Blog 1705. ಸರ್ವಜ್ಞನ ಜನ್ಮಸ್ಥಳ ಶಿಕಾರಿಪುರದಿಂದ 18 ಕಿ.ಮಿ. ದೂರದ ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲ್ಲೂಕಿನ ಮಾಸೂರು ಈಗ ಅದು ಸರ್ವಜ್ಞನ ಮಾಸೂರು.
#ಎಲ್ಲವನ್ನು_ಬಲ್ಲವನೆ_ಸರ್ವಜ್ಞ. #ವಾಸ್ತವವಾದಿ_ತತ್ವಜ್ಞಾನಿ_ವಿರಾಗಿ_ಕವಿ #ಸರ್ವಜ್ಞರ_ಹುಟ್ಟೂರು_ಮಾಸೂರು #ಏಳು_ಸಾವಿರ_ವಚನಗಳು_ಲಭ್ಯ. #ಶಿವಮೊಗ್ಗ_ಜಿಲ್ಲೆಯಿಂದ_ಮಾಸೂರು_18_ಕಿಮಿ. https://youtu.be/j-qxPrOqlZs "ಸಾಲವನ್ನು ಕೊಂಬಾಗ ಹಾಲೋಗರ ಉಂಡಂತೆ" "ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯಕೀಲು ಮುರಿದಂತೆ " - ಸವ೯ಜ್ಞ. ಈ ವಚನ ಕೇಳದವರಿಲ್ಲ ಸರ್ವಜ್ಞ ರಚಿಸಿದ ಇಂತಹ 7000 ವಚನಗಳು ಮತ್ತು ಒಂದು ಸಾವಿರ ತ್ರಿಪತಿಗಳು ಲಭ್ಯವಿದೆ. 1985 ರಿಂದ 2000 ಇಸವಿ ತನಕ ನಮ್ಮ ರೈಸ್ ಮಿಲ್ ಬಿಲ್ ನ ಕೆಳಭಾಗದಲ್ಲಿ ಸರ್ವಜ್ಞರ ಒಂದು ವಚನ ಖಾಯಂ ಆಗಿ ಪ್ರಿಂಟ್ ಮಾಡಿಸುತ್ತಿದ್ದೆ ಅದು "ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ" - ಸವ೯ಜ್ಞ ಅನ್ನುವುದು. 16 ನೇ ಶತಮಾನದಲ್ಲಿ ಸರ್ವಜ್ಞ ಜನಿಸಿದ್ದು ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲ್ಲೂಕಿನ ಅಂಬಲೂರು ಮಾಸೂರು ಅನ್ನುವುದು ವಿಶೇಷ. ಮಾಸೂರು ಶಿಕಾರಿಪುರದಿಂದ ಕೇವಲ 18 ಕಿ.ಮಿ.ದೂರದಲ್ಲಿದೆ ಮೊನ್ನೆ ಶಿಕಾರಿಪುರದಿಂದ ಕದರಮಂಡಲಗಿ ಆಂಜನೇಯ ದೇವಸ್ಥಾನಕ್ಕೆ ಹೋಗುವಾಗ ಮಾಸೂರು ಮುಖಾಂತರ ಹ...