Skip to main content

Posts

Showing posts with the label My kannada novel Besthara Rani Chmpaka English version in printing

Blog number 1515. ನನ್ನ ಬೆಸ್ತರ ರಾಣಿ ಚಂಪಕಾ ಕಾದಂಬರಿ ಇಂಗ್ಲೀಷ್ ಭಾಷೆಯಲ್ಲಿ ಮುದ್ರಣ ಆಗುತ್ತಿದೆ.

#ನನ್ನ_ಕಾದಂಬರಿ_ಇಂಗ್ಲೀಷ್_ಬಾಷೆಯಲ್ಲಿ_ಮುದ್ರಣ_ಆಗುತ್ತಿದೆ #ಸುಂದರವಾಗಿ_ಅನುವಾದಿಸಿದವರು_ಎಂ_ಎನ್_ಸುಂದರ್_ರಾಜ್_ಪ್ರತಿಷ್ಟಿತ_ಶಿವಮೊಗ್ಗದ_ಕನಾ೯ಟಕ_ಸಂಘದ_ಅಧ್ಯಕ್ಷರು. #ನೂರಾ_ನಲವತ್ತು_ದೇಶದ_ಇಂಗ್ಲೀಷ್_ಬಾಷೆಯ_ಸಾಹಿತ್ಯಾಸಕ್ತರಿಗೆ_ಲಭ್ಯವಾಗಲಿದೆ. #ತಾಜ್_ಮಹಲಿಗಿಂತ_ಮೊದಲೇ_ನಿಮಾ೯ಣವಾಗಿರುವ_ಕೆಳದಿ_ರಾಜ_ವೆಂಕಟಪ್ಪನಾಯಕರು_ನಿರ್ಮಿಸಿರುವ_ನಮ್ಮ_ಊರಿನ_ಚಂಪಕಸರಸ್ಸು. #ರ೦ಗೋಲೆ_ಪ್ರವೀಣೆ_ಸುಂದರಿ_ಚಂಪಕ_ಮತ್ತು_ರಾಜ_ವೆಂಕಟಪ್ಪ_ನಾಯಕರ_ದುರಂತ_ಪ್ರೇಮ_ಕಥೆ #ಕಾಲ್ಪನಿಕ_ಕಾದಂಬರಿ_ಆಗಿ_ಕನ್ನಡದಲ್ಲಿ_ಪ್ರಕಟವಾಗಿ_ಅನಿರೀಕ್ಷಿತವಾಗಿ_ಪ್ರಸಿದ್ಧಿ_ಪಡೆದಿತ್ತು.    ನನ್ನ ಊರಿನಲ್ಲಿರುವ ಸ್ಮಾರಕ ಅದರ ಬಗ್ಗೆ 400 ವರ್ಷಗಳಿಗೆ ಹರಿದು ಬಂದ ಜನಪದ ಕಥೆ ಲಾವಣಿಗಳು ಕೇಳಿದ್ದ ನಾನು 1992-93ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಕೇಂದ್ರ ಗ್ರಂಥಾಲಯದಲ್ಲಿ ತಡಕಾಡಿದಾಗ ದೊರೆತ ಮಾಹಿತಿಗಳ ಎಳೆಗಳು ಇಟಲಿ ಪ್ರವಾಸಿ ಡೆಲ್ಲೊ ವಲ್ಲೆ ಪತ್ರಗಳಲ್ಲಿ ಅವರು ಕೆಳದಿ ರಾಜ ವೆಂಕಟಪ್ಪ ನಾಯಕರ ಬೇಟೆಯಾದ ಮಾಹಿತಿ ಒಂದು ಐತಿಹಾಸಿಕ ದಾಖಲೆ.   ಆ ಸಂದರ್ಭದಲ್ಲೇ ಪಟ್ಟದ ರಾಣಿ ಭದ್ರಮ್ಮಾಜಿ ಅನ್ನಾಹಾರ ತ್ಯಜಿಸಿ ಜೀವ ತ್ಯಾಗ ಮಾಡುತ್ತಾರೆ ಕಾರಣ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕಾರಾಣಿ ಅಂತರ್ಜಾತಿ ವಿವಾಹದಿಂದ ಮತ್ತು ಆನಂದಪುರಂ ಕೋಟೆಯಲ್ಲಿನ ಅರಮನೆಯಲ್ಲಿ ರಾಣಿ ಚಂಪಕಳ ವಾಸದಿಂದ.   ಮುಂದೆ ತನ್ನದಲ್ಲದ ತಪ್ಪಿಗ...