#ಸಾಗರ ತಾಲ್ಲೂಕಿನ ಕಾಂಗ್ರೇಸ್ ನೇತಾರರಾದ ಪ್ರೀತಿಯ ಖಾನ್ ಸಾಹೇಬರು# ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ಲೋಕಸಭೆಗೆ ಕಾಂಗ್ರೇಸ್ ವಿರುದ್ಧ ಸ್ಪದಿ೯ಸಿದಾಗ ಹೇಳುತ್ತಿದ್ದರು ಯಾರಾದರೂ ಬದಲಾಗಿ ಬೇರೆ ಪಕ್ಷಕ್ಕೆ ಓಟು ನೀಡ ಬಹುದು ಆದರೆ ಆ ಸಾಗರದ ಖಾನ್ ಮತ್ತು ಪೈ (ಪುತ್ತೂರಾಯರ ಬಗ್ಗೆ) ಮಾತ್ರ ಕೈ ಬಿಟ್ಟು ಬರೊಲ್ಲ ಅಂತ. ಅದಕ್ಕೆ ಕಾರಣವೂ ಇದೆ, ಗುಂಡೂರಾಯರ ಕಾಲದಲ್ಲಿ ಬಂಗಾರಪ್ಪರನ್ನ ಹಣಿಯಲು ಜನತಾ ಪಕ್ಷದಿಂದ ಕಾಗೋಡರನ್ನ ತಂದು ವಿದಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿ ಮಾಡಿದ ಕಾಯ೯ದಲ್ಲಿ ಆಹಮದ್ ಆಲೀ ಖಾನ್ ಸಾಹೇಬರ ಕೆಲಸ ದೊಡ್ಡದು. ಸ್ವಾತಂತ್ರ್ಯ ನಂತರದ 1952 ರಿಂದ ಪ್ರಾರಂಭವಾದ ಚುನಾವಣೆಯಿಂದ ಈ ವರೆಗಿನ ಚುನಾವಣೆ ವರೆಗೆ ನೇರ ನೋಡಿದವರು, ರಾಜಕಾರಣ ಮಾಡಿದವರು ಇವರು, ಸಾಗರ ತಾಲ್ಲೂಕಿನ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದವರು, ಪುರಸಭಾ ಅಧ್ಯಕ್ಷರೂ ಆದವರು. 1989ರಲ್ಲಿ ಸಾಗರ ವಿಧಾನ ಸಭೆಗೆ ಕಾಗೋರರನ್ನ ಪುನಃ ಕರೆ ತಂದವರು ಆಗಲೇ ನಮ್ಮಂತವರನ್ನೆಲ್ಲ ಹಿಡಿದು ತಂದು ಕಾಂಗ್ರೇಸ್ಗೆ ಸೇರಿಸಿ ಕೊಂಡವರು, ಇವರ ಮಾಗ೯ದಶ೯ನದಿಂದಲೇ ನಾನು ಗ್ರಾ.ಪಂ., ಜಿ.ಪಂ ಗೂ ಹೋಗುವ೦ತಾಯಿತು, ಸಾಗರ ತಾಲ್ಲೂಕಿನಲ್ಲಿ ಇವರ ಗರಡಿಯಲ್ಲಿ ತಯಾರಾದ ನಾಯಕರು ನೂರಾರು. ಈಗ 86 ರ ವಯೋಮಾನದ ಇವರು ನಿವೃತ್ತ ಜೀವನ ಮಾಡುತ್ತಿದ್ದಾರೆ, ಯೋಗ್ಯರಾದ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳ ಒಂದಿಗೆ ಸಂತೃಪ್ತ ಜೀವನ ಅವರದ್ದು. ಇತ್ತೀಚಿಗೆ ಅ