Skip to main content

#ಉಮ್ಮತ್ತದ (ದತ್ತೂರ)ಗಿಡದ ವಿಶೇಷತೆಗಳು ಮತ್ತು ಅದರ ಮಲೆನಾಡಿಗರ ಅನುಭವ#

FB ಲೇಖನ ಕೃಪೆ: ಶ್ರೀ ರಾಘವೇಂದ್ರ ಶಮಾ೯ ತಲವಾಟ.

    ನಿನ್ನ ಕಣ್ಣು ಸ್ವಲ್ಪ ಅರಿಶಿನ ಬಣ್ಣಕ್ಕೆ ಕಾಣಿಸ್ತಲಾ..! ಕಾಮಾಲೆಯಾ ಗೀಮಾಲಾಯೆ ಆಯಿಕ್ಕು ಮಾರಾಯಾ, ಔಷಧಿ ತಗ " ಅಂದರು ಮೂವತ್ವರ್ಷದ ಹಿಂದೆ ಒಬ್ಬರು.‌ಅವರು ಹೇಳಿದಮೇಲೆ ಸುಸ್ತು ಊಟ ಸೇರುವುದಿಲ್ಲ ಮುಂತಾದ ಸಮಸ್ಯೆ ಶುರುವಾಯಿತು. ನಿಜವಾಗಿಯೂ ಕಾಮಾಲೆಯೋ ಅಥವಾ ಅವರು ಹೇಳಿದ್ದಕ್ಕೆ ಹಾಗೆ ಆಯಿತೋ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ನಮ್ಮ ದೊಡ್ಡಪ್ಪ ಕಾಮಾಲೆಗೆ ಔಷಧಿ‌ಕೊಡುತ್ತಿದ್ದರು ಅವರ ಬಳಿ ಹೋದೆ.    ದೊಡ್ಡಪ್ಪನ ಮಗ ಮೋಹನಣ್ಣ "ಔಷಧಿ ಆನು ಬೇಕಾದ್ರೂ ಕೊಡ್ತಿ, ಆದರೆ ನಿನಗೆ ಕಾಮಾಲೆ‌ ಅಲ್ಲ, ಕಾಮಾಲೆ ಅಲ್ದಿದ್ರೂ ಈ ಔಷಧಿ ತಗಳ್ಳಕ್ಕು, ಆದರೆ ನಾಲ್ಕ್ ತಾಸು ಮಳ್ ಹಿಡಿತು, ಬಟ್ ಲಿವರ್ರಿಗೆ ಒಳ್ಳೆದು" ಅಂದ.‌ "ಮಳ್ ಹಿಡಿತು ಅಂದ್ರೆ ಎಂತಾಕ್ತು?". ಅಂತ ಕೇಳಿದೆ'
" ಔಷಧಿ ತಗಂಡು ಸ್ವಲ್ಪ‌ಹೊತ್ತಿನ ನಂತರ ಕಂಬಳಿ ಹುಳ, ಬೆಕ್ಕು ಕಾಣ್ತು, ಗೋಟಾಗಾರಿನ ಮಧುರ ಹೋದ ತಿಂಗಳು ಔಷಧಿ ತಗಂಡವ " ನೋಡು ನೋಡು ಸಾಲು ಸಾಲು ಬೆಕ್ಕು ಅಂತ ಕೂಗ್ತಿದ್ದ" ಆದ್ರೆ ಅಲ್ನೋಡಿರೆ ಎಂತದೂ ಇರ್ಲೆ" ಹಂಗೆ ಭ್ರಮೆ ಹುಟ್ಟಿಸ್ತು, ಆವಾಗ ಪದೇ ಪದೇ ಮಜ್ಜಿಗೆ ಕುಡಿಯಕು, ಮಧ್ಯಾಹ್ನ ಫುಲ್  ಕಡಿಮೆ ಆಕ್ತು" ಎಂದು ಅನುಭವದ ಸುದೀರ್ಘ ಭಾಷಣ ಕೊಟ್ಟ.
"ಅಯ್ಯೋ ಭ್ರಮೆ ಸೈಯಲ, ಮಾನಸಿಕವಾಗಿ ಆನು ಗಟ್ಟಿ, ಇದೆಲ್ಲ ಡೋಂಟ್ ಕೇರ್" ವಯಸ್ಸಿಗನುಗುಣವಾದ ವಾದ ಹರಿಬಿಟ್ಟೆ.
"ಸರಿ ನಿನಗೆ ಧೈರ್ಯ ಇದ್ರೆ ಖುಷಿ, ಲಿವರ್ ಆರೋಗ್ಯ ಜಾಸ್ತಿಯಾಗ್ತು, ತಗ, ವಾರಮಕ ಕೊಡ ಔಷಧಿ‌ ಭಾನುವಾರ ಬೆಳಗ್ಗೆ ಬಾ" ಅಂದ.
ಭಾನುವಾರ ಬೆಳಗ್ಗೆ ಹೋಗಿ ಹಸಿರು ಬಣ್ಣದ ಎರಡು ಚಮಚದಷ್ಟು ಔಷಧಿ ತಂದು ,ಮನೆಯಲ್ಲಿ ಅಮ್ಮನ ಹತ್ತಿರ " ಹಿಂಗೆ ಹಿಂಗೀಂಗೆ ಅಂಥ ಆರಿಶಿನ ಕಾಮಾಲೆಯ ಔಷಧಿ ತೆಗೆದುಕೊಳ್ಳುವ ವಿಷಯ ಹೇಳಿ, ಕುಡಿದು ಅಪ್ಪಯ್ಯನ ಮಂಚ ಹತ್ತಿ ಮಲಗಿದೆ.
ಮಲಗಿ ಅರ್ಧಗಂಟೆಯಾದರೂ ಅರಾಂ.ಓಹ್  ನಾನು ಗಟ್ಟಿ ಅಂತ ಖುಷಿಯಾಯಿತು. ಹಾಗೆ ಸುಮ್ಮನೆ ಮಲಗುವುದು ಯಾಕೆ ಎಂದು ಒಂದು ರೌಂಡ್ ಕೊಟ್ಟಿಗೆವರೆಗೆ ಹೋದೆ.‌ಮತ್ತೆ ಮಲಗುವ ಮನಸ್ಸಾಯಿತು. ಮಲಗಿದೆ, ಕಣ್ಮುಚ್ಚಿದರೆ ಎತ್ತಿ ಎತ್ತಿ ಒಗೆದಂತಾಯಿತು. ಕಣ್ಬಿಟ್ಟೆ, ಹೊದ್ದ ಕಂಬಳಿಯ ಮೇಲೊಂದು ದಪ್ಪನೆಯ ಕಂಬಳಿಹುಳ ನಿಧಾನ ಹರೆದು ಹೋಗುತ್ತಾ ಇತ್ತು. ಥೋ ದರಿದ್ರ‌ಅಂದು ತೋರ್ಬೆರಳು ಮಡಚಿ ಪಟಕ್ಕನೆ ಹೊಡೆದೆ ,ನೊ ಕಂಬಳಿ ಹುಳ ಇಲ್ಲ. ತಕ್ಷಣ ನೆನಪಾಯಿತು ಓಹೋ ಔಷಧಿಯ ಪ್ರಭಾವ ಹೀಗೆಲ್ಲ ಅಂತ. ಮತ್ತೆ ಕಣ್ಮುಚ್ಚಿದೆ, ಊಹ್ಞೂ ನಿದ್ರೆ ಮಾಡಲಾಗದು ಎತ್ತಿ‌ಬೀಸಿ‌ ಒಗೆದ ಅನುಭವ. ಕಣ್ಮಿಟ್ಟೆ ಈ ಬಾರಿ ಹತ್ತಾರು ಕಂಬಳಿ ಹುಳ ಹರೆದು ಹೋಗುತ್ತಿತ್ತು.‌ಭ್ರಮೆ ಖಂಡಿತಾ ಅಲ್ಲ ಅಂತನಿಸಿ ಕೊಡವಿದೆ ಕಂಬಳಿಯ ,ಒಂದೇ ಒಂದು ಹುಳವೂ ಇಲ್ಲ. ಮತ್ತೆ ಕಣ್ಮುಚ್ಚಿದೆ. ಈ ಬಾರಿ ಕ್ಷಣವೂ ಕಣ್ಮುಚ್ಚಲಾಗಲಿಲ್ಲ, ಗುಡ್ಡ ಹತ್ತಿ ಜೋರಾಗಿ ಓಡಿಹೋಗೋಣ ಅನಿಸಲು ಶುರುವಾಯಿತು. ಪಟಕ್ಕನೆ ಎದ್ದೆ ಜಗಲಿಯ ಬಾಗಿಲವರೆಗೆ ಬಂದೆ, ಉಫ್ ಔಷಧಿಯ ಪ್ರಭಾವ ಅಂತ ನೆನಪಾಗಿ ಮತ್ತೆ ಮಂಚ ಹತ್ತಿದೆ. ಮಲಗಿದೆ ಆದರೆ ನಿದ್ರೆಯಿರಲಿ ಮಲಗಲೂ ಆಗದ ಚಡಪಡಿಕೆ, ಈ ಬಾರಿ ಕಂಬಳಿ ಹುಳ ಗೋಡೆಯ ತುಂಬೆಲ್ಲಾ ಕಾಣಿಸತೊಡಗಿತು.‌ಅಷ್ಟರಲ್ಲಿ ಮಜ್ಹಿಗೆ ಕುಡಿಯಬೇಕೆಂಬುದು ನೆನಪಾಯಿತು, ಅಮ್ಮನ ಹತ್ತಿರ ಮಜ್ಜಿಗೆ ಕೊಡು ಎಂದೆ. ಆವಾಗ ಮೋಹನಣ್ಣ ಅನುಭವ ಇಲ್ಲದೆ ಜಾಸ್ತಿ ಡೋಸ್ ಕೊಟ್ಟುಬಿಟ್ಟನಾ ಎಂಬ ಅನುಮಾನ ಕಾಡಿ ಸಾಯುವ ಭಯ ಕಾಡತೊಡಗಿತು.‌ಅಮ್ಮನ ಹತ್ತಿರ. ಇದೇಕೋ ಯಡವಟ್ಟಾಯಿತು ಒಂಚೂರು ಮೋಹನಣ್ಣನ ಬರಹೇಳು ಪೋನ್ ಮಾಡಿ ಅಂತ ಹೇಳಿ ಮಜ್ಜಿಗೆ ಕುಡಿದು ಮಲಗಲು ಮಂಚದ ಬಳಿ ಹೋದರೆ ಮಂಚದ ತುಂಬೆಲ್ಲಾ ಕಂಬಳಿ ಹುಳದ ರಾಶಿ. ಅವುಗಳಲ್ಲಿ ಕೆಲವು ನನ್ನತ್ತ ನೋಡಿ ಹಲ್ಕಿಸಿಯುತ್ತಿತ್ತು, ಕೆಲವು ಮುಸಿಡಿ ಉದ್ದ ಮಾಡುತ್ತಿತ್ತು. ಧೈರ್ಯ ಮಾಡಿ ಪಟಾರನೆ ಹೊಡೆದೆ ಎಲ್ಲಾ ಮಾಯವಾಯಿತು. ಏನಾದರಾಗಲಿ ಅಂತ ಮಲಗಿದೆ ಕೊಂಚ ಒರಕು ಬಂದಂತಾಯಿತು. ಸ್ವಲ್ಪ ಸಮಯದ ನಂತರ ಕಣ್ಬಿಟ್ಟರೆ ಮೋಹನಣ್ಣ "ಏನಾ..... :) ? " ಎನ್ನುತ್ತಾ ಎದುರು ನಿಂತಿದ್ದ. ಮಜ್ಜಿಗೆಯ ಪ್ರಭಾವದಿಂದ ಕೊಂಚ ನಿಯಂತ್ರಣಕ್ಕೆ ಬಂದಿತ್ತು ಔಷಧಿಯ ಪ್ರಭಾವ. " ಎಂತ ಡೋಸು ಜಾಸ್ತಿಯಾಗಲ್ಲೆ ಎಂತೂ ಇಲ್ಲೆ ಸುಮ್ನೆ ಮಲಗು ಸರಿಯಾಕ್ತು" ಅಂತ ಹೇಳಿ ಹೋದ ಮೋಹನಣ್ಣ.
ಮತ್ತೆ ಮತ್ತೆ ಮಜ್ಜಿಗೆ ಕುಡಿದು ಮಲಗಿದೆ ನಿಧಾನ ನಿದ್ರೆ ಆವರಿಸಿತು. ಕನಸು ಕನಸು ಒಂದಕ್ಕೊಂದು ಸಂಬಂಧವಿಲ್ಲದ್ದು. ಗಟ್ಟಿ ಎಚ್ಚರವಾಗಿದ್ದು ಮತ್ತೆ ಒಂದು ಗಂಟೆಗೆ. ಆಗ ನಿರಾಳವಾಗಿತ್ತು. ಮಜ್ಜಿಗೆ ಅನ್ನ ಊಟ ಮಾಡಿ ಮಲಗಿದೆ, ಸೊಂಪು ನಿದ್ರೆ ಎಚ್ಚರವಾದಾಗ ಐದು ಗಂಟೆ. ಎಲ್ಲ ಸ್ವಚ್ಛ ನಿರಾಳವಾಗಿತ್ತು. ಸರಿ ಎಂದು ಕಾಫಿ‌ಕುಡಿದು ಪೇಪರ್ ಓದೋಣ ಅಂತ ಕುಂತರೆ ಒಂದಕ್ಷರವೂ ಕಾಣದು ಎಲ್ಲಾ ಮಬ್ಬು ಮಬ್ಬು. ಅಯ್ಯ ಒಂದು ಮಾಡಲು ಹೋಗಿ ಮತ್ತೊಂದಾಯಿತಾ ಎಂಬ ಭಯ ಕಾಡತೊಡಗಿತು. ನನ್ನ ಅವತಾರ ಬೆಳಗ್ಗೆಯಿಂದ ನೋಡಿದ್ದ ಅಪ್ಪಯ್ಯ " ಎಂತೂ ಆಗಲ್ಲೆ ಮಾರಾಯ, ಕಣ್ಣು ಸರಿ ಇದ್ದು ಎಲ್ಲಾ ಸರಿ ಇದ್ದು, ಔಷಧಿ ತಗಂಡಿದ್ದಕ್ಕೆ ಕಣ್ ಕಲ್ಡಿರ್ತು ಅದು, ಬೇಕಾರೆ ಎನ್ಮನೆ ಚಾಳಿಸ್ ಕನ್ನಡಕ ಹಾಕ್ಯಂಡು ನೋಡು" ಎಂದು ಅರ್ದ ಗದರಿದ ದನಿಯಲ್ಲಿ ಬಂತು. ಸರಿ ಅಂತ ಅಪ್ಪಯ್ಯನ ಕನ್ನಡಕ ಹಾಕಿಕೊಂಡು ಓದಿದೆ. ಎಲ್ಲವೂ ಸ್ಪಷ್ಟ. ಅಬ್ಬ ಗಿಡದ ಔಷಧಿಯೇ ಅಂದೆನಿಸಿತು. ಮಾರನೇ ದಿವಸ ಲಕಲಕ ವಾವ್.
ಇಷ್ಟೆಲ್ಲಾ ಘಟನೆಗೆ ಕಾರಣವಾದ ಆ ಔಷಧಿಯ ಗಿಡವೇ ಈ ಪಟದಲ್ಲಿದ್ದುದು. ಅದರ ಹೆಸರು ಉಮ್ಮಾತ. ಈಗ ನಿಮಗೆ ಅರ್ಥವಾಗಿರಬಹುದು ಪ್ರಕೃತಿಯಲ್ಲಿ ಏನೇಲ್ಲಾ ಇದೆ ಅಂತ.
#ಕೊನೆಯದಾಗಿ: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನೋಡಿಕೊಳ್ಳಲು ಮಾತ್ರಾ ಬೇರೆಯವರ ಕಣ್ಣೇ ಬೇಕು.

ಉಮ್ಮತ್ತದ ಪರಿಣಾಮ ಕೇಳಿದ್ದೆ ಆದರೆ ಸ್ವತಃ ಅನುಭವಿಸಿದ್ದು ನಿಮ್ಮಿ೦ದ ಕೇಳಿದ್ದು ಒಳ್ಳೆ ಮಾಹಿತಿ.
 ಉಮ್ಮತ್ತದ ಬೀಜ ಪುಡಿ ಮಾಡಿ ಬಂಗಿ ಸೋಪ್ಪಿನಲ್ಲಿ ಮಿಶ್ರ ಮಾಡಿ ಬೆಲ್ಲ ಸೇರಿಸಿ ಪಾನಕ ಮಾಡಿ ಕುಡಿದ ಬುಟ್ಟಿ ಮಾಡುವ ಇಡೀ ಕೇರಿಯ ಜನ ವಿಚಿತ್ರ ವತ೯ನೆ ಮಾಡಲು ಪ್ರಾರಂಬಿಸಿದ್ದರಂತೆ 1960ರಲ್ಲಿ ಆನoದಪುರಂ ಸಮೀಪದ ಬ್ಯಾಡರ ಕೊಪ್ಪದಲ್ಲಿ, ಅವರನ್ನೆಲ್ಲ ಆನOದಪುರಂನ ಆಸ್ಪತ್ರೆಗೆ ಕರೆ ತಂದಿದ್ದರಂತೆ ಎಲ್ಲರೂ ಸ್ತ್ರಿ ಪುರುಷರು ಮೈಮೇಲೆ ಬಟ್ಟೆ ಇಟ್ಟು ಕೊಳ್ಳುತ್ತಿರಲಿಲ್ಲ೦ತೆ, ಹುಚ್ಚು ಹಿಡಿದವರಂತೆ ಅವರೆಲ್ಲರ ವತ೯ನೆ.
 ಆಗ ಊರಿನ ಹಿರಿಯರಾದ ಶ್ರೀ ವೆಂಕಟಾಚಲಯ್ಯOಗಾರ್ (ಮಂತ್ರಿಗಳಾಗಿದ್ದ ಬದರಿನಾರಾಯಣರ ಸಹೋದರರು) ಈ ಬಗ್ಗೆ ಮುಂದೆ ನಿಂತು ಚಿಕಿತ್ಸೆ ನೀಡಿಸಿ, ಇದಕ್ಕೆ ಕಾರಣನಾದನನ್ನ ಶಿಕ್ಷಿಸಿದರಂತೆ, ಬುಟ್ಟಿ ಮಾಡುವವರ ನೆಂಟನೋವ೯ ಯಾವುದೊ ಬಿನ್ನಾಭಿಪ್ರಾಯದಿಂದ ಇಡೀ ಕೇರಿಯವರ ಬಟ್ಟೆ ಬಿಚ್ಚಿಸುತ್ತೇನೆ ಅಂತ ಶಪತ ಮಾಡಿದ್ದನಂತೆ.
 ನಿಮ್ಮ ಅಭಿಪ್ರಾಯ ಅನುಭವ ನೋಡಿದರೆ ಅವರೆಲ್ಲರಿಗೆ ಮೈ ತುಂಬ ಕಂಬಳಿ ಹುಳ ಹತ್ತಿದ ಅನುಭವ ಆಗಿಯೇ ಬಟ್ಟೆ ಕಿತ್ತಿ ಎಸೆಯುತ್ತಿದ್ದರಿರ ಬೇಕು.
 ಈ ವಿಚಾರ ಸುಮಾರು 40 ವಷ೯ ಚಾಲ್ತಿಯಲ್ಲಿತ್ತು, ಮೊಬೈಲ್ ಬಂದ ಮೇಲೆ ಮರೆತೆ ಹೋಗಿತ್ತು ಇವತ್ತು ನಿಮ್ಮ FB ಲೇಖನದಿಂದ ನೆನಪಾಯಿತು.
ಇದರ ಬೀಜದ ಎಣ್ಣಿ ತಲೆಗೆ ಹಾಕಿದರೆ ಹುಚ್ಚು ಹಿಡಿಯುತ್ತೆ ಅಂತೆ.
ಶಿಶು ನಾಳ ಷರೀಪರಿಗೆ ಭಂಗಿ ಜೊತೆ ಇದರ ಬೀಜದ ಪುಡಿ ಹೊಟ್ಟೆಕಿಚ್ಚಿನಿಂದ ಒಬ್ಬ ಮಠದ ಸ್ವಾಮಿ ಹಾಕಿ ಕೊಡುತ್ತಾನೆ ಶಿಶುನಾಳ ಅದನ್ನ ಸೇವಿಸುತ್ತಾರೆ ಆಗ ಇವರಿಗೆ ಕಣ್ಣು ಕೆಂಪಾಗಿ ಸಂಕಟ ಆಗುತ್ತೆ, ಅವರ ಯೋಗ ಶಕ್ತಿಯಿ೦ದ ಸರಿ ಆಗುತ್ತೆ,ಇವರ ತಪಃ ಶಕ್ತಿಯಿಂದ ತೊಂದರೆ ಕೊಟ್ಟವನೆ ತೊ೦ದರೆ ಅನುಭವಿಸುತ್ತಾನೆ ಅಂತ ಶಿಶುನಾಳರ ಪುಸ್ತಕದಲ್ಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ