Skip to main content

#ಇತಿಹಾಸದ ಪುಟದಲ್ಲಿ ಆನಂದಪುರಂನಲ್ಲಿ ಟಿಪ್ಪು ಸುಲ್ತಾನ್#

#ಟಿಪ್ಪೂವಿನ ಬಗ್ಗೆ ನಮ್ಮ ಊರಿನ ಚರಿತ್ರೆ ನೋಡಿ#
    ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದ ಕೋಟೆಯನ್ನ ಬ್ರಿಟಿಷರು ಟಿಪ್ಪು ವಿನ ಹಯಾತ್ ಖಾನ್ ರಿಂದ ವಶಪಡಿಸಿಕೊಂಡು ಅವರ ಧ್ವಜ ಹಾರಿಸುತ್ತಾರೆ ನಂತರ ಸುಂದರವಾದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕೋಟೆಯ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ( ಕಾರಣ ಬ್ರಿಟಿಷ್ ಸೈನಿಕರ ಅನಾಚಾರ ) ಈ ವಿಚಾರ ತಡವಾಗಿ ಟಿಪ್ಪೂವಿಗೆ ಗೊತ್ತಾಗುತ್ತದೆ ತಕ್ಷಣ ಶ್ರೀರಂಗಪಟ್ಟಣದಿಂದ ಸೈನ್ಯದ ತುಕಡಿ ಕಳಿಸಿ ಬ್ರಿಟಿಷ್ ಸೈನಿಕರನ್ನ ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಯಿಂದ ಅವರನ್ನೆಲ್ಲ ಕೊಲ್ಲುತ್ತಾನೆ (ಇದು ಗೆಜೆಟೆಯರ್ ನಲ್ಲಿ ದಾಖಲಾದ ವಿಷಯ) .
     ಇದೇ ಟಿಪ್ಪು ಆನಂದಪುರದ ಮಾಗ೯ವಾಗಿ ಬಿದನೂರು ಕೋಟೆಗೆ ಸಂಚಾರ ಹೋಗುವಾಗ ಆನಂದಪುರದ ಮಸೀದಿಗೆ ಪ್ರಾಥ೯ನೆ ಸಲ್ಲಿಸುತ್ತಾರೆ ಅಂತ ಹಿಂದಿನ ದಿನ ಸುದ್ದಿಯಾದಾಗ ಆನಂದಪುರದ ಅಗ್ರಹಾರದ ಪುರೋಹಿತರು ಹೆದರುತ್ತಾರೆ, ರಾತ್ರೋರಾತ್ರಿ ಶ್ರೀ ರಾಮ ದೇವರನ್ನ ಶ್ರೀರಂಗನಾಥ ಎಂದು ಮರು ನಾಮಕರಣ ಮಾಡಿ ಮರುದಿನ ಮಸೀದಿಗೆ ಬರುವ ಟಿಪ್ಪುವಿಗೆ ಸ್ವಾಗತ ಮಾಡಿ ತಮ್ಮ ದೇವಾಲಯಕ್ಕೆ ಆಹ್ವಾನಿಸುತ್ತಾರೆ, ಟಿಪ್ಪು ಯಾವ ದೇವರು ಅಂತ ಕೇಳಿದಾಗ ಶ್ರೀರಂಗನಾಥ ಅಂದಾಗ ಅಚ್ಚಾ ಚಲೋ ಅಂತ ಹೇಳಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ , ಪುರೋಹಿತರಿಗೆ ಮತ್ತು ಇಡೀ ಅಗ್ರಹಾರಕ್ಕೆ ದೇಣಿಗೆ ನೀಡಿದ ಚರಿತ್ರೆ ಇದೆ.
     ಒಂದು ಊರಿನಲ್ಲಿ ನಡೆದ ಈ ಎರಡು ಘಟನೆಯಿಂದ ಟಿಪ್ಪು ಎಂಬ ಮಹತ್ವಾ೦ಕ್ಷಿ ರಾಜನನ್ನ ಅಥ೯ ಮಾಡಿಕೊಳ್ಳಬಹುದೆ?

ನಮ್ಮ ಊರಾದ ಆನಂದಪುರಂನಲ್ಲಿ ನಡೆದ ಈ ಎರಡು ಚರಿತ್ರಾಹ೯ ಘಟನೆ ಗೆಜೆಟಿಯರನಲ್ಲಿ ದಾಖಲಾಗಿದೆ, ಈ ಎರಡೂ ಘಟನೆಗಳು ಟಿಪ್ಪು ಜಯ೦ತಿ ಸಂದಬ೯ದಲ್ಲಿ ನೆನಪು ಮಾಡಿ ಕೊಳ್ಳುವಂತದ್ದು ಹಾಗಾಗಿ ನನ್ನ ಮುಖಪುಟದಲ್ಲಿ ಬರೆದಿದ್ದೇನೆ ಇದರಿಂದ ಯಾರನ್ನು ಓಲೈಸುವ ಅಥವ ವಿರೋದಿಸುವ ಕೆಲಸ ನನ್ನದಲ್ಲ, ಅಷ್ಟಕ್ಕೂ ನಾನು ಯಾವುದೇ ರಾಜಕೀಯ, ಸಾಮಾಜಿಕ ಜೀವನದಿಂದ ನಿವೃತ್ತಿಯಾಗಿದ್ದೇನೆ, ಮೊದಲಿಂದಲೂ ಪ್ರಚಾರದ ಗೀಳಿಲ್ಲ ಹಾಗಿದ್ದಿದರೆ ನಾನು ರಾಜಕೀಯದಲ್ಲಿ ಮುಂದುವರೆಯುತ್ತಿದೆ.
  ನಮ್ಮ ಊರು ಕೋಟೆ, ಸ್ಮಾರಕಗಳ ಊರು, ಕೆಳದಿ ಅರಸರ, ಟಿಪ್ಪೂ ಸುಲ್ತಾನರ ಮತ್ತು ಬ್ರಿಟಿಷರ ಆಡಳಿತ ಅನೇಕ ದಾಖಲೆಗಳು ಸಾವ೯ಜನಿಕರಿಗೆ ಮೊದಲಿಂದ ಬರೆದು ತಿಳಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇನೆ ಇದು ನಿಮಗೆ ಬೇರೆ ಅಥ೯ ನೀಡಿದರೆ ನಾನು ಅಸಹಾಯಕ, ಬುದ್ದಿವಂತಿಕೆ ಅಂದರೆ ಚರಿತ್ರೆ ದಾಖಲೆ ನೋಡದೆ ಪರಾಮರಿಸದೆ ಸಾರಾಸಗಟು ವಿರೋದಿಸುವುದು ಕೂಡ ಅಲ್ಲ ಎಂದು ಭಾವಿಸುತ್ತೇನೆ.

Comments

Post a Comment