#ಸಾಗರ ತಾಲ್ಲೂಕಿನ ಕಾಂಗ್ರೇಸ್ ನೇತಾರರಾದ ಪ್ರೀತಿಯ ಖಾನ್ ಸಾಹೇಬರು#
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ಲೋಕಸಭೆಗೆ ಕಾಂಗ್ರೇಸ್ ವಿರುದ್ಧ ಸ್ಪದಿ೯ಸಿದಾಗ ಹೇಳುತ್ತಿದ್ದರು ಯಾರಾದರೂ ಬದಲಾಗಿ ಬೇರೆ ಪಕ್ಷಕ್ಕೆ ಓಟು ನೀಡ ಬಹುದು ಆದರೆ ಆ ಸಾಗರದ ಖಾನ್ ಮತ್ತು ಪೈ (ಪುತ್ತೂರಾಯರ ಬಗ್ಗೆ) ಮಾತ್ರ ಕೈ ಬಿಟ್ಟು ಬರೊಲ್ಲ ಅಂತ.
ಅದಕ್ಕೆ ಕಾರಣವೂ ಇದೆ, ಗುಂಡೂರಾಯರ ಕಾಲದಲ್ಲಿ ಬಂಗಾರಪ್ಪರನ್ನ ಹಣಿಯಲು ಜನತಾ ಪಕ್ಷದಿಂದ ಕಾಗೋಡರನ್ನ ತಂದು ವಿದಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿ ಮಾಡಿದ ಕಾಯ೯ದಲ್ಲಿ ಆಹಮದ್ ಆಲೀ ಖಾನ್ ಸಾಹೇಬರ ಕೆಲಸ ದೊಡ್ಡದು.
ಸ್ವಾತಂತ್ರ್ಯ ನಂತರದ 1952 ರಿಂದ ಪ್ರಾರಂಭವಾದ ಚುನಾವಣೆಯಿಂದ ಈ ವರೆಗಿನ ಚುನಾವಣೆ ವರೆಗೆ ನೇರ ನೋಡಿದವರು, ರಾಜಕಾರಣ ಮಾಡಿದವರು ಇವರು, ಸಾಗರ ತಾಲ್ಲೂಕಿನ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದವರು, ಪುರಸಭಾ ಅಧ್ಯಕ್ಷರೂ ಆದವರು.
1989ರಲ್ಲಿ ಸಾಗರ ವಿಧಾನ ಸಭೆಗೆ ಕಾಗೋರರನ್ನ ಪುನಃ ಕರೆ ತಂದವರು ಆಗಲೇ ನಮ್ಮಂತವರನ್ನೆಲ್ಲ ಹಿಡಿದು ತಂದು ಕಾಂಗ್ರೇಸ್ಗೆ ಸೇರಿಸಿ ಕೊಂಡವರು, ಇವರ ಮಾಗ೯ದಶ೯ನದಿಂದಲೇ ನಾನು ಗ್ರಾ.ಪಂ., ಜಿ.ಪಂ ಗೂ ಹೋಗುವ೦ತಾಯಿತು, ಸಾಗರ ತಾಲ್ಲೂಕಿನಲ್ಲಿ ಇವರ ಗರಡಿಯಲ್ಲಿ ತಯಾರಾದ ನಾಯಕರು ನೂರಾರು.
ಈಗ 86 ರ ವಯೋಮಾನದ ಇವರು ನಿವೃತ್ತ ಜೀವನ ಮಾಡುತ್ತಿದ್ದಾರೆ, ಯೋಗ್ಯರಾದ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳ ಒಂದಿಗೆ ಸಂತೃಪ್ತ ಜೀವನ ಅವರದ್ದು.
ಇತ್ತೀಚಿಗೆ ಅನಾರೋಗ್ಯದಿಂದ ಮಣಿಪಾಲದಲ್ಲಿ 15 ದಿನ ಚಿಕಿತ್ಸೆ ಪಡೆದು ಬಂದಿದ್ದಾರೆಂದು ತಿಳಿದು ಮೊನ್ನೆ ಸಂಜೆ ಇವರನ್ನ ಬೇಟಿ ಮಾಡಲು ಸಾಗರಕ್ಕೆ ಹೋಗಿದ್ದೆ, ಈ ಇಳಿ ವಯಸ್ಸಿನಲ್ಲೂ ಬಂದವರ ಆತಿಥ್ಯ ಮರೆಯದೆ ನಮಗೆ ಬ್ಲಾಕ್ ಟೀ ಮತ್ತು ಬಿಸ್ಕತ್ ನೀಡಿದರು, ಅವತ್ತೆ ಬೆಳಿಗ್ಗೆ ಕಾಗೋಡು ತಿಮ್ಮಪ್ಪನವರು ಬಂದು ಹೋಗಿದ್ದರು.
ಇವರ ಸಣ್ಣ ಮಗ ಮೊಹಿಸಿನ್ ಖಾನ್ ಜೊತೆ ಇದ್ದಾರೆ, ಮೊಹಿಸಿನ್ ನನ್ನ ಕ್ಲಾಸ್ ಮೇಟ್ ಕೂಡ ಈಗ ಅವರು ಶುಂಠಿ ಮತ್ತು ಅಡಕೆ ವ್ಯಾಪಾರಿಗಳು, ದೊಡ್ಡ ಮಗ ಮನ್ಜೂರ್ ಖಾನ್ ನಗರಸಭಾ ಸದಸ್ಯರು, ಇನ್ನಿಬ್ಬರು ಮತೀನ್ ಖಾನ್ ಮತ್ತು ಮೆಹರ್ ಖಾನ್.
ಸಾಗರದ ಕಾಂಗ್ರೇಸ್ ಕಚೇರಿ ಗಾಂಧಿ ಮಂದಿರದಲ್ಲಿ ಮೊದಲ ಚುನಾವಣೆಯಿಂದ ಈವರೆಗೂ ಪಕ್ಷಾಂತರ ಮಾಡದ ಏಕೈಕ ವ್ಯಕ್ತಿ ಇವರೊಬ್ಬರೇ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment