Skip to main content

Blog number 1481. ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ-2 .

#ನನ್ನ_ಅನುಭವದ_ಅತೀಂದ್ರಿಯ_ಶಕ್ತಿ_ಭಾಗ_2. 


#ಬಸ್ಸಿನಲ್ಲಿ_ಗಾಜಿನ_ವಿಂಡ್_ಶೀಲ್ಡ್_ದಿಟ್ಟಿಸುತ್ತಾ_ಮೈ_ಮರೆತಿದ್ದೆ, 

#ಗೆಳೆಯರು_ಎಚ್ಚರಿಸಿ_ಏನು_ಯೋಚಿಸುತ್ತಿದ್ದಿಯಾ_ಅಂತ_ಕೇಳಿದರು_ಹೇಳಿದೆ....

 #ಆ_ಕ್ಷಣದಲ್ಲಿ_ಬಸ್ಸಿನ_ಗಾಜು_ಪುಡಿಪುಡಿ !!

 #ಅತೀಂದ್ರೀಯ_ಶಕ್ತಿ_ಇದಿಯಾ_ನನ್ನ_ಜೀವನದ_ಹಲವು_ಘಟನೆಗಳು_ನನಗೆ_ಅತೀಂದ್ರಿಯ_ಶಕ್ತಿ_ನಂಬುವಂತೆ_ಮಾಡಿದೆ 

#ಅಂತದರಲ್ಲಿ_ಈ_ಘಟನೆಯೂ_ಕೂಡ_ಒಂದು.

#ಅತೀಂದ್ರಿಯ_ಶಕ್ತಿ_ಇದೀಯಾ?

#ಇಲ್ಲದಿದ್ದರೆ_ಈರೀತಿ_ಘಟನೆಗೆ_ಕಾರಣ ?

#ಇಂತಹ_ಅನೇಕ_ಘಟನೆ_ನನ್ನ_ಜೀವನದಲ್ಲಿ_ಅನುಭವ_ಆಗಿದೆ.

#ಹಾಗಂತ_ಆ_ವಿಸ್ಮಯ_ಶಕ್ತಿ_ನನ್ನ_ನಿಯಂತ್ರಣದಲ್ಲಿಲ್ಲ.

     ಮನುಷ್ಯನ ಮನಸ್ಸಿಗೆ ದೃಷ್ಟಿಗೆ ಎದುರಿನ ವಸ್ತು ಪುಡಿ ಮಾಡುವ ಶಕ್ತಿ ಇದಿಯಾ?...ಕೆಲವರಿಗೆ ನಿಸರ್ಗದಲ್ಲಿ ಹಿಂದಿನ ಜನ್ಮದ ಕೆಲ ಸನ್ನಿವೇಶಗಳು ಪುನಃ ಕಾಣುವಂತದ್ದು ಇರುತ್ತದೆ ಅನ್ನುತ್ತಾರೆ...ಇದೆಲ್ಲ ಸತ್ಯವಾ? ಕಾಕತಾಳಿಯನಾ?...
  ನನ್ನ ಅನೇಕ ಅನುಭವದಲ್ಲಿ ಇದೂ ಒಂದು ಘಟನೆ ಕೇಳಿ...
   1989 ರಲ್ಲಿ ಗಜಾನನ ಎಂಬ ನಮ್ಮ ಜಿಲ್ಲೆಯ ಪ್ರತಿಷ್ಠಿತ ಖಾಸಾಗಿ ಬಸ್ಸಿನಲ್ಲಿ ನಮ್ಮ ಊರು ಆನಂದಪುರಂನಿಂದ ಶಿವಮೊಗ್ಗಕ್ಕೆ ನಾನು ಮತ್ತು ಆಗಿನ ಸಾಗರದ ಪತ್ರಕರ್ತ ತೀ.ನಾ. ಶ್ರೀನಿವಾಸ್ (ನಂತರ ಸಾಗರ ಪುರ ಸಭಾ ಅಧ್ಯಕ್ಷರಾಗಿದ್ದರು ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದೆವು.
  ಶಿವಮೊಗ್ಗ 30 km ಹಿಂದೆ ಇರುವಾಗ ನಾನು ಬಸ್ಸಿನ ಎಡ ಭಾಗದ ಗ್ಲಾಸ್ ದಿಟ್ಟಿಸುತ್ತಿದ್ದೆ....ಮನಸ್ಸಿನಲ್ಲಿ ಏನೋ ಒಂದು ರೀತಿ ಅನಿಸುತ್ತಿತ್ತು.
    ಆಗ ಗೆಳೆಯರು "ಏನು ಮೌನವಾಗಿ ಆಕಡೆ ನೋಡುತ್ತಿದ್ದಿಯಾ?" ಅಂದಾಗ ನಾನು ಒಂದು ರೀತಿ ಎಚ್ಚೆತ್ತುಕೊಂಡು ನನಗೆ ಅನಿಸಿದ್ದು ಅವರು ಒತ್ತಾಯಿಸಿ ಕೇಳಿದಾಗ ಹೇಳಿದೆ, ಆದೇನೆಂದರೆ "ಈ ಬಸ್ಸಿನ ಡೈವರ್ರ ಎಡ ಬಾಗದ ಗ್ಲಾಸ್ (ವಿಂಡ್ ಶೀಲ್ಡ್) ಒಡೆದು ಪುಡಿ ಪುಡಿ ಆದರೆ ಅಂತ ಅನ್ನಿಸುತ್ತಿತ್ತು" ಅಂದೆ.
     ತಕ್ಷಣ ಬಸ್ಸಿನ ಡ್ರೈವರ್ ತಿರುಗಿ ನನ್ನ ದುರುಗುಟ್ಟಿ ನೋಡಿದರು,ಅವರಿಗೆ ಅದು ಕೋಪ ತರಿಸಿರಬೇಕು ಹಾಗೆ ಹೇಳಿದ ಕ್ಷಣ ಮಾತ್ರದಲ್ಲಿ ಬಸ್ಸಿನ ಎಡ ಭಾಗದ ವಿಂಡ್ ಶೀಲ್ಡ್ ಪುಡಿ ಪುಡಿಯಾಗಿ ಬಿದ್ದು ಹೋಯಿತು... ಬಸ್ಸಿನ ತುಂಬಾ ಗಾಜಿನ ಪುಡಿಗಳು!!.
   ಬಸ್ ಬದಿಗೆ ನಿಲ್ಲಿಸಿ ಡ್ರೈವರ್ ಮತ್ತು ನನ್ನ ಮಾತು ಕೇಳಿಸಿಕೊಂಡ ಸಹ ಪ್ರಯಾಣಿಕರು, ಜೊತೆಗಾರರು ಎಲ್ಲರೂ ನನ್ನನ್ನು ಭಯ ಬೀತರಾಗಿ ನೋಡಲು ಪ್ರಾರಂಬಿಸಿದರು.
    ಇಡೀ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆಲ್ಲ ಡ್ರೈವರಿಂದ ಈ ವಿಚಾರ ಎಲ್ಲರಿಗೂ ಗೊತ್ತಾಗಿ ಅವರೆಲ್ಲ ನನ್ನನ್ನು ಬೂತ ಎ೦ದು ಬಾವಿಸಿ ಭಯದಿಂದ ನೋಡುತ್ತಿದ್ದರು.
 ಈ ಘಟನೆಯ ಪ್ರತ್ಯಕ್ಷದರ್ಶಿ ಮಾಜಿ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ  ತೀನಾ ಶ್ರೀನಿವಾಸ್ 2023ರ ವಿದಾನ ಸಭಾ ಚುನಾವಣೆಯಲ್ಲಿ ಸಾಗರ - ಹೊಸನಗರ ಕ್ಷೇತ್ರದಿಂದ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ದಿಸಿದ್ದಾರೆ.
   ಇಂತಹ ಅನೇಕ ಘಟನೆಗಳು ಜೀವನದಲ್ಲಿ ಆಗಿದೆ ಇದು ಅತೀಂದ್ರಿಯ ಶಕ್ತಿಯ? ಕಾಕತಾಳಿಯವಾ? ಗೊತ್ತಿಲ್ಲ ಇಂತಹ ಘಟನೆಗಳನ್ನು ನೆನಪಾದಾಗೆಲ್ಲ ಬರೆಯಬೇಕು ಅನ್ನಿಸಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ