Skip to main content

Blog number 1562.ಟಿ.ಡಿ.ಕೆ.ಪಂಡಿತ್ ಭಾಗ - 2

#ಮುಂದುವರಿದ_ಭಾಗ_2.

#ಸಾಗರದ_ಟಿಡಿಕೆ_ಪಂಡಿತ್_ಪೂರ್ಣ_ಹೆಸರು_ಕಮಲಾಕ್ಷ_ಪಂಡಿತ್

#ಕರ್ಮಚಾರಿ_ಪತ್ರಿಕೆ_ಸಂಪಾದಕರು

#ಸಮಾಜವಾದಿ_ಶಾಂತವೇರಿ_ಗೋಪಾಲಗೌಡ_ಎಸ್_ಎಸ್_ಕುಮುಟಾ_ಪಿ_ಪುಟ್ಟಯ್ಯರ_ಒಡನಾಡಿ

#ಕನ್ನಡ_ಸಮಾಜವಾದಿ_ಯುವಜನ_ಸಭೆಯ_ಮೊದಲ_ರಾಜ್ಯ_ಸಮ್ಮೇಳನ_ಯಶಸ್ವಿಗೆ_ಕಾರಣಕರ್ತರು.

#ಮೈಸೂರು_ರಾಜ್ಯದ_ಮೊದಲ_ಕನ್ನಡ_ಸಮಾವೇಶ

#ಹಿರಿಯ_ಸಮಾಜವಾದಿ_ಶಿವಮೊಗ್ಗದ_ಪ್ರಕೃತಿ_ಮುದ್ರಣಾಲಯದ_ಪಿ_ಪುಟ್ಟಯ್ಯ_ಪಂಡಿತರ_ಬಗ್ಗೆ_ಹೇಳಿದ್ದು.


   ಕನ್ನಡ ಯುವಜನ ಸಭಾ ಸಮಾಜವಾದಿ ಪಕ್ಷದ ಅಂಗ ಸಂಸ್ಥೆಯೇ ಆಗಿತ್ತು, ಇದರ ರಾಜ್ಯ ಅಧ್ಯಕ್ಷರು ಆ.ನ.ಕೃ ಆಗಿದ್ದರು ಪ್ರದಾನ ಕಾಯ೯ದರ್ಶಿ ಕೋಣಂದೂರು ಲಿಂಗಪ್ಪನವರು, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಪಿ.ಪುಟ್ಟಯ್ಯನವರು.
  ಆಗ ಪಿ. ಪುಟ್ಟಯ್ಯ, ಎಸ್.ಎಸ್.ಕುಮಟಾ ಮತ್ತು ಟಿ.ಡಿ.ಕೆ ಪಂಡಿತರು ತ್ರಿಮೂರ್ತಿಗಳಂತ ಗೆಳೆಯರು, ಟಿ.ಡಿ.ಕೆ. ಪಂಡಿತರು ಕಾಂಗ್ರೇಸ್ ಪಕ್ಷದ ಒಲವು ಉಳ್ಳವರಾದರೂ ಸಮಾಜವಾದಿ ಗೆಳೆಯರ ಜೊತೆ ಹೆಚ್ಚು ಒಡನಾಟ ಉಳ್ಳವರಾಗಿ ಆಗಿನ ಶಾಸಕರಾದ ಶಾಂತವೇರಿ ಗೋಪಾಲಗೌಡರ ನಿಕಟ ಸಂಪರ್ಕದಲ್ಲಿದ್ದರು ಅಂತ ಪುಟ್ಟಯ್ಯನವರು ಹೇಳುತ್ತಾರೆ.
   ಈ ಸಂದರ್ಭದಲ್ಲಿ ಅಂದಾಜು 1955 ರಿಂದ 1957 ರಲ್ಲಿ ಸಾಗರದಲ್ಲಿ ಕನ್ನಡ ಯುವ ಜನ ಸಭಾದಿಂದ ಅನೇಕ ಕಾರ್ಯಕ್ರಮ ಈ ತ್ರಿಮೂರ್ತಿಗಳಿಂದ ನಡೆಯುತ್ತದೆ.
  ಸಾಗರದಲ್ಲಿ ರಾಜ್ಯ ಮಟ್ಟದ ಮೊದಲ ಕನ್ನಡ ಸಮಾವೇಶ ಸಾಗರದ ಗಾಂಧಿ ಮಂದಿರದಲ್ಲಿ ಇವರೆಲ್ಲ ಸೇರಿ ಆಯೋಜಿಸುತ್ತಾರೆ,ಈ ಸಮಾವೇಶದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರಾದ ಆ.ನ.ಕೃ ವಹಿಸಲು ಆಮಂತ್ರಿಸುತ್ತಾರೆ.
  ಆಗ ಕನ್ನಡ ಯುವ ಜನ ಸಭಾ ಕನ್ನಡ ಸ್ಥಾನಮಾನಕ್ಕಾಗಿ ಮತ್ತು ಮೈಸೂರು ರಾಜ್ಯದ ಭಾಷೆ ಕನ್ನಡ ಆಗಬೇಕು ಎಂಬ ಹೋರಾಟ ಕ್ರಮೇಣ ತಮಿಳು ಭಾಷಾ ವಿರೋಧಿ ಆಗಿ ಬದಲಾಗುವ ವಿಚಾರ ಆ.ನ ಕೃ ಅವರಿಗೆ ಸರಿ ಬರುವುದಿಲ್ಲ. ಅವರ ಮಾತೃ ಭಾಷೆ ತಮಿಳು ಆಗಿರುವುದರಿಂದ ಅವರು ಸಾಗರದ ರಾಜ್ಯ ಸಮಾವೇಶಕ್ಕೆ ಕೊನೆಯ ಕ್ಷಣದಲ್ಲಿ ಭಾಗವಹಿಸಲು ನಿರಾಕರಿಸುತ್ತಾರೆ ಮತ್ತು ಅಂತರ ಕಾಪಾಡಿಕೊಳ್ಳುತ್ತಾರೆ.
  ಆಗ ಮೈಸೂರಿನಲ್ಲಿ ಉಪನ್ಯಾಸಕರಾಗಿದ್ದ ಕೆ.ಹೆಚ್.ಶ್ರೀನಿವಾಸ್ ಗೋಪಾಲಕೃಷ್ಣ ಅಡಿಗರನ್ನ ರಾಜ್ಯ ಸಮಾವೇಶದ ಅಧ್ಯಕ್ಷತೆಗೆ ಒಪ್ಪಿಸಿ ಕರೆತರುತ್ತಾರೆ.
  ಸಮಾವೇಶದ ವೇದಿಕೆ, ಬ್ಯಾನರ್, ಕರಪತ್ರಗಳ ವಿನ್ಯಾಸ ತಯಾರಿ ಎಲ್ಲಾ ಟಿ.ಡಿ.ಕೆ. ಪಂಡಿತರದ್ದು,ಸ್ವಾಗತ - ನಿರೂಪಣೆ ಎಸ್.ಎಸ್. ಕುಮಟಾರದ್ದು
 ಈ ಸಮಾವೇಶದಲ್ಲಿ ಕೆ.ಹೆಚ್ ಶ್ರೀನಿವಾಸರ ಭಾಷಣ ಹೆಚ್ಚು ಆಕರ್ಷಿತವಾಗಿತ್ತು ಈ ಸಮಾವೇಶದಿಂದಲೇ ಕೆ.ಹೆಚ್. ಶ್ರೀನಿವಾಸ್ ಮುಂದಿನ ದಿನಗಳಲ್ಲಿ ಶಾಸಕರಾಗಲು ಮೆಟ್ಟಿಲಾಯಿತು ಮತ್ತು ಪ್ರತಿಷ್ಟಿತ ವಿದ್ಯಾ ಸಂಸ್ಥೆ ಲಾಲ್ ಬಹದ್ದೂರ್ ಕಾಲೇಜ್ ಪ್ರಾರಂಭಕ್ಕೆ ಕಾರಣ ಆಯಿತು ಈ ಸಮಾವೇಶದಲ್ಲಿ ಆಗ ಯುವಕರಾಗಿದ್ದ ಕಾಗೋಡು ತಿಮ್ಮಪ್ಪ ಕೂಡ ಭಾಗವಹಿಸಿದ್ದರು ಅಂತ ಪುಟ್ಟಯ್ಯ ನೆನಪಿಸಿಕೊಂಡರು.
   ಈ ರಾಜ್ಯ ಮಟ್ಟದ ಮೊದಲ ಕನ್ನಡ ಸಮಾವೇಶ ಯಶಸ್ವಿಯಾಗಲು ಆಗ ಟಿ.ಡಿ.ಕೆ. ಪಂಡಿತರ ಶಿಸ್ತುಬದ್ದ ಯೋಚನೆ ಮತ್ತು ಶ್ರಮ ಕಾರಣವಾಯಿತು ಅಂತ ಪುಟ್ಟಯ್ಯನವರು ಹಳೆಯ ದಿನಗಳನ್ನು ನೆನಪಿಸಿಕೊಂಡು ಹೇಳುತ್ತಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...