Skip to main content

Blog number 1568. ನಮ್ಮ ಊರಲ್ಲೂ ಇದೆ ಶಿಲಾಮಯ ಬೃಹತ್ ಸೆಂಗೋಲ್

#ಆನಂದಪುರಂ_ಇತಿಹಾಸ_ಭಾಗ_100.

https://youtu.be/-vztlvQjXJU

#ನಮ್ಮ_ಊರಿನಲ್ಲಿ_ಬೃಹತ್_ಶಿಲಾಮಯ_ಸೆಂಗೋಲ್_ಇದೆ.

#ಕೆಳದಿ_ಅರಸರು_ಉಂಬಳೆ_ನೀಡಿದ_ಹಳ್ಳಿಯಲ್ಲಿದೆ.

#ಇದನ್ನು_ನಿರ್ಮಿಸಿದವರು_ಕೆಳದಿ_ಅರಸರಾ ?

#ನಂದಿದ್ವಜ_ದರ್ಮದಂಡ_ಸೆಂಗೋಲ್_ಹೆಚ್ಚು_ಚರ್ಚೆಯ_ಕಾಲದಲ್ಲಿ.
  ಹೊಸ ಪಾರ್ಲಿಮೆಂಟ್ ನಲ್ಲಿ ಸ್ಪೀಕರ್ ಬಲ ಬಾಗದಲ್ಲಿ ಪ್ರದಾನಿ ಮೋದಿಯವರು ಪ್ರತಿಷ್ಟಾಪಿಸಿದ ರಾಜ ಧಂಡ/ ಧರ್ಮ ಧಂಡ/ ನಂದಿಧ್ವಜ / ಸೆಂಗೋಲ್ ಬಗ್ಗೆ ಹೆಚ್ಚಿನ ಚಚೆ೯ ಆಗುವಾಗಲೇ ನನಗೆ ನೆನಪಾಗಿದ್ದು ನಮ್ಮ ಗ್ರಾಮ ಪಂಚಾಯಿತಿ ಯಡೇಹಳ್ಳಿಯ ಘಂಟಿನಕೊಪ್ಪದ ಸಮೀಪದ ಕೆರೆಕೊಪ್ಪದ ಖಾತೆ ಕಾನೂನಿನಲ್ಲಿ ಶಿಲಾಮಯ ನಂದಿ ಧ್ವಜ ಒಂದನ್ನು 1995 - 2000 ಇಸವಿಯಲ್ಲಿ ನೋಡಿದ ನೆನಪಾಯಿತು.
  ಈ ಗ್ರಾಮ ಪಂಚಾಯಿತಿ ಸದಸ್ಯ - ಉಪಾಧ್ಯಕ್ಷ - ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆಯಾ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಪಾದಯಾತ್ರೆ ನಡೆಸುತ್ತಿದ್ದೆ ಅದರಿಂದ ಅನೇಕ ಹೊಸ ವಿಚಾರ ತಿಳಿಯಲು, ಸ್ಥಳಿಯರ ಸಮಸ್ಯೆ - ಬೇಡಿಕೆಗಳ ಪಟ್ಟಿ ಮಾಡಲು ಮತ್ತು ಸ್ಥಳಿಯರ ಜೊತೆ ಬೆರೆಯಲು ಸಹಕಾರಿ ಆಗುತ್ತಿತ್ತು.
   ಆಗ ಊರಿನ ಪ್ರಮುಖರ ಜೊತೆ ಆ ಕಾಡಿನಲ್ಲಿ 10 ಅಡಿ ಎತ್ತರದ ಬೃಹತ್ ಶಿಲಾಮಯ ನಂದಿ ಧ್ವಜ ನೋಡಿದ್ದೆ , ಇದಕ್ಕೆ ವರ್ಷಕ್ಕೊಮ್ಮೆ ಗ್ರಾಮಸ್ಥರು ಪೂಜೆ ಮಾಡುತ್ತಾರೆ, ಇಪ್ಪತ್ತು ವರ್ಷಗಳ ಹಿಂದೆ ದಟ್ಟ ಅರಣ್ಯದ ಮಧ್ಯೆ ಸೂರ್ಯನ ಕಿರಣಗಳು ತಾಗದಂತ ಪ್ರದೇಶವಾಗಿತ್ತು ಈ ಸ್ಥಳ.
  ಈ ಗ್ರಾಮಗಳು ಕೆಳದಿ ಅರಸರ ಕಾಲದಲ್ಲಿ ಉಂಬಳಿ ನೀಡಿದ ಗ್ರಾಮಗಳ ಪಟ್ಟಿಯಲ್ಲಿರುವುದರಿಂದ ಬಹುಶಃ 400 ವರ್ಷಗಳ ಹಿಂದಿನ ಕೆಳದಿ ಅರಸರಿಂದ ಸ್ಥಾಪಿಸಲ್ಪಟ್ಟಿರ ಬಹುದು ಅಥವ ಈ ಭಾಗದಲ್ಲಿ ಕ್ರಿ.ಶ.1000 ಇಸವಿಯ ಶಿಲಾ ಶಾಸನಗಳು ದೊರೆತಿರುವುದರಿಂದ ಒಂದು ಸಾವಿರ ವರ್ಷಗಳ ಹಿಂದಿನದ್ದೂ ಇರಬಹುದು ಸಂಶೋದನೆ ಮಾಡಿದರೆ ಗೊತ್ತಾಗಬಹುದು.
  ಈ ಕಾಡಿನ ಅಂಚಿನಲ್ಲೇ ವಾಸ ಇರುವ, ಕೃಷಿ ಮತ್ತು ಟ್ರಾಕ್ಟರ್ ಹೊಂದಿರುವ ಪ್ರಜ್ಞಾವಂತ - ತಿಳುವಳಿಕೆಯ ಕಿರಿಯ ಗೆಳೆಯ ಗಜೇಂದ್ರರಿಗೆ ಈ ಶಿಲಾಮಯ ನಂದಿ ಧ್ವಜದ ವಿಡಿಯೋ ಪೋಟೋ ಕಳಿಸಲು ವಿನಂತಿಸಿದ ಕ್ಷಣ ಹೊತ್ತಿನಲ್ಲೇ ಘಂಟಿನಕೊಪ್ಪದ ಗಜೇಂದ್ರ ವಿಡಿಯೋ ಪೋಟೊ ವಾಟ್ಸಪ್ ಮಾಡಿದ್ದು ಇಲ್ಲಿದೆ.
  ಈ ಸ್ಥಳ ನೋಡುವ ಆಸಕ್ತರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂಗೆ ಬಂದು ಇಲ್ಲಿಂದ ಯಡೇಹಳ್ಳಿ ಗ್ರಾಮ ಪಂಚಾಯತ್ ನ  ಘಂಟಿನ ಕೊಪ್ಪದ (ಕೆಳಗಿನ ಘಂಟಿನ ಕೊಪ್ಪ) ಕೆರೆಕೊಪ್ಪ ಶಾಲೆ ಹತ್ತಿರದ ಖಾತೆ ಕಾನಿನಲ್ಲಿ ನೋಡ ಬಹುದು ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ಉತ್ಸಾಹಿ ಯುವಕ ಗಜೇಂದ್ರ ಅವರ ಸೆಲ್ ಫೋನ್ ನಂಬರ್  990-118-5916ಗೆ ಸಂಪರ್ಕಿಸ ಬಹುದು.
  ತಮಿಳುನಾಡಿನಲ್ಲಿ ಸೆಂಗೋಲ್ ಎಂಬ ಈ ನಂದಿ ಪ್ರತಿಷ್ಟಾಪಿತ ರಾಜ ದಂಡ ರಾಜರ ಅಧಿಕಾರ ಹಸ್ತಾಂತರದಲ್ಲಿ ಬಳಕೆ ಮಾಡುತ್ತಿದ್ದರಿಂದ ಸಿ.ರಾಜಗೋಪಾಲಾಚಾರಿ ಅವರ ಶಿಪಾರಸ್ಸಿನಂತೆ ತಮಿಳುನಾಡಿನಲ್ಲಿ 1947 ರಲ್ಲಿ ತಿರುವ ಮಾತುರೈ ಅಡೀನಮ್ ಅವರಿಂದ ತಯಾರಿಸಿ ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ರಿಂದ ಪ್ರಧಾನ ಮಂತ್ರಿ ನೆಹರೂರವರಿಗೆ ಸ್ವರ್ಣ ಸೆಂಗೋಲ್  ಹಸ್ತಾಂತರ ಮಾಡುವ ಮೂಲಕ ಬ್ರಿಟಿಷರಿಂದ ಭಾರತೀಯರಿಗೆ ಸ್ವಾತಂತ್ರ್ಯ ದ  ಅಧಿಕಾರ ವರ್ಗಾಯಿಸಲಾಯಿತು ನಂತರ ಪ್ರದಾನ ಮಂತ್ರಿ ನೆಹರೂರವರು ಅಲಹಾಬಾದಿನ (ಈಗ ಪ್ರಯಾಗ ರಾಜ್) ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸುತ್ತಾರೆ.
  ಇದನ್ನು ಅಲ್ಲಿಂದ ತರಿಸಿ ಹೊಸ ಸಂಸತ್ ಭವನದ ಸ್ಪೀಕರ್ ಆಸನದ ಬಲಭಾಗದಲ್ಲಿ ಪ್ರದಾನಿ ಮೋದಿ ಪ್ರತಿಷ್ಟಾಪಿಸಿದ ನಂತರ ಈ ಸೆಂಗೋಲ್ ಬಗ್ಗೆ ಪರ -ವಿರೋದ ಪ್ರಾರಂಭವಾಗಿ ಸೆಂಗೋಲ್ ಎಂದರೆ ಏನು? ಎಂಬ ಬಗ್ಗೆ ಸಾರ್ವಜನಿಕರ ಕುತೂಹಲಕ್ಕೆ ಕಾರಣ ಆಗಿದೆ.
   ನಮ್ಮ ರಾಜ್ಯದ ಪಟ್ಟದಕಲ್ಲಿನ ವೀರೂಪಾಕ್ಷ ದೇವಾಲಯದ ದಕ್ಷಿಣ ಗೋಡೆಯಲ್ಲಿನ ಶಿಲಾ ವಿಗ್ರಹದಲ್ಲಿ ಈ ಸೆಂಗೋಲ್ ಅಥವ ರಾಜದಂಡವಾದ ನಂದಿ ಧ್ವಜ ನೋಡಬಹುದು.
  ದಕ್ಷಿಣ ಭಾರತದ ರಾಜ ವಂಶಸ್ಥರಾದ ಚೋಳರು ಭಾದಾಮಿಯ ಚಾಲುಕ್ಯರು ಇದನ್ನು ಶಕ್ತಿಯ ಸಂಕೇತವಾಗಿ ಬಳಸುತ್ತಿದ್ದರಿಂದ ಕೆಳದಿ ಅರಸರಿಗೂ ಈ ಪದ್ಧತಿ ಮುಂದುವರಿದಿರಬಹುದು.
   1947 ರಲ್ಲಿ ಈ ಸೆಂಗೋಲ್ ವೆಚ್ಚ ಹದಿನೈದು ಸಾವಿರದ ಬಿಲ್ ಬ್ರಿಟಿಷ್ ಸರ್ಕಾರ ಭಾರತ ಸರ್ಕಾರಕ್ಕೆ ಸಲ್ಲಿಸಿ ಹಣ ಪಡೆದಿತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...