Skip to main content

Blog number 1493. ಹಠ ಯೋಗಿ ಮತ್ತಿಕೊಪ್ಪ ಹರನಾಥ ರಾಯರು ಹಾಲಿ ಪ್ರತಿಷ್ಟಿತ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನ ಆಡಳಿತ ಮಂಡಳಿ ಎಂ ಡಿ ಎಪ್ ಸಂಸ್ಥೆ ಅಧ್ಯಕ್ಷರು.

https://youtu.be/g9_SxBtJN_U

#ಹರನಾಥರಾವ್_ಮತ್ತಿಕೊಪ್ಪ_ಎಂಬ_ಹಠಯೋಗಿ

#ಸಾಗರದ_ಎಂ ಡಿ ಎಫ್ ಸಂಸ್ಥೆ ಅಧ್ಯಕ್ಷರು

#ನನ್ನ_ಅವರ_ಗೆಳೆತನಕ್ಕೆ_30_ವರ್ಷ

#ನಿನ್ನೆ_ಬಹಳ_ದಿನದ_ನಂತರ_ಬೇಟಿ_ಆಯಿತು.

#ಮಾಜಿಮುಖ್ಯಮಂತ್ರಿ_ಬಂಗಾರಪ್ಪ_ಶಾಸಕ_ಹಾಲಪ್ಪರ_ಗಳಸ್ಯ_ಕಂಠಸ್ಯ_ಸಂಬಂದಕ್ಕೆ_ಕಾರಣ?

#ಚಪ್ಪಲಿ_ಧರಿಸಿದ್ದಕ್ಕೆ_ಅವಮಾನಿಸಿದವರಿಗೆ_ವಿರುದ್ಧವಾಗಿ_ಚಪ್ಪಲಿ_ಧರಿಸದ_ಶಪಥಕ್ಕೆ_ಅರ್ದ_ಶತಮಾನ.

#ಆಪ್ಸ್_ಕೋಸ್_ಹಗರಣಗಳಿಂದ_ಸಂಸ್ಥೆ_ಸರಿದಾರಿಗೆ_ತಂದ_ಮನದಾಳದ_ಮಾತು.

  
  ಮಲೆನಾಡು ಪ್ರಾಂತ್ಯ ಅಂದರೆ ಸಾಗರ - ಹೊಸನಗರ- ಸೊರಬ ತಾಲ್ಲೂಕುಗಳಲ್ಲಿ ಮತ್ತಿಕೊಪ್ಪ ಹರನಾಥ ರಾಯರೆಂದರೆ ಗೊತ್ತಿಲ್ಲದವರು ಇಲ್ಲ, ವಾಮನಾಕೃತಿಯ ಬರಿಗಾಲಲ್ಲಿ ನಡೆಯುವ ಹಠ ಯೋಗಿ ಇವರು.
  ಯೌವನದಲ್ಲಿ ಇವರ ಜಾತಿ ಹವ್ಯಕರ ಸಮಾಜದಲ್ಲಿನ ಯಾರದೋ ಮನೆಯಲ್ಲಿ ಕೌಟುಂಬಿಕ ಕಾರ್ಯಕ್ರಮದಲ್ಲಿ ಇವರು ಚಪ್ಪಲಿ ಧರಿಸಿ ಹೋದಾಗ ಇವರಿಗಾದ ಅವಮಾನದಿಂದ ಇವರು ಜೀವನ ಪರ್ಯಂತ್ ಚಪ್ಪಲಿ ಧರಿಸುವುದಿಲ್ಲ ಎಂಬ ಇವರ ಶಪಥಕ್ಕೆ ಅರ್ಧ ಶತಮಾನವಾಯಿತು.
  ಯಾರಿಂದಲೂ ಏನನ್ನೂ ನಿರೀಕ್ಷಿಸದೆ ತಮ್ಮದೇ ಆದಂತಹ ವಿಶಿಷ್ಟ ರೀತಿಯ ಸಮಾಜ ಸೇವೆ ಇವರದ್ದು ಅದಕ್ಕಾಗಿ ಯಾರನ್ನು ಎದುರು ಹಾಕಿಕೊಂಡರೂ ಎದೆಗುಂದದೆ ಗುರಿ ಮುಟ್ಟಲು ಎಲ್ಲಾ ರೀತಿಯ ಚಾಣಕ್ಷತನ ಮೆರೆಯುವ ಹರನಾಥ ರಾಯರ ಮನೆಯಲ್ಲಿ ಖ್ಯಾತ ಚಲನಚಿತ್ರ ನಟ ರಾಜಕುಮಾರ್, ಬಂಗಾರಪ್ಪ, ಹೆಚ್.ಕೆ ಪಾಟೀಲರಂತಹ ಮಹನೀಯರು ಬಂದು ತಂಗುತ್ತಿದ್ದರೆಂದರೆ...
  ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತರಾದ ಬಂಗಾರಪ್ಪನವರು ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸಾಗರ ತಾಲೂಕಿನ ಸಂಪೂರ್ಣ ಜವಾಬ್ದಾರಿಯನ್ನು ಹರನಾಥರಾಯರು ವಹಿಸಿದ್ದರು ಮತ್ತು ಇಡೀ ಚುನಾವಣೆಯ ಕಾಲಾವಾದಿ ಬಂಗಾರಪ್ಪರ ವಾಸ್ತವ್ಯ ಸಾಗರ ತಾಲ್ಲುಕಿನ ಉಳ್ಳೂರು ಗ್ರಾಮ ಪಂಚಾಯತಿಯ ಮತ್ತಿ ಕೊಪ್ಪದ ಹರನಾಥರ ಮನೆಯೇ ಆಗಿತ್ತು.
 ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನನ್ನ ಮತ್ತು ಕಾಗೋಡು ತಿಮ್ಮಪ್ಪನವರ ಸೈದ್ದಾಂತಿಕ ಬಿನ್ನಾಭಿಪ್ರಾಯ ನೋಡಿದ್ದ ಬಂಗಾರಪ್ಪನವರು ನನ್ನನ್ನು ಅವರ ಚುನಾವಣೆಯಲ್ಲಿ ಬೆಂಬಲಿಸುವಂತೆ ಮತ್ತು ಸಾಗರ ತಾಲ್ಲೂಕಿನಲ್ಲಿ ನನ್ನನ್ನು ರಾಜಕೀಯವಾಗಿ ಬೆಳೆಸುವ ಗಾಡ್ ಪಾದರ್ ಆಗುವ ಅಶ್ವಾಸನೆಯಿಂದ ನಾನು ಮತ್ತು ನನ್ನ ಸಂಘಡಿಗರು ಬಂಗಾರಪ್ಪರ ಪರವಾಗಿ ಹೋಗಿದ್ದೆವು.
   ಹೊಸನಗರದಿಂದ ಸಾಗರದ ಸಭೆಗೆ ಆಗಮಿಸಿದ ಬಂಗಾರಪ್ಪರನ್ನು ಹೆಗ್ಗೋಡಿನ ಸಮೀಪ ನಾವೆಲ್ಲ ಸ್ವಾಗತಿಸಿದಾಗ ನನ್ನನ್ನು ಅವರ ಕಾರಿನಲ್ಲಿ ಸಾಗರದ ಗಾಂಧಿ ಮೈದಾನದ ಸಭೆಗೆ ಬಂಗಾರಪ್ಪನವರು ಕರೆದೊಯ್ದಿದ್ದರು, ಅಲ್ಲಿ ವೇದಿಕೆಗೆ ನನ್ನ ಕೈ ಹಿಡಿದು ಕರೆದೊಯ್ದ ಬಂಗಾರಪ್ಪನವರು ವೇದಿಕೆಯಲ್ಲಿ ನನ್ನ ಕೈ ಹಿಡಿದೆತ್ತಿ ಸಭೆಯಲ್ಲಿ ನನ್ನನ್ನು ಮುಂದಿನ ಸಾಗರದ ನಾಯಕ ಎಂದು ಘೋಷಿಸಿದ್ದರು.
   ಆ ಸಭೆ ನಂತರ ನಮ್ಮ ಊರಾದ  ಆನಂದಪುರಂನ ಸಭೆ ಸಂಜೆ 8 ಕ್ಕೆ ಆನಂದಪುರಂ ಬಸ್ ನಿಲ್ದಾಣದ ಆವರಣದಲ್ಲಿ ಟ್ರಾಕ್ಟರ್ ಟ್ರೇಲರ್ ಮೇಲಿನ ವೇದಿಕೆಯಲ್ಲಿ, ಆ ಬೃಹತ್ ಸಭೆ ನೋಡಿ ಬಂಗಾರಪ್ಪನವರು ತುಂಬಾ ಖುಷಿಯಿಂದ ಚುನಾವಣಾ ವೆಚ್ಚಕ್ಕಾಗಿ ಹಣ ಕಳಿಸುವುದಾಗಿ ಹೇಳಿದಾಗ ನಾನು ನಯವಾಗಿ ನಿರಾಕರಿಸಿದೆ, ಹಾಗಾದರೆ ಚುನಾವಣೆ ಹೇಗೆ ನಡೆಸುತ್ತೀರಿ? ಅಂತ ಅವರು ಪ್ರಶ್ನಿಸಿದಾಗ ನಾನು ಮತ್ತು ನನ್ನ ಗೆಳೆಯರು ಹೇಗೋ ಚುನಾವಣೆ ನಡೆಸುತ್ತೇವೆ ನಮಗೆ ಹಣ ಬೇಡ ಅಂದಿದ್ದೆ ವಾಸ್ತವವಾಗಿ ನನ್ನದು ಹಣವಿಲ್ಲದ ಚುನಾವಣಾ ರಾಜಕೀಯ ಆಗಿತ್ತು.
   ಆ ಸಂದರ್ಭದಲ್ಲಿ ನನ್ನ ನಿರಾಕರಣೆಯ ಮದ್ಯದಲ್ಲಿಯೇ ಹರನಾಥ ರಾಯರು ಅವರ ಸ್ವಂತದ್ದಾದ ಹತ್ತು ಸಾವಿರ ರೂಪಾಯಿ ಒತ್ತಾಯದಿಂದ ನಮ್ಮ ಹೋಬಳಿಯ ಚುನಾವಣಾ ಪ್ರಚಾರ ವೆಚ್ಚವಾಗಿ ಅವರ ವೈಯಕ್ತಿಕ ದೇಣಿಗೆ ನೀಡಿದ್ದರು.
  ಹರನಾಥ ರಾಯರು ಬಂಗಾರಪ್ಪರನ್ನು ಯಾಕೆ ಇಷ್ಟು ಬೆಂಬಲಿಸುತ್ತಾರೆ ಎಂಬ ಪ್ರಶ್ನೆ ಹಾಗೇ ಉಳಿದಿತ್ತು ಮತ್ತು ಹರತಾಳು ಹಾಲಪ್ಪನವರ ಗಳಸ್ಯ ಕಂಠಸ್ಯ ಸಂಬಂದಕ್ಕೆ ಕಾರಣ ಏನು ಎಂಬ ಪ್ರಶ್ನೆ ಹಾಗೇ ಉಳಿದಿತ್ತು.
  ನಿನ್ನೆ ಸಾಗರದ ಪ್ರತಿಷ್ಟಿತ ಲಾಲ್ ಬಹದ್ದೂರು ಶಾಸ್ತ್ರೀ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಹರನಾಥ ರಾಯರು, ಸಾಗರದ ವರದಶ್ರೀ ಲಾಡ್ಜನ ಮಾರಿಕರಾದ ಕವಲಕೋಡು ವೆಂಕಟೇಶ್, ಲಕ್ಷ್ಮೀನಾರಾಯಣ ಬೆಳೆಯೂರು ಮತ್ತು ಹೊಸನಗರ ತಾಲ್ಲೂಕಿನ ಮಡವಳ್ಳಿಯ ಗೌಡರು ಬಂದಾಗ ಅದಕ್ಕೆ ಉತ್ತರ ದೊರೆಯಿತು.
  ಈ ಸಂಸ್ಥೆಯ ಆಡಳಿತ ಮಂಡಳಿ ಸವ೯ ಸದಸ್ಯರ ಸಭೆಯಲ್ಲಿ ಉಪಾದ್ಯಕ್ಷ ಶ್ರೀಪಾದ ನಿಸ್ರಾಣಿ ಮತ್ತು ಕಾಯ೯ದರ್ಶಿ  ಜಗದೀಶ್ ಗೌಡರ ಮೇಲೆ ನಡೆದ ಹಲ್ಲೆಯೇ ಈ ಬಾರಿಯ ಸಾಗರ ವಿಧಾನ ಸಭಾ ಚುನಾವಣೆಯ ಮುಖ್ಯ ವಿಷಯವಾಗಿದೆ.
   ಸಾಗರ ವಾರ್ತಾ ಎ.ಡಿ. ರಾಮಚಂದ್ರ, ಕೆ.ಜಿ. ಶಿವಪ್ಪ, ಹರತಾಳು ಹಾಲಪ್ಪ ಮತ್ತು ಆಗಿನ ಮುಖ್ಯಮಂತ್ರಿ ಬಂಗಾರಪ್ಪರ ಸಹಾಯದಿಂದ ಆಪ್ಸ್ ಕೋಸ್ ಉಳಿಸಿಕೊಂಡ  ಅವರ ಮನದಾಳದ ಉಪಕಾರ ಸ್ಮರಣೆ ಮಾಡಿದ್ದಾರೆ.
  ನಿನ್ನೆ ಅವರು ಬಂದಾಗ ಈ ಪ್ರಶ್ನೆಗೆ ಅವರಿಂದ ಉತ್ತರ ಸಿಕ್ಕಿತು ಈ ಯೂಟ್ಯೂಬ್ ನಲ್ಲಿ ಅವರ ಉತ್ತರವಿದೆ ನೋಡಿ.

#ನಾಳಿನ_ಭಾಗದಲ್ಲಿ_ಹರತಾಳುಹಾಲಪ್ಪ_ಗೋಪಾಲಕೃಷ್ಣಬೇಳೂರು_ದಿವಾಕರ್_ವಕೀಲರು_ಬಗ್ಗೆ
#ಮತ್ತುಸಾಗರದ_ಲಾಲ್_ಬಹದ್ದೂರ್_ಕಾಲೇಜಿನಲ್ಲಿ_ಶ್ರೀಪಾದ_ನಿಸ್ರಾಣಿ_ಅವರ_ಮೇಲೆ_ನಡೆದ_ಹಲ್ಲೆಯ_ಪರಿಣಾಮದ_ಬಗ್ಗೆ
#ಹರನಾಥರ_ಅಭಿಪ್ರಾಯ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...