Skip to main content

Blog number 1499. ವಿದಾನ ಸಭಾ ಚುನಾವಣಾ ಪ್ರಚಾರ ಸಭೆಗೆ ಶಿವಮೊಗ್ಗದ ಅಯನೂರಿಗೆ ಆಗಮಿಸಲಿರುವ ಪ್ರದಾನಿ ಮೋದಿ.

#ಕಳೆದ_2018ರ_ವಿಧಾನಸಭಾ_ಚುನಾವಣೆಯಲ್ಲಿ_ಶಿವಮೊಗ್ಗದಲ್ಲಿ_ಮೋದಿ_ಪ್ರಚಾರ_ಸಭೆ.

#ಪ್ರದಾನಿ_ಅವತ್ತು_ಜಿಲ್ಲೆಯ_ಅವರ_ಪಕ್ಷದ_ಅಭ್ಯರ್ಥಿಗಳನ್ನು_ಪರಿಚಯ_ಮಾಡಲಿಲ್ಲದ_ಬೇಸರ_ಅಭ್ಯರ್ಥಿಗಳಿಗಾಗಿತ್ತು.

#ಆ_ಚುನಾವಣೆಯಲ್ಲಿ_ಜಿಲ್ಲೆಯಿಂದ_ಆರು_ಶಾಸಕರು_ಆಯ್ಕೆ

#ಈ_ಬಾರಿಯ_2023ರ_ವಿಧಾನಸಭಾ_ಚುನಾವಣಾ_ಪ್ರಚಾರ_ಸಭೆ_ನಾಳೆ_ಅಯನೂರಿನಲ್ಲಿ (7-ಮೇ -2023)

#ಈ_ಭಾರಿ_ಬಿಜೆಪಿಯಿಂದ_ಎಷ್ಟು_ಶಾಸಕರು_ಆಯ್ಕೆ_ಆಗಬಹುದು?

#ಈ_ಬಾರಿಯ_ಜಿಲ್ಲೆಯ_ಬಿರುಬೇಸಿಗೆಯಲ್ಲಿ_ಪ್ರದಾನಿ_ಪ್ರಚಾರ_ಸಭೆಯಲ್ಲಿ_ಸಬಿಕರಿಗೆ_ನೀರಿನ_ಬಾಟಲಿಗೆ_ಅವಕಾಶವಿಲ್ಲ.

#ಈ_ಭಾರಿ_ಅವರ_ಪಕ್ಷದ_ಅಭ್ಯರ್ಥಿಗಳನ್ನು_ಪ್ರತ್ಯೇಕವಾಗಿ
#ಸಬೆಗೆ_ಪರಿಚಯಿಸಿ_ಮೋದಿ_ಮತ_ಕೇಳುತ್ತಾರಾ?

#ಶಿವಮೊಗ್ಗ_ಜಿಲ್ಲೆಯ_ಕಾಗೋಡು_ರೈತ_ಹೋರಾಟ_ದಲಿತ_ಹೋರಾಟ_ರೈತ_ಹೋರಾಟಗಳ_ಬಗ್ಗೆ
#ಈ_ಬಾರಿ_ಪ್ರದಾನಿಗೆ_ಮಾಹಿತಿ_ನೀಡುತ್ತಾರ?

#ಜಿಲ್ಲೆಯ_ಅರಣ್ಯಭೂಮಿ_ಬಗರ್_ಹುಕುಂ_ಶರಾವತಿ_ಮುಳುಗಡೆ_ಸಂತ್ರಸ್ಥರ_ಸಮಸ್ಯೆ
#ಹಂದಿಗೋಡು_ನಿಗೂಡ_ಕಾಯಿಲೆ_ಮಂಗನಕಾಯಿಲೆ_ಅಡಿಕೆ_ರೋಗ_ಬಾದೆ_ವಿದೇಶಿ_ಅಡಿಕೆ_ರಬ್ಬರ್_ಆಮದು_ನಿಷೇದಿಸುವ_ಬಗ್ಗೆ
#ಪ್ರದಾನಿಗೆ_ಅಭ್ಯರ್ಥಿಗಳು_ಮನವಿ_ನೀಡುವ_ದೈರ್ಯ_ತೋರುವರಾ ?


  2018ರ ಚುನಾವಣಾ ಪ್ರಚಾರಸಭೆಗೆ ಶಿವಮೊಗ್ಗಕ್ಕೆ ಪ್ರದಾನಿ ಮೋದಿ ಬರುತ್ತಾರೆಂಬ ವಿಷಯವೇ ದೊಡ್ಡ ಸಂಭ್ರಮ ಸಡಗರ ಸುದ್ದಿ ಆಗಿತ್ತು ನನ್ನ ನೆನಪು ಸರಿ ಇದ್ದರೆ ಈ ಪ್ರಚಾರ ಸಭೆ ದಿನಾಂಕ 6- ಮೇ -2018 ಇರಬಹುದು, ನಾಳೆ 7-ಮೇ -2023 ರ ಭಾನುವಾರ ಶಿವಮೊಗ್ಗ ಜಿಲ್ಲೆಯ ಅಯನೂರಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯ ಪ್ರದಾನಿಗಳ ಚುನಾವಣಾ ಪ್ರಚಾರ ಸಭೆ ವ್ಯವಸ್ಥೆ ಆಗಿದೆ.
   ಈ ಬಿರು ಬೇಸಿಗೆಯ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ತಾಪಮಾನ ಹಿಂದಿನ ಎಲ್ಲಾ ವರ್ಷಕ್ಕಿಂತ ಹೆಚ್ಚು ಆದರೆ ಪ್ರದಾನಿ ಪ್ರಚಾರ ಸಭೆಗೆ ಮೊಬೈಲ್ ಫೋನ್ ಒಯ್ಯಬಹುದಂತೆ ಆದರೆ ನೀರಿನ ಬಾಟಲ್ ಮಾತ್ರ ಯಾವ ಕಾರಣಕ್ಕೂ ಪ್ರವೇಶ ಇಲ್ಲವಂತೆ ಇದ್ಯಾವ ಸೆಕ್ಯುರಿಟಿ ಮುಂಜಾಗೃತೆ ಗೊತ್ತಿಲ್ಲ.
  ಎರೆಡು ತಿಂಗಳ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಲ್ಲೂ ನೀರಿನ ಬಾಟಲ್ ಒಯ್ಯುವಂತೆ ಇರಲಿಲ್ಲ ಅಲ್ಲಿ ಒಳಗಡೆ ದೊಡ್ಡ ಪ್ರಮಾಣದ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದೆ ಸಭಿಕರು ಹೈರಾಣಾಗಿದ್ದರು.
  ಕಳೆದ ವಿದಾನ ಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವತ್ತಿನ ಅವರ ಭಾಷಣದಲ್ಲಿ ಹೈಲೈಟ್ ಆದ ಜೋಗ ಜಲಪಾತ, ಶಾಂತವೇರಿ ಗೋಪಾಲಗೌಡ, ಕುವೆಂಪು, ಕೆಳದಿ ಅರಸರು, ಶರಾವತಿ ನದಿಗೆ ತುಮರಿ ಸೇತುವೆ, ತುಂಗಾ ಪಾನ, ಸಂಸ್ಕೃತ ಗ್ರಾಮ ಮತ್ತೂರುಗಳ ಜೊತೆ ಜಿಲ್ಲೆಯ ಶಾಪವಾದ ಮಂಗನ ಕಾಯಿಲೆ, ಔಷದಿಯೇ ಕಂಡು ಹಿಡಿಯದ ಹಂದಿಗೋಡು ಕಾಯಿಲೆ, ಜಿಲ್ಲೆಯಲ್ಲಿ ಹುಟ್ಟಿದ ರೈತ -ದಲಿತ ಚಳವಳಿ, ಕಾಗೋಡು ರೈತ ಹೋರಾಟಗಳ ಮಾಹಿತಿ ಬಹುಶಃ ಪ್ರದಾನಿಗಳಿಗೆ ಗೊತ್ತೇ ಇರಲಿಲ್ಲ ಅವುಗಳ ಉಲ್ಲೇಖವಿಲ್ಲದ ಅವರ ಭಾಷಣದಲ್ಲಿ ಇದು ದೊಡ್ಡ ಕೊರತೆ ಅನ್ನಿಸಿತ್ತು.
  ಚುನಾವಣಾ ಪ್ರಚಾರ ಸಭೆಯಲ್ಲಿ ಉಪಸ್ಥಿತರಿದ್ದ ಅವರ ಪಕ್ಷದ ಅಭ್ಯರ್ಥಿಗಳ ಹೆಸರು ಕ್ಷೇತ್ರಗಳನ್ನು ಪ್ರದಾನಿಗಳು ಉಚ್ಚರಿಸದೇ ಇದ್ದದ್ದು ಅವತ್ತು ಅಭ್ಯರ್ಥಿಗಳಿಗೆ ಬಿಸಿ ತುಪ್ಪ ಆಗಿತ್ತು.
   ಆ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು ಭದ್ರಾವತಿಯಲ್ಲಿ ಮಾತ್ರ ಕಾಂಗ್ರೇಸ್ ನ ಸಂಗಮೇಶ್ವರ್ ಗೆದ್ದಿದ್ದರು, ಕಾಂಗ್ರೇಸ್ ಪಕ್ಷದ ಅಧಿಕಾರದಲ್ಲಿ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಸೋತಿದ್ದರು.
  ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ.ಅಭ್ಯರ್ಥಿಗಳಾಗಿದ್ದ ಯಡೂರಪ್ಪ ಮತ್ತು ಈಶ್ವರಪ್ಪರಿಗೆ ಈ ಬಾರಿ ಟಿಕೇಟು ನಿರಾಕರಿಸಲಾಗಿದೆ
   ಪ್ರದಾನಿಗಳ ಶಿವಮೊಗ್ಗ ಜಿಲ್ಲೆಯ ಎರಡನೇ ವಿಧಾನಸಭಾ ಚುನಾವಣೆ ಈ ಹಿಂದಿನಂತೆ ಉತ್ಸವ ಸಡಗರ ಸಂಭ್ರಮ ಕಾಣುತ್ತಿಲ್ಲ, ಆಡಳಿತ ವಿರೋಧಿ ಅಲೆಯಲ್ಲಿ ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರದಲ್ಲಿ ಸಮೀಕ್ಷೆಗಳು ಬಿಜೆಪಿಗೆ 2, ಜೆಡಿಎಸ್ 2 ಮತ್ತು ಕಾಂಗ್ರೇಸ್ 3 ಎನ್ನುತ್ತಿದೆ ಈ ಚಿತ್ರಣ ಪ್ರದಾನಿಗಳ ಬೇಟಿಯಿಂದ ಬದಲಾದೀತೆಂಬ ನಿರೀಕ್ಷೆ ಆ ಪಕ್ಷದಲ್ಲಿದೆ.
   ಜಿಲ್ಲೆಯ ವಿಧಾನ ಸಭಾ ಬಿಜೆಪಿ ಅಭ್ಯರ್ಥಿಗಳಲ್ಲಿ ನನ್ನ ಸವಿನಯ ವಿನಂತಿ ಏನೆಂದರೆ ನೀವೆಲ್ಲರೂ ಸೇರಿ ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಶರಾವತಿ ಸಂತ್ರಸ್ಥರ ಭೂ ಸಮಸ್ಯೆ, ಬಗರ್ ಹುಕುಂ ರೈತರ ಅರಣ್ಯ ಭೂಮಿ ಒತ್ತುವರಿ, ಅಡಿಕೆ ಬೆಳೆಯ ರೋಗ, ವಿದೇಶಿ ಅಡಿಕೆ - ರಬ್ಬರ್‌ ಆಮದು ನಿಷೇದ, ಔಷದಿಯೇ ಕಂಡು ಹಿಡಿಯದ ಹಂದಿಗೋಡು ನಿಗೂಡ ಕಾಯಿಲೆ, ಮಂಗನ ಕಾಯಿಲೆಗಳ ಬಗ್ಗೆ ಪ್ರದಾನಿಗಳಿಗೆ ಒಂದು ಮನವಿ ನೀಡುವ ದೈರ್ಯ ಮಾಡಬಾರದೇಕೆ ?.
  2018ರ ಪ್ರದಾನಿ ಪ್ರಚಾರ ಸಭೆಯ ಬಗ್ಗೆ ನನ್ನ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ https://arunprasadhombuja.blogspot.com/2023/05/blog-number-1498-2018-6-2018.html

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ