Skip to main content

Blog number 1493. ಹಠ ಯೋಗಿ ಮತ್ತಿಕೊಪ್ಪ ಹರನಾಥ ರಾಯರು ಹಾಲಿ ಪ್ರತಿಷ್ಟಿತ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನ ಆಡಳಿತ ಮಂಡಳಿ ಎಂ ಡಿ ಎಪ್ ಸಂಸ್ಥೆ ಅಧ್ಯಕ್ಷರು.

https://youtu.be/g9_SxBtJN_U

#ಹರನಾಥರಾವ್_ಮತ್ತಿಕೊಪ್ಪ_ಎಂಬ_ಹಠಯೋಗಿ

#ಸಾಗರದ_ಎಂ ಡಿ ಎಫ್ ಸಂಸ್ಥೆ ಅಧ್ಯಕ್ಷರು

#ನನ್ನ_ಅವರ_ಗೆಳೆತನಕ್ಕೆ_30_ವರ್ಷ

#ನಿನ್ನೆ_ಬಹಳ_ದಿನದ_ನಂತರ_ಬೇಟಿ_ಆಯಿತು.

#ಮಾಜಿಮುಖ್ಯಮಂತ್ರಿ_ಬಂಗಾರಪ್ಪ_ಶಾಸಕ_ಹಾಲಪ್ಪರ_ಗಳಸ್ಯ_ಕಂಠಸ್ಯ_ಸಂಬಂದಕ್ಕೆ_ಕಾರಣ?

#ಚಪ್ಪಲಿ_ಧರಿಸಿದ್ದಕ್ಕೆ_ಅವಮಾನಿಸಿದವರಿಗೆ_ವಿರುದ್ಧವಾಗಿ_ಚಪ್ಪಲಿ_ಧರಿಸದ_ಶಪಥಕ್ಕೆ_ಅರ್ದ_ಶತಮಾನ.

#ಆಪ್ಸ್_ಕೋಸ್_ಹಗರಣಗಳಿಂದ_ಸಂಸ್ಥೆ_ಸರಿದಾರಿಗೆ_ತಂದ_ಮನದಾಳದ_ಮಾತು.

  
  ಮಲೆನಾಡು ಪ್ರಾಂತ್ಯ ಅಂದರೆ ಸಾಗರ - ಹೊಸನಗರ- ಸೊರಬ ತಾಲ್ಲೂಕುಗಳಲ್ಲಿ ಮತ್ತಿಕೊಪ್ಪ ಹರನಾಥ ರಾಯರೆಂದರೆ ಗೊತ್ತಿಲ್ಲದವರು ಇಲ್ಲ, ವಾಮನಾಕೃತಿಯ ಬರಿಗಾಲಲ್ಲಿ ನಡೆಯುವ ಹಠ ಯೋಗಿ ಇವರು.
  ಯೌವನದಲ್ಲಿ ಇವರ ಜಾತಿ ಹವ್ಯಕರ ಸಮಾಜದಲ್ಲಿನ ಯಾರದೋ ಮನೆಯಲ್ಲಿ ಕೌಟುಂಬಿಕ ಕಾರ್ಯಕ್ರಮದಲ್ಲಿ ಇವರು ಚಪ್ಪಲಿ ಧರಿಸಿ ಹೋದಾಗ ಇವರಿಗಾದ ಅವಮಾನದಿಂದ ಇವರು ಜೀವನ ಪರ್ಯಂತ್ ಚಪ್ಪಲಿ ಧರಿಸುವುದಿಲ್ಲ ಎಂಬ ಇವರ ಶಪಥಕ್ಕೆ ಅರ್ಧ ಶತಮಾನವಾಯಿತು.
  ಯಾರಿಂದಲೂ ಏನನ್ನೂ ನಿರೀಕ್ಷಿಸದೆ ತಮ್ಮದೇ ಆದಂತಹ ವಿಶಿಷ್ಟ ರೀತಿಯ ಸಮಾಜ ಸೇವೆ ಇವರದ್ದು ಅದಕ್ಕಾಗಿ ಯಾರನ್ನು ಎದುರು ಹಾಕಿಕೊಂಡರೂ ಎದೆಗುಂದದೆ ಗುರಿ ಮುಟ್ಟಲು ಎಲ್ಲಾ ರೀತಿಯ ಚಾಣಕ್ಷತನ ಮೆರೆಯುವ ಹರನಾಥ ರಾಯರ ಮನೆಯಲ್ಲಿ ಖ್ಯಾತ ಚಲನಚಿತ್ರ ನಟ ರಾಜಕುಮಾರ್, ಬಂಗಾರಪ್ಪ, ಹೆಚ್.ಕೆ ಪಾಟೀಲರಂತಹ ಮಹನೀಯರು ಬಂದು ತಂಗುತ್ತಿದ್ದರೆಂದರೆ...
  ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತರಾದ ಬಂಗಾರಪ್ಪನವರು ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸಾಗರ ತಾಲೂಕಿನ ಸಂಪೂರ್ಣ ಜವಾಬ್ದಾರಿಯನ್ನು ಹರನಾಥರಾಯರು ವಹಿಸಿದ್ದರು ಮತ್ತು ಇಡೀ ಚುನಾವಣೆಯ ಕಾಲಾವಾದಿ ಬಂಗಾರಪ್ಪರ ವಾಸ್ತವ್ಯ ಸಾಗರ ತಾಲ್ಲುಕಿನ ಉಳ್ಳೂರು ಗ್ರಾಮ ಪಂಚಾಯತಿಯ ಮತ್ತಿ ಕೊಪ್ಪದ ಹರನಾಥರ ಮನೆಯೇ ಆಗಿತ್ತು.
 ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನನ್ನ ಮತ್ತು ಕಾಗೋಡು ತಿಮ್ಮಪ್ಪನವರ ಸೈದ್ದಾಂತಿಕ ಬಿನ್ನಾಭಿಪ್ರಾಯ ನೋಡಿದ್ದ ಬಂಗಾರಪ್ಪನವರು ನನ್ನನ್ನು ಅವರ ಚುನಾವಣೆಯಲ್ಲಿ ಬೆಂಬಲಿಸುವಂತೆ ಮತ್ತು ಸಾಗರ ತಾಲ್ಲೂಕಿನಲ್ಲಿ ನನ್ನನ್ನು ರಾಜಕೀಯವಾಗಿ ಬೆಳೆಸುವ ಗಾಡ್ ಪಾದರ್ ಆಗುವ ಅಶ್ವಾಸನೆಯಿಂದ ನಾನು ಮತ್ತು ನನ್ನ ಸಂಘಡಿಗರು ಬಂಗಾರಪ್ಪರ ಪರವಾಗಿ ಹೋಗಿದ್ದೆವು.
   ಹೊಸನಗರದಿಂದ ಸಾಗರದ ಸಭೆಗೆ ಆಗಮಿಸಿದ ಬಂಗಾರಪ್ಪರನ್ನು ಹೆಗ್ಗೋಡಿನ ಸಮೀಪ ನಾವೆಲ್ಲ ಸ್ವಾಗತಿಸಿದಾಗ ನನ್ನನ್ನು ಅವರ ಕಾರಿನಲ್ಲಿ ಸಾಗರದ ಗಾಂಧಿ ಮೈದಾನದ ಸಭೆಗೆ ಬಂಗಾರಪ್ಪನವರು ಕರೆದೊಯ್ದಿದ್ದರು, ಅಲ್ಲಿ ವೇದಿಕೆಗೆ ನನ್ನ ಕೈ ಹಿಡಿದು ಕರೆದೊಯ್ದ ಬಂಗಾರಪ್ಪನವರು ವೇದಿಕೆಯಲ್ಲಿ ನನ್ನ ಕೈ ಹಿಡಿದೆತ್ತಿ ಸಭೆಯಲ್ಲಿ ನನ್ನನ್ನು ಮುಂದಿನ ಸಾಗರದ ನಾಯಕ ಎಂದು ಘೋಷಿಸಿದ್ದರು.
   ಆ ಸಭೆ ನಂತರ ನಮ್ಮ ಊರಾದ  ಆನಂದಪುರಂನ ಸಭೆ ಸಂಜೆ 8 ಕ್ಕೆ ಆನಂದಪುರಂ ಬಸ್ ನಿಲ್ದಾಣದ ಆವರಣದಲ್ಲಿ ಟ್ರಾಕ್ಟರ್ ಟ್ರೇಲರ್ ಮೇಲಿನ ವೇದಿಕೆಯಲ್ಲಿ, ಆ ಬೃಹತ್ ಸಭೆ ನೋಡಿ ಬಂಗಾರಪ್ಪನವರು ತುಂಬಾ ಖುಷಿಯಿಂದ ಚುನಾವಣಾ ವೆಚ್ಚಕ್ಕಾಗಿ ಹಣ ಕಳಿಸುವುದಾಗಿ ಹೇಳಿದಾಗ ನಾನು ನಯವಾಗಿ ನಿರಾಕರಿಸಿದೆ, ಹಾಗಾದರೆ ಚುನಾವಣೆ ಹೇಗೆ ನಡೆಸುತ್ತೀರಿ? ಅಂತ ಅವರು ಪ್ರಶ್ನಿಸಿದಾಗ ನಾನು ಮತ್ತು ನನ್ನ ಗೆಳೆಯರು ಹೇಗೋ ಚುನಾವಣೆ ನಡೆಸುತ್ತೇವೆ ನಮಗೆ ಹಣ ಬೇಡ ಅಂದಿದ್ದೆ ವಾಸ್ತವವಾಗಿ ನನ್ನದು ಹಣವಿಲ್ಲದ ಚುನಾವಣಾ ರಾಜಕೀಯ ಆಗಿತ್ತು.
   ಆ ಸಂದರ್ಭದಲ್ಲಿ ನನ್ನ ನಿರಾಕರಣೆಯ ಮದ್ಯದಲ್ಲಿಯೇ ಹರನಾಥ ರಾಯರು ಅವರ ಸ್ವಂತದ್ದಾದ ಹತ್ತು ಸಾವಿರ ರೂಪಾಯಿ ಒತ್ತಾಯದಿಂದ ನಮ್ಮ ಹೋಬಳಿಯ ಚುನಾವಣಾ ಪ್ರಚಾರ ವೆಚ್ಚವಾಗಿ ಅವರ ವೈಯಕ್ತಿಕ ದೇಣಿಗೆ ನೀಡಿದ್ದರು.
  ಹರನಾಥ ರಾಯರು ಬಂಗಾರಪ್ಪರನ್ನು ಯಾಕೆ ಇಷ್ಟು ಬೆಂಬಲಿಸುತ್ತಾರೆ ಎಂಬ ಪ್ರಶ್ನೆ ಹಾಗೇ ಉಳಿದಿತ್ತು ಮತ್ತು ಹರತಾಳು ಹಾಲಪ್ಪನವರ ಗಳಸ್ಯ ಕಂಠಸ್ಯ ಸಂಬಂದಕ್ಕೆ ಕಾರಣ ಏನು ಎಂಬ ಪ್ರಶ್ನೆ ಹಾಗೇ ಉಳಿದಿತ್ತು.
  ನಿನ್ನೆ ಸಾಗರದ ಪ್ರತಿಷ್ಟಿತ ಲಾಲ್ ಬಹದ್ದೂರು ಶಾಸ್ತ್ರೀ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಹರನಾಥ ರಾಯರು, ಸಾಗರದ ವರದಶ್ರೀ ಲಾಡ್ಜನ ಮಾರಿಕರಾದ ಕವಲಕೋಡು ವೆಂಕಟೇಶ್, ಲಕ್ಷ್ಮೀನಾರಾಯಣ ಬೆಳೆಯೂರು ಮತ್ತು ಹೊಸನಗರ ತಾಲ್ಲೂಕಿನ ಮಡವಳ್ಳಿಯ ಗೌಡರು ಬಂದಾಗ ಅದಕ್ಕೆ ಉತ್ತರ ದೊರೆಯಿತು.
  ಈ ಸಂಸ್ಥೆಯ ಆಡಳಿತ ಮಂಡಳಿ ಸವ೯ ಸದಸ್ಯರ ಸಭೆಯಲ್ಲಿ ಉಪಾದ್ಯಕ್ಷ ಶ್ರೀಪಾದ ನಿಸ್ರಾಣಿ ಮತ್ತು ಕಾಯ೯ದರ್ಶಿ  ಜಗದೀಶ್ ಗೌಡರ ಮೇಲೆ ನಡೆದ ಹಲ್ಲೆಯೇ ಈ ಬಾರಿಯ ಸಾಗರ ವಿಧಾನ ಸಭಾ ಚುನಾವಣೆಯ ಮುಖ್ಯ ವಿಷಯವಾಗಿದೆ.
   ಸಾಗರ ವಾರ್ತಾ ಎ.ಡಿ. ರಾಮಚಂದ್ರ, ಕೆ.ಜಿ. ಶಿವಪ್ಪ, ಹರತಾಳು ಹಾಲಪ್ಪ ಮತ್ತು ಆಗಿನ ಮುಖ್ಯಮಂತ್ರಿ ಬಂಗಾರಪ್ಪರ ಸಹಾಯದಿಂದ ಆಪ್ಸ್ ಕೋಸ್ ಉಳಿಸಿಕೊಂಡ  ಅವರ ಮನದಾಳದ ಉಪಕಾರ ಸ್ಮರಣೆ ಮಾಡಿದ್ದಾರೆ.
  ನಿನ್ನೆ ಅವರು ಬಂದಾಗ ಈ ಪ್ರಶ್ನೆಗೆ ಅವರಿಂದ ಉತ್ತರ ಸಿಕ್ಕಿತು ಈ ಯೂಟ್ಯೂಬ್ ನಲ್ಲಿ ಅವರ ಉತ್ತರವಿದೆ ನೋಡಿ.

#ನಾಳಿನ_ಭಾಗದಲ್ಲಿ_ಹರತಾಳುಹಾಲಪ್ಪ_ಗೋಪಾಲಕೃಷ್ಣಬೇಳೂರು_ದಿವಾಕರ್_ವಕೀಲರು_ಬಗ್ಗೆ
#ಮತ್ತುಸಾಗರದ_ಲಾಲ್_ಬಹದ್ದೂರ್_ಕಾಲೇಜಿನಲ್ಲಿ_ಶ್ರೀಪಾದ_ನಿಸ್ರಾಣಿ_ಅವರ_ಮೇಲೆ_ನಡೆದ_ಹಲ್ಲೆಯ_ಪರಿಣಾಮದ_ಬಗ್ಗೆ
#ಹರನಾಥರ_ಅಭಿಪ್ರಾಯ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ