Skip to main content

Blog number 1553. ಸಾಗರದ ಜನ್ನತ್ ನಗರದ ಅಬ್ಬಾಸ್ ಸಾಹೇಬರು ಜಿಲ್ಲೆಯ ಮಾಂಸಹಾರಿ ಅಡುಗೆ ತಯಾರಿಸುವ ಸೂಪರ್ ಕುಕ್


https://youtu.be/t4NW_Q9RvNE

#ಸಾಗರದ_ಜನ್ನತ್_ಗಲ್ಲಿಯ_ಅಬ್ಬಾಸ್_ಸಾಬ್.

#ನಮ್ಮ_ಪ್ರಾಂತ್ಯದ_ಸೂಪರ್_ಕುಕ್

#ಟೇಸ್ಟಿಂಗ್_ಪೌಡರ್_ಕೃತಕ_ಬಣ್ಣ_ಬಳಸದ_ಪಕಾತಿ 

#ಅತಿ_ಕಡಿಮೆ_ಸಂಭಾವನೆ_ಪಡೆದು_ಅತ್ಯಂತ_ರುಚಿಕರ_ಅಡುಗೆ_ಮಾಡುವವರು

#ನನ್ನ_ಇವರ_ದೋಸ್ತಿ_35_ವರ್ಷದ್ದು

#ನಮ್ಮ_ಕಲ್ಯಾಣಮಂಟಪದಲ್ಲಿ_ಈ_ವರ್ಷ_ಎರೆಡು_ಮದುವೆಗೆ_ಇವರದ್ದೇ_ಅಡುಗೆ.

   ಸಾಗರದ ಜನ್ನತ್ ಗಲ್ಲಿ  ಅಬ್ಬಾಸ್ ಅಡುಗೆ ಅಂದರೆ ಶಿವಮೊಗ್ಗ ಜಿಲ್ಲೆಯ ಮಾಂಸಹಾರಿ ಪ್ರಿಯರ ಕಿವಿ ಮತ್ತು ಬಾಯಿ ಜಾಗೃತವಾಗುತ್ತದೆ, ಇವರ ಅಡುಗೆ ಹಸ್ತ ಗುಣ ಅಂತಹದ್ದು.
   ಇವರು ಮಾಡುವ ಬಿರಿಯಾನಿ, ಗೀರೈಸ್, ಕಬಾಬ್, ಚಿಲ್ಲಿ,,ಡ್ರೈ , ಪಿಶ್ ಪ್ರೈಗಳು ಸಂಪ್ರದಾಯಿಕ ಶೈಲಿಯ ರುಚಿಕರ ಅಡುಗೆ.
  1996 ರಲ್ಲಿ ಸನ್ಮಾನ್ಯ ಬಂಗಾರಪ್ಪರಿಗೆ ನಾವು ನೀಡಿದ ಔತಣ ಕೂಟದ ಅಡುಗೆ ತಯಾರಿಸಿದ್ದು ಅಬ್ಬಾಸ್ ಸಾಹೇಬರೆ?....ಬಂಗಾರಪ್ಪರಿಗೆ ಊಟ ಸಂತೃಪ್ತಿ ತಂದಿತ್ತು.
   ಇಂತಹ ಸಂದರ್ಭದಲ್ಲಿ ಅಡುಗೆ ಮಾಡಿದವರನ್ನು ಕರೆದು ಪ್ರಶಂಸೆಯ ಮಾತಾಡಿ ಭಕ್ಷಿಸು ನೀಡುವ ದೊಡ್ಡ ಗುಣ ಬ೦ಗಾರಪ್ಪರಲ್ಲಿ ಇತ್ತು. 
  ಈಗಿನ ಆಧುನಿಕ ಅಡುಗೆಗೂ ಅಬ್ಬಾಸ್ ಸಾಹೇಬರ ಸಂಪ್ರದಾಯಿಕ ಅಡುಗೆಗೂ ಅಜಗಜಾಂತರವಿದೆ, ಅಬ್ಬಾಸ್ ಸಾಹೇಬರ ಈಗಿನ ಕಾಲದ ಟೇಸ್ಟಿಂಗ್ ಪೌಡರು ಅಜಿನೋಮೋಟೊ ಇತ್ಯಾದಿ ಹಾನಿಕಾರಕ ಕೆಮಿಕಲ್ ಬಳಸದೆ ಸಂಪ್ರದಾಯಿಕ ಶೈಲಿಯ ಅಡುಗೆ ಕಲೆಯವರು.
     ನಿನ್ನೆ ನಮ್ಮ ಕಲ್ಯಾಣ ಮಂಟಪದಲ್ಲಿ ಅಬ್ಬಾಸ್ ಸಾಹೇಬರು 1200 ಜನರಿಗೆ ವಲೀಮಾ (ರಿಸೆಪ್ಷನ್) ಅಡುಗೆ ಮಾಡಿದ್ದರು, ಗೀ ರೈಸ್ - ಮಟನ್ ಕುಮಾ೯ - ಚಿಕನ್ ಚಿಲ್ಲಿ - ದಾಲ್-ಖೀರ್ ಮಾಡಿದ್ದಕ್ಕೆ ಪಡೆದ ಸಂಭಾವನೆ ಕೇವಲ ಆರು ಸಾವಿರ ಮಾತ್ರ!! ಇಷ್ಟು ಕಡಿಮೆ? ಯಾಕೆ ಎಂದರೆ ಅಬ್ಬಾಸ್ ಸಾಹೇಬರು ಹೇಳುವುದು ದುಡ್ಡೇ ಸರ್ವಸ್ವ ಅಲ್ಲ ಅನ್ನುತ್ತಾರೆ.
  ಅಬ್ಬಾಸ್ ಸಾಹೇಬರ ತಂದೆ ಕುಂದಾಪುರದ ಕಂಡ್ಲೂರಿನವರು ಅಲ್ಲಿಂದ ಸಾಗರಕ್ಕೆ ಬಂದವರು, ಇವರ ಅಡುಗೆ ರುಚಿ ನೋಡಿದ ಸೆಲಬ್ರಿಟಿಗಳು ನೂರಾರು ಜನರು.
   ನನ್ನ ಮತ್ತು ಅಬ್ಬಾಸ್ ಸಾಹೇಬರ ಗೆಳೆತನ ಸುಮಾರು 35 ವರ್ಷದ್ದು.
  ಅಬ್ಬಾಸ್ ಸಾಹೇಬರ ಸಂಪರ್ಕ ಸಂಖ್ಯೆ  99015 60802.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...