Skip to main content

Blog number 858.ತ್ಯಾಗರ್ತಿಯ ಇನಾಮುದಾರರು ಊರಿಗಾಗಿ ವಿವೇಕಾನಂದ ಪ್ರೌಡ ಶಾಲೆ ಕಟ್ಟಿಸಿಕೊಟ್ಟವರಾದ ಗುರುಮೂರ್ತಿ ರಾಯರ ಕೊನೆಯ ಪುತ್ರಿ ಶ್ರೀಮತಿ ಸುದಾಮಣಿ ವಿಶ್ವಪತಿ ಶಾಸ್ತ್ರೀಗಳು ಇವತ್ತು ನಮ್ಮ ಅತಿಥಿಗಳು

#ತ್ಯಾಗರ್ತಿ_ಇನಾಂದಾರ್_ಗುರುಮೂರ್ತಿ_ರಾಯರ_ಪುತ್ರಿ_ಬೆಂಗಳೂರಿಂದ_ಬಂದಿದ್ದರು.

#ಶ್ರೀಮತಿ_ಸುದಾಮಣಿವಿಶ್ವಪತಿ_ಶಾಸ್ತ್ರೀ.

#ನನ್ನ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನದಲ್ಲಿ_ಇವರ_ಕುಟುಂಬದ_ನಿಜ_ಕಥೆ_ಇದೆ.

#ಇನಾಂದಾರರ_ಮಂಚ_ಅಂತ.

#ಮಾನವೀಯ_ಅಂತಃಕರಣ_ಹೊಂದಿದ್ದ_ಸಜ್ಜನ_ಭೂಮಾಲಿಕರು.

#ಹೇರಂಬರಾಯರು_ನೀಚಡಿಬಾಪಟ್ಟರು_ಬಂಗಾರಪ್ಪ_ಶಿಕಾರಿ_ಮಾಡಿದ_ಹುಲಿ
#_ಎತ್ತಿನಗಾಡಿ_ಮೆರವಣಿಗೆ_ಮಾಡಿ_ಊರಿಗೆಲ್ಲ_ಬೆಲ್ಲ_ಹಂಚಿದ್ದರಂತೆ.

   ತ್ಯಾಗರ್ತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿ ಕೇಂದ್ರ, ಇಲ್ಲಿಗೆ ಸಮೀಪದಲ್ಲೇ ಇರುವ ಬೆಳಂದೂರು ಎಂಬಲ್ಲಿ ಜನರಿಗೆ ಕಂಟಕ ಆಗಿದ್ದ ನರಭಕ್ಷಕ ಹುಲಿಯನ್ನು ಪ್ರಖ್ಯಾತ ಶಿಕಾರಿಗಾರ ಕೆನತ್ ಆಂಡರ್ಸನ್ ಮತ್ತು ತ್ಯಾಗರ್ತಿ ಆಸ್ಪತ್ರೆಯ ವೈದ್ಯರು ಸೇರಿ ಶಿಕಾರಿ ಮಾಡಿದ #ಬೆಳ೦ದೂರಿನ_ನರಭಕ್ಷಕ ಪುಸ್ತಕ ತೇಜಸ್ವಿಯವರು ಅನುವಾದಿಸಿದ್ದಾರೆ.
    ತ್ಯಾಗರ್ತಿಯ ಶ್ರೀಮಂತ ಜಮೀನ್ದಾರ್ ದೇವಪ್ಪನವರು ನಂತರ ಅವರ ಮಗ ರಂಗಪ್ಪರ ಇಬ್ಬರು ಪುತ್ರರಾದ ಹೇರಂಬ ರಾಯರು ಮತ್ತು ಗುರುಮೂರ್ತಿ ರಾಯರ ಕಾಲದಲ್ಲಿ ಸಾವಿರಾರು ಎಕರೆ ಜಮೀನು ಭೂ ಸುದಾರಣೆ ಕಾಲದಲ್ಲಿ ಕಳೆದುಕೊಂಡರು.
  1966 ರಲ್ಲಿ ಶೃಂಗೇರಿ ಸ್ವಾಮಿಗಳು ಇವರ ಮನೆಯಲ್ಲಿ ಎರೆಡು ದಿನ ಮೊಕ್ಕಾಂ ಮಾಡಿದ್ದರು, ವರದಳ್ಳಿ ಶ್ರೀದರ ಸ್ವಾಮಿಗಳು ಇವರ ಮನೆಯಲ್ಲಿ ಅನೇಕ ಬಾರಿ ಬಿಕ್ಷೆ ಮಾಡಿದ್ದರು, ಶ್ರೀದರ ಸ್ವಾಮಿಗಳ ಭಕ್ತರಾಗಿದ್ದ ಇವರು ಅವರ ಹೆಸರಲ್ಲೆ ರೈಸ್ ಮಿಲ್ ಮಾಡಿ ಶ್ರೀಧರ ಸ್ವಾಮಿಗಳಿಂದಲೇ ಉದ್ಘಾಟನೆ ಮಾಡಿಸಿದ್ದರು.
  ತ್ಯಾಗರ್ತಿಯ ಅಗ್ರಹಾರದಲ್ಲಿ 1826 ರಲ್ಲಿ ನಿರ್ಮಿಸಿದ್ದ ಬೃಹತ್ ಮೂರು ಅಂತಸ್ಥಿನ ಮನೆ ಅಂತದ್ದು ಆನಂದಪುರಂ ಹೋಬಳಿಯಲ್ಲಿ ಮತ್ತೊಂದು ಇರಲಿಲ್ಲ.
   ಗುರುಮೂರ್ತಿ ರಾಯರ ಕೊನೆಯ ಪುತ್ರಿ ಶ್ರೀಮತಿ ಸುದಾಮಣಿ ವಿಶ್ವಪತಿ ಶಾಸ್ತ್ರೀಗಳು ಈಗ ಬೆಂಗಳೂರು ನಿವಾಸಿಗಳು, ನಿನ್ನೆ ನಮ್ಮಲ್ಲಿ ಅತಿಥಿಗಳಾಗಿ ತಂಗಿದ್ದರು ಆಗ ಅವರ ಜೊತೆ ಮಾತಾಡಿದ ವಿಡಿಯೋ ಇಲ್ಲಿದೆ.
  ಸ್ವಾರಸ್ಯ ಎಂದರೆ ನನ್ನ ಕಥಾ ಸಂಕಲನದಲ್ಲಿನ ಒಂದು ಕಥೆ #ಇನಾಂದಾರರ_ಮಂಚ ಇವರ ಕುಟುಂಬದ ನಿಜ ಕಥೆ ಆ ಮಂಚ ಇವರ ಮುತ್ತಜ್ಜ ದೇವಪ್ಪನವರು ಮಲಗುತ್ತಿದ್ದದ್ದು, ಇದರ ನಾಲ್ಕು ಬೋಲ್ಟ್ ಗಳು ಬಂಗಾರದ್ದು ಅಂತ ಇವರಾರಿಗೂ ಗೊತ್ತಿರಲಿಲ್ಲ, ಹೇರಂಬ ರಾಯರ ಮೊಮ್ಮಗಳ ಮಗ  ಕೇವಲ ನಾಲ್ಕು ಸಾವಿರಕ್ಕೆ ಮಾರಿಕೊಂಡಿದ್ದ, ಖರೀದಿಸಿದವರು ಅದೇ ಊರಿನ ಆಭರಣ ಕೆಲಸದ ಅಕ್ಕಸಾಲಿಗರು.
  ಶ್ರೀಮಂತ ಜಮೀನ್ದಾರರಾಗಿದ್ದ ದೇವಪ್ಪನವರು 1826 ರಲ್ಲಿ ಅರಮನೆಯಂತ ಮನೆ ನಿರ್ಮಿಸಿದಾಗ ಬಂಗಾರದ ಬೋಲ್ಟ್ ಅಳವಡಿಸಿದ ಮಂಚ ಮಾಡಿಸಿರಬೇಕು, ಮುಂದಿನ ತಲೆಮಾರಿಗೆ ರಹಸ್ಯವಾಗಿಟ್ಟಿರಬೇಕು ಅಥವ ತಮ್ಮ ಅಂತ್ಯಕಾಲದಲ್ಲಿ ಇದನ್ನು ತಿಳಿಸಲಾಗದೇ ನಿರ್ಗಮಿಸಿರಬೇಕು ಅಥವ ಅವರ ಶ್ರೀಮಂತ ಜೀವನ ಶೈಲಿಗೆ ಇದೊಂದು ಅಲ್ಪ ಅನ್ನಿಸಿರಬೇಕು.
  ಸುಮಾರು 200 ವರ್ಷದಲ್ಲಿ 2 kg ಬಂಗಾರದ ಬೋಲ್ಟ್ ಗೆ ಒಂದು ಕೋಟಿ ಆಗುತ್ತೆ ಅಂತ ಯಾರಿಗೆ ಗೊತ್ತು.
  ತ್ಯಾಗರ್ತಿಯಲ್ಲಿ ಹೇರಂಬ ರಾಯರು, ನೀಚಡಿ ಬಾಪಟ್ಟರು, ಬಂಗಾರಪ್ಪ ಎಂಬ ರೈತರು ಜನ - ಜಾನುವಾರಿಗೆ ಕಂಟಕ ಆಗಿದ್ದ ಹುಲಿ ಶಿಕಾರಿ ಮಾಡಿ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿ ನೆರೆದವರಿಗೆಲ್ಲ ಬೆಲ್ಲ ಹಂಚಿದ್ದು ಸುದಾಮಣಿ ಶಾಸ್ತ್ರೀಯವರು 1958 ರಲ್ಲಿ ನೋಡಿದ್ದು ನೆನಪು ಮಾಡಿಕೊಂಡಿದ್ದಾರೆ.
   ಇವರ ಪಿತ್ರಾರ್ಜಿತ ಆಸ್ತಿ ಉಳಿದ 5 ಎಕರೆ ಖುಷ್ಕಿ ಜಮೀನ ದುರಾಸೆಯ ಕೆಲವರು ಒತ್ತುವರಿ ಮಾಡಿಕೊಂಡು ಸತಾಯಿಸುತ್ತಿದ್ದಾರೆ ಅವರಿಗೆ ಬುದ್ಧಿ ಹೇಳಿ ತ್ಯಾಗರ್ತಿ ಊರು ಕಟ್ಟಿದ ಸಜ್ಜನರ ವ೦ಶಕ್ಕೆ ನ್ಯಾಯ ಕೊಡಿಸುವವರು ಇಲ್ಲ, ಇವರ ತಂದೆ ಹತ್ತು ಎಕರೆ ಭೂಮಿ ದಾನ ನೀಡಿ ಊರಿನ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಪ್ರಾರಂಬಿಸಿದ ವಿವೇಕಾನಂದ ಪ್ರೌಡ ಶಾಲೆ, ಬರಗಾಲದಲ್ಲಿ ಇಡೀ ಊರಿಗೆ ತಮ್ಮ ಸಂಗ್ರಹದ ಬತ್ತ ದಾನ ಮಾಡಿದ್ದು ಎಲ್ಲಾ ಲಾಭ ಪಡೆದ ಕುಟುಂಬದ ಮು೦ದಿನ (ಈಗಿನ ) ತಲೆಮಾರುಗಳು ಮರೆತಿದೆ.
   ಊರು ಉಪಕಾರ ನೆನೆಯುವುದಿಲ್ಲ.. ಹೆಣ ಸಿಂಗಾರ ನೆನೆಯುವುದಿಲ್ಲ ಎಂಬ ಗಾದೆ ಎಷ್ಟು ಸತ್ಯ ನೋಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...