ಇವತ್ತು ಗೆಳೆಯ ನಾಗೇಂದ್ರ ಸಾಗರ್ ತಂದು ಕೊಟ್ಟ ಸಾವಯವ ಆಕ್ಕಿ ಅನ್ನ ಮಾಡಿ ಊಟ ಮಾಡಿದಾಗ ಆದ ಪರಮಾನಂದ ವಣಿ೯ಸಲು ಸಾಧ್ಯವಿಲ್ಲ.
ಇವರು ಈ ಭಾಗದ ಕೃಷಿ ವಿಜ್ಞಾನಿ, ಜೇನು ಸಾಗಾಣಿಕೆ ತರಬೇತುದಾರರು, ಎರೆಹುಳದ ಗೊಬ್ಬರ ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಉದ್ದಿಮೆದಾರರು, ಡೈರಿ ಮಾಲಿಕರು, ಪಶು ಆಹಾರ ತಯಾರಕರು, ಹನಿ ನೀರಾವಾರಿ, ನಸ೯ರಿ, ಅಪರೂಪದ ಹೂವು, ಹಣ್ಣಿನ ತಳಿ ಸಂರಕ್ಷರು.
ಇವರ ಹತ್ತಿರ ಸಾವಯವ ಅಕ್ಕಿ, ಎರೆಹುಳ ಗೊಬ್ಬರ, ಸೂಜಿ ಮೆಣಸು, ಮಲೆನಾಡು ಗಿಡ್ಡದ ಪರಿಶುದ್ಧ ತುಪ್ಪಾ, ತುಡುವೆ ಜೇನುತುಪ್ಪಾ, ಕೆಂಪು ಜೋಳಗದ ಅಕ್ಕಿ, ಮಲೆನಾಡಿನ ಅಪರೂಪದ ಮಾವಿನ ಮಿಡಿ ಉಪ್ಪಿನ ಕಾಯಿ ಹೀಗೆ ಮಾರುಕಟ್ಟೆಯಲ್ಲಿ ಸಿಗದ ವಸ್ತುಗಳಿಗೆ ನಾನು ಅವರನ್ನ ಪೀಡಿಸುತ್ತೇನೆ, ಎಲ್ಲಿಂದಲೋ ಸಂಗ್ರಹಿಸಿ ಕೊಡುತ್ತಾರೆ.
ಆದರೆ ಇವರ ಹಿನ್ನೆಲೆ ಕೇಳಿ ಒಂದು ಕಾಲದ ಖ್ಯಾತ ಪತ್ರಕತ೯ರಾದ ವಿ.ಎನ್.ಸುಬ್ಬರಾವ್ರರ ಶಿಷ್ಯ, ಇವತ್ತಿನ ಪಬ್ಲಿಕ್ ಟಿವಿ ರಂಗನಾಥ, ಸುದ್ದಿ ಟಿವಿ ಸ೦ಪಾದಕರು, ರವಿ ಬೆಳೆಗೆರೆ, ನಟ ಪ್ರಕಾಶ್ ರೈ ರ ಗೆಳೆಯರಾದವರು, ಬೆಂಗಳೂರು ಬೇಡ ಅನ್ನಿಸಿ ಹಳ್ಳಿಗೆ ಬಂದವರು ಆನಂದಪುರದ ಸಮೀಪದಲ್ಲಿ ಅವರ ಪಿತ್ರಾಜಿ೯ತ ಜಮೀನಿನಲ್ಲಿ ರಬ್ಬರ್ ಬೇಸಾಯ ಪ್ರಾರಂಬಿಸಿ ಸಾಗರದ ಮಾರಿಕಾಂಬ ದೇವಾಲಯದ ಹಿಂಬಾಗದಲ್ಲಿ ಸಾಗರ್ ಅಗ್ರಿ ಕೋ ಎಂಬ ರೈತರ ಅವಶ್ಯಕತೆಯ ನೀರಿನ ಪಂಪ್, ಡ್ರಿಪ್ ನೀರಾವರಿ ಇತ್ಯಾದಿ ಸಲಕರಣೆ ಮಾರಾಟ ಮಳಿಗೆ ಸಾಗರದಲ್ಲಿ ಮೊಟ್ಟ ಮೊದಲಿಗೆ ಪ್ರಾರ೦ಬಿಸಿದರು.
ಪ್ರಾರಂಭದಲ್ಲಿ ದೊಡ್ಡ ನಷ್ಟ ಅನುಭವಿಸಿದರು, ಗೆಳೆಯರು ಮತ್ತು ಕುಟುಂಬದಲ್ಲೇ ವಿಶ್ವಾಸ ದ್ರೋಹದಿಂದ ಎಲ್ಲಾ ಕಳೆದು ಕೊಂಡು ವರದಾ ನದಿ ಮೂಲ ಸಮೀಪದ ಚಿಪ್ಪಳಿ ಎಂಬಲ್ಲಿ ಹೊಸ ಜೀವನ ಪ್ರಾರಂಬಿಸಿ ಈಗ ಆಥಿ೯ಕವಾಗಿ, ಸಾಮಾಜಿಕವಾಗಿ ಪ್ರಗತಿ ಕಂಡಿದ್ದಾರೆ.
ಇವರ ಪತ್ನಿ ವಿಜ್ಞಾನದಲ್ಲಿ ಸ್ನಾತಕೊತರ ಪದವಿಧಾರರು ಗಂಡನ ಸಂಕಟಷ್ಟಕ್ಕಾಗಿ ಡಾಕ್ಟರೇಟ್ ಪದವಿಯ ಆಸೆ ಕೈಬಿಟ್ಟು ಎಲ್ಲಾ ಕೃಷಿ ಪ್ರಯೋಗದಲ್ಲಿ ಬಾಗಿಯಾಗಿ ಯಶಸ್ವಿಯಾಗಿದ್ದಾರೆ.
ದುರಾಸೆ ಇಲ್ಲದ, ಸಮಾಜದಲ್ಲಿ ಎಲ್ಲರೊಡನೆ ಮಾಹಿತಿ ಹಂಚಿಕೊಳ್ಳುವ ಅತ್ಯುತ್ತಮ ಓದು ಬರಹ ಜೀವನ ಅನುಭವ ಇರುವ ನಾಗೇಂದ್ರ ಸಾಗರ್ ಒಬ್ಬ ಕೃಷಿ ವಿಜ್ಞಾನಿ ಆಗಿ ಹಳ್ಳಿಯಲ್ಲಿ ಸ್ವಗ೯ ನಿಮಿ೯ಸಿಕೊಂಡಿದ್ದಾರೆ.
ಪೇಟೆ ಜೀವನ ಸಾಕು ಹಳ್ಳಿ ಜೀವನ ಬೇಕು ಅನ್ನುವವರು ಅವರನ್ನು ಭೇಟಿ ಆಗಿ ಪ್ರತ್ಯಕ್ಷ ಅವರ ಅನುಭವ ಪಡೆಯಬಹುದು.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment