#ಡಾಕ್ಟರ್_ವಸುಂಧರಿ ಮಲೆನಾಡಿನ #ಕುಣಬಿ ಸಮುದಾಯದ ಅಧ್ಯಯನ ಎಂಬ ಮಹಾ ಪ್ರಬಂದಕ್ಕೆ ಪಿ.ಹೆಚ್.ಡಿ. ಪಡೆದ ಮಹಾನ್ ಸಾದನೆ ಮಾಡಿದ್ದಾರೆ. ಈ ಡಾಕ್ಟರೇಟ್ ನಮ್ಮ ರಾಜ್ಯದ ಮೊದಲ ಕುಣಬಿ ಸಮಾಜದ ಡಾಕ್ಟರೇಟ್ ಆಗಿದೆ, ಅತ್ಯಂತ ಹಿಂದುಳಿದ ಈ ಸಮಾಜದ ಮಹಿಳೆಯ ಈ ಸಾಧನೆ ವಿಶೇಷ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಸವಾಪುರ ಗ್ರಾಮದ ಕಮಲಮ್ಮ ನಾರಾಯಣಪ್ಪ ದಂಪತಿಗಳ ಪುತ್ರಿ ಆದ ವಸುಂದರಿ ಕುಣಬಿ ಸಮುದಾಯದಲ್ಲಿ ಪಿಹೆಚ್ಡಿ ಪದವಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸದ್ಯ ಶಿವಮೊಗ್ಗದ #ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕುವೆಂಪು ವಿಶ್ವ ವಿದ್ಯಾಲಯಕ್ಕೆ ಕನ್ನಡ ವಿಷಯದಲ್ಲಿ ಸಲ್ಲಿಸಿದ #ಮಲೆನಾಡಿನ_ಕುಣಬಿ_ಸಮುದಾಯದ ಅಧ್ಯಯನ (ಶಿವಮೊಗ್ಗ ಜಿಲ್ಲೆಯಲ್ಲಿನ) ಎಂಬ ಮಹಾಪ್ರಬಂಧಕ್ಕೆ 35ನೇ ಘಟಿಕೋತ್ಸವದಲ್ಲಿ ಪಿಹೆಚ್ಡಿ ಪದವಿ ಲಭಿಸಿದೆ. ಇವರಿಗೆ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹಾಲಮ್ಮ ಎಂ. ಮಾರ್ಗದರ್ಶನ ಮಾಡಿದ್ದರು. #ಕುಣಬಿ_ಸಮಾಜದ_ನನ್ನ_ಒಡನಾಟ... ಶಿವಮೊಗ್ಗ ಜಿಲ್ಲೆಯ ಮೊದಲ ಕುಣಬಿ ಜನಾಂಗದ ಜಿಲ್ಲಾ ಸಮಾವೇಶ ಸಾಗರ ತಾಲೂಕಿನ ಆನಂದಪುರಂನ ರಂಗನಾಥ ಸ್ವಾಮಿ ಕಲ್ಯಾಣ ಮಂದಿರದಲ್ಲಿ 1995 ರಲ್ಲಿ ನನ್ನ ನೇತೃತ್ವದಲ್ಲಿ ನಡೆ...