Skip to main content

Blog number 1515. ನನ್ನ ಬೆಸ್ತರ ರಾಣಿ ಚಂಪಕಾ ಕಾದಂಬರಿ ಇಂಗ್ಲೀಷ್ ಭಾಷೆಯಲ್ಲಿ ಮುದ್ರಣ ಆಗುತ್ತಿದೆ.

#ನನ್ನ_ಕಾದಂಬರಿ_ಇಂಗ್ಲೀಷ್_ಬಾಷೆಯಲ್ಲಿ_ಮುದ್ರಣ_ಆಗುತ್ತಿದೆ

#ಸುಂದರವಾಗಿ_ಅನುವಾದಿಸಿದವರು_ಎಂ_ಎನ್_ಸುಂದರ್_ರಾಜ್_ಪ್ರತಿಷ್ಟಿತ_ಶಿವಮೊಗ್ಗದ_ಕನಾ೯ಟಕ_ಸಂಘದ_ಅಧ್ಯಕ್ಷರು.

#ನೂರಾ_ನಲವತ್ತು_ದೇಶದ_ಇಂಗ್ಲೀಷ್_ಬಾಷೆಯ_ಸಾಹಿತ್ಯಾಸಕ್ತರಿಗೆ_ಲಭ್ಯವಾಗಲಿದೆ.

#ತಾಜ್_ಮಹಲಿಗಿಂತ_ಮೊದಲೇ_ನಿಮಾ೯ಣವಾಗಿರುವ_ಕೆಳದಿ_ರಾಜ_ವೆಂಕಟಪ್ಪನಾಯಕರು_ನಿರ್ಮಿಸಿರುವ_ನಮ್ಮ_ಊರಿನ_ಚಂಪಕಸರಸ್ಸು.

#ರ೦ಗೋಲೆ_ಪ್ರವೀಣೆ_ಸುಂದರಿ_ಚಂಪಕ_ಮತ್ತು_ರಾಜ_ವೆಂಕಟಪ್ಪ_ನಾಯಕರ_ದುರಂತ_ಪ್ರೇಮ_ಕಥೆ

#ಕಾಲ್ಪನಿಕ_ಕಾದಂಬರಿ_ಆಗಿ_ಕನ್ನಡದಲ್ಲಿ_ಪ್ರಕಟವಾಗಿ_ಅನಿರೀಕ್ಷಿತವಾಗಿ_ಪ್ರಸಿದ್ಧಿ_ಪಡೆದಿತ್ತು.

   ನನ್ನ ಊರಿನಲ್ಲಿರುವ ಸ್ಮಾರಕ ಅದರ ಬಗ್ಗೆ 400 ವರ್ಷಗಳಿಗೆ ಹರಿದು ಬಂದ ಜನಪದ ಕಥೆ ಲಾವಣಿಗಳು ಕೇಳಿದ್ದ ನಾನು 1992-93ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಕೇಂದ್ರ ಗ್ರಂಥಾಲಯದಲ್ಲಿ ತಡಕಾಡಿದಾಗ ದೊರೆತ ಮಾಹಿತಿಗಳ ಎಳೆಗಳು ಇಟಲಿ ಪ್ರವಾಸಿ ಡೆಲ್ಲೊ ವಲ್ಲೆ ಪತ್ರಗಳಲ್ಲಿ ಅವರು ಕೆಳದಿ ರಾಜ ವೆಂಕಟಪ್ಪ ನಾಯಕರ ಬೇಟೆಯಾದ ಮಾಹಿತಿ ಒಂದು ಐತಿಹಾಸಿಕ ದಾಖಲೆ.
  ಆ ಸಂದರ್ಭದಲ್ಲೇ ಪಟ್ಟದ ರಾಣಿ ಭದ್ರಮ್ಮಾಜಿ ಅನ್ನಾಹಾರ ತ್ಯಜಿಸಿ ಜೀವ ತ್ಯಾಗ ಮಾಡುತ್ತಾರೆ ಕಾರಣ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕಾರಾಣಿ ಅಂತರ್ಜಾತಿ ವಿವಾಹದಿಂದ ಮತ್ತು ಆನಂದಪುರಂ ಕೋಟೆಯಲ್ಲಿನ ಅರಮನೆಯಲ್ಲಿ ರಾಣಿ ಚಂಪಕಳ ವಾಸದಿಂದ.
  ಮುಂದೆ ತನ್ನದಲ್ಲದ ತಪ್ಪಿಗೆ ತಾನೇ ಕಾರಣ ಎಂದು ಭ್ರಮಿಸಿ ರಾಜನ ಮೇಲಿನ ಅಪವಾದ ನಿವಾರಿಸಲು ರಾಣಿ ಚಂಪಕ ಹಾಲಿನೊಂದಿಗೆ ವಜ್ರದ ಪುಡಿ ಸೇರಿಸಿ ಕುಡಿದು ಜೀವ ತ್ಯಾಗ ಮಾಡುತ್ತಾಳೆ, ಚಂಪಕಳ ಸ್ಮರಣಾರ್ಥ ನಿರ್ಮಿಸಿರುವ ಸ್ಮಾರಕ ಚಂಪಕ ಸರಸ್ಸು ನಮ್ಮ ಊರಲ್ಲಿದೆ ಸುಮಾರು 400 ವರ್ಷದ ಸ್ಮಾರಕ ಆಗ್ರಾದ ಪ್ರೇಮ ಸ್ಮಾರಕ ತಾಜ್ ಮಹಲ್ ಗಿಂತ ಮೊದಲೇ ನಿರ್ಮಾಣವಾಗಿತ್ತು ಎಂಬುದು.
   ಇಂತಹ ಅಂತರ್ಜಾತಿ ವಿವಾಹ, ರಾಣಿ ವಾಸದಲ್ಲಿ ನಡೆದ ದುರಂತಗಳು ಇದರಿಂದ ಪ್ರಜೆಗಳ ಆಕ್ರೋಷಕ್ಕೆ ಈಡಾದ ರಾಜ ವೆಂಕಟಪ್ಪ ನಾಯಕ ಈಗಿನ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನಿರ್ಮಾಣ ಮಾಡಿದವರು ಅವರ ಅಜ್ಜ ರಾಜ ಸದಾಶಿವ ನಾಯಕರ ಸ್ಮರಣಾರ್ಥ 400 ವರ್ಷದ ಹಿಂದೆ ಸದಾಶಿವ ಸಾಗರ ಎಂದು ನಿರ್ಮಿಸಿದ ಪಟ್ಟಣ ಇದು.
  43 ವರ್ಷ ದೀರ್ಘ ಕಾಲ ಕೆಳದಿ ರಾಜ್ಯವಾಳಿ ರಾಜ್ಯ ವಿಸ್ತಾರ ಮಾಡಿದ ರಾಜ ವೆಂಕಟಪ್ಪರ ಹೆಸರನ್ನು ಇತಿಹಾಸದ ಪುಟಗಳಲ್ಲಿ ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ, ಅವರು ನಿರ್ಮಿಸಿದ ಸಾಗರ ಪಟ್ಟಣದಲ್ಲಿ 400 ವರ್ಷದಿಂದ ಅವರ ಹೆಸರಿನ ರಸ್ತೆಯೂ ಇಲ್ಲ ಎಲ್ಲದಕ್ಕೂ ಕಾರಣ ಜಾತಿ! .. ಹೌದು ಸಣ್ಣ ಜಾತಿಗೆ ಸೇರಿದ ಸುಂದರಿ - ರಂಗೋಲಿ ಕಲಾವಿದೆ ಚಂಪಕಾಳ ಪವಿತ್ರ ಪ್ರೇಮದ ಮೇಲೆ ಸೇಡು ತೀರಿಸಿಕೊಂಡ ರಾಜ ಪರಿವಾರದ ದುಷ್ಟ ಶಕ್ತಿಗಳು ಈ ನಿಜ ಕಥೆಯ ಹಂದರವೇ ನನ್ನ ಕಾದಂಬರಿ "ಕೆಳದಿ ಇತಿಹಾಸ ಸಾಮ್ರಾಜ್ಯ ಮರೆತ " #ಬೆಸ್ತರ_ರಾಣಿ_ಚಂಪಕಾ ಇದನ್ನು ಕಾಲ್ಪನಿಕ ಕಾದಂಬರಿ ಎಂಬ ಟ್ಯಾಗ್ ಸೇರಿಸಿದ್ದೇನೆ.
   ಈ ಕಥೆ ಕನ್ನಡದಲ್ಲಿ ನನ್ನಿಂದ ಕಾದಂಬರಿ ಆಗಿ ಹೊರ ಬಂದ ಪುಸ್ತಕ ಶಿವಮೊಗ್ಗ ಜಿಲ್ಲೆಯ ಹಿರಿಯ ಸಮಾಜವಾದಿ ಪ್ರಕೃತಿ ಮುದ್ರಣಾಲಯದ ಪಿ.ಪುಟ್ಟಯ್ಯ ಅವರ ಪ್ರೋತ್ಸಾಹದಿಂದ ಶಿವಮೊಗ್ಗದಲ್ಲಿನ ಕುವೆಂಪು ಅವರಿಂದ ಸ್ಥಾಪಿತವಾದ ಪ್ರತಿಷ್ಠಿತ ಕರ್ನಾಟಕ ಸಂಘದ ಅಧ್ಯಕ್ಷರಾದ ಸಾಹಿತಿಗಳಾದ ಎಂ.ಎನ್. ಸುಂದರ್ ರಾಜ್ ರಿಂದ ಇಂಗ್ಲೀಷ್ ಗೆ ತರ್ಜುಮೆ ಆಗಿ ವಿಶ್ವದಾದ್ಯಂತ ಓದುಗರಿಗೆ ನಮ್ಮ ಊರಿನ ಚಂಪಕಾಳ ಕಥೆ ತಲುಪಲಿದೆ ಎಂಬ ಸಂತೋಷ ನಿಮ್ಮ ಜೊತೆ ಹಂಚಿಕೊಂಡೆ.
  ಇದರ ನಂತರ ನನ್ನ ಅತ್ಯಾಸೆಯ ಇನ್ನೊಂದು ಪುಸ್ತಕ #ಆನಂದಪುರಂ_ಇತಿಹಾಸ ಬಿಡುಗಡೆ ಆಗಲಿದೆ, ಪ್ರತಿ ಊರಿಗೂ ಇತಿಹಾಸ ಇದೆ ಅದು ದಾಖಲಾಗಿಸುವವರಿಗೆ ಪ್ರೇರಣೆ ಆಗಲಿ ಎಂಬ ಆಸೆ ನನ್ನದು.
  ಬೇರೆಲ್ಲ ಊರಿಗಿಂತ ನಮ್ಮ ಆನಂದಪುರಂ ಇತಿಹಾಸವೇ ಬಿನ್ನ ಕ್ರಿ.ಶ.1000 ಇಸವಿಯ ಶಿಲಾ ಶಾಸನ ಇದೆ. ಕೆಳದಿ ಅರಸರ ಆಳ್ವಿಕೆ, ಟಿಪ್ಪೂ ಸುಲ್ತಾನನರ ಬೇಟಿ, ಬ್ರಿಟಿಷರ ಕ್ರೌರ್ಯ, ನರಹಂತಕ ಹುಲಿ ಬೇಟೆಗಾರ ಕೆನ್ನತ್ ಅಂಡರ್ಸನ್ ಶಿಕಾರಿ ಮಾಡಿದ ಬೆಳ೦ದೂರಿನ ನರಭಕ್ಷಕ (ತೇಜಸ್ವಿ ಪುಸ್ತಕ) ಇಲ್ಲಿಯದೆ, 1832ರಲ್ಲಿ ಬೂದಿ ಬಸಪ್ಪ ನಡೆಸಿದ ದೇಶದ ಮೊದಲ ರೈತ ಸಮಾವೇಷ, ಗಾಂದೀಜಿ, ನೆಹರೂ ಇಂದಿರಾ, ವಿನೋಬ ಬಾವೆ ಅವರ ಪಾದ ಸ್ಪರ್ಶದ ಈ ಊರಿನ ದಾಖಲೆಗಳು ಈ ಪುಸ್ತಕದಲ್ಲಿ ಇರಲಿದೆ.
   ಆನಂದಪುರಂ ಇತಿಹಾಸ ಪುಸ್ತಕದ ಒಂದು ಅಧ್ಯಾಯ ಇಲ್ಲಿದೆ ಓದಿ...

#ಆನಂದಪುರಂ_ಬಾಗ_13

#ಎಣ್ಣೆಕೊಪ್ಪದ_ಮಲ್ಲಿಕಾರ್ಜುನ_ಗೌಡರು_ಬದರಿನಾರಾಯಣ್_ಅಯ್ಯಂಗಾರರಿಂದ
#ನಡೆದಾಡುವ_ಸಂತ_ವಿನೋಬಬಾವೆ_ಆನಂದಪುರಂಗೆ_ನಡೆದು_ಬರುತ್ತಾರೆ

#ಭೂದಾನ_ಮಾಡುವ_ಅಯ್ಯಂಗಾರ್_ಕುಟುಂಬದ_ಜೊತೆ_ಕೈಜೋಡಿಸಿದ_ಸ್ಥಳಿಯ_ಮಹನೀಯರು.

#ಹೊಸಕೊಪ್ಪದ_ಕೌತಿನಾಗಪ್ಪ_ಮತ್ತವರ_ತಂದೆಯ_ಶ್ರಮ.

#ಇರುವಕ್ಕಿ_ಕುಂಬಾರ_ಚೌಡಶೆಟ್ಟರಿಂದ_5_ಎಕರೆ_ನೀರಾವರಿ_ಜಮೀನು_ದಾನ.

https://arunprasadhombuja.blogspot.com/2023/05/blog-number-1515-13.html

   ನಡೆದಾಡುವ ಸಂತರೆಂದೆ ಕರೆಯುವ ಆಚಾಯ೯ ವಿನೋಬಾ ಭಾವೆ ಆನಂದಪುರಂಗೆ ಬಂದಿದ್ದರು, ಭೂದಾನ ಚಳವಳಿಯಲ್ಲಿ ಆನಂದಪುರಂ ನ ಭೂ ಮಾಲಿಕರು ಭಾಗಿಯಾಗಿದ್ದರು ಅಂದರೆ ನಂಬಲಾಗದ ಸಂಗತಿ ಆದರೆ ಭೂದಾನ ಚಳವಳಿಯಲ್ಲಿ ಬದರಿನಾರಾಯಣ ಅಯ್ಯಂಗಾರ್ ಕುಟುಂಬ ಭಾಗಿ ಆಗುತ್ತದೆ.
  ಇದಕ್ಕೆ ಮುಖ್ಯಕಾರಣ ಶಿವಮೊಗ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಸೊರಬ ತಾಲ್ಲೂಕಿನ ಎಣ್ಣೆ ಕೊಪ್ಪದ ಮಲ್ಲಿಕಾರ್ಜುನ ಗೌಡರು, ಅವರಿಗೂ ಸ್ವಾತಂತ್ರ್ಯ ಹೋರಾಟಗಾರ ಕಾಂಗ್ರೇಸ್ ಮುಖಂಡ ಬದರಿನಾರಾಯಣ ಅಯ್ಯಂಗಾರರಿಗೂ ಇದ್ದ ಗಳಸ್ಯ ಕಂಠಸ್ಯ ಗೆಳೆತನ, ದೇಶಪ್ರೇಮ ಮತ್ತು ಮಹಾತ್ಮಾ ಗಾಂಧಿಯವರ ಪ್ರೇರಣೆ.
   ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರ ಆ ಕಾಲದ ಓಡಾಟದ ವಾಹನ ಒಂಟೆತ್ತಿನ ಗಾಡಿ ಆಗಿತ್ತು.
    ಗಾಂಧೀಜಿ ಜೊತೆ ಸಬರಮತಿ ಆಶ್ರಮವಾಸಿ ಆಗಿದ್ದ ಬಾವೆ ಅವರು ಗಾಂದೀಜಿ ಅವರ ಸವೋ೯ದಯ ಮತ್ತು ಗ್ರಾಮ ಸ್ವರಾಜ್ಯದಿಂದ ಪ್ರೇರೇಪಿತರಾಗಿ ಸ್ವಯಂ ಭೂ ಸುದಾರಣ ಚಳವಳಿ ಆದ ಶ್ರೀಮಂತ ಭೂಮಾಲಿಕರು ಅವರ ಕೆಲ ಭಾಗ ಭೂರಹಿತರಿಗೆ ದಾನ ನೀಡುವ ಭೂದಾನ ಚಳವಳಿಯನ್ನು  18 ಏಪ್ರಿಲ್ 1951ರಂದು ಆಗಿನ ಕಮ್ಯುನಿಸ್ಟ್ ಕೇಂದ್ರ ಆಗಿದ್ದ ಈಗಿನ ತೆಲಂಗಾಣ ರಾಜ್ಯದ ಪೊಚಂಪಲ್ಲಿಯಿಂದ ಪ್ರಾರಂಬಿಸುತ್ತಾರೆ.
    ಸತತ 14 ವರ್ಷದಲ್ಲಿ ಈ ಸದುದ್ದೇಶ ಜಾರಿಗಾಗಿ ಸುಮಾರು 70 ಸಾವಿರ ಕಿ.ಮಿ. ಪಾದಯಾತ್ರೆ ಮಾಡಿದ್ದು ಒಂದು ಸರ್ವಕಾಲಿಕ ದಾಖಲೆ.
  ಈ ಚಳವಳಿ ಲೋಕಮಾನ್ಯ ಜಯಪ್ರಕಾಶ್ ನಾರಾಯಣರಿಗೂ ಪ್ರಭಾವ ಬೀರುತ್ತದೆ ಅವರೂ ಕೂಡ ಸಕ್ರಿಯ ರಾಜಕಾರಣ ತೊರೆದು 1953 ರಲ್ಲಿ ಭೂದಾನ ಚಳವಳಿಯಲ್ಲಿ ಕೈ ಜೋಡಿಸುತ್ತಾರೆ.
  ರಕ್ತರಹಿತ ಚಳವಳಿಯ ನೇತಾರ, ನಡೆದಾಡುವ ಸಂತರಾದ ವಿನೋಭಾ ಭಾವೆಯವರು ತಮ್ಮ ಶಿವಮೊಗ್ಗ ಜಿಲ್ಲೆಯಲ್ಲಿನ ಈ ಚಳವಳಿಯನ್ನು ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರ ನೇತೃತ್ವದಲ್ಲಿ ಕಾಂಗ್ರೇಸ್ ಮುಖಂಡರಾಗಿದ್ದ ಬದರಿನಾರಾಯಣ ಆಯ್ಯಂಗಾರ್ ಮತ್ತವರ ಸಂಗಾತಿಗಳ ಜೊತೆ ನಡೆಸುತ್ತಾರೆ.
  ಎಣ್ಣೆಕೊಪ್ಪದ ಮಲ್ಲಿಕಾಜು೯ನ ಗೌಡರು ಮತ್ತು ಬದರಿನಾರಾಯಣ್ ಆಯ್ಯಂಗಾರ್ ಮತ್ತು ಅನೇಕ ಜಿಲ್ಲೆಯ ಸ್ವಾತಂತ್ರ ಹೋರಾಟಗಾರ ಗಾಂದೀ ಅನುಯಾಯಿಗಳು ಜಿಲ್ಲೆಯ ಭೂಮಾಲಿಕರ ಮನ ಒಲಿಸಿ ನೂರಾರು ಎಕರೆ ಭೂದಾನ ಮಾಡಿಸಲು ಕಾರಣರಾಗುತ್ತಾರೆ.
   ಆನಂದಪುರದ ಮೆಸ್ಕಾಂ ಪಕ್ಕದ ಸುಳುಗೋಡು ರಸ್ತೆಯ ಸರ್ವೆ ನಂಬರ್ 118 ರಲ್ಲಿ ಸುಮಾರು 14 ಎಕರೆ ಜಮೀನು ಅಯ್ಯಂಗಾರರ ಕುಟುಂಬ ಮತ್ತು ಸುಳುಗೋಡಿನ ಮುತ್ರಿ ಗೌಡರ ಕುಟುಂಬ ವಿನೋಬ ಬಾವೆ ಅವರ ಭೂದಾನ ಚಳವಳಿಗೆ ದಾನವಾಗಿ ನೀಡುತ್ತಾರೆ, ಈಗ ಸದರಿ ಜಮೀನು ರಾಜ ಪ್ರಮುಖರ ಖಾತೆ ಹೆಸರಲ್ಲಿ ಆನಂದಪುರಂ ನ ಸರ್ಕಾರಿ ಪ್ರೌಡ ಶಾಲೆಯ ಸುಪರ್ದಿಯಲ್ಲಿದೆ, ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಸದರಿ ಜಮೀನು ಸವೆ೯ ಮಾಡಿಸಿ ತಂತಿ ಬೇಲಿ ನಿರ್ಮಿಸಿ ಗಿಡ ನೆಡಿಸಿ ಮಧ್ಯದಲ್ಲಿ ಕ್ರಿಕೆಟ್ ಆಟದ ಮೈದಾನ ಮಾಡಿದ್ದು ಈಗ ಅದು ಉಳಿದಿಲ್ಲ.
   ಭೂದಾನ ಪಡೆದು ಜಮೀನು ಮಾರುವಂತಿಲ್ಲ, ಕೃಷಿ ಹೊರತು ಪಡಿಸಿ ಬೇರೆ ಉದ್ದೇಶಕ್ಕೆ ಬಳಸಿದರೆ ಸರ್ಕಾರ ತನ್ನ ವಶಕ್ಕೆ ಪಡೆಯಬಹುದೆಂಬ ಕಾಯ್ದೆ ಇದೆ.
   ಅಯ್ಯಂಗಾರರ ಕುಟುಂಬದೊಡನೆ ಆ ಕಾಲದಲ್ಲಿ ವ್ಯವಹಾರ ಸಂಬಂದ ಇಟ್ಟುಕೊಂಡಿದ್ದ ಇರುವಕ್ಕಿಯ  ಕುಂಬಾರ್ ಬಸಪ್ಪರ ತಂದೆ ಚೌಡ ಶೆಟ್ಟರು ಇರುವಕ್ಕಿಯ ಸುಮಾರು 5 ಎಕರೆ ನೀರಾವರಿ ಜಮೀನು ಭೂದಾನ ಮಾಡುತ್ತಾರೆ. ಇದು ಆನಂದಪುರಂ ನ ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಗೆ ನೀಡಲಾಗಿತ್ತು, ಪ್ರತಿವರ್ಷ ಭತ್ತದ ಸುಗ್ಗಿಯಲ್ಲಿ ಕೆಲ ಚೀಲ ಭತ್ತ ತೆಗೆದು ಇಟ್ಟು ಮಾರಾಟ ಮಾಡಿ ಹಣವನ್ನು ಶಾಲಾ ಖಾತೆಗೆ ಸದರಿ ಕುಟುಂಬ 2000 ಇಸವಿ ತನಕ ಪಾವತಿ ಮಾಡುತ್ತಿತ್ತು.
    ಹೊಸಕೊಪ್ಪದ ಕೌತಿ ನಾಗಪ್ಪರ ತಂದೆ ಅಯ್ಯಂಗಾರ್ ಕುಟುಂಬದ ಜೊತೆ ಭೂದಾನ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ನಂತರ ಕೌತಿ ನಾಗಪ್ಪನವರು ಭೂದಾನ ಚಳವಳಿಯ ಕಛೇರಿ ಎಂಬ ನಾಮಫಲಕ ತಮ್ಮ ಮನೆಯಲ್ಲಿ ಹಾಕಿ ಕೊಂಡು ಮುಂದುವರಿಸಿದ್ದರು.
  ಆನಂದಪುರಂ ಭಾಗದಲ್ಲಿ ಭೂದಾನ ಚಳವಳಿ ಯಶಸ್ವಿ ಆಗಲು ಬದರಿನಾರಾಯಣ್ ಅಯ್ಯಂಗಾರರ ಸಹೋದರರಾದ ವೆಂಕಟಾಚಲ ಅಯ್ಯಂಗಾರರ ಪ್ರಯತ್ನ ಮತ್ತು ಶ್ರಮ ಸ್ಮರಣೀಯ.
    ಆನಂದಪುರಂ ಭಾಗದಲ್ಲಿ ಎಷ್ಟು ಎಕರೆ ಭೂದಾನ ಚಳವಳಿಯಲ್ಲಿ ನೀಡಲಾಯಿತು, ಎಲ್ಲೆಲ್ಲಿ ಇದೆ, ಒತ್ತುವರಿ ಆಗಿದಿಯಾ? ಎಂಬ ಮಾಹಿತಿ ಆಸಕ್ತರು ಆನಂದಪುರಂ ನಾಡ ಕಛೇರಿಯಲ್ಲಿ ಪಡೆಯಬಹುದಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ