Skip to main content

Blog number 1489. ಬೆಂಗಳೂರಿನ ವಿದಾನ ಸೌಧದ ಸೆಕ್ರೆಟರಿಯೆಟ್ ನಲ್ಲಿ ಅಂಡರ್ ಸೆಕ್ರೆಟರಿ ಆಗಿರುವ ಖ್ಯಾತ ಚಲನಚಿತ್ರ ತಾರೆ ಪದ್ಮಾ ಕುಮುಟಾರ ಸಹೋದರ, ಖ್ಯಾತ ಸಮಾಜವಾದಿ ದುರೀಣ ಎಸ್.ಎಸ್. ಕುಮುಟಾರ ಪುತ್ರ ಸುಬ್ರಮಣ್ಯ ಕುಮುಟಾ ನನ್ನ ಅತಿಥಿ.

https://youtu.be/qz_lN6Lbb6o

#ನನ್ನ_ಇವತ್ತಿನ_ಅತಿಥಿ_ಸುಬ್ರಮಣ್ಯ_S_ಕುಮಟಾ.

#ಚೊಮನದುಡಿ_ಸಿನಿಮಾದ_ರಾಷ್ಟ್ರಪ್ರಶಸ್ತಿ_ವಿಜೇತ_ಕಲಾವಿದೆ_ಪದ್ಮಾಕುಮುಟಾರ_ಸಹೋದರ.

#ಹೆಗ್ಗೋಡಿನ_ಕೆ_ವಿ_ಸುಬ್ಬಣ್ಣ_ಪದ್ಮಾಕುಮುಟಾರನ್ನು_ಸೂಚಿಸಿದವರು.

#ಸಮಾಜವಾದಿ_ರಾಮಮನೋಹರ_ಲೋಹಿಯ_ಜಾರ್ಜ್_ಪರ್ನಾಂಡೀಸ್
#ಶಾಂತವೇರಿ_ಗೋಪಾಲಗೌಡರ_ಒಡನಾಡಿಗಳಾದ_ಎಸ್_ಎಸ್_ಕುಮುಟಾರ_ಪುತ್ರ.

#ಬೆಂಗಳೂರು_ವಿದಾನಸೌದದ_ಕರ್ನಾಟಕ_ಲೆಜಿಸ್ಲೇಟೀವ್_ಅಸೆಂಬಲಿ_ಅಂಡರ್_ಸೆಕ್ರೆಟರಿ.

#ಚೋಮನದುಡಿ_ಸಿನಿಮಾ_ನೋಡಲು_ನಮ್ಮ_ತಂದೆ_ನಮ್ಮ_ಊರಿನ_ಕ್ರಿಸ್ತಿನಾಬಾಯಿ_ಅವರ_ಎತ್ತಿನಗಾಡಿಯಲ್ಲಿ_ರಿಪ್ಪನ್_ಪೇಟೆ
#ಚಿತ್ರಮಂದಿರಕ್ಕೆ_ಕರೆದೊಯ್ದಿದ್ದರು

   ಸುಬ್ರಮಣ್ಯ ಕುಮಟಾ ಸಾಗರದ ಮುನ್ಸಿಪಲ್ ಹೈಸ್ಕೂಲಿನಲ್ಲಿ ನನ್ನ ಕ್ಲಾಸ್ ಮೇಟ್ ಈಗ ಬೆಂಗಳೂರಿನ ವಿದಾನ ಸೌದ ಸಚಿವಾಲಯದಲ್ಲಿ ಅಂಡರ್ ಸೆಕ್ರೆಟರಿ ಆಗಿದ್ದಾರೆ.
  ಇವರ ತಂದೆ ರಾಷ್ಟ್ರ ರಾಜಕಾರಣದ ಅತಿರಥ ಮಹಾರಥರಾದ ರಾಮ ಮನೋಹರ ಲೋಹಿಯಾ, ಜಾರ್ಜ್ ಫರ್ನಾಂಡೀಸ್, ಶಾಂತವೇರಿ ಗೋಪಾಲಗೌಡರ ಒಡನಾಡಿಗಳು.
  ಕಾಗೋಡು ರೈತ ಹೋರಾಟದಲ್ಲಿ ಇವರ ಪಾತ್ರ ದೊಡ್ಡದು, ಜಯಪ್ರಕಾಶ್ ನಾರಾಯಣ್, ಮದುಲಿಮೆ ಮುಂತಾದ ಸಮಾಜವಾದಿ ರಾಷ್ಟ್ರ ನಾಯಕರ ಭಾಷಣ ಆ ಕಾಲದಲ್ಲಿ ಸೊಗಸಾಗಿ ಕನ್ನಡಕ್ಕೆ ಅನುವಾದಿಸುತ್ತಿದ್ದವರು ಇವರ ಪ್ರಯತ್ನಗಳಿಂದಲೇ ಸಾಗರದಿಂದ ಮೊದಲ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗುತ್ತಾರೆ.
  ಇವರ ಪುತ್ರಿ ಪದ್ಮಾ ಕುಮುಟಾ ಶಿವರಾಮ ಕಾರಂತರ ಕಾದಂಬರಿ #ಚೋಮನದುಡಿ ಬಿ.ವಿ.ಕಾರಂತರು ಸಿನಿಮಾ ಮಾಡಿದಾಗ ಅದರಲ್ಲಿ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಗೆ ಬಾಜನರಾಗುತ್ತಾರೆ.
   ಇವತ್ತು ಬೆಂಗಳೂರಿಂದ ಸಾಗರಕ್ಕೆ ಸುಬ್ರಮಣ್ಯ ಕುಮುಟಾ ಮತ್ತು ಅವರ ಸಹೋದರಿ ಮಮತಾ ಕುಮುಟಾ ಪ್ರಯಾಣಿಸುವಾಗ ನನ್ನ ಕಛೇರಿಗೆ ಬಂದಿದ್ದರು ಇವರ ಇನ್ನೊಬ್ಬ ಸಹೋದರಿ ಸಾಗರದ ಪುರಸಭೆಯ ಮಾಜಿ ಸದಸ್ಯೆ  ವಂದನಾ ಕುಮುಟಾರ ಪುತ್ರಿ ವಿವಾಹ ಕಾರ್ಯಕ್ರಮ ನಾಳೆ ಇದೆಯಂತೆ.
  2001 ರಲ್ಲಿ ಇವರು ನಾನು ಮತ್ತು ಬಿ.ಆರ್ ಜಯಂತ್ ಜನತಾ ರಂಗ ಹುಟ್ಟು ಹಾಕಿದಾಗ ನಮ್ಮ ಪಕ್ಷದ ಅಭ್ಯರ್ಥಿ ಆಗಿದ್ದರು ಇವರ ಚುನಾವಣಾ ಪ್ರಚಾರರಕ್ಕೆ ಪದ್ಮಾ ಕುಮುಟಾ ಬಂದಿದ್ದರು ನಾವೆಲ್ಲ ಒಂದಾಗಿ ಇವರ ಪರವಾಗಿ ಪ್ರಚಾರ ಮಾಡಿದ ನೆನಪುಗಳು.
  1975ರಲ್ಲಿ ಚೋಮನ ದುಡಿ ಸಿನಿಮಾ ರಿಲೀಸ್ ಆದಾಗ ನಮ್ಮ ಆನಂದಪುರಂ ಸಮೀಪದ ರಿಪ್ಪನ್ ಪೇಟೆಯ ಚಿತ್ರ ಮಂದಿರದ ಪ್ರದಶ೯ನಕ್ಕೆ ನಮ್ಮ ತಂದೆ ನಮ್ಮನ್ನೆಲ್ಲ ನಮ್ಮ ಊರಿನ ಕ್ರಿಸ್ತಿನಾ ಬಾಯಮ್ಮರ ಎತ್ತಿನಗಾಡಿಯಲ್ಲಿ ಕರೆದೊಯ್ದಿದ್ದರು.
 ನಮ್ಮ ತಂದೆ, ತಾಯಿ ಮತ್ತು ಕ್ರಿಸ್ತೀನ್ ಬಾಯಮ್ಮ ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿ ಓದಿದವರು ಸಿನಿಮಾ ನೋಡಿ ಎತ್ತಿನಗಾಡಿಯಲ್ಲಿ ವಾಪಾಸು ಬರುವಾಗ ಆದರೆಲ್ಲ ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿ ಬಿ.ವಿ ಕಾರಂತರ ಸಿನಿಮಾ ಆದ ಬಗ್ಗೆ ಮತ್ತು ನಮ್ಮ ಸಾಗರದ ಪದ್ಮಾ ಕುಮುಟಾ ಅಭಿನಯದ ಬಗ್ಗೆಯೇ ಮಾತಾಡುತ್ತಿದ್ದರು.
  ಆ ಸಿನಿಮಾ ನೋಡಲು ಎತ್ತಿನಗಾಡಿಯಲ್ಲಿ ರಿಪ್ಪನ್ ಪೇಟೆಗೆ ಇಡೀ ನಮ್ಮ ಕುಟುಂಬ ಹೋದದ್ದು ಒಂದು ಅವಿಸ್ಮರಣೀಯ ಅನುಭವ.
  ಈ ಸಂದರ್ಭದಲ್ಲಿ ಪದ್ಮಾ ಕುಮುಟಾ ಚೋಮನ ದುಡಿಗೆ ಹೇಗೆ ಆಯ್ಕೆ ಆದರು ಮುಂತಾದ ವಿಚಾರ ಸುಬ್ರಮಣ್ಯ ಕುಮಟಾ ನೆನಪಿಸಿಕೊಂಡಿದ್ದನ್ನು ಇಲ್ಲಿ ವಿಡಿಯೋದಲ್ಲಿ ಇದೆ, ಕೆ.ವಿ.ಸುಬ್ಬಣ್ಣರೇ ಪದ್ಮಾ ಕುಮಟಾ ಚೋಮನ ದುಡಿ ಸಿನಿಮಾಗೆ ಆಯ್ಕೆ ಆಗಲು ಕಾರಣವಂತೆ ನೋಡಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ