವರು ನನ್ನಣ್ಣನಿಗೆ ತಿಳಿಸಿದಾಗ, ನನ್ನಣ್ಣ ಅದನ್ನು ನೋಡಿ ಬಂದು ನಮ್ಮ ತಂದೆಗೆ ತಿಳಿಸಿದ ನಂತರ ನಮ್ಮ ರಹಸ್ಯ ವಿವಾಹ ನೊಂದಾವಣಿ ವಿಷಯ ಜಗಜ್ಜಾಹೀರ ಆಯಿತು.
  ಅದಾಗಿ ಒಂದು ವರ್ಷದ ನಂತರ ದೇವಾಲಯದಲ್ಲಿ ತಾಳಿ ಕಟ್ಟಿ ಮದುವೆ ಆಗಲು ನಮ್ಮ ತಂದೆ ಒಪ್ಪಿಗೆ ನೀಡಿದರು, ಅವರ ಗೆಳೆಯರ ಮಗಳೆ ಇವರ ಸೊಸೆ ಆದರೂ ನಮ್ಮ ತಂದೆಗೆ ಬ್ರಾಹ್ಮಣ ಶಾಪ ಒಳ್ಳೆಯದಲ್ಲ ಎಂಬ ಭಯದಿಂದ ವಿಳಂಬವಾಗಿ ಒಪ್ಪಿಗೆ ನೀಡಿದರು.
   ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಪ್ರದಾನ ಅಚ೯ಕರಾಗಿದ್ದ ನರಸಿಂಹಮೂರ್ತಿ ಅಯ್ಯಂಗಾರರು ಅವತ್ತು ಮಹೂರ್ತ ಇಟ್ಟುಕೊಟ್ಟ ಸಮಯ ಮೀರಿದ ಮೇಲೆ ನಮ್ಮ ದಿಬ್ಬಣ (ಕೆಲವೇ ಜನರದ್ದು) ದೇವಾಲಯ ತಲುಪಿತು,ಕಾರಣ ನಮ್ಮ ತಂದೆ ರಾತ್ರಿ ಬರಲು ಒಪ್ಪಿದವರು ಬೆಳಿಗ್ಗೆ ಬರುವುದಿಲ್ಲ ಎಂದು ಹಠ ಹಿಡಿದದ್ದು.ನಾನು ಮಾತ್ರ ನೀವು ಬರದಿದ್ದರೆ ನಾನು ಮದುವೆ ಆಗುವುದಿಲ್ಲ ಎಂಬ ಸೆಂಟಿಮೆಂಟಲ್ ಸೀನ್ ಎಲ್ಲಾ ಸುಖಾಂತ್ಯ ಆಗುವಾಗ ಭರಪೂರ ಮಳೆಯಿಂದ ಮಹೂರ್ತ ತಪ್ಪಿ ಹೋಯಿತು.
   ಶಿವಮೊಗ್ಗದಲ್ಲಿ ನನ್ನ ಪತ್ನಿ ಅವಳ ಸಹೋದರಿಯ ಮನೆಯಲ್ಲಿ ಮದುವೆ ಮಹೂರ್ತ ಕಳೆದರೂ ಬರದಿರುವುದು ನೋಡಿ (ಆ ಕಾಲದಲ್ಲಿ ಈಗಿನ ರೀತಿ ಸಂಪರ್ಕ ಪೋನು ಇರಲಿಲ್ಲ) ಅವಳು ಅವಳ ಸಹೋದರಿಯರು ಮತ್ತು ಮನೆ ಮಾಲಿಕರು ಏನೋ ಅನಾಹುತ ಅಂತ ಬಾವಿಸಿದ್ದರು.
 ವಿಳಂಬವಾಗಿ ದೇವಾಲಯ ತಲುಪಿದ ನಮಗೆ ಪ್ರದಾನ ಅರ್ಚಕರಾದ ನರಸಿಂಹ ಮೂರ್ತಿ ಅಯ್ಯಂಗಾರರು, ಮಹೂರ್ತ ಇಲ್ಲದ ಸಮಯದಲ್ಲಿ ವಿವಾಹ ಮಾಡಬಾರದಾಗಿ ಇದರಿಂದ ದಂಪತಿಗಳಿಗೆ ಒಳ್ಳೆಯದಾಗದೆಂದು  ತಿಳಿಸಿದರು. ಆಗ ನಾನು ವಿನಂತಿಸಿದೆ "ಏನಾದರೂ ನಾನು ಎದುರಿಸುತ್ತೇನೆ ಇವತ್ತು ಮದುವೆ ಆಗದಿದ್ದರೆ ಮುಂದಿನ ದಿನ ನಿಗದಿಗೆ ಅನೇಕ ವಿಘ್ನ ಖಂಡಿತಾ" ಅಂತ ವಿವರಿಸಿದೆ. ಆಮೇಲೆ ಅವರು ಎಲ್ಲದಕ್ಕೂ ಕೋಟೆ ಆಂಜನೇಯನೇ ನಿಮ್ಮನ್ನು ಕಾಪಾಡಲಿ ಎಂದು ಒಪ್ಪಿದರು.
  ನನ್ನಣ್ಣ ಹೋಗಿ ಹೆಣ್ಣಿನ ಕಡೆಯವರ ದಿಬ್ಬಣ ಕರೆತಂದ. ಮಹೂರ್ತ ಇಲ್ಲದ ಅಮೂರ್ತದಲ್ಲಿ ನಾನು ತಾಳಿ ಕಟ್ಟಿ ಮದುವೆ ಆದೆ, ಮುಂದಿನ ಆಗಸ್ಟ್ ಗೆ 33 ವರ್ಷ ಆಗಲಿದೆ.
  2019 ರ ನನ್ನ ಮಗಳ ಮದುವೆಯಲ್ಲಿ ನನ್ನ ವಿವಾಹದಲ್ಲಿ (1989) ಭಾಗವಹಿಸಿದವರಿಗೆಲ್ಲ ಉಡುಗರೆ ನೀಡಿ ಆಹ್ವಾನಿಸಿದ್ದೆ.
  ಮೊನ್ನೆ ಶಿವಮೊಗ್ಗ ವೈದ್ಯರ ಬಳಿ ಹೋದಾಗ ಸುಮಾರು 32 ವರ್ಷದ ನಂತರ ಕೋಟೆ ಆಂಜನೇಯ ದೇವರಿಗೆ ಕೈ ಮುಗಿಯುವಾಗ ಇದೆಲ್ಲ ನೆನಪಾಯಿತು.
  ಆಗ ಕೋಟೆ ಆಂಜನೇಯ ದೇವಸ್ಥಾನದ ಪ್ರದಾನ ಅರ್ಚಕರಾಗಿದ್ದ ನರಸಿಂಹ ಮೂರ್ತಿ ಅಯ್ಯಂಗಾರರು ವಿಶ್ವ ಹಿಂದೂ ಪರಿಷತ್ ನಲ್ಲಿ ಪ್ರಮುಖರಾಗಿ #ಸಂತರ_ಸಮಾವೇಶಗಳನ್ನು ನಡೆಸಿ ಪ್ರಖ್ಯಾತರಾಗಿದ್ದರು ಈಗ ಅವರಿಲ್ಲ.
  ಮೊನ್ನೆ ದೇವಾಲಯದಲ್ಲಿ ಅವರ ಪುತ್ರ ಅನಂತರಾಮ ಅಯ್ಯಂಗಾರರು ಸಿಕ್ಕಿದರು ಪರಿಚಯ ಮಾಡಿಕೊಂಡು ಅವರ ಪಾದಕ್ಕೆ ವಂದಿಸಿ ಆಶ್ರೀವಾದ ಪಡೆದೆವು.
  ದಾಂಪತ್ಯ ಜೀವನದ 33 ವರ್ಷ ಬೇವು -ಬೆಲ್ಲದಂತೆ ಕಳೆದು ಹೋಯಿತು ಅವತ್ತಿನ ದಿನದಲ್ಲಿ ನನ್ನ ಮದುವೆಗೆ ಸಾಕ್ಷೀ ಅದವರು ಅನೇಕರು ಈಗ ಇಲ್ಲ, ಅವರೆಲ್ಲರೂ ನೆನಪಾದರು.
  ಇನ್ನೊಂದು ವಿಷಯ ಅವತ್ತು ತಾಳಿ ಕಟ್ಟಿದ ನಂತರ ಶಿವಮೊಗ್ಗದ ಜ್ಯೂವೆಲ್ ರಾಕ್ ಹೋಟೆಲ್ ನಲ್ಲಿ ಸಸ್ಯಹಾರ ಮತ್ತು ಮಾ೦ಸಹಾರದ ಊಟ ನನ್ನ ಮದುವೆಗೆ ಬಂದವರಿಗೆ ಮಾಡಿಸಿದ್ದೆ.
  ಅವತ್ತು ಅಮೂಹರ್ತದಲ್ಲಿ  ಶಿವಮೊಗ್ಗದ ಕೋಟೆ ಆಂಜನೇಯನ ಎದುರು ತಾಳಿ ಕಟ್ಟಿದ ನಮಗೆ ಕೋಟೆ ಆಂಜನೇಯನೇ ಕಾಪಾಡೆಂದು ಪ್ರಾರ್ಥಿಸಿದ್ದ ನರಸಿಂಹಮೂರ್ತಿಯವರ ಪ್ರಾರ್ಥನೆಯಂತೆ ಕೋಟೆ ಆಂಜನೇಯ ಕಾಪಾಡಿದ್ದಾನೆ ಮುಂದಿನ ವೃದ್ಧಾಶ್ರಮ ಕೂಡ ಕಾಪಾಡದಿರಲಾರ ಎಂದು ಆಶಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ