Skip to main content

Blog number 1486. ಶಂಭೂರಾಮನ ಡಾಗ್ ಬ್ರೀಥಿಂಗ್ ನಲ್ಲಿ ದೂಮಾವತಾರ ಇದಕ್ಕೆ ವೈಜ್ಞಾನಿಕ ಕಾರಣಗಳು ಇದೆ.


https://youtu.be/vlYqxq-O_4s

#ಚಳಿಗಾಲದಲ್ಲಿ_ನಮ್ಮ_ಉಸಿರು_ಹೊಗೆಯಂತೆ_ಹೊರಬರುವುದು_ಏಕೆ?

#ಬಾಲ್ಯದಲ್ಲಿ_ಈ_ಪ್ರಶ್ನೆಗೆ_ಸ್ಪಷ್ಟ_ಉತ್ತರ_ಸಿಕ್ಕಲೇ_ಇಲ್ಲ

#ನನ್ನ_ಶಂಭೂರಾಮನ_ಉಸಿರಾಟದಲ್ಲಿ_ಈ_ಪ್ರಕ್ರಿಯೆಯ_ವಿಡಿಯೋ_ನೋಡಿ.

#ನಾಯಿಗಳು_ಬೆವರುವುದಿಲ್ಲ_ದೇಹದ_ಉಷ್ಣಾಂಶ_ಡಾಗ್_ಬ್ರೀಥಿಂಗ್_ಮೂಲಕ_ತಂಪಾಗಿಸುವ_ಕ್ರಿಯೆ.

  
 ಮೊನ್ನೆ ಏಪ್ರಿಲ್ 30ನೇ ತಾರೀಖು ಭಾನುವಾರ ಬೆಳಿಗ್ಗೆ ನಾಲ್ಕು ಗಂಟೆಯಿಂದ ಆರು ಗಂಟೆ ವರೆಗೆ ನಮ್ಮ ಊರಲ್ಲಿ ಈ ವರ್ಷದ ಎರಡನೆ ಮಳೆ ಆಗಿತ್ತು.
   ಪ್ರತಿನಿತ್ಯದ ನನ್ನ ಮತ್ತು ಶಂಭೂರಾಮನ ವಾಕಿಂಗ್ ಮಳೆಯಿಂದ ಸ್ವಲ್ಪ ವಿಳಂಭವಾಗಿತ್ತು, ಒಂದು ಗಂಟೆಯ ವಾಕಿಂಗ್ ನಂತರ ಆಯಾಸ ಪರಿಹಾರವಾಗಿ ಶಂಭೂರಾಮ ನನ್ನ ಆಫೀಸಿನ ಹಿಂಬಾಗದ ಬಾಗಿಲಿನ ಮೆಟ್ಟಲಿನ ಮೇಲೆ ಕುಳಿತುಕೊಂಡು ತನ್ನ ನಾಲಿಗೆ ಹೊರ ಹಾಕಿ ಡಾಗ್ ಬ್ರೀಥಿಂಗ್ ನಲ್ಲಿ ತೊಡಗಿದ್ದ ಆಗ ವಾತಾವರಣದಲ್ಲಿ 23 ಡಿಗ್ರಿ ಉಷ್ಣಾಂಶ ಮತ್ತು 86% ತೇವಾಂಶ ಹಾಗೂ ಮಳೆಯ ಸಂಭವ 70% ನನ್ನ ಸೆಲ್ ಫೋನ್ ನ ಆಕ್ಯೂ ವೆದರ್ ಸೂಚಿಸುತ್ತಿತ್ತು.
  ಆಗ ಶಂಭೂ ಹೊರ ಹಾಕುವ ಉಸಿರು ಹೊಗೆಯಂತೆ ವಾತಾವರಣದಲ್ಲಿ ಕರಗುತ್ತಿತ್ತು ಅದರ ವಿಡಿಯೋ ಇಲ್ಲಿದೆ ಬಾಲ್ಯದಲ್ಲಿ ಚಳಿಗಾಲದ ಶನಿವಾರ ಬೆಳ್ಳಂ ಬೆಳಗೆ ಮಾರ್ನಿಂಗ್ ಕ್ಲಾಸ್ ನಲ್ಲಿ ನಮಗೆ ಇದೇ ಆಟ ಅಗುತ್ತಿತ್ತು ಆದರೆ ಇದಕ್ಕೆ ಕಾರಣ ಮಾತ್ರ ಯಾರೂ ವಿವರಿಸುತ್ತಿರಲಿಲ್ಲ.
   ವೈಜ್ಞಾನಿಕವಾಗಿ ನಮ್ಮ ಶ್ವಾಸಕೋಶ ಮತ್ತು ಬಾಯಿಯ ಒಳಗಿರುವ ನೀರಿನ ಕಣಗಳು ಆವಿಯಾಗಿ ಉಸಿರಿನ ಗಾಳಿಯಿಂದ ಹೊರಬಂದಾಗ ವಾತಾವರಣದಲ್ಲಿ ತೇವಾಂಶ ಜಾಸ್ತಿ ಇದ್ದು ತಂಪಾಗಿದ್ದಾಗ ನೀರಿನ ಅಂಶದ ಕಣಗಳು ವಿಭಜನೆ ಆಗಿ ನೀರಿನ ಕಣಗಳಾಗಿ ಘನಿಕೃತವಾಗುವ ಪ್ರಕ್ರಿಯೆಯಿಂದ ಹೊಗೆ-ಮಂಜು ರೂಪ ಪಡೆದು ವಾತಾವರಣದಲ್ಲಿ ಲೀನವಾಗುತ್ತದೆ.
   ನಾಯಿಗಳು ಬೆವರುವುದಿಲ್ಲವಾದ್ದರಿಂದ ಅವುಗಳು ತಮ್ಮ ದೇಹದ ಒಳಗಿನ ಉಷ್ಣಾಂಶ ಸರಿದೂಗಿಸಲು ತನ್ನ ನಾಲಿಗೆ ಹೊರ ಹಾಕಿ ಡಾಗ್ ಬ್ರೀತಿಂಗ್ (ವೇಗದಿಂದ ಉಸಿರು ಸತತವಾಗಿ ಹೊರಹಾಕುವ ಪ್ರಕ್ರಿಯೆ) ಮಾಡುತ್ತದೆ.
   ನನ್ನ ಶಂಭೂರಾಮ ವಾಕಿಂಗ್ ಸಮಯದಲ್ಲಿ ಅವನನ್ನು ಕೆರಳಿಸುವ ಪಕ್ಕದ ಮನೆ ಬೆಕ್ಕುಗಳು, ಪಾರಿವಾಳಗಳು ಅವನನ್ನು ಓಡುವಂತೆ ಮಾಡಿ ಆಯಾಸಗೊಳಿಸುತ್ತವೆ ಅದರಿಂದ ತನ್ನ ದೇಹದಲ್ಲಿ ಹೆಚ್ಚಾಗುವ ಉಷ್ಣಾ೦ಶ ಕಡಿಮೆ ಮಾಡಿಕೊಳ್ಳಲು ದೇವರು ಅವುಗಳಿಗೆ ಸೃಷ್ಟಿಸಿದ ಮಾರ್ಗದಲ್ಲಿ ಡಾಗ್ ಬ್ರೀಥಿಂಗ್ ಮಾಡುವಾಗ ಬೆಳಗಿನ ಮಳೆಯಿಂದ ಹೆಚ್ಚಾದ ವಾತಾವರಣದ ತೇವಾಂಶ ಮತ್ತು ಕಡಿಮೆ ಆದ ಉಷ್ಣಾಂಶದಿಂದ ಶಂಭೂರಾಮನ ಬಾಯಿಂದ ಹೊಗೆ ಉಗುಳಿದಂತೆ ಬಿಳಿ ದೂಮದ ಉಸಿರು ಗೋಚರಿಸುವ ತಮಾಷೆ ದೃಷ್ಯಕಂಡು ಬಂದಿತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...