Skip to main content

Blog number 1524.ಶುಕ್ರವಾರ ಸಂಜೆ (12 - ಮೇ 2023) ನನ್ನ ಅತಿಥಿ ಖ್ಯಾತ ಸಾಹಿತಿ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅವರು.

#ಚುನಾವಣಾ_ಪಲಿತಾಂಶದ_ಹಿಂದಿನ_ದಿನ_ಅರವಿಂದಚೊಕ್ಕಾಡಿ_ಬಂದಿದ್ದರು.

#ಅವರಿಗೆ_ನಮ್ಮ_ತಾಲ್ಲೂಕಿನವರಾದ_ಆರ್_ಟಿ_ವಿಠ್ಠಲಮೂರ್ತಿ_ಪುಸ್ತಕ_ನೀಡಿದೆ

#ಅವರು_ಈ_ಬಾರಿಯ_ವಿಧಾನಸಭಾ_ಚುನಾವಣಾ_ಪಲಿತಾಂಶಗಳಿಗೆ_ಹೆಚ್ಚು_ಪರಿಣಾಮಕಾರಿ_ಆಗಲಿರುವ
#ಕಾಂಗ್ರೇಸ್_ಗ್ಯಾರಂಟಿ_ಕಾರ್ಡ್_ಬಗ್ಗೆ_ಮಾತಾಡಿದರು.

#ಬಿಟ್ಟಿ_ಬಾಗ್ಯ_ಎಂದು_ಗೇಲಿ_ಮಾಡುವುದು_ಸರಿಯಾ?

#ನಮ್ಮ_ಮಲ್ಲಿಕಾವೆಜ್_ನೀರುಳ್ಳಿದೋಸೆ_ಮತ್ತು_ಅವರಿಷ್ಟದ_ಕೋಥಾಸ್_ಪಿಲ್ಟರ್_ಕಾಫಿ_ಜೊತೆ_ಚರ್ಚೆ:

#ಮೇ_20_ಶನಿವಾರ_ಶಿವಮೊಗ್ಗದ_ಪ್ರತಿಷ್ಟಿತ_ಕರ್ನಾಟಕ_ಸಂಘದಲ್ಲಿ_ತಿಂಗಳ_ಅತಿಥಿ_ಅರವಿಂದ_ಚೊಕ್ಕಾಡಿ.


   ಸಾಗರದ ಒಂದು ಕಾಲದ ಕಾಂಗ್ರೇಸ್ ಮುಖಂಡರು ಮತ್ತು ಅನ್ನಾವರ ಅಡಿಕೆ ಕಂಪನಿ ಚೇರ್ಮನ್ ರಾಗಿದ್ದವರು, ಆ ಕಾಲದಲ್ಲಿ 1952ರಲ್ಲಿ ಸಮಾಜವಾದಿ ಪಕ್ಷದಶಾಂತವೇರಿ ಗೋಪಾಲಗೌಡರ ಎದುರು ಸೋತಿದ್ದ ಕಾಂಗ್ರೇಸ್ ಪಕ್ಷದ  ಆನಂದಪುರಂನ ಬದರಿನಾರಾಯಣ ಅಯ್ಯಂಗಾರರನ್ನು 1957 ರಲ್ಲಿ ಗೆಲ್ಲಿಸುವಲ್ಲಿ ಚಾಣಕ್ಯರಾಗಿದ್ದ ತುಂಬೆ ಸುಬ್ರಾಯರ ಮಗಳ ಮಗ ಪ್ರೋಪೆಸರ್ ನರಹರಿ ಕರಾವಳಿಯ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು ಅವರ ಮಗನ ಮದುವೆಯ ರಿಸೆಪ್ಷನ್ ಶನಿವಾರ ಸಾಗರದಲ್ಲಿ(13 ಮೇ 2023) ಇತ್ತು ಅಲ್ಲಿಗೆ ಭಾಗವಹಿಸಲು ಅರವಿಂದ ಚೊಕ್ಕಾಡಿ ಬರುತ್ತಾರೆ ನೀವು ಬನ್ನಿ ಅಂತ ನರಹರಿ ಅವರು ಆಹ್ವಾನಿಸಿದ್ದರು.
    ಹಿಂದಿನ ದಿನ ಶುಕ್ರವಾರ ಬೆಳಿಗ್ಗೆ 10 ಕ್ಕೆ ಅರವಿಂದ ಚೊಕ್ಕಾಡಿ ಅವರು ಮದ್ಯಾಹ್ನ 3ಕ್ಕೆ ಆನಂದಪುರಂನಲ್ಲಿ ನೀವಿದ್ದರೆ ಮಾತಾಡಿ ಸೊರಬ ತಾಲ್ಲೂಕಿನ ಮುಟಗುಪ್ಪೆಯ ನರಹರಿ ಅವರ ಮನೆಗೆ ಹೋಗುವುದಾಗಿ ತಿಳಿಸಿದಾಗ ಶಿವಮೊಗ್ಗದ ನನ್ನ ಪ್ರಯಾಣ ರದ್ದು ಮಾಡಿ ಅವರಿಗಾಗಿ ಕಾಯುತ್ತಿದ್ದೆ.
  4 ಗಂಟೆಗೆ ಅವರು ನನ್ನ ಕಛೇರಿ ತಲುಪಿದರು ಅವರ ಜೊತೆ ನರಹರಿ ಅವರ ಶ್ರೀಮತಿಯವರ ಆಪ್ತರಾದ ಮಂಗಳೂರಿನ ಶ್ರೀಮತಿ ಅನುಪಮ  ಅವರು ಬಂದಿದ್ದರು, ಅರವಿಂದ ಚೊಕ್ಕಾಡಿ ಅವರಿಗೆ ನಮ್ಮ #ಮಲ್ಲಿಕಾ_ವೆಜ್ ರೆಸ್ಟೋರಾಂಟ್‌ನ ಪಿಲ್ಟರ್ ಕಾಫಿ ಯಾವತ್ತೂ ಪ್ರಿಯ ಆದ್ದರಿಂದ ನೀರುಳ್ಳಿ ದೋಸೆ ಜೊತೆ ಕಾಫಿಯ ಅತಿಥ್ಯದ ಜೊತೆ ಅವರಿಗೆ ಮತ್ತು ಶ್ರೀಮತಿ ಅನುಪಮ ಅವರಿಗೆ ಮಲೆನಾಡಿನ ಸಂಪ್ರದಾಯಿಕ ಜೋನಿ ಬೆಲ್ಲ ನೀಡಿದೆ. 
   ಅರವಿಂದ ಚೊಕ್ಕಾಡಿ ಅವರಿಗೆ ಖ್ಯಾತ ಪತ್ರಕರ್ತ ಆರ್.ಟಿ. ವಿಠ್ಠಲ ಮೂರ್ತಿ ಅವರ #ಇದೊಂತರ_ಆತ್ಮಕಥೆ ಪುಸ್ತಕ ಮತ್ತು ಶ್ರೀಮತಿ ಅನುಪಮ ಅವರಿಗೆ ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ನೀಡಿದೆ.
  ಮರುದಿನವೇ (13 -ಮೇ -2023 ಶನಿವಾರ) ವಿಧಾನಸಭಾ ಚುನಾವಣೆ ಪಲಿತಾಂಶ ಇದ್ದಿದ್ದರಿಂದ ಅವರ ಅಭಿಪ್ರಾಯ ಕೇಳಿದೆ ಅವರು ವ್ಯಕ್ತಪಡಿಸಿದ್ದು ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಕಾರ್ಡ್ ಹೆಚ್ಚು ಪರಿಣಾಮ ಬೀರಬಹುದು ಮತ್ತು ಬಿಟ್ಟಿ ಬಾಗ್ಯ ಎಂಬ ವಾಕ್ಯದಲ್ಲಿ ಅಡಗಿರುವ ಗೇಲಿ ಸರಿ ಅಲ್ಲ ಅಂದಿದ್ದರು.
   ಶನಿವಾರದ ಪಲಿತಾಂಶ ಕಾಂಗ್ರೇಸ್ ಪಕ್ಷಕ್ಕೆ 136 ಶಾಸಕರನ್ನು ನೀಡಿದೆ.
   ಶನಿವಾರ ಸಂಜೆ ಶಿವಮೊಗ್ಗದ ಪ್ರತಿಷ್ಠಿತ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಂದರ್ ರಾಜ್ ಗೋಕರ್ಣದಿಂದ ಪುತ್ರನ ಕುಟುಂಬದ ಜೊತೆ ಬಂದಾಗ ಬರುವ ಮೇ 20 ನೇ ತಾರೀಖು ಶನಿವಾರ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅರವಿಂದ ಚೊಕ್ಕಾಡಿ ಅವರಿಗೆ ಆಹ್ವಾನಿಸಿರುವ ಬಗ್ಗೆ ಅವರು ಸಾಹಿತ್ಯ ಮತ್ತು ಜೀವನ ದೃಷ್ಟಿ ಎಂಬ ಉಪನ್ಯಾಸ ನೀಡುತ್ತಾರೆಂದು ತಿಳಿಸಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ