Skip to main content

Blog number 1569. ಟಿಡಿಕೆ ಪಂಡಿತರ ನೆನಪು ಭಾಗ -3. ಸಾಗರದ ಒಂದು ಕಾಲದ ತ್ರಿಮೂರ್ತಿಗಳಾಗಿದ್ದ ಪಂಡಿತ್ - ಪುಟ್ಟಯ್ಯ - ಕುಮುಟಾ, ಪಂಡಿತರು ಸಾಗರದಲ್ಲಿ ಶ್ರೀಕಂಠದತ್ತ ಒಡೆಯರ್ ಗೆ ಸಾಷ್ಟಾಂಗ ನಮಸ್ಕಾರದ ಬಿಸಿ ಚರ್ಚೆ.

#ಮುಂದುವರಿದ_ಭಾಗ_3.

#ಟಿಡಿಕೆಪಂಡಿತ್_ಪುಟ್ಟಯ್ಯ_ಸತ್ಯಣ್ಣ_ತ್ರಿಮೂರ್ತಿಗಳು

#ಕಮ೯ಚಾರಿ_ದಿನ_ಪತ್ರಿಕೆ

#ಕೊನೆಯವರೆಗೂ_ಕಾಂಗ್ರೇಸ್_ಪಕ್ಷದ_ಕಟ್ಟಾಳು.

#ಬಿಜೆಪಿ_ಸೇರಿದ್ದ_ಶ್ರೀಕಂಠದತ್ತ_ಒಡೆಯರಿಗೆ_ಪಂಡಿತರು_ಮಾಡಿದ_ಸಾಷ್ಟಾಂಗ_ನಮಸ್ಕಾರ.

#ಕಾಂಗ್ರೇಸ್_ಸಭೆಯಲ್ಲಿ_ಕಾಗೋಡರ_ಕೋಪಾತಾಪ .


   ಟಿ.ಡಿ. ಕೆ. ಪಂಡಿತರು ಕಾಂಗ್ರೇಸ್ ಪರವಾಗಿದ್ದರೂ ಅವರ ಪರಮಾಪ್ತ ಮಿತ್ರರಾದ ಪಿ.ಪುಟ್ಟಯ್ಯ ಮತ್ತ ಎಸ್.ಎಸ್. ಕುಮುಟಾ ಸಮಾಜವಾದಿಗಳಾಗಿದ್ದರೂ ಅವರ ಗೆಳೆತನಕ್ಕೆ ಯಾವುದೇ ಅಡೆ ತಡೆ ಆಗದೆ ತ್ರಿಮೂರ್ತಿಗಳಂತೆ ಉಳಿದರು.
  ಕನ್ನಡ ಭಾಷೆ ಉಳಿಯ ಬೇಕು ಅನ್ನುವ ವಿಚಾರದಲ್ಲೂ ಈ ಮೂವರು ನಡೆಸಿದ ಜನ ಜಾಗೃತಿ - ಪ್ರತಿಭಟನೆ - ರಾಜ್ಯಮಟ್ಟದ ಸಮಾವೇಶವೇ ಇದಕ್ಕೆ ಸಾಕ್ಷಿ.
   ಅತ್ಯುತ್ತಮ ಬರವಣಿಗೆ ಶೈಲಿ ದೈವದತ್ತವಾಗಿ ಪಂಡಿತರಿಗೆ ಬಂದಿತ್ತು ಅದನ್ನು ಅವರು ಸಾಗರದಲ್ಲಿ ಪ್ರಾರಂಬಿಸಿದ ಕಮ೯ಚಾರಿ ಕನ್ನಡ ದಿನ ಪತ್ರಿಕೆಯಲ್ಲಿ ಚೆನ್ನಾಗಯೇ ಬಳಸಿಕೊಂಡರು, ದಿನಕ್ಕೊಂದು ಸುದ್ದಿಯ ಆಕರ್ಷಕ ಸಂಕ್ಷಿಪ್ತ ತಲೆ ಬರಹದಲ್ಲೇ ಎಲ್ಲಾ ವಿಷಯಗಳನ್ನು ನವಿರು ಹಾಸ್ಯದಲ್ಲಿ ಪದಬಂದ ಶೈಲಿಯಲ್ಲಿ ಪ್ರಕಟವಾಗುವುದನ್ನು ವಾಚಕರು ಕಾಯುತ್ತಿದ್ದರು ಅದು ಹೆಚ್ಚು ಚರ್ಚೆ ಆಗುತ್ತಿತ್ತು.
   ಕಮ೯ಚಾರಿ ದಿನಪತ್ರಿಕೆ ಕಛೇರಿ ಸಾಗರದ ಬಿ.ಹೆಚ್. ರಸ್ತೆಯ ಲಕ್ಷ್ಮೀ ಲಾಡ್ಜ್ ಎದುರಿನ ಪುತ್ತೂರಾಯರ ಬಿಲ್ದಿಂಗ್ ನ ಮೊದಲ ಅಂತಸ್ತಿನಲ್ಲಿತ್ತು ಅದೇ ಕಟ್ಟಡದ ನೆಲ ಅಂತಸ್ತಿನಲ್ಲಿ ಅವರ ಮುದ್ರಣಾಲಯ ಇತ್ತು.
   ಕಾ೦ಗ್ರೇಸ್ ಪಕ್ಷದ ಕಟ್ಟಾಳಾಗಿದ್ದ ಅವರು, ಆಗಷ್ಟೆ ಬಿಜೆಪಿ ಸೇರಿದ್ಧ ಮೈಸೂರಿನ ಮಹಾರಾಜ ಶ್ರೀಕಂಠದತ್ತ ಒಡೆಯರ್ ಸಾಗರಕ್ಕೆ ಬಂದಿದ್ದಾಗ ಗಾಂಧೀ ಮೈದಾನದಲ್ಲಿ ಸಾರ್ವಜನಿಕ ಸಭೆ ವ್ಯವಸ್ಥೆ ಆಗಿತ್ತು. ಆ ಬಿ.ಜೆ.ಪಿ. ಪಕ್ಷದ ವೇದಿಕೆಗೆ ಹೋಗಿ ಪಂಡಿತರು ಶ್ರೀಕಂಠ ದತ್ತ ಒಡೆಯರ್ ಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದು ಅವತ್ತು ಸಾಗರ ಪೇಟೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು.
   ಬಿಜೆಪಿಯವರಿಗೆ ಖುಷಿ ತಂದ ಈ ಘಟನೆ ಕಾಂಗ್ರೇಸ್ ನವರಿಗೆ ಕೋಪ ತರಿಸಿತ್ತು, ಕೆಲ ದಿನದ ನಂತರ ಸಾಗರದ ಕಾಂಗ್ರೇಸ್ ಪಕ್ಷದ ಕಛೇರಿ ಗಾಂಧಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕಾಗೋಡು ತಿಮ್ಮಪ್ಪನವರು ಪಂಡಿತರ ಈ ನಡೆ ಬಗ್ಗೆ ಕೋಪಾ ತಾಪದಿಂದ ಆಕ್ಷೇಪಣೆ ವ್ಯಕ್ತಪಡಿಸಿದರು ಅವರ ಭಾಷಣ ಮುಗಿಸಿದ ನಂತರ ಪಂಡಿತರು ಉತ್ತರಿಸಲು ಎದ್ದು ನಿಂತರು.... ಅವರ ಮಾತಿನಲ್ಲಿ ನಾಡಿನ ರಾಜವಂಶಸ್ಥರಿಗೆ ಸಾಗರ ತಾಲೂಕಿನ ಸಮಸ್ತ ಪ್ರಜೆಗಳ ಪರವಾಗಿ ಸಲ್ಲಿಸಿದ ಗೌರವವೇ ತಮ್ಮ ಸಾಷ್ಟಾಂಗ ನಮಸ್ಕಾರ ಎನ್ನುವ ಸಾರಾಂಶದಲ್ಲಿ ರಾಜಕೀಯ ಪಕ್ಷಗಳು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಬೇಕು, ಗೆಳೆತನ - ಸಂಬಂದಗಳಿಗೆ - ಉಪಕಾರ ಮಾಡಲು ಪ್ರತಿಯೊಬ್ಬರೂ ಪಕ್ಷಾತೀತವಾಗಿರಬೇಕು .... ಎಂಬ ಅವರ ಭಾಷಣದ ಅಂತ್ಯದಲ್ಲಿ ತಾನು ಮಾಡಿದ್ದು ತಪ್ಪಾ? ತಪ್ಪು ಅಂತ ಸಭೆ ನಿರ್ದರಿಸಿದರೆ ತಾವು ಮುಂದೆಂದೂ ಗಾಂಧಿ ಮಂದಿರದ ಮೆಟ್ಟಲು ಏರುವುದಿಲ್ಲ ಅಂದಾಗ ಇಡೀ ಸಭೆಯೇ ಪಂಡಿತರ ಪರವಾಗಿ ದೀರ್ಘ ಕರತಾಡನ ಮಾಡಿ ಬೆಂಬಲ ಸೂಚಿಸಿತು, ಹಿರಿಯ ಕಾಂಗ್ರೇಸ್ ಮುಖಂಡರೂ ಪಂಡಿತರ ಬೆಂಬಲಿಸಿದರು ಇದರಿಂದ ಕಾಗೋಡರೂ ಅವರ ಅಪರೂಪದ ಮುಗುಳುನಗೆ ಸೂಸಿ ಪಂಡಿತರ ವಾದ ಒಪ್ಪಿ ಬಿಜೆಪಿಗೆ ಸೇರಿದ್ದ ಶ್ರೀಕಂಠ ದತ್ತ ಒಡೆಯರ್ ಗೆ ಕಾಂಗ್ರೇಸ್ ಪಂಡಿತರು ಮಾಡಿದ ಸಾಷ್ಟಾಂಗ ನಮಸ್ಕಾರದ ವಿಷಯ ಮುಕ್ತಾಯ ಮಾಡಿ ಮುಂದಿನ ವಿಷಯದ ಚರ್ಚೆಗೆ ಹೊರಳಿದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...