Skip to main content

Blog number 873, 30 ನಂಬರ್ ಬ್ರಾಂಡ್ ಬೀಡಿ ಉಧ್ಯಮದ ಕಥೆ, ಸಂಸ್ಥಾಕ ಬಿ. ಮಂಜುನಾಥ ಪೈಯರ ಸಾದನೆ ಇವತ್ತೂ ಸ್ವಯ೦ ಉದ್ಯೋಗ ಮಾಡುವವರಿಗೆ ದಾರಿ ದೀಪ ಆಗಿರುವ ಆತ್ಮವಿಶ್ವಾಸದ ಪಥ.

#ಬೀಡಿ_ಏನಿದು_ನಿನ್ನ_ಮಹಿಮೆ.

#ಭಾರತ್_ಬೀಡಿ_ವರ್ಕ್ಸನ_30_ನಂಬರ್_ಬೀಡಿ.

#ವಿಶ್ವದಾದ್ಯಂತ_ಬೀಡಿ_ಪ್ರಿಯರಿದ್ದಾರೆ.

#ಅಮೆರಿಕಾದಲ್ಲಿ_ನಮ್ಮ_ಬೀಡಿಗೆ_ಹೆಸರು_ಕನ್ವೆನ್ಷ್ನಲ್_ಸಿಗರೇಟು 

  ನಮ್ಮ ದುಮುಗಣ್ಣ ನನ್ನ ರೋಲ್ ಮಾಡಲ್ (ಡುಮಿಂಗ್ ರೆಬೆಲೋ) ನಮ್ಮ ಮನೆ ಮಗನಂತೆ ಇದ್ದವರು, ಸಿನಿಮಾ ಟಾಕೀಸಿನಲ್ಲಿ ಗೇಟ್ ಕೀಪರ್ ಆಗಿದ್ದರು.
    ರಾತ್ರಿ ವಾಸ್ತವ್ಯ ಊಟ ನಮ್ಮ ಮನೆಯಲ್ಲಿ ಅದಕ್ಕೆ ಪ್ರತಿಫಲವಾಗಿ ಬೆಳಿಗ್ಗೆ ಬೇಗನೆ ಎದ್ದು ಸರ್ಕಾರಿ ಬಾವಿಯಿಂದ ನೀರು ತಂದು ಸ್ನಾನದ ಮನೆ ಹಂಡೆ ತುಂಬಿಸಿ, ಹಂಡೆ ಒಲೆ ಉರಿಸುತ್ತಿದ್ದರು ಅದಕ್ಕೆ ಬೇಕಾಗುವ ಕಟ್ಟಿಗೆ ಚಕ್ಕೆ ಅವರೇ ಕೊಡಲಿಯಿಂದ ಮಾಡಿಕೊಳ್ಳುತ್ತಿದ್ದರು.
  ಅವರಿಗೆ ಇಡೀ ಮನೆಯಲ್ಲಿ ಒಡಾಡಲು ಅನುಮತಿ ಇದ್ದರೂ ಅಡುಗೆ ಮನೆ ಪ್ರವೇಶ ಮಾತ್ರ ನನ್ನ ಅಜ್ಜಿ ಕೊಟ್ಟಿರಲಿಲ್ಲ ಆದ್ದರಿಂದ ಮಧ್ಯಾಹ್ನ ಎಲ್ಲರೂ ಮಲಗಿದಾಗ ದುಮುಗಣ್ಣ ಬೀಡಿ ಒಂದನ್ನು ನನ್ನ ಕೈಗೆ ಕೊಟ್ಟು ಅದನ್ನು ಅಡುಗೆ ಮನೆಯ ಒಲೆಯಲ್ಲಿ ಉಳಿದಿರುತ್ತಿದ್ದ ಕಟ್ಟಿಗೆ ಬೆಂಕಿಯಲ್ಲಿ ಹಚ್ಚಿ ಕೊಡುವ ಕೆಲಸ.
  ಅಷ್ಟೇ ಅಲ್ಲ ಬೀಡಿ ಬಾಯಲ್ಲಿ ಇಟ್ಟು ಅದರ ತುದಿ ಕಟ್ಟಿಗೆಯ ಬೆಂಕಿಯಲ್ಲಿ ತಾಗಿಸಿ ಉಸಿರು ಎಳೆದು ಹಚ್ಚಿ ಕೊಡುವ ಕೆಲಸ ನಮ್ಮದು, ಇದು ನಿಷಿದ್ದವಾದ್ದರಿಂದಲೇ ನಮಗೆ ಈ ಸಾಹಸ ಗುಟ್ಟಾಗಿ ಮಾಡಲು ಉತ್ಸಾಹ ಅಷ್ಟುಕ್ಕೂ ದುಮಿ೦ಗಣ್ಣರಿಗೆ ಈ ಮೂಲಕ ಸಹಾಯ ಮಾಡಲು ಪ್ರೇರಣೆ ನಾನು ಆನಂದಪುರಂ ಸಂತೆಯಿಂದ ತಂದ ಸಿನಿಮಾ ನೋಡುವ ಬೂತ ಕನ್ನಡಿ ಡಬ್ಬಿಗೆ ತುಂಡಾದ ಸಿನಿಮಾ ರೋಲಿನ ತುಂಡು ತಂದು ಕೊಡುವುದು ದುಮುಗಣ್ಣ.
   ನಮ್ಮ ತಂದೆ ಆ ಕಾಲದಲ್ಲಿ 30 ನಂಬರ್ ಬೀಡಿ ಪ್ರಿಯರು ಅವರ ಬೀಡಿ ಕದ್ದು ದುಮುಗಣ್ಣನಿಗೆ ಹಚ್ಚಿಕೊಟ್ಟು ಸಂತೋಷ ಪಡುವಕಾಲ.
  ಹಿಂದಿ ಚಿತ್ರ ನಟ ಜಾಕಿ ಶ್ರಾಫ್ ಕುದುರೇ ಮುಖದಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ಗಣೇಶ್ ಬೀಡಿ ಸೇದುತ್ತಾ ಇದ್ದದ್ದು ನೋಡಿ ಆಶ್ಚಯ೯ ಪಟ್ಟಿದ್ದೆ ಯಾಕೆಂದರೆ ಬೀಡಿ ಜನ ಸಾಮನ್ಯರ ಬ್ರಾಂಡ್ ಸಿಗರೇಟು ಸೆಲೆಬ್ರಿಟಿ ಬ್ರಾಂಡ್ ಎ೦ದೇ ಜನರ ಬಾವನೆ.
  ತಂಬಾಕಿನ ಪ್ರಡಿ ಬೀಡಿ ಎಲೆಯಲ್ಲಿ (ತೆಂಡು) ಕಟ್ಟಿ ನಂತರ ಅದಕ್ಕೆ ಭಟ್ಟಿಯಲ್ಲಿ ಹದವಾಗಿ ಬೇಯಿಸಿ ತಯಾರಿಸುತ್ತಾರೆ.
  17ನೇ ಶತಮಾನದಲ್ಲಿ ಭಾರತಕ್ಕೆ ತಂಬಾಕು ಪರಿಚಯವಾಗಿ ಅದರ ಕೃಷಿ ಪ್ರಾರಂಭವಾದ ಮೇಲೆ ಬೀಡಿಯ ದೂಮಪಾನ ಪ್ರಾರಂಭವಾಯಿತು.
 1930 ರಿಂದ ಸ್ವದೇಶಿ ವಸ್ತು ಬಳಕೆಯ ಪ್ರಚಾರದಲ್ಲಿ ಸಿಗರೇಟು ವಿದೇಶಿ ಬೀಡಿ ಸ್ಟದೇಶಿ ಎಂಬಲ್ಲಿಗೆ ಬೀಡಿ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ಸಿಕ್ಕಿತು.
  1930 ರಲ್ಲಿ ಕಾರ್ಕಳದ ವೆಂಕಟರಮಣ ದೇವಸ್ಥಾನದ ಎದರು ಸಣ್ಣ ಬಾಡಿಗೆ ಮಳಿಗೆಯಲ್ಲಿ ಬಿ.ಮಂಜುನಾಥ ಪೈ ಎಂಬ ಉತ್ಸಾಹಿ ಯುವಕ ರಾತ್ರಿಯೆಲ್ಲ ಬೀಡಿ ಕಟ್ಟಿ ಹಗಲಿನಲ್ಲಿ ಕಾರ್ಕಳ ಮತ್ತು ಸುತ್ತಮುತ್ತ ಬೀಡಿ ವ್ಯಾಪಾರ ಶುರು ಮಾಡುತಾರೆ ಆಗ ಅವರ ಬಂಡವಾಳದ ಮೂಲ ಧನ 30 ರೂಪಾಯಿ ಮತ್ತು ಒಂದು ಸೈಕಲ್ ಮಾತ್ರ.
  1954 ರಲ್ಲಿ ಇವರ ಮಗ ಗಣಪತಿ ಪೈ ಸೇರಿಕೊಳ್ಳುತ್ತಾರೆ.
2020 ಮಾಚ್೯ ಕೊನೆಯಲ್ಲಿ ಇವರ ವಹಿವಾಟು ವಾರ್ಷಿಕ 500 ಕೋಟಿ, ಪ್ರತಿ ದಿನ ಉತ್ಪಾದಿಸುವ ಬೀಡಿ 6 ಕೋಟಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 50 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ ಆಯಿತು.
  ಇಡೀ ಭಾರತ ದೇಶದಲ್ಲಿ ಎಲ್ಲಾ ರಾಜ್ಯದಲ್ಲಿ 30 ನಂಬರ್ ಬೀಡಿ ಸಂಸ್ಥಾಪಕ ಬಿ. ಮಂಜುನಾಥ ಪೈ ಅವರ ಚಿತ್ರದ ಬ್ರಾಂಡ್ ನಿಂದ ಪ್ರಸಿದ್ಧಿ ಪಡೆದಿದೆ.
 30 ನಂಬರ್ ಬೀಡಿ 2030 ರಲ್ಲಿ ಶತಮಾನೋತ್ಸವ ಆಚರಿಸಲಿದೆ ಈಗಾಗಲೇ ಈ ಸಂಸ್ಥೆ ಭಾರತ್ ಬೀಡಿ ವಕ್ಸರ್ಸ ಜೊತೆಗೆ ಕಾರ್ಕಳದಲ್ಲಿ ಎರೆಡು ವಿದ್ಯಾ ಸಂಸ್ಥೆ ಮತ್ತು ಕಲ್ಚರಲ್ ಸೆಂಟರ್ ನಡೆಸುತ್ತಿದೆ.
  ಈ ಸಂಸ್ಥೆಯ ಭಾರತ್ ಮಾಲ್, ಬುಕ್ ಮಾರ್ಟ್, ಭಾರತ್ ಪ್ರಿಂಟರ್, ಬಾರತ್ ಆಟೋ ಕಾರ್,. ಭಾರತ್ ಬಿಲ್ಡರ್, ಭಾರತ್ ಎಕ್ಸಪೋರ್ಟ್ ಯಶಸ್ವಿಯಾಗಿ ನಡೆಯುತ್ತಿದೆ.
  ಬಿ. ಮಂಜುನಾಥ ಪೈಯವರ ಸಾದನೆ ನಮಗೆಲ್ಲ ಪ್ರೇರಣೆ ಆಗಿದೆ ಇವರ೦ತೆ ನಾವೂ ಶ್ರಮ ಪಟ್ಟರೆ ಸಾಧನೆ ಮಾಡಲು ಸಾಧ್ಯವೆಂಬ ಜೀವನದ ಪಾಠ 30 ನಂಬರ್ ಬೀಡಿ ಉದ್ಯಮದಿಂದ ನಾವು ಕಲಿಯಲು ಸಾಧ್ಯವಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...