Skip to main content

Blog number 1484. ಆನಂದಪುರಂ ಇತಿಹಾಸ ಭಾಗ 91. ಡಾಕ್ಟರ್ ಜಿ.ಡಿ. ನಾರಾಯಣಪ್ಪ ಮಾಜಿ ಶಾಸಕರು ಹೊಸನಗರ ಇವರ ತಾಯಿ ತವರು ಮನೆ ಆನಂದಪುರಂ ಹೋಬಳಿ ಖೈರಾ ಗ್ರಾಮ.

#ಆನಂದಪುರಂ_ಇತಿಹಾಸ_ಭಾಗ_91.

#ಭಾರತದ_ಮೊದಲ_ಚುನಾವಣೆ_ಹೇಗಿತ್ತು?

#ಮತದಾರ_ಅಲಂಕೃತ_ಎತ್ತಿನಗಾಡಿಯಲ್ಲಿ_ದೇವರ_ದರ್ಶನಕ್ಕೆ_ಹೋಗುವ೦ತೆ_ಕುಟುಂಬ_ಸಮೇತ_ಹೋಗುತ್ತಿದ್ದರಂತೆ

#ಈಗಿನ_ಚುನಾವಣೆ_ಹೇಗಿದೆ?

#ಸಾಮಾಜಿಕ_ಜಾಲತಾಣದ_ಕಮಾಲ್!

#ಹಣ_ಜಾತಿ_ದರ್ಮ_ಪಕ್ಷಗಳ_ಕಾಪೋ೯ರೇಟ್_ವ್ಯವಹಾರ

#ದೇಶದ_ಮೊದಲ_ಚುನಾವಣೆ_ನೋಡಿದ_ಮಾಜಿ_ಶಾಸಕರಾದ_ಜಿ_ಡಿ_ನಾರಾಯಣಪ್ಪರ_ಅನುಭವ.

#ಇವರ_ತಾಯಿ_ತವರುಮನೆ_ಆನಂದಪುರಂ_ಹೋಬಳಿ_ಆಚಾಪುರ_ಗ್ರಾಮಪಂಚಾಯತನ_ಖೈರಾ .


   ಈ ಬಾರಿಯ 2023ರ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲ ತಾಣದ ಪಾತ್ರವೇ ದೊಡ್ಡದಾಗಿದೆ, ಪ್ರತಿಯೊಬ್ಬ ಅಭ್ಯರ್ಥಿಯ Media creator ಗಳು ಪ್ರಚಾರದ ಪ್ರತಿ ಕ್ಷಣದ ಲೈವ್ ಪೋಸ್ಟ್ ಮಾಡುವುದರಿಂದ ಇಡೀ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ, ಪಲಿತಾಂಶ ಏನಾಗಬಹುದು ಎಂದು ಅಂದಾಜಿಸಬಹುದಾಗಿದೆ.
  ಪತ್ರಕರ್ತರೂ ಬರೆಯುವ ಲೇಖನಿ ಬದಿಗಿಟ್ಟು ಅವರದೇ ಪೇಸ್ ಬುಕ್/ ವೆಬ್ / ಯುಟ್ಯೂಬ್  ಸುದ್ದಿ ಚಾನಲ್ ನ ಮೂಲಕ ಕ್ರಿಯಾಶೀಲರಾಗಿದ್ದಾರೆ, ಕ್ಷಣಮಾತ್ರದಲ್ಲಿ ಇದನ್ನು ಜನತೆಗೆ ತಲುಪಿಸುವ ತಂತ್ರಜ್ಞಾನದ ಕ್ರಾಂತಿ ಮುಂದಿನ ಚುನಾವಣೆಯಲ್ಲಿ ಇನ್ನು ಯಾವ ರೀತಿ ಬದಲಾಗಬಹುದೋ ಗೊತ್ತಿಲ್ಲ.
   ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಮೊದಲ ಸಾರ್ವಜನಿಕ ಚುನಾವಣೆ 1952 ರಲ್ಲಿ ನಡೆದಾಗ ಮತದಾರನ ಪ್ರತಿಕ್ರಿಯೆ ಹೇಗಿತ್ತು ಅಂತ ಹೊಸನಗರ ಕ್ಷೇತ್ರದ ಮಾಜಿ ಶಾಸಕರಾದ ಜಿ.ಡಿ.ನಾರಾಯಣಪ್ಪನವರು ವಿವರಿಸಿದ್ದು ತುಂಬಾ ಕುತೂಹಲವಾಗಿತ್ತು.

  ಜಿ.ಡಿ ನಾರಾಯಣಪ್ಪರ ತಾಯಿ ತವರು ಮನೆ ನಮ್ಮ ಆನಂದಪುರಂ ಹೋಬಳಿಯ ಖೈರಾ ಇವರ ತಂದೆ 1957 ರ ಎರಡನೇ ಚುನಾವಣೆಯಲ್ಲಿ ಆನಂದಪುರ೦ನ ಎ.ಆರ್. ಬದರೀನಾರಾಯಣರನ್ನು ಬೆಂಬಲಿಸುತ್ತಾರೆ ಆ ಚುನಾವಣೆಯಲ್ಲಿ ಜಿ.ಡಿ. ನಾರಾಯಣಪ್ಪನವರು ಬದರೀನಾರಾಯಣರ ಪರವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ.
  ನಂತರ ವೈದ್ಯಕೀಯ ಶಿಕ್ಷಣ ಮಾಡಿ ವೈದ್ಯರಾಗುತ್ತಾರೆ, ಹೊಸನಗರ ತಾಲ್ಲೂಕಿನಲ್ಲಿ ವೈದ್ಯಕೀಯ ವಿದ್ಯಾಬ್ಯಾಸ ಮಾಡಿದ ಮೊದಲ ವೈದ್ಯರು ಇವರು.
   ನಂತರ ಬಂಗಾರಪ್ಪರ ಪತ್ನಿ ತಂಗಿಯನ್ನು ವಿವಾಹವಾಗುತ್ತಾರೆ, ಹೊಸನಗರ ತಾಲ್ಲುಕಿನಿಂದ ಶಾಸಕರೂ ಆಗುತ್ತಾರೆ.
   1952 ರ ಮೊದಲ ಸಾರ್ವತ್ರಿಕ ಚುನಾವಣೆ ಆಗಿನ ದೇಶದ ಪ್ರಜೆಗಳಿಗೆ ಮತದಾನದ ಬಗ್ಗೆ ತುಂಬಾ ಪವಿತ್ರವಾದ ಭಾವನೆ ಇತ್ತಂತೆ, ಮತದಾನಕ್ಕೆ ಹೋಗುವ ಮತದಾರ ದೇವಸ್ಥಾನಕ್ಕೆ ಹೋದಂತೆ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ, ಪೂಜೆ ಮಾಡಿ ಇಡೀ ಕುಟುಂಬ ಮತದಾನ ಕೇಂದ್ರಕ್ಕೆ ಕರೆದೊಯ್ಯಲು ಬಾಳೆ- ಕಬ್ಬು-ಹೂವಿನ ಅಲಂಕಾರ ಮಾಡಿದ ಎತ್ತಿನಗಾಡಿ ಮತ್ತು ಅದನ್ನು ಎಳೆಯಲು ಗೆಜ್ಜೆ -ಗಂಟೆಗಳನ್ನು ಅಲಂಕರಿಸಿದ ಎತ್ತುಗಳನ್ನು ಹೂಡಿ ಸಂಭ್ರಮದಿಂದ ಹೋಗುತ್ತಿದ್ದರಂತೆ.
  ನಂತರ ಕ್ರಮೇಣವಾಗಿ ಮತದಾರನನ್ನು ಹೆಂಡ ಹಂಚುವ ಮೂಲಕ ಸೆಳೆಯುವ ಚುನಾವಣೆ ಈಗ ಒಂದು ಮತಕ್ಕೆ ಇಷ್ಟು ಅಂತ ಎಲ್ಲಾ ಪಕ್ಷಗಳು ಖರೀದಿಸುವಲ್ಲಿಗೆ ಬಂದಿದೆ.
  ಉತ್ತರ ಭಾರತದಲ್ಲಿ ಇಡೀ ಮತ ಕಟ್ಟೆಯನ್ನು ಅಭ್ಯರ್ಥಿಯ ಹಣ ಬಲ - ತೊಳು ಬಲದಿಂದ ವಶಮಾಡಿ ಅವರೇ ಅವರ ಅಭ್ಯರ್ಥಿಯ ಚುನಾವಣಾ ಗುರುತಿಗೆ ಮತ ಹಾಕುವ ರಿಗ್ಗಿಂಗ್ ಕೂಡ ನಡೆಯುತ್ತಿತ್ತು.
  ಈಗ ಡಿಜಿಟಲ್ ಪ್ರಾಪಗಂಡದ ಜೊತೆ ಹಣ - ಜಾತಿ-ದರ್ಮ-ಪಕ್ಷಗಳು ಚುನಾವಣೆ ಎದುರಿಸುತ್ತಿದೆ, ನಿಜವಾದ ಜನ ಸೇವೆ ಪ್ರಾತಿನಿಧ್ಯಗಳ ಜಾಗದಲ್ಲಿ ಕಾರ್ಪೋರೇಟ್ ವಲಯದ ರಾಜಕಾರಣದ ಹಣ ಹಾಕಿ ಹಣಗಳಿಸುವ ಉದ್ಯಮ ನಡೆಯುತ್ತಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ