Skip to main content

Blog number 1543. ತುಂಬೆ ಸುಬ್ರಾಯರು ಸಾಗರ ತಾಲ್ಲೂಕಿನ ಕಟ್ಟಾ ಕಾಂಗ್ರೇಸ್ ಮುಖಂಡರು, ಅಡಿಕೆ ಬೆಳೆ ಮೌಲ್ಯವರ್ಧನೆಗೆ ಕಾರಣಕರ್ತರು, ಹವ್ಯಕ ಬ್ರಾಹ್ಮಣ ಮುಖಂಡರು ಅವರ ಬಗ್ಗೆ ಜಿಗಳೆಮನೆ ಗಣಪತಿ ಭಟ್ ಅವರ ನೆನಪಿನ ಲೇಖನ ಓದಿ

#ನನ್ನ_ಲೇಖನ_ಸರಣಿ_ಭಾಗ_20_ರ_ಪರಿಣಾಮ
#ಬದರಿನಾರಾಯಣ್_ಅಯ್ಯಂಗಾರ್_ಆದರಿಸಿದ_ಸರಣಿ .


ತುಂಬೆ ಸುಬ್ರಾಯರೆಂಬ ಉಕ್ಕಿನ ಮನುಷ್ಯ, ಸ್ಥಳಿಯರ ನ್ಯಾಯ ಪಂಚಾಯಿತಿದಾರರು, ಕೈ ಬಾಯಿ ಸ್ವಚ್ಚವಾಗಿಟ್ಟುಕೊಂಡ, ಸಿದ್ಧಾಂತಕ್ಕೆ ತಕ್ಕನಾಗಿ ಬಾಳಿ ಬದುಕಿದ ಅವರು ಬದರಿನಾರಾಯಣ ಅಯ್ಯಂಗಾರರ ಜೀವದ ಗೆಳೆಯರಾಗಿದ್ದರು.
  ಈ ಲೇಖನ ಓದಿ ಒಂದು ಕಾಲದ ಆರ್.ಎಸ್.ಎಸ್. ಪೂರ್ಣಾವಧಿ ಕಾರ್ಯಕತ೯ರಾಗಿದ್ದ, ಬರಹಗಾರ ಚಿಂತಕ ಮತ್ತು ತಮ್ಮ ಸ್ವಜಾತಿ ಮಠದ ಅನ್ಯಾಯದ ವಿರುದ್ದ ಸಮರ ಸಾರಿ ಜೈಲು ವಾಸ ಆದರೂ ಇನ್ನೂ ಹೆಚ್ಚಿನ ಧ್ವನಿ ಎತ್ತಿರುವ ಜಿಗಳೆ ಮನೆ ಗಣಪತಿ ಭಟ್ಟರು ಬರೆದ ಈ ಲೇಖನ ಮತ್ತು ಈ ಲೇಖನ ಬರೆಯಲು ನನ್ನ ಸರಣಿ ಲೇಖನ ಕಾರಣ ಅಂದಿದ್ದಾರೆ.
  ಅವರ ಊರ ಶಾಲಾ ಕಾಯ೯ಕ್ರಮದಲ್ಲಿ ತುಂಬೆ ಸುಬ್ರಾಯರು ತನ್ನ 3 ಶಪಥ ಉಲ್ಲೇಖಿಸಿ ಭಾಷಣ ಮಾಡಿದಾಗ ಮೊದಲನೆಯದ್ದೇ ಬದರಿನಾರಾಯಣರನ್ನು ಮಂತ್ರಿ ಮಾಡುವುದು, ಎರಡನೆಯದ್ದು ಯಡ ಜಿಗಳೆ ಮನೆಗೆ ಪ್ರೌಡ ಶಾಲೆ, ಹಕ್ಕರೆ ತನಕ ಸುಸಜ್ಜಿತ ರಸ್ತೆ ಅಂದಿದ್ದನ್ನು ನೆನಪಿಸಿದ್ದಾರೆ ಅವರ 3 ಶಪಥವೂ ಈಡೇರಿದೆ.
  ಸೋಷಿಯಲ್ ಮೀಡಿಯಾದಿಂದ ಏನೆಲ್ಲ ಪರಸ್ಪರ ವಿಚಾರ ವಿನಿಮಯ ಸಾಧ್ಯ ಎಂಬುದಕ್ಕೆ ಇದೊಂದು ಉದಾಹರಣೆ ಮತ್ತು ಅಚ್ಚರಿ ಕೊಡ.
https://arunprasadhombuja.blogspot.com/2021/05/20.html

ಜಿಗಳೆಮನೆ ಗಣಪತಿ ಭಟ್ಟರ ಲೇಖನ : -
ಸಾಗರದಲ್ಲೊಂದು ಮೆಡಿಕಲ್ ಅಥವಾ ಕನಿಷ್ಠ ಇಂಜಿನಿಯರಿಂಗ್ ಕಾಲೇಜನ್ನಾದರೂ ಸ್ಥಾಪಿಸಬೇಕೆಂಬ ದೂರದರ್ಶಿತ್ವದಿಂದ ಚಿಂತಿಸಿ‌ ತುಂಭೆ ಆರ್ ಸುಬ್ರಾವ್ ಆವರು ಮಠದ ಹೆಸರಿನಲ್ಲಿ ಸಾಗರದ ಕಾಲೇಜಿನ ಹತ್ತಿರ‌  ಎಂಟುಜನರೊಡನೆ ತಮ್ಮದೊಂದು ಪಾಲು ಹಣ ಹಾಕಿ ಜಮೀನು ಕೊಂಡಿಟ್ಟರು.

ಆವರು ಆ ಕಾಲದಲ್ಲಿ ಮೂರು ಸಂಕಲ್ಪ ಮಾಡಿದ್ದನ್ನು  ಮಾಧ್ಯಮಿಕ ಶಾಲಾ ಕಾರ್ಯಕ್ರಮ ದಲ್ಲಿ ಭಾಷಣ ಮಾಡುವಾಗ ಹೇಳಿದ್ದರು.ಎ ಆರ್ ಬದರಿನಾರಾಯಣ ಅವರನ್ನು ಮಂತ್ರಿ ಮಾಡುವುದು, ಯಡಜಿಗಳೇಮನೆಯಲ್ಲಿ ಒಂದು ಪ್ರೌಡ ಶಾಲೆ ಸ್ಥಾಪಿಸುವುದು, ಸಾಗರದಿಂದ ತುಂಭೆ ಯವರೆಗೆ ಒಂದು ಒಳ್ಳೆಯ ರಸ್ತೆ ಮಾಡಿಸುವುದು. ಅವರು ಈ ಎಲ್ಲಾ ಸಂಕಲ್ಪ ಪೂರೈಸಿದ್ದರು.ಅಂತಹದೇ ಒಂದು ಸಂಕಲ್ಪ ಈ ಮೆಡಿಕಲ್ ಕಾಲೇಜ್ ಆಗಿದ್ದಿರ ಬೇಕು.

ತುಂಭೆಯಂತಹ ದುರ್ಗಮ ಬೆಟ್ಟ ಗುಡ್ಡಗಳ ಸಂದಿನಲ್ಲಿ ಇದ್ದ ಮನುಷ್ಯ ತಾನು ಒಬ್ಬನನ್ನು ಮಂತ್ರಿ ಮಾಡುವ ಸಂಕಲ್ಪ ವನ್ನು ಮೊದಲೇ ಬಹಿರಂಗ ಪಡಿಸಿ ಸಾಧಿಸಿ ತೋರಿಸಿದ್ದರು.ಇದು ಆಗಿ ಹೋಗುವ ಮಾತು ಎಂದು ಯಾರೂ ಒಪ್ಪಲು ಸಾಧ್ಯ ಇರಲಿಲ್ಲ.ಆ ಒಂದು ಕತೃತ್ವ ಶಕ್ತಿ ದಾಡ್ಯತೆ ಅವರಿಗಿತ್ತು.ಕೈಯಲ್ಲಿ ಯಾವ ಅಧಿಕಾರ ಇಲ್ಲದಿದ್ದರೂ ತುಂಭೆ ಸುಬ್ರಾಯ ರನ್ನು ಕರೆದು ಪಂಚಾಯತಿ ಮಾಡಿಸ್ತನೆ ಎಂದರೆ ಕೋರ್ಟ್ ಗೆ ಹೋಗ್ತೆ ನೆ ನೋಡು ಎಂಬಂತೆ ಜನ ಭಾವಿಸುತ್ತಿದ್ದರು.ಅಷ್ಟು ಪವರ್ ಪುಲ್ ವ್ಯಕ್ತಿತ್ವ.ಸ್ವಯಂಮೇವಾ ಮೃಗೆಂದ್ರತಾ ಎಂದರೆ ಸ್ವಸಾಮರ್ಥ್ಯದಿಂದ ರಾಜತ್ವ ಪಡೆದವರು.

ಇಂತಹ ಮಹನೀಯ ಮೆಡಿಕಲ್ ಕಾಲೇಜು ಸ್ಥಾಪಿಸಲು 3600 ರೂಗೆ ಕೊಂಡಿಟ್ಟ ಜಾಗ ಇವತ್ತು 21 ಕೋಟಿ ರೂಪಾಯಿ ಬೆಲೆಗೆ ಮಾರಲು ಪ್ರಚಾರ ಪತ್ರ ಹೊರಬಿದ್ದಿದೆ..ಐದು ಕೋಟಿ 20 ಲಕ್ಷ ರೂಪಾಯಿ ಆ ಜಮೀನಿನ ಮೇಲೆ  ಕರ್ನಾಟಕ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆಂದು ಆರ್ಟಿಸಿ ಯಲ್ಲಿ ದಾಖಲಾಗಿದೆ.

ಆ ಮಹಾನುಭಾವರ ಸಂತಾನದವರೇ, ಅವರ ಪ್ರೀಯ ಅನುಯಾಯಿಗಳೇ, ಅವರೊರಿನ ಗ್ರಾಮಸ್ಥರೇ ಇಂತಹ  ಅಮೂಲ್ಯ ಅಸ್ತಿಯನ್ನು ಮಾರಾಟ ಮಾಡಲು ಬೆಂಬಲಿಸುತ್ತಿದ್ದಾರೆಂದು ಹೇಳಲು ಖೇದವಾದರೂ ಅನಿವಾರ್ಯ. ಒಡಲಾಳದ ಸಂಕಟ ಹೇಳಿಸುತ್ತದೆ.ಊರು ಮನೆಯಲ್ಲಿ ನಿಷ್ಟುರಕ್ಕೆ ಎಡೆ ಮಾಡಿಕೊಡುವ ಈ ಮಾತು ನನ್ನಿಂದ ಬರಬಾರದಿತ್ತು.ಆದರೂ ಬಂದಿದೆ.ನೀರಿಗಿಳಿದವನಿಗೆ ಚಳಿಯೇನು, ಮಳೆ ಏನು?

ನಿಮ್ಮ ಹಿರಿಯರು ಮಾಡಿ ಇಟ್ಟ ಆಸ್ತಿ ಹೀಗೆ ಮಾರುವುದು ನಿಮ್ಗೆ ಇಷ್ಟವಾ ಎಂದು ಅವರ ಸಂತಾನಕ್ಕೆ ಸಂಬಂಧಿಸಿದವರನ್ನು ವಿಚಾರಿಸಲಾಯಿತು.ಅದಕ್ಕೆ ಅವರು ಹೇಳಿದ್ದು "ಗುರುಗಳು ಇಲ್ಲಿ ಕೊಟ್ಟರೆ ಮತ್ತೊಂದು ಕಡೆ ತೆಗೆದುಕೊಳ್ಳುತ್ತಾರೆ".

ಎಲ್ಲಿ ತೆಗೆದುಕೊಳ್ಖುತ್ತಾರೆ ಎಂದು ಕೊಂಡರೂ ಸಾಗರದಲ್ಲಿ ಮೆಡಿಕಲ್ ಕಾಲೇಜಿನ ಕನಸು ಕಂಡವರ ಇಚ್ಚೆ ನೆನಸಾಗುತ್ತದೆಯಾ.ಈ ಜಾಗಕೊಳ್ಳಲು ತಮ್ಮ ಪಾಲುಧಾರಿಕೆ ನೀಡಿದ ಎಲ್ ಟಿ ಹೆಗಡೆ,ಗೊರಮನೆ ಅಜ್ಜ ಮುಂತಾದವರು ಇನ್ನೂ ಜೀವಂತರಾಗಿದ್ದು ಅಸಹಾಯಕತೆಯಿಂದ ಕೈ ಕೈ ಹೊಸಕಿ ಕೊಳ್ಳುತ್ತಿದ್ದಾರೆ.

ಸಿಂಹದ ಹೊಟ್ಟೆಯಲ್ಲಿ ನರಿ ಹುಟ್ಟುವುದಿಲ್ಲ ಎನ್ನುತ್ತಾರೆ.ಸಿಂಹದ ಹೊಟ್ಟೆಯಲ್ಲಿ ಸಿಂಹವಂತೂ ಹುಟ್ಟಿಲ್ಲ ಎಂಬುದು ನನಗೆ ಖಾತ್ರಿ ಇದೆ.ಇದ್ದರೆ ಸ್ವಯಂ ಪ್ರಕಾಶಮಾನವಾಗಿರಲೇ ಬೇಕಾಗಿತ್ತು.ಹಿರಿಯರ ಅಸ್ತಿಯನ್ನು ಅಭಿವೃದ್ಧಿ ಮಾಡಲಾಗದಿದ್ದರೂ ಯಥಾಸ್ಥಿತಿ ಕಾಪಾಡುವಷ್ಟಕ್ಕಾದರೂ ಬೆಂಬಲಿಸುತ್ತಿದ್ದರು.ಅದನ್ನು ಹಾಳು ಮಾಡುವವರಿಗೆ ತಾವೇ ಮುಂದೆ‌ನಿಂತು ಬೆಂಬಲಿಸುವ ಕಾರ್ಯವಂತು ನಡೆಯಲು ಬಿಡುತ್ತಿರಲಿಲ್ಲ.

ಮಾಜಿ ಜಿಲ್ಲಾ ಪರಿಷತ್ತು ಸದಸ್ಯರಾದ ಅರುಣ್ ಪ್ರಸಾದ್ ಅವರು ಅವರ ಲೇಖನದಲ್ಲಿ ತುಂಭೆ ಸುಬ್ರಾಯ ರನ್ನು ನೆನಪಿಸಿ ನನ್ನ ಭಾವೋದ್ರೇಕ ಲೇಖನಕ್ಕೆ ಕಾರಣರಾಗಿದ್ದಾರೆ

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ