Skip to main content

Blog number 858.ತ್ಯಾಗರ್ತಿಯ ಇನಾಮುದಾರರು ಊರಿಗಾಗಿ ವಿವೇಕಾನಂದ ಪ್ರೌಡ ಶಾಲೆ ಕಟ್ಟಿಸಿಕೊಟ್ಟವರಾದ ಗುರುಮೂರ್ತಿ ರಾಯರ ಕೊನೆಯ ಪುತ್ರಿ ಶ್ರೀಮತಿ ಸುದಾಮಣಿ ವಿಶ್ವಪತಿ ಶಾಸ್ತ್ರೀಗಳು ಇವತ್ತು ನಮ್ಮ ಅತಿಥಿಗಳು

#ತ್ಯಾಗರ್ತಿ_ಇನಾಂದಾರ್_ಗುರುಮೂರ್ತಿ_ರಾಯರ_ಪುತ್ರಿ_ಬೆಂಗಳೂರಿಂದ_ಬಂದಿದ್ದರು.

#ಶ್ರೀಮತಿ_ಸುದಾಮಣಿವಿಶ್ವಪತಿ_ಶಾಸ್ತ್ರೀ.

#ನನ್ನ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನದಲ್ಲಿ_ಇವರ_ಕುಟುಂಬದ_ನಿಜ_ಕಥೆ_ಇದೆ.

#ಇನಾಂದಾರರ_ಮಂಚ_ಅಂತ.

#ಮಾನವೀಯ_ಅಂತಃಕರಣ_ಹೊಂದಿದ್ದ_ಸಜ್ಜನ_ಭೂಮಾಲಿಕರು.

#ಹೇರಂಬರಾಯರು_ನೀಚಡಿಬಾಪಟ್ಟರು_ಬಂಗಾರಪ್ಪ_ಶಿಕಾರಿ_ಮಾಡಿದ_ಹುಲಿ
#_ಎತ್ತಿನಗಾಡಿ_ಮೆರವಣಿಗೆ_ಮಾಡಿ_ಊರಿಗೆಲ್ಲ_ಬೆಲ್ಲ_ಹಂಚಿದ್ದರಂತೆ.

   ತ್ಯಾಗರ್ತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿ ಕೇಂದ್ರ, ಇಲ್ಲಿಗೆ ಸಮೀಪದಲ್ಲೇ ಇರುವ ಬೆಳಂದೂರು ಎಂಬಲ್ಲಿ ಜನರಿಗೆ ಕಂಟಕ ಆಗಿದ್ದ ನರಭಕ್ಷಕ ಹುಲಿಯನ್ನು ಪ್ರಖ್ಯಾತ ಶಿಕಾರಿಗಾರ ಕೆನತ್ ಆಂಡರ್ಸನ್ ಮತ್ತು ತ್ಯಾಗರ್ತಿ ಆಸ್ಪತ್ರೆಯ ವೈದ್ಯರು ಸೇರಿ ಶಿಕಾರಿ ಮಾಡಿದ #ಬೆಳ೦ದೂರಿನ_ನರಭಕ್ಷಕ ಪುಸ್ತಕ ತೇಜಸ್ವಿಯವರು ಅನುವಾದಿಸಿದ್ದಾರೆ.
    ತ್ಯಾಗರ್ತಿಯ ಶ್ರೀಮಂತ ಜಮೀನ್ದಾರ್ ದೇವಪ್ಪನವರು ನಂತರ ಅವರ ಮಗ ರಂಗಪ್ಪರ ಇಬ್ಬರು ಪುತ್ರರಾದ ಹೇರಂಬ ರಾಯರು ಮತ್ತು ಗುರುಮೂರ್ತಿ ರಾಯರ ಕಾಲದಲ್ಲಿ ಸಾವಿರಾರು ಎಕರೆ ಜಮೀನು ಭೂ ಸುದಾರಣೆ ಕಾಲದಲ್ಲಿ ಕಳೆದುಕೊಂಡರು.
  1966 ರಲ್ಲಿ ಶೃಂಗೇರಿ ಸ್ವಾಮಿಗಳು ಇವರ ಮನೆಯಲ್ಲಿ ಎರೆಡು ದಿನ ಮೊಕ್ಕಾಂ ಮಾಡಿದ್ದರು, ವರದಳ್ಳಿ ಶ್ರೀದರ ಸ್ವಾಮಿಗಳು ಇವರ ಮನೆಯಲ್ಲಿ ಅನೇಕ ಬಾರಿ ಬಿಕ್ಷೆ ಮಾಡಿದ್ದರು, ಶ್ರೀದರ ಸ್ವಾಮಿಗಳ ಭಕ್ತರಾಗಿದ್ದ ಇವರು ಅವರ ಹೆಸರಲ್ಲೆ ರೈಸ್ ಮಿಲ್ ಮಾಡಿ ಶ್ರೀಧರ ಸ್ವಾಮಿಗಳಿಂದಲೇ ಉದ್ಘಾಟನೆ ಮಾಡಿಸಿದ್ದರು.
  ತ್ಯಾಗರ್ತಿಯ ಅಗ್ರಹಾರದಲ್ಲಿ 1826 ರಲ್ಲಿ ನಿರ್ಮಿಸಿದ್ದ ಬೃಹತ್ ಮೂರು ಅಂತಸ್ಥಿನ ಮನೆ ಅಂತದ್ದು ಆನಂದಪುರಂ ಹೋಬಳಿಯಲ್ಲಿ ಮತ್ತೊಂದು ಇರಲಿಲ್ಲ.
   ಗುರುಮೂರ್ತಿ ರಾಯರ ಕೊನೆಯ ಪುತ್ರಿ ಶ್ರೀಮತಿ ಸುದಾಮಣಿ ವಿಶ್ವಪತಿ ಶಾಸ್ತ್ರೀಗಳು ಈಗ ಬೆಂಗಳೂರು ನಿವಾಸಿಗಳು, ನಿನ್ನೆ ನಮ್ಮಲ್ಲಿ ಅತಿಥಿಗಳಾಗಿ ತಂಗಿದ್ದರು ಆಗ ಅವರ ಜೊತೆ ಮಾತಾಡಿದ ವಿಡಿಯೋ ಇಲ್ಲಿದೆ.
  ಸ್ವಾರಸ್ಯ ಎಂದರೆ ನನ್ನ ಕಥಾ ಸಂಕಲನದಲ್ಲಿನ ಒಂದು ಕಥೆ #ಇನಾಂದಾರರ_ಮಂಚ ಇವರ ಕುಟುಂಬದ ನಿಜ ಕಥೆ ಆ ಮಂಚ ಇವರ ಮುತ್ತಜ್ಜ ದೇವಪ್ಪನವರು ಮಲಗುತ್ತಿದ್ದದ್ದು, ಇದರ ನಾಲ್ಕು ಬೋಲ್ಟ್ ಗಳು ಬಂಗಾರದ್ದು ಅಂತ ಇವರಾರಿಗೂ ಗೊತ್ತಿರಲಿಲ್ಲ, ಹೇರಂಬ ರಾಯರ ಮೊಮ್ಮಗಳ ಮಗ  ಕೇವಲ ನಾಲ್ಕು ಸಾವಿರಕ್ಕೆ ಮಾರಿಕೊಂಡಿದ್ದ, ಖರೀದಿಸಿದವರು ಅದೇ ಊರಿನ ಆಭರಣ ಕೆಲಸದ ಅಕ್ಕಸಾಲಿಗರು.
  ಶ್ರೀಮಂತ ಜಮೀನ್ದಾರರಾಗಿದ್ದ ದೇವಪ್ಪನವರು 1826 ರಲ್ಲಿ ಅರಮನೆಯಂತ ಮನೆ ನಿರ್ಮಿಸಿದಾಗ ಬಂಗಾರದ ಬೋಲ್ಟ್ ಅಳವಡಿಸಿದ ಮಂಚ ಮಾಡಿಸಿರಬೇಕು, ಮುಂದಿನ ತಲೆಮಾರಿಗೆ ರಹಸ್ಯವಾಗಿಟ್ಟಿರಬೇಕು ಅಥವ ತಮ್ಮ ಅಂತ್ಯಕಾಲದಲ್ಲಿ ಇದನ್ನು ತಿಳಿಸಲಾಗದೇ ನಿರ್ಗಮಿಸಿರಬೇಕು ಅಥವ ಅವರ ಶ್ರೀಮಂತ ಜೀವನ ಶೈಲಿಗೆ ಇದೊಂದು ಅಲ್ಪ ಅನ್ನಿಸಿರಬೇಕು.
  ಸುಮಾರು 200 ವರ್ಷದಲ್ಲಿ 2 kg ಬಂಗಾರದ ಬೋಲ್ಟ್ ಗೆ ಒಂದು ಕೋಟಿ ಆಗುತ್ತೆ ಅಂತ ಯಾರಿಗೆ ಗೊತ್ತು.
  ತ್ಯಾಗರ್ತಿಯಲ್ಲಿ ಹೇರಂಬ ರಾಯರು, ನೀಚಡಿ ಬಾಪಟ್ಟರು, ಬಂಗಾರಪ್ಪ ಎಂಬ ರೈತರು ಜನ - ಜಾನುವಾರಿಗೆ ಕಂಟಕ ಆಗಿದ್ದ ಹುಲಿ ಶಿಕಾರಿ ಮಾಡಿ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿ ನೆರೆದವರಿಗೆಲ್ಲ ಬೆಲ್ಲ ಹಂಚಿದ್ದು ಸುದಾಮಣಿ ಶಾಸ್ತ್ರೀಯವರು 1958 ರಲ್ಲಿ ನೋಡಿದ್ದು ನೆನಪು ಮಾಡಿಕೊಂಡಿದ್ದಾರೆ.
   ಇವರ ಪಿತ್ರಾರ್ಜಿತ ಆಸ್ತಿ ಉಳಿದ 5 ಎಕರೆ ಖುಷ್ಕಿ ಜಮೀನ ದುರಾಸೆಯ ಕೆಲವರು ಒತ್ತುವರಿ ಮಾಡಿಕೊಂಡು ಸತಾಯಿಸುತ್ತಿದ್ದಾರೆ ಅವರಿಗೆ ಬುದ್ಧಿ ಹೇಳಿ ತ್ಯಾಗರ್ತಿ ಊರು ಕಟ್ಟಿದ ಸಜ್ಜನರ ವ೦ಶಕ್ಕೆ ನ್ಯಾಯ ಕೊಡಿಸುವವರು ಇಲ್ಲ, ಇವರ ತಂದೆ ಹತ್ತು ಎಕರೆ ಭೂಮಿ ದಾನ ನೀಡಿ ಊರಿನ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಪ್ರಾರಂಬಿಸಿದ ವಿವೇಕಾನಂದ ಪ್ರೌಡ ಶಾಲೆ, ಬರಗಾಲದಲ್ಲಿ ಇಡೀ ಊರಿಗೆ ತಮ್ಮ ಸಂಗ್ರಹದ ಬತ್ತ ದಾನ ಮಾಡಿದ್ದು ಎಲ್ಲಾ ಲಾಭ ಪಡೆದ ಕುಟುಂಬದ ಮು೦ದಿನ (ಈಗಿನ ) ತಲೆಮಾರುಗಳು ಮರೆತಿದೆ.
   ಊರು ಉಪಕಾರ ನೆನೆಯುವುದಿಲ್ಲ.. ಹೆಣ ಸಿಂಗಾರ ನೆನೆಯುವುದಿಲ್ಲ ಎಂಬ ಗಾದೆ ಎಷ್ಟು ಸತ್ಯ ನೋಡಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ